Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಪ್ರೀತಿಗಾಗಿ ಕಾದಿರುವ ಹೃದಯ ಬರೆಯ ಉಯಿಲು

ನನ್ನ ಕಣ್ಣಲ್ಲಿ ಒಂದು ಹನಿ ನೀರು ಬಿದ್ದರೂ ನೀ ಅದೆಷ್ಟೋ ಚಡಪಡಿಸುತ್ತಿದ್ದೆ. ಆದರೆ ಈಗ ಈ ಹೃದಯ ನಿನಗಾಗಿ ಬಿಕ್ಕಿ ಬಿಕ್ಕಿ ಆಳುತ್ತಿದ್ದರೂ ನೋಡದಷ್ಟು ಕುರುಡನಾಗಿ ಹೋದೆಯಾ? ನೀನಾಡಿದ ಆ ಭರವಸೆಯ ಮಾತುಗಳು ಸುಳ್ಳಾಯಿತೆ? ನೀನೇ ಇಲ್ಲದೇ ಈ ಬದುಕಿನ ಚಕ್ರವೇ ಮುರಿದು ಬಿದ್ದಂತಾಗಿದೆ. ನಿನ್ನೊಂದಿಗೆ ಇರುವ ಪ್ರತಿಯೊಂದು ಕ್ಷಣವೂ ಜೀವನದ ಆಸೆಯನ್ನು ಹೆಚ್ಚಿಸುತ್ತಿತ್ತು. ನಾಳೆಯ ಬರುವಿಕೆಗಾಗಿ ಆಸೆಗಣ್ಣೆನಿಂದ ಹಾತೊರೆಯುತ್ತಿದೆ ನನ್ನ ಮನ. ಆದರೆ ಈಗ ನಾಳೆಯೆಂಬುದು ಬರೀ ಕತ್ತಲು ತುಂಬಿದ ಕಲ್ಲು ಮುಳ್ಳಿನ ದಾರಿಯಾಗಿದೆ.
ನಿನ್ನ ಎದೆಯ ಮೇಲೆ ಕಣ್ಣುಮುಚ್ಚಿ ಮಗುವಂತೆ ಮಲಗಿದಾಗ ನಿನ್ನ ಆಸರೆಯ ಅಪ್ಪುಗೆಯಾ ನಾ ಹೇಗೆ ಮರೆಯಲಿ. ನಾ ನನ್ನ ಮರೆಯುವಷ್ಟು ನೀ ನನ್ನ ಪ್ರೀತಿಸಿ ನಡುನೀರಿನಲ್ಲಿ ನನ್ನ ಮರೆತು ಬಿಟ್ಟು ನಿನ್ನ ದಾರಿಯಾ ನೀ ಕಂಡು ಕೊಂಡೆಯಾ? ನಾ ಆ ನೀರಿನಾ ಸುಳಿಯಲ್ಲಿ ಸಿಕ್ಕಿ ಪ್ರಾಣ ಹೋಗಲಿ ಎಂದು ಕಾಯುತ್ತಿರುವೆಯಾ?
ನಿನ್ನ ಧ್ವನಿ ಕೇಳದೇ, ನಿನ್ನ ನಗು ನೋಡದೇ ಈ ಮನ ಕೊರಗುತ್ತಿದೆ. ನೀನಿಲ್ಲದೇ ನಾ ಬೇರು ಮುರಿದ ಮರದ ಹಾಗೇ ನನ್ನ ಜೀವ ನರಳಿದೆ. ನನ್ನ ಮಡಿಲಿನಲ್ಲಿ ಸವಿಗನಸನು ಹಾಸಿದೆ ಬಾರೋ ನನ್ನ ಗೆಳೆಯನೆ ನಿನಗಾಗಿ ಕಾದಿರುವೆ. ಸಾವು ಬಂದರೂ ಮುಂದಿನ ಜನ್ಮದಲ್ಲಿಯೂ ನೀನೇ ಸಿಗುವಂತೆ ನಾ ಉಯಿಲು ಬರೆಯುವೆ.



Click it and Unblock the Notifications











