Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಪ್ರೀತಿಗಾಗಿ ಕಾದಿರುವ ಹೃದಯ ಬರೆಯ ಉಯಿಲು

ನನ್ನ ಕಣ್ಣಲ್ಲಿ ಒಂದು ಹನಿ ನೀರು ಬಿದ್ದರೂ ನೀ ಅದೆಷ್ಟೋ ಚಡಪಡಿಸುತ್ತಿದ್ದೆ. ಆದರೆ ಈಗ ಈ ಹೃದಯ ನಿನಗಾಗಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರೂ ನೋಡದಷ್ಟು ಕುರುಡನಾಗಿ ಹೋದೆಯಾ? ನೀನಾಡಿದ ಆ ಭರವಸೆಯ ಮಾತುಗಳು ಸುಳ್ಳಾಯಿತೆ? ನೀನೇ ಇಲ್ಲದೇ ಈ ಬದುಕಿನ ಚಕ್ರವೇ ಮುರಿದು ಬಿದ್ದಂತಾಗಿದೆ. ನಿನ್ನೊಂದಿಗೆ ಇರುವ ಪ್ರತಿಯೊಂದು ಕ್ಷಣವೂ ಜೀವನದ ಆಸೆಯನ್ನು ಹೆಚ್ಚಿಸುತ್ತಿತ್ತು. ನಾಳೆಯ ಬರುವಿಕೆಗಾಗಿ ಆಸೆಗಣ್ಣೆನಿಂದ ಹಾತೊರೆಯುತ್ತಿದೆ ನನ್ನ ಮನ. ಆದರೆ ಈಗ ನಾಳೆಯೆಂಬುದು ಬರೀ ಕತ್ತಲು ತುಂಬಿದ ಕಲ್ಲು ಮುಳ್ಳಿನ ದಾರಿಯಾಗಿದೆ.
ನಿನ್ನ ಎದೆಯ ಮೇಲೆ ಕಣ್ಣುಮುಚ್ಚಿ ಮಗುವಂತೆ ಮಲಗಿದಾಗ ನಿನ್ನ ಆಸರೆಯ ಅಪ್ಪುಗೆಯಾ ನಾ ಹೇಗೆ ಮರೆಯಲಿ. ನಾ ನನ್ನ ಮರೆಯುವಷ್ಟು ನೀ ನನ್ನ ಪ್ರೀತಿಸಿ ನಡುನೀರಿನಲ್ಲಿ ನನ್ನ ಮರೆತು ಬಿಟ್ಟು ನಿನ್ನ ದಾರಿಯಾ ನೀ ಕಂಡು ಕೊಂಡೆಯಾ? ನಾ ಆ ನೀರಿನಾ ಸುಳಿಯಲ್ಲಿ ಸಿಕ್ಕಿ ಪ್ರಾಣ ಹೋಗಲಿ ಎಂದು ಕಾಯುತ್ತಿರುವೆಯಾ?
ನಿನ್ನ ಧ್ವನಿ ಕೇಳದೇ, ನಿನ್ನ ನಗು ನೋಡದೇ ಈ ಮನ ಕೊರಗುತ್ತಿದೆ. ನೀನಿಲ್ಲದೇ ನಾ ಬೇರು ಮುರಿದ ಮರದ ಹಾಗೇ ನನ್ನ ಜೀವ ನರಳಿದೆ. ನನ್ನ ಮಡಿಲಿನಲ್ಲಿ ಸವಿಗನಸನು ಹಾಸಿದೆ ಬಾರೋ ನನ್ನ ಗೆಳೆಯನೆ ನಿನಗಾಗಿ ಕಾದಿರುವೆ. ಸಾವು ಬಂದರೂ ಮುಂದಿನ ಜನ್ಮದಲ್ಲಿಯೂ ನೀನೇ ಸಿಗುವಂತೆ ನಾ ಉಯಿಲು ಬರೆಯುವೆ.



Click it and Unblock the Notifications