Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಪ್ರೀತಿಗಾಗಿ ಕಾದಿರುವ ಹೃದಯ ಬರೆಯ ಉಯಿಲು

ನನ್ನ ಕಣ್ಣಲ್ಲಿ ಒಂದು ಹನಿ ನೀರು ಬಿದ್ದರೂ ನೀ ಅದೆಷ್ಟೋ ಚಡಪಡಿಸುತ್ತಿದ್ದೆ. ಆದರೆ ಈಗ ಈ ಹೃದಯ ನಿನಗಾಗಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರೂ ನೋಡದಷ್ಟು ಕುರುಡನಾಗಿ ಹೋದೆಯಾ? ನೀನಾಡಿದ ಆ ಭರವಸೆಯ ಮಾತುಗಳು ಸುಳ್ಳಾಯಿತೆ? ನೀನೇ ಇಲ್ಲದೇ ಈ ಬದುಕಿನ ಚಕ್ರವೇ ಮುರಿದು ಬಿದ್ದಂತಾಗಿದೆ. ನಿನ್ನೊಂದಿಗೆ ಇರುವ ಪ್ರತಿಯೊಂದು ಕ್ಷಣವೂ ಜೀವನದ ಆಸೆಯನ್ನು ಹೆಚ್ಚಿಸುತ್ತಿತ್ತು. ನಾಳೆಯ ಬರುವಿಕೆಗಾಗಿ ಆಸೆಗಣ್ಣೆನಿಂದ ಹಾತೊರೆಯುತ್ತಿದೆ ನನ್ನ ಮನ. ಆದರೆ ಈಗ ನಾಳೆಯೆಂಬುದು ಬರೀ ಕತ್ತಲು ತುಂಬಿದ ಕಲ್ಲು ಮುಳ್ಳಿನ ದಾರಿಯಾಗಿದೆ.
ನಿನ್ನ ಎದೆಯ ಮೇಲೆ ಕಣ್ಣುಮುಚ್ಚಿ ಮಗುವಂತೆ ಮಲಗಿದಾಗ ನಿನ್ನ ಆಸರೆಯ ಅಪ್ಪುಗೆಯಾ ನಾ ಹೇಗೆ ಮರೆಯಲಿ. ನಾ ನನ್ನ ಮರೆಯುವಷ್ಟು ನೀ ನನ್ನ ಪ್ರೀತಿಸಿ ನಡುನೀರಿನಲ್ಲಿ ನನ್ನ ಮರೆತು ಬಿಟ್ಟು ನಿನ್ನ ದಾರಿಯಾ ನೀ ಕಂಡು ಕೊಂಡೆಯಾ? ನಾ ಆ ನೀರಿನಾ ಸುಳಿಯಲ್ಲಿ ಸಿಕ್ಕಿ ಪ್ರಾಣ ಹೋಗಲಿ ಎಂದು ಕಾಯುತ್ತಿರುವೆಯಾ?
ನಿನ್ನ ಧ್ವನಿ ಕೇಳದೇ, ನಿನ್ನ ನಗು ನೋಡದೇ ಈ ಮನ ಕೊರಗುತ್ತಿದೆ. ನೀನಿಲ್ಲದೇ ನಾ ಬೇರು ಮುರಿದ ಮರದ ಹಾಗೇ ನನ್ನ ಜೀವ ನರಳಿದೆ. ನನ್ನ ಮಡಿಲಿನಲ್ಲಿ ಸವಿಗನಸನು ಹಾಸಿದೆ ಬಾರೋ ನನ್ನ ಗೆಳೆಯನೆ ನಿನಗಾಗಿ ಕಾದಿರುವೆ. ಸಾವು ಬಂದರೂ ಮುಂದಿನ ಜನ್ಮದಲ್ಲಿಯೂ ನೀನೇ ಸಿಗುವಂತೆ ನಾ ಉಯಿಲು ಬರೆಯುವೆ.



Click it and Unblock the Notifications