Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಅಕ್ಕಿ ಹಾಕದೆ ರಾಗಿ ಮಾತ್ರ ಬಳಸಿ ಮಾಡುವ ಇಡ್ಲಿ, ಮಧುಮೇಹಿಗಳಿಗೆ ರುಚಿಕರವಾದ ಬ್ರೇಕ್ಫಾಸ್ಟ್ ಆಯ್ಕೆ
ರಾಗಿ ತಿನ್ನುವುದರಿಂದ ರೋಗ ದೂರವಿಡಬಹುದು, ಮಧುಮೇಹಿಗಳ ಪಾಲಿನ ಅಮೃತ ರಾಗಿಯೆಂದರೆ ತಪ್ಪಾಗಲಾರದು. ಮುದ್ದೆ, ಇಡ್ಲಿ, ರೊಟ್ಟಿ, ರಾಗಿ ಮಣ್ಣಿ ಅಂತ ರುಚಿ ರುಚಿಯಾಗಿ ಇದನ್ನು ಮಾಡಿ ಸವಿಯಬಹುದು, ರಾಗಿ ತಿನ್ನುವುದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶ ದೊರೆಯುವುದು, ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು. ಇಲ್ಲಿ ನಾವು ಇಡಿ ರಾಗಿ ಬಳಸಿ ಮಾಡುವ ಬ್ರೇಕ್ಫಾಸ್ಟ್ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಗ್ರಿ
2 ಕಪ್ ರಾಗಿ (ಇಡಿ ರಾಗಿ)
ಉದ್ದಿನ ಬೇಳೆ 1 ಕಪ್
1 ಚಮಚ ಮೆಂತೆ ಬೀಜ
ಒಂದು ಮುಷ್ಟಿಯಷ್ಟು ಅವಲಕ್ಕಿ
ತುಪ್ಪ ಅಥವಾ ಎಣ್ಣೆ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
ನೀವು ರಾಗಿ ಮತ್ತೆ ಉದ್ದುವನ್ನು ಪ್ರತ್ಯೇಕವಾಗಿ ನೆನೆ ಹಾಕಿ. ನೀವು
6-8 ಗಂಟೆಗಳ ಕಾಲ ನೆನೆ ಹಾಕಿ.
ಮೆಂತೆಯನ್ನು ಕೂಡ ನೆನೆ ಹಾಕಿ
ಅವಲಕ್ಕಿ ರುಬ್ಬುವ 10 ನಿಮಿಷ ಮೊದಲು ನೆನೆ ಹಾಕಿದರೆ
ಸಾಕು.
- ರಾಗಿಯನ್ನು ರುಬ್ಬಿ, ತುಂಬಾ ನುಣ್ಣನೆ ರುಬ್ಬಬೇಡಿ,ಸ್ವಲ್ಪ ತರಿತರಿಯಾಗಿ ರುಬ್ಬಿ
- ಉದ್ದಿನ ಬೇಳೆ ರುಬ್ಬುವಾಗ ಮೆಂತೆ ಕೂಡ ಸೇರಿಸಿ ರುಬ್ಬಿ. ಅವಲಕ್ಕಿ ಕೂಡ ಸೇರಿಸಿ.
- ಈಗ ಎಲ್ಲಾ ಹಿಟ್ಟು ಚೆನ್ನಾಗಿ ಕಲೆಸಿ ಹುದುಗು ಬರಲು 8 ಗಂಟೆ ಇಡಿ.
- ನಂತರ ಇಡ್ಲಿ ಪಾತ್ರೆಗೆ ತುಪ್ಪ ಸವರಿ ಹಿಟ್ಟು ಹಾಕಿ 20 ನಿಮಿಷ ಬೇಯಿಸಿದರೆ ರುಚಿಯಾದ ರಾಗಿ ಇಡ್ಲಿ ರೆಡಿ.
ರಾಗಿ ಇಡ್ಲಿ ಮಧುಮೇಹಗಳಿಗೆ ಅತ್ಯುತ್ತುಮವಾದ
ಬ್ರೇಕ್ಫಾಸ್ಟ್
ಭಾರತದಲ್ಲಿ ಮಧುಮೆಹಿಗಳ ಸಮಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ಬದಲಾಗುತ್ತಿರುವ ಜೀವನಶೈಲಿ , ಆಹಾರ ಶೈಲಿ ಮಧುಮೇಹ ಹೆಚ್ಚಳಕ್ಕೆ ಬಹುದೊಡ್ಡ ಕೊಡುಗೆಯನ್ನೇ ನೀಡುತ್ತಿದೆ. ಮಧುಮೇಹ ನಿಯಂತ್ರಣದಲ್ಲಿರದಿದ್ದರೆ ಸೋಂಕು, ದೃಷ್ಟಿದೋಷ, ಕಿಡ್ನಿ ವೈಫಲ್ಯ, ಹೃದಯ ಸಂಬಮಧಿ ಸಮಸ್ಯೆ, ಪಾರ್ಶ್ವವಾಯು ಸೇರಿಸಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹಾಗಾಗಿ ಮಧುಮೇಹಿಗಳು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಪ್ರಯತ್ನಿಸಬೇಕು.
- ರಾಗಿ ಮಧುಮೇಹ ನಿಯಂತ್ರಿಸುವ ಅತ್ಯುತ್ತಮವಾದ ಆಹಾರವಾಗಿದೆ. ರಾಗಿಯಲ್ಲಿ ಪಾಲಿಫೀನೋಲ್, ಕ್ಯಾಲ್ಸಿಯಂ, ಅಮೈನೋ ಆಮ್ಲ ಅಂಶವಿದೆ. ಹಾಗಾಗಿ ಅಕ್ಕಿ ಬದಲಿಗೆ ರಾಗಿ ಸೇವನೆ ತುಂಬಾ ಒಳ್ಳೆಯದು.
- ರಾಗಿಯಲ್ಲಿ ಗ್ಲುಟೀನ್ ಫ್ರೀ ಆದ್ದರಿಂದ ರಾಗಿಗಳಿಗೆ ತುಂಬಾ ಒಳ್ಳೆಯದು.
- ರಾಗಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
- ರಾಗಿಯಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ
- ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.



Click it and Unblock the Notifications