Latest Updates
-
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ
ಶಬರಿಮಲೆ ಅರಾವಣ ಪಾಯಸಂ ರೆಸಿಪಿ
ಶಬರಿಮಲೆ ಸ್ವಾಮಿ ಪ್ರಸಾದವೆಂದರೆ ಅರಾವಣಂ ಪಾಯಸಂ. ಮಲೆಗೆ ಮಾಲೆ ಹೋಗಿ ಬಂದವರು ಈ ಪ್ರಸಾದ ತಂದು ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಆದ್ದರಿಂದ ಈ ಪಾಯಸಂ ರುಚಿ ಗೊತ್ತಿಲ್ಲ ಎನ್ನುವವರು ತುಂಬಾ ವಿರಳ.

ಒಂದು ಚಮಚ ಬಾಯಿಗೆ ಹಾಕಿದರೆ ಸಾಕು ಅದರ ರುಚಿ ಅದ್ಭುತ ಅನಿಸುವುದು. ಈ ಪಾಯಸ ಹೇಗೆ ತಯಾರಿಸಲಾಗುವುದು? ವರ್ಷದವರೆಗೆ ಇಟ್ಟರೂ ಇದು ಹಾಳಾಗಲ್ಲ, ಹಾಗಾಗಿ ಇದಕ್ಕೆ ಬಳಸುವ ಸಾಮಗ್ರಿ ಯಾವುದು ಎಂಬ ಪ್ರಶ್ನೆ ಹಲವರಲ್ಲಿದೆ.
ಅಯ್ಯಪ್ಪ ಸ್ವಾಮಿ ನೈವೇದ್ಯಕ್ಕೆ ಈ ಪಾಯಸ ಮಾಡ ಬಯಸುವುದಾದರೆ ಇಲ್ಲಿದೆ ರೆಸಿಪಿ ಟ್ರೈ ಮಾಡಿ, ಅದೇ ಅರಾವಣ ಪಾಯಸಂ ರುಚಿಯಲ್ಲಿಯೇ ಇರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
Recipe By: Reena TK
Recipe Type: sweet
Serves: many
-
ಬೇಕಾಗುವ ಸಾಮಗ್ರಿ
1/4 ಕಪ್ ಮಟ್ಟಾ ರೈಸ್ (ಕೆಂಪು ಕುಚಲಕ್ಕಿ)
1/4 ಕಪ್ ತುಪ್ಪ
2 ಕಪ್ ನೀರು
1.5 ಕಪ್ ತುಪ್ಪ
2 ಚಮಚ ತೆಂಗಿನಕಾಯಿ ತುಂಡು
1/4 ಚಮಚ ಶುಂಠಿ ಪುಡಿ (ಚುಕ್ಕು)
3-4 ಹಸಿರು ಏಲಕ್ಕಿ
-
ಮಾಡುವ ವಿಧಾನ
* ಉರುಳಿ (ದಪ್ಪ ತಳವಿರುವ ತಾಮ್ರದ ಪಾತ್ರೆ) ಬಿಸಿ ಮಾಡಿ 1/4 ಕಪ್ ತುಪ್ಪ ಹಾಕಿ ಬಿಸಿ ಮಾಡಿ
* ಈಗ ಅದಕ್ಕೆ ಕತ್ತರಿಸಿದ ತೆಂಗಿನಕಾಯಿ ತುಂಡು ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಆ ತೆಂಗಿನ ಕಾಯಿ ತೆಗೆದು ಒಂದು ಬದಿಯಲ್ಲಿ ಇಡಿ
* ಈಗ ಅದೇ ತುಪ್ಪಕ್ಕೆ ಮಟ್ಟಾ ರೈಸ್ ಹಾಕಿ 5 ನಿಮಿಷ ಫ್ರೈ ಮಾಡಿ. ನಂತರ 2 ಕಪ್ ಹಾಕಿ ಬೇಯಿಸಿ.
* ಅದಕ್ಕೆ 3/4 ಕಪ್ ತುರಿದ ಬೆಲ್ಲ ಹಾಕಿ, ಬೆಲ್ಲ ಕರಗುವವರೆಗೆ ಬಿಡಿ.
* ಈಗ ಅದಕ್ಕೆ 3-4 ಜಜ್ಜಿದ ಏಲಕ್ಕಿ ಹಾಕಿ.
* ಅಕ್ಕಿಯಿಂದ ತುಪ್ಪ ಬಿಟ್ಟು ಮೇಲ್ಭಾಗದಲ್ಲಿ ತೇಲುವವರೆಗೆ ಬೇಯಿಸಿ. ಮಿಶ್ರಣ ಗಟ್ಟಿಯಾದಾಗ ಗ್ಯಾಸ್ ಆಫ್ ಮಾಡಿ.
* ನಂತರ ಫ್ರೈ ಮಾಡಿಟ್ಟ ತೆಂಗಿನಕಾಯಿ ಪೀಸ್ ಸೇರಿಸಿ, ನಂತರ ಚುಕ್ಕು ಪುಡಿ ಹಾಕಿ ಮಿಶ್ರ ಮಾಡಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ, ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.
- ಇದನ್ನು ಮಾಡಲು ನೀವು ಉರುಳಿ ಪಾತ್ರೆ ಬಳಸಬೇಕು. ಈ ಪಾತ್ರೆ ಕೇರಳದ ಮನೆಗಳಲ್ಲಿ ಇರುತ್ತದೆ, ಉರುಳಿ ಇಲ್ಲದಿದ್ದರೆ ದಪ್ಪ ತಳದ ಕಡಾಯಿ ಬಳಸಿ, ಆದರೆ ತಾಮ್ರದ ಕಡಾಯಿಯಲ್ಲಿ ಮಾಡಿದರೆ ರುಚಿ ಹೆಚ್ಚು
- ಕ್ಯಾಲೋರಿ: - 47ಕ್ಯಾ
- ಕೊಬ್ಬು: - 12 ಗ್ರಾಂ



Click it and Unblock the Notifications