Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಅಕ್ಕಿ ಹಾಕದೆ ರಾಗಿ ಮಾತ್ರ ಬಳಸಿ ಮಾಡುವ ಇಡ್ಲಿ, ಮಧುಮೇಹಿಗಳಿಗೆ ರುಚಿಕರವಾದ ಬ್ರೇಕ್ಫಾಸ್ಟ್ ಆಯ್ಕೆ
ರಾಗಿ ತಿನ್ನುವುದರಿಂದ ರೋಗ ದೂರವಿಡಬಹುದು, ಮಧುಮೇಹಿಗಳ ಪಾಲಿನ ಅಮೃತ ರಾಗಿಯೆಂದರೆ ತಪ್ಪಾಗಲಾರದು. ಮುದ್ದೆ, ಇಡ್ಲಿ, ರೊಟ್ಟಿ, ರಾಗಿ ಮಣ್ಣಿ ಅಂತ ರುಚಿ ರುಚಿಯಾಗಿ ಇದನ್ನು ಮಾಡಿ ಸವಿಯಬಹುದು, ರಾಗಿ ತಿನ್ನುವುದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶ ದೊರೆಯುವುದು, ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು. ಇಲ್ಲಿ ನಾವು ಇಡಿ ರಾಗಿ ಬಳಸಿ ಮಾಡುವ ಬ್ರೇಕ್ಫಾಸ್ಟ್ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
2 ಕಪ್ ರಾಗಿ (ಇಡಿ ರಾಗಿ)
ಉದ್ದಿನ ಬೇಳೆ 1 ಕಪ್
1 ಚಮಚ ಮೆಂತೆ ಬೀಜ
ಒಂದು ಮುಷ್ಟಿಯಷ್ಟು ಅವಲಕ್ಕಿ
ತುಪ್ಪ ಅಥವಾ ಎಣ್ಣೆ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ನೀವು ರಾಗಿ ಮತ್ತೆ ಉದ್ದುವನ್ನು ಪ್ರತ್ಯೇಕವಾಗಿ ನೆನೆ ಹಾಕಿ. ನೀವು
6-8 ಗಂಟೆಗಳ ಕಾಲ ನೆನೆ ಹಾಕಿ.
ಮೆಂತೆಯನ್ನು ಕೂಡ ನೆನೆ ಹಾಕಿ
ಅವಲಕ್ಕಿ ರುಬ್ಬುವ 10 ನಿಮಿಷ ಮೊದಲು ನೆನೆ ಹಾಕಿದರೆ
ಸಾಕು.
- ರಾಗಿಯನ್ನು ರುಬ್ಬಿ, ತುಂಬಾ ನುಣ್ಣನೆ ರುಬ್ಬಬೇಡಿ,ಸ್ವಲ್ಪ ತರಿತರಿಯಾಗಿ ರುಬ್ಬಿ
- ಉದ್ದಿನ ಬೇಳೆ ರುಬ್ಬುವಾಗ ಮೆಂತೆ ಕೂಡ ಸೇರಿಸಿ ರುಬ್ಬಿ. ಅವಲಕ್ಕಿ ಕೂಡ ಸೇರಿಸಿ.
- ಈಗ ಎಲ್ಲಾ ಹಿಟ್ಟು ಚೆನ್ನಾಗಿ ಕಲೆಸಿ ಹುದುಗು ಬರಲು 8 ಗಂಟೆ ಇಡಿ.
- ನಂತರ ಇಡ್ಲಿ ಪಾತ್ರೆಗೆ ತುಪ್ಪ ಸವರಿ ಹಿಟ್ಟು ಹಾಕಿ 20 ನಿಮಿಷ ಬೇಯಿಸಿದರೆ ರುಚಿಯಾದ ರಾಗಿ ಇಡ್ಲಿ ರೆಡಿ.
ರಾಗಿ ಇಡ್ಲಿ ಮಧುಮೇಹಗಳಿಗೆ ಅತ್ಯುತ್ತುಮವಾದ
ಬ್ರೇಕ್ಫಾಸ್ಟ್
ಭಾರತದಲ್ಲಿ ಮಧುಮೆಹಿಗಳ ಸಮಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಬದಲಾಗುತ್ತಿರುವ ಜೀವನಶೈಲಿ , ಆಹಾರ ಶೈಲಿ ಮಧುಮೇಹ ಹೆಚ್ಚಳಕ್ಕೆ ಬಹುದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಸೋಂಕು, ದೃಷ್ಟಿದೋಷ, ಕಿಡ್ನಿ ವೈಫಲ್ಯ, ಹೃದಯ ಸಂಬಮಧಿ ಸಮಸ್ಯೆ, ಪಾರ್ಶ್ವವಾಯು ಸೇರಿಸಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು.
- ರಾಗಿ ಮಧುಮೇಹ ನಿಯಂತ್ರಿಸುವ ಅತ್ಯುತ್ತಮವಾದ ಆಹಾರವಾಗಿದೆ. ರಾಗಿಯಲ್ಲಿ ಪಾಲಿಫೀನೋಲ್, ಕ್ಯಾಲ್ಸಿಯಂ, ಅಮೈನೋ ಆಮ್ಲ ಅಂಶವಿದೆ. ಹಾಗಾಗಿ ಅಕ್ಕಿ ಬದಲಿಗೆ ರಾಗಿ ಸೇವನೆ ತುಂಬಾ ಒಳ್ಳೆಯದು.
- ರಾಗಿಯಲ್ಲಿ ಗ್ಲುಟೀನ್ ಫ್ರೀ ಆದ್ದರಿಂದ ರಾಗಿಗಳಿಗೆ ತುಂಬಾ ಒಳ್ಳೆಯದು.
- ರಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ರಾಗಿಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ
- ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.



Click it and Unblock the Notifications