Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಸಂತ ಪಂಚಮಿ ಸ್ಪೆಷಲ್.. ಸ್ವೀಟ್ ಅಂಗಡಿ ಶೈಲಿಯ ಸಾಫ್ಟ್ ಬೂಂದಿ ಮನೆಯಲ್ಲೇ ಮಾಡಿ! ಸೀಕ್ರೆಟ್ ಟಿಪ್ಸ್ ಇಲ್ಲಿದೆ
ಸಿಹಿ ಅಂಗಡಿಯಂತೆಯೇ ಸಾಫ್ಟ್ & ಜ್ಯೂಸಿ ಬೂಂದಿ ಈಗ ಮನೆಯಲ್ಲೇ ಮಾಡಿ! ಈ ಬಸಂತ ಪಂಚಮಿಯಂದು ಸರಸ್ವತಿ ಪೂಜೆಯ ಶುಭ ನೈವೇದ್ಯ. ಅತಿ ಸುಲಭವಾಗಿ ಮಾಡುವ ಸೀಕ್ರೆಟ್ ಟಿಪ್ಸ್ ಇಲ್ಲಿದೆ. ಹೌದು, ವಿದ್ಯಾದೇವತೆ ಮಾತೆ ಸರಸ್ವತಿಯ ಆರಾಧನೆಗೆ ಮೀಸಲಾದ ಪವಿತ್ರ ಹಬ್ಬ ಬಸಂತ ಪಂಚಮಿ (Basant Panchami 2026) ಸಮೀಪಿಸಿದೆ. ಈ ಬಾರಿ ಜನವರಿ 23, ಶುಕ್ರವಾರದಂದು ಈ ಸಂಭ್ರಮದ ಹಬ್ಬವನ್ನು ಆಚರಿಸಲಾಗುವುದು.
ವಸಂತ ಋತುವಿನ ಆಗಮನ ಸೂಚಿಸುವ ಈ ದಿನ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದೆ. ಬಸಂತ ಪಂಚಮಿಯಂದು ಹಳದಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ. ಮಾತೆ ಸರಸ್ವತಿಗೆ ಹಳದಿ ವಸ್ತ್ರ, ಹೂವು ಹಾಗೂ ನೈವೇದ್ಯ ಅರ್ಪಿಸುವುದು ಅತ್ಯಂತ ಮಂಗಳಕರ. ಈ ಶುಭ ಸಂದರ್ಭದಲ್ಲಿ, ದೇವಿಗೆ ಮನೆಯಲ್ಲೇ ತಯಾರಿಸಿದ ಶುದ್ಧ 'ಹಳದಿ ಸಿಹಿ ಬೂಂದಿ'ಯನ್ನು (Sweet Boondi Recipe) ನೈವೇದ್ಯವಾಗಿ ನೀಡಬಹುದು. ಅಂಗಡಿಯಷ್ಟೇ ರುಚಿಯಾದ ಬೂಂದಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ಸುಲಭ ವಿಧಾನ ಇಲ್ಲಿದೆ.
ಸ್ವೀಟ್ ಬೂಂದಿ ಬೇಕಾಗುವ ಸಾಮಗ್ರಿಗಳು
ಬೂಂದಿ ಹಿಟ್ಟಿಗೆ
• ಕಡಲೆಹಿಟ್ಟು - ಒಂದು ಕಪ್
• ನೀರು - ಅಗತ್ಯಕ್ಕೆ ತಕ್ಕಷ್ಟು
• ಹಳದಿ ಫುಡ್ ಕಲರ್ - ಮೂರು ಹನಿ
• ತುಪ್ಪ ಅಥವಾ ಎಣ್ಣೆ - ಕರಿಯಲು
ಸಕ್ಕರೆ ಪಾಕಕ್ಕೆ
• ಸಕ್ಕರೆ - ಒಂದು ಕಪ್
• ನೀರು - ಅಗತ್ಯಕ್ಕೆ ತಕ್ಕಷ್ಟು
• ಏಲಕ್ಕಿ ಪುಡಿ - ಅರ್ಧ ಚಮಚ
• ಕೇಸರಿ ದಳ - 8 ರಿಂದ 10
ಸ್ವೀಟ್ ಬೂಂದಿ ತಯಾರಿಸುವ ಸರಳ ವಿಧಾನ
- ಮೊದಲು, ಒಂದು ಅಗಲವಾದ ಪಾತ್ರೆಯಲ್ಲಿ ಒಂದು ಕಪ್ ಕಡಲೆ ಹಿಟ್ಟು ತೆಗೆದುಕೊಂಡು, ಸ್ವಲ್ಪ ಸ್ವಲ್ಪ ನೀರನ್ನು ಸೇರಿಸುತ್ತಾ ಗಂಟುಗಳಿಲ್ಲದಂತೆ ಚೆನ್ನಾಗಿ ಕಲಸಿ.
- ಹಿಟ್ಟು ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾದ ಹದದಲ್ಲಿರಬೇಕು, ಹೆಚ್ಚು ಗಟ್ಟಿಯಾಗಲಿ ಅಥವಾ ತೆಳುವಾಗಲಿ ಬೇಡ.
- ತಯಾರಾದ ಹಿಟ್ಟಿಗೆ ಹಳದಿ ಬಣ್ಣ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟನ್ನು ಎಷ್ಟು ಚೆನ್ನಾಗಿ ಬೀಟ್ ಮಾಡುತ್ತೀರೋ, ಅಷ್ಟು ಗುಂಡಗೆ ಮತ್ತು ಆಕರ್ಷಕ ಬೂಂದಿಗಳು ಮೂಡುತ್ತವೆ.
- ನಂತರ, ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆಯನ್ನು ಮಧ್ಯಮ ಉರಿಯಲ್ಲಿ ಕಾಯಿಸಿ. ಎಣ್ಣೆ ಕಾದಿದೆಯೇ ಪರೀಕ್ಷಿಸಲು ಒಂದು ಹನಿ ಹಿಟ್ಟು ಹಾಕಿ. ಅದು ತಕ್ಷಣ ತೇಲಿದರೆ ಎಣ್ಣೆ ಸಿದ್ಧವಾಗಿದೆ ಅಂತ ಅರ್ಥ.
- ಈಗ ಜರಡಿ ಅಥವಾ ಬೂಂದಿ ಸೌಟನ್ನು ಕಾದ ಎಣ್ಣೆಯ ಮೇಲೆ ಹಿಡಿದು, ಅದರ ಮೇಲೆ ಹಿಟ್ಟನ್ನು ಹಾಕಿ ಲಘುವಾಗಿ ತಟ್ಟಿ. ಆಗ ಸಣ್ಣ ಹನಿಗಳು ಎಣ್ಣೆಗೆ ಬಿದ್ದು ಗುಂಡನೆಯ ಮುತ್ತಿನಂತಹ ಬೂಂದಿಗಳಾಗುತ್ತವೆ. ಇವುಗಳನ್ನು ಕುರುಕುರಾಗುವವರೆಗೆ ಕರೆದು ಒಂದು ಪಾತ್ರೆಗೆ ವರ್ಗಾಯಿಸಿ.
- ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಸಕ್ಕರೆ ಮತ್ತು ಅಷ್ಟಕ್ಕೆ ಮುಳುಗುವಷ್ಟು ನೀರು ಸೇರಿಸಿ ಕುದಿಸಿ. ಪಾಕವು ಒಂದು ಎಳೆ ಹದ ಬರುವವರೆಗೆ ಕಾಯಿಸಿ.
- ನಂತರ ಅದಕ್ಕೆ ಏಲಕ್ಕಿ ಪುಡಿ ಹಾಗೂ ಕೇಸರಿ ದಳಗಳನ್ನು ಸೇರಿಸಿ ಮಿಕ್ಸ್ ಮಾಡಿ.
- ಬಿಸಿಯಾಗಿರುವ ಸಕ್ಕರೆ ಪಾಕಕ್ಕೆ ಈಗಾಗಲೇ ಕರಿದಿಟ್ಟ ಬೂಂದಿಯನ್ನು ಸೇರಿಸಿ ಲಘುವಾಗಿ ಕೈಯಾಡಿಸಿ.
- ನಂತರ 10 ನಿಮಿಷ ಪಾತ್ರೆಯನ್ನು ಮುಚ್ಚಿಡಿ. ಇದರಿಂದ ಬೂಂದಿ ಪಾಕವನ್ನು ಸಂಪೂರ್ಣವಾಗಿ ಹೀರಿಕೊಂಡು ಮೃದು ಮತ್ತು ರಸಭರಿತವಾಗುತ್ತದೆ.
ಈ ಸರಳ ಹಂತಗಳನ್ನು ಅನುಸರಿಸಿ, ಮನೆಯಲ್ಲೇ ಸ್ವಾದಿಷ್ಟವಾದ ಬಸಂತ ಪಂಚಮಿ ವಿಶೇಷ 'ಹಳದಿ ಸಿಹಿ ಬೂಂದಿ' ಪ್ರಸಾದವನ್ನು (Sweet Boondi Prasad) ಸಿದ್ಧಗೊಳಿಸಬಹುದು.
ಈ ಪ್ರಸಾದದ ಮಹತ್ವ
ಜ್ಯೋತಿಷ್ಯ ಹಾಗೂ ಶಾಸ್ತ್ರಗಳ ಪ್ರಕಾರ, ಸರಸ್ವತಿ ಪೂಜೆಯ ದಿನ ಹಳದಿ ಬಣ್ಣದ ಸಿಹಿ ಪದಾರ್ಥಗಳನ್ನು ಹಂಚುವುದು ಜ್ಞಾನ ಮತ್ತು ಸಮೃದ್ಧಿಯ ಸಂಕೇತ. ಹಳದಿ ಬಣ್ಣ ಗುರು ಗ್ರಹದ (ಬೃಹಸ್ಪತಿ) ಪ್ರತಿನಿಧಿಯಾಗಿರುವುದರಿಂದ, ಈ ಪ್ರಸಾದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ವಿಶೇಷ ಫಲ ನೀಡುತ್ತದೆ.



Click it and Unblock the Notifications
