Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಪ್ರೀತಿಗಾಗಿ ಕಾದಿರುವ ಹೃದಯ ಬರೆಯ ಉಯಿಲು

ನನ್ನ ಕಣ್ಣಲ್ಲಿ ಒಂದು ಹನಿ ನೀರು ಬಿದ್ದರೂ ನೀ ಅದೆಷ್ಟೋ ಚಡಪಡಿಸುತ್ತಿದ್ದೆ. ಆದರೆ ಈಗ ಈ ಹೃದಯ ನಿನಗಾಗಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರೂ ನೋಡದಷ್ಟು ಕುರುಡನಾಗಿ ಹೋದೆಯಾ? ನೀನಾಡಿದ ಆ ಭರವಸೆಯ ಮಾತುಗಳು ಸುಳ್ಳಾಯಿತೆ? ನೀನೇ ಇಲ್ಲದೇ ಈ ಬದುಕಿನ ಚಕ್ರವೇ ಮುರಿದು ಬಿದ್ದಂತಾಗಿದೆ. ನಿನ್ನೊಂದಿಗೆ ಇರುವ ಪ್ರತಿಯೊಂದು ಕ್ಷಣವೂ ಜೀವನದ ಆಸೆಯನ್ನು ಹೆಚ್ಚಿಸುತ್ತಿತ್ತು. ನಾಳೆಯ ಬರುವಿಕೆಗಾಗಿ ಆಸೆಗಣ್ಣೆನಿಂದ ಹಾತೊರೆಯುತ್ತಿದೆ ನನ್ನ ಮನ. ಆದರೆ ಈಗ ನಾಳೆಯೆಂಬುದು ಬರೀ ಕತ್ತಲು ತುಂಬಿದ ಕಲ್ಲು ಮುಳ್ಳಿನ ದಾರಿಯಾಗಿದೆ.
ನಿನ್ನ ಎದೆಯ ಮೇಲೆ ಕಣ್ಣುಮುಚ್ಚಿ ಮಗುವಂತೆ ಮಲಗಿದಾಗ ನಿನ್ನ ಆಸರೆಯ ಅಪ್ಪುಗೆಯಾ ನಾ ಹೇಗೆ ಮರೆಯಲಿ. ನಾ ನನ್ನ ಮರೆಯುವಷ್ಟು ನೀ ನನ್ನ ಪ್ರೀತಿಸಿ ನಡುನೀರಿನಲ್ಲಿ ನನ್ನ ಮರೆತು ಬಿಟ್ಟು ನಿನ್ನ ದಾರಿಯಾ ನೀ ಕಂಡು ಕೊಂಡೆಯಾ? ನಾ ಆ ನೀರಿನಾ ಸುಳಿಯಲ್ಲಿ ಸಿಕ್ಕಿ ಪ್ರಾಣ ಹೋಗಲಿ ಎಂದು ಕಾಯುತ್ತಿರುವೆಯಾ?
ನಿನ್ನ ಧ್ವನಿ ಕೇಳದೇ, ನಿನ್ನ ನಗು ನೋಡದೇ ಈ ಮನ ಕೊರಗುತ್ತಿದೆ. ನೀನಿಲ್ಲದೇ ನಾ ಬೇರು ಮುರಿದ ಮರದ ಹಾಗೇ ನನ್ನ ಜೀವ ನರಳಿದೆ. ನನ್ನ ಮಡಿಲಿನಲ್ಲಿ ಸವಿಗನಸನು ಹಾಸಿದೆ ಬಾರೋ ನನ್ನ ಗೆಳೆಯನೆ ನಿನಗಾಗಿ ಕಾದಿರುವೆ. ಸಾವು ಬಂದರೂ ಮುಂದಿನ ಜನ್ಮದಲ್ಲಿಯೂ ನೀನೇ ಸಿಗುವಂತೆ ನಾ ಉಯಿಲು ಬರೆಯುವೆ.



Click it and Unblock the Notifications