Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಶಬರಿಮಲೆ ಅರಾವಣ ಪಾಯಸಂ ರೆಸಿಪಿ
ಶಬರಿಮಲೆ ಸ್ವಾಮಿ ಪ್ರಸಾದವೆಂದರೆ ಅರಾವಣಂ ಪಾಯಸಂ. ಮಲೆಗೆ ಮಾಲೆ ಹೋಗಿ ಬಂದವರು ಈ ಪ್ರಸಾದ ತಂದು ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಆದ್ದರಿಂದ ಈ ಪಾಯಸಂ ರುಚಿ ಗೊತ್ತಿಲ್ಲ ಎನ್ನುವವರು ತುಂಬಾ ವಿರಳ.

ಒಂದು ಚಮಚ ಬಾಯಿಗೆ ಹಾಕಿದರೆ ಸಾಕು ಅದರ ರುಚಿ ಅದ್ಭುತ ಅನಿಸುವುದು. ಈ ಪಾಯಸ ಹೇಗೆ ತಯಾರಿಸಲಾಗುವುದು? ವರ್ಷದವರೆಗೆ ಇಟ್ಟರೂ ಇದು ಹಾಳಾಗಲ್ಲ, ಹಾಗಾಗಿ ಇದಕ್ಕೆ ಬಳಸುವ ಸಾಮಗ್ರಿ ಯಾವುದು ಎಂಬ ಪ್ರಶ್ನೆ ಹಲವರಲ್ಲಿದೆ.
ಅಯ್ಯಪ್ಪ ಸ್ವಾಮಿ ನೈವೇದ್ಯಕ್ಕೆ ಈ ಪಾಯಸ ಮಾಡ ಬಯಸುವುದಾದರೆ ಇಲ್ಲಿದೆ ರೆಸಿಪಿ ಟ್ರೈ ಮಾಡಿ, ಅದೇ ಅರಾವಣ ಪಾಯಸಂ ರುಚಿಯಲ್ಲಿಯೇ ಇರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
Recipe By: Reena TK
Recipe Type: sweet
Serves: many
-
ಬೇಕಾಗುವ ಸಾಮಗ್ರಿ
1/4 ಕಪ್ ಮಟ್ಟಾ ರೈಸ್ (ಕೆಂಪು ಕುಚಲಕ್ಕಿ)
1/4 ಕಪ್ ತುಪ್ಪ
2 ಕಪ್ ನೀರು
1.5 ಕಪ್ ತುಪ್ಪ
2 ಚಮಚ ತೆಂಗಿನಕಾಯಿ ತುಂಡು
1/4 ಚಮಚ ಶುಂಠಿ ಪುಡಿ (ಚುಕ್ಕು)
3-4 ಹಸಿರು ಏಲಕ್ಕಿ
-
ಮಾಡುವ ವಿಧಾನ
* ಉರುಳಿ (ದಪ್ಪ ತಳವಿರುವ ತಾಮ್ರದ ಪಾತ್ರೆ) ಬಿಸಿ ಮಾಡಿ 1/4 ಕಪ್ ತುಪ್ಪ ಹಾಕಿ ಬಿಸಿ ಮಾಡಿ
* ಈಗ ಅದಕ್ಕೆ ಕತ್ತರಿಸಿದ ತೆಂಗಿನಕಾಯಿ ತುಂಡು ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಆ ತೆಂಗಿನ ಕಾಯಿ ತೆಗೆದು ಒಂದು ಬದಿಯಲ್ಲಿ ಇಡಿ
* ಈಗ ಅದೇ ತುಪ್ಪಕ್ಕೆ ಮಟ್ಟಾ ರೈಸ್ ಹಾಕಿ 5 ನಿಮಿಷ ಫ್ರೈ ಮಾಡಿ. ನಂತರ 2 ಕಪ್ ಹಾಕಿ ಬೇಯಿಸಿ.
* ಅದಕ್ಕೆ 3/4 ಕಪ್ ತುರಿದ ಬೆಲ್ಲ ಹಾಕಿ, ಬೆಲ್ಲ ಕರಗುವವರೆಗೆ ಬಿಡಿ.
* ಈಗ ಅದಕ್ಕೆ 3-4 ಜಜ್ಜಿದ ಏಲಕ್ಕಿ ಹಾಕಿ.
* ಅಕ್ಕಿಯಿಂದ ತುಪ್ಪ ಬಿಟ್ಟು ಮೇಲ್ಭಾಗದಲ್ಲಿ ತೇಲುವವರೆಗೆ ಬೇಯಿಸಿ. ಮಿಶ್ರಣ ಗಟ್ಟಿಯಾದಾಗ ಗ್ಯಾಸ್ ಆಫ್ ಮಾಡಿ.
* ನಂತರ ಫ್ರೈ ಮಾಡಿಟ್ಟ ತೆಂಗಿನಕಾಯಿ ಪೀಸ್ ಸೇರಿಸಿ, ನಂತರ ಚುಕ್ಕು ಪುಡಿ ಹಾಕಿ ಮಿಶ್ರ ಮಾಡಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ, ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.
- ಇದನ್ನು ಮಾಡಲು ನೀವು ಉರುಳಿ ಪಾತ್ರೆ ಬಳಸಬೇಕು. ಈ ಪಾತ್ರೆ ಕೇರಳದ ಮನೆಗಳಲ್ಲಿ ಇರುತ್ತದೆ, ಉರುಳಿ ಇಲ್ಲದಿದ್ದರೆ ದಪ್ಪ ತಳದ ಕಡಾಯಿ ಬಳಸಿ, ಆದರೆ ತಾಮ್ರದ ಕಡಾಯಿಯಲ್ಲಿ ಮಾಡಿದರೆ ರುಚಿ ಹೆಚ್ಚು
- ಕ್ಯಾಲೋರಿ: - 47ಕ್ಯಾ
- ಕೊಬ್ಬು: - 12 ಗ್ರಾಂ



Click it and Unblock the Notifications