Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
Valentines day Special: ಬಸ್ ನಿಂತಿದ್ದಾಗ ಬೈಕ್ನಲ್ಲಿ ಬಂದು ಹಾರ್ನ್ ಹೊಡೆದವನ ಮೇಲೆ ಅರಳಿತು ಅನುರಾಗ
ಅದೊಂದು ಸುಂದರವಾದ ಸಂಜೆ ಆಗ ತಾನೆ ಸುರಿಯುತ್ತಿದ್ದ ಮಳೆ ತನ್ನ ಆರ್ಭಟ ವನ್ನು ಕೊಂಚ ಮಟ್ಟಿಗೆ ನಿಲ್ಲಿಸಿತ್ತು ,ಗಂಟೆ ಸುಮಾರು ಸಂಜೆ 4 ಆಗಿತ್ತು ಸಾಮಾನ್ಯವಾಗಿ ಕಾಲೇಜು ಬಿಡುವ ಹೊತ್ತು ಎಲ್ಲರೂ ತಮ್ಮ ಮನೆ ಕಡೆ ಹೊರಟರೆ ಅಲ್ಲೊಂದು ತಂಡ ಕ್ಯಾಂಟೀನ್ ಕಡೆ ಹೊರಡಿತು.

ಪ್ರೀತಿ ಪ್ರೇಮ ದ ಅರಿವಿಲ್ಲದ ನಾನು ಮತ್ತು ನನ್ನ ಸ್ನೇಹಿತರು ನಮ್ಮಷ್ಟಕ್ಕೆ ನಾವು ಇತರ ಜೋಡಿ ಹಕ್ಕಿಗಳ ನ್ನು ಕಂಡು ನಗೆಬೀರುತ್ತಿದ್ದೇವು. ಮನದೊಳಗೆ ನಮಗೂ ಪ್ರೇಮ ಪ್ರೀತಿ ಮಾಡ್ಬೇಕು ಅನ್ನುವ ಹಂಬಲ ಇದ್ರು ಸಹ ಏನೋ ಒಂಥರ ಬೇಡ ಅನ್ನುವ ಭಾವನೆ . ಹೀಗೆ ನಮ್ಮ ತಮಾಷೆ ಫ್ಯಾಕ್ಟರ್ ಗಳು ಮುಗಿದು ನಾವು ಸಹ ನಮ್ಮ ಮನೆ ಕಡೆ ಹೊರಟೆವು .
ಅದೇ ದಿನ ರಾತ್ರಿ ಸಾಕಾಗುವಷ್ಟು ಕಾಲೇಜು ವರ್ಕ್ ಗಳು ಇದ್ದುದರಿಂದ ನನ್ನ ಗಮನ ಮೊಬೈಲ್ ಕಡೆ ಕಮ್ಮಿ ಇದ್ದವು ಹಾಗೂ ಹೀಗೂ ಎಲ್ಲ ಕೆಲಸ ಮುಗಿಸಿ ಮೊಬೈಲ್ ನ ಕಡೆ ನೋಡಿದಾಗ ಗಂಟೆ ಸುಮಾರು ರಾತ್ರಿ 10 ಆಗಿತ್ತು ಸಾಮಾನ್ಯವಾಗಿ ಇನ್ಸ್ಟಾಗ್ರಾಮ್ ನೋಡಿದಾಗ ಅಲ್ಲೊಂದು ಅಪರಿಚಿತ ವ್ಯಕ್ತಿ ಯ ರಿಕ್ವೆಸ್ಟ್ ಕಂಡುಬಂತು ನೋಡಿಯೂ ನೋಡದ ಹಾಗೆ ಮೊಬೈಲ್ ಆಫ್ ಮಾಡಿ ಮಲ್ಕೊಂಡೆ ಮಾರನೇ ದಿನದಂದು ಮನೆ ಹತ್ತಿರದಲ್ಲಿ ಬಸ್ಗೆ ಎಂದು ನಿಂತಾಗ ಅದೇ ಅಪರಿಚಿತವಕ್ತಿ ಬೈಕ್ ಅಲ್ಲಿ ಹೋಗ್ತಾ ಇದ್ರು ನನ್ನ ನೋಡಿ ಬೈಕ್ ಹಾರ್ನ್ ಹೊಡೆದು ಹೋದದ್ದು ಸಂಜೆವರೆಗೂ ನನ್ನ ಮನಸಲ್ಲಿ ಕಾಡುತ್ತಾ ಇತ್ತು.
ಸಂಜೆ ಮನೆಗೆ ಬಂದ ತಕ್ಷಣ ಇನ್ಸ್ಟ್ ಗ್ರಾಂ ಓಪನ್ ಮಾಡಿ ರಿಕ್ವೆಸ್ಟ್ ಎಸೆಪ್ಟ್ ಮಾಡಿದೆ ತಕ್ಷಣ ಅಲ್ಲಿಂದ ಒಂದು ಹಾಯ್ ಎಂಬ ಮೆಸೇಜ್ ಬಂತು. ರಿಪ್ಲೈ ಕೊಡಲು ಹೆದರಿ ಮೆಸೇಜ್ ನೋಡಿಯು ಸುಮ್ಮನಾದೆ. ಆದರೆ ಒಂದು 2 ದಿನ ಕಳೆದ ನಂತರ ಮನಸ್ಸಲ್ಲಿ ಏರುಪೇರಾಗಿ ಹಾಯ್ ಮೆಸೇಜ್ ಗೆ ಹಲೋ ಎಂಬ ರಿಪ್ಲೈ ಕೊಡುವ ಮೂಲಕ ನಮ್ಮ ಸಂಭಾಷಷನೆ ಮುಂದುವರೆಯಿತು.
ನಂತರದ ದಿನಗಳಲ್ಲಿ ಮೆಸೇಜ್ ಗಳು ಇನ್ಸ್ಟಾಗ್ರಾಂ ನಲ್ಲಿ ನಿಂತು ವಾಟ್ಸ್ ಆ್ಯಪ್ ಗೆ ಬಂದು ತಲುಪಿತು ದಿನ ಹೋದಂತೆ ವಿಡಿಯೋ ಕಾಲ್ ಮಿತಿ ಹೆಚ್ಚುತ್ತಾ ಇದ್ದಂತೆ ಮನಸ್ಸಲ್ಲಿ ಭೇಟಿ ಯಾಗುವ ತವಕ ಜಾಸ್ತಿ ಆಯಿತು ಒಂದು ದಿನ ಆ ಸುದಿನ ಬಂದಿತು. ಮನಸಲ್ಲಿ ಅದೇನೋ ಆತುರ ,ಖುಷಿ ಒಂದೆಡೆ ಇನ್ನೊಂದೆಡೆ ಭಯ ಎಲ್ಲವೂ ಬಹು ದಿನದ ಬೇಡಿಕೆ ಈಡೀರಿದಂತೆ ಆಯಿತು. ಆದರೆ ಹುಡುಗಿಯರಿಗೆ ತಾನು ಇಷ್ಟಪಟ್ಟ ಹುಡುಗನೇ ಮೊದಲು ಪ್ರೀತಿ ನಿವೇದನೆ ಮಾಡಲಿ ಎಂಬ ಆಸೆ ಇರುತ್ತದೆ ಅದೇ ರೀತಿ ನನ್ನ ಜೀವನದಲ್ಲಿ ನಡೆದು ಹೋಯಿತು.
ಸಾಮಾಜಿಕ ಜಾಲ ತಾಣಗಳಲ್ಲಿ ಹುಟ್ಟುವ ಪ್ರೀತಿಯೂ ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಮಾತಾನ್ನು ಎಲ್ಲರೂ ಹೇಳುತ್ತಾರೆ. ಅದರೆ, ಆ ಮಾತನ್ನು ಸುಳ್ಳು ಮಾಡಿದ್ದೇವೆ. ಪ್ರೀತಿ ಎನ್ನುವುದು ನಂಬಿಕೆ, ಭಾವನೆ, ಪರಸ್ಪರ ಅರ್ಥ ಮಾಡುವಿಕೆಯಲ್ಲಿ ನೆಲೆಯಾಗಿದೆ. ಹೊರತು ಬೇರೆಯವರ ಅಭಿಪ್ರಾಯಗಳಿಂದಲ್ಲ.
ವಿಶ್ವಶ್ರೀ,
ಎಸ್. ಡಿ.ಎಂ. ಕಾಲೇಜು ಉಜಿರೆ.



Click it and Unblock the Notifications












