Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಶಬರಿಮಲೆ ಅರಾವಣ ಪಾಯಸಂ ರೆಸಿಪಿ
ಶಬರಿಮಲೆ ಸ್ವಾಮಿ ಪ್ರಸಾದವೆಂದರೆ ಅರಾವಣಂ ಪಾಯಸಂ. ಮಲೆಗೆ ಮಾಲೆ ಹೋಗಿ ಬಂದವರು ಈ ಪ್ರಸಾದ ತಂದು ತಮ್ಮ ಆಪ್ತರಿಗೆ, ಸ್ನೇಹಿತರಿಗೆ ಹಂಚುತ್ತಾರೆ. ಆದ್ದರಿಂದ ಈ ಪಾಯಸಂ ರುಚಿ ಗೊತ್ತಿಲ್ಲ ಎನ್ನುವವರು ತುಂಬಾ ವಿರಳ.

ಒಂದು ಚಮಚ ಬಾಯಿಗೆ ಹಾಕಿದರೆ ಸಾಕು ಅದರ ರುಚಿ ಅದ್ಭುತ ಅನಿಸುವುದು. ಈ ಪಾಯಸ ಹೇಗೆ ತಯಾರಿಸಲಾಗುವುದು? ವರ್ಷದವರೆಗೆ ಇಟ್ಟರೂ ಇದು ಹಾಳಾಗಲ್ಲ, ಹಾಗಾಗಿ ಇದಕ್ಕೆ ಬಳಸುವ ಸಾಮಗ್ರಿ ಯಾವುದು ಎಂಬ ಪ್ರಶ್ನೆ ಹಲವರಲ್ಲಿದೆ.
ಅಯ್ಯಪ್ಪ ಸ್ವಾಮಿ ನೈವೇದ್ಯಕ್ಕೆ ಈ ಪಾಯಸ ಮಾಡ ಬಯಸುವುದಾದರೆ ಇಲ್ಲಿದೆ ರೆಸಿಪಿ ಟ್ರೈ ಮಾಡಿ, ಅದೇ ಅರಾವಣ ಪಾಯಸಂ ರುಚಿಯಲ್ಲಿಯೇ ಇರುತ್ತದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
Recipe By: Reena TK
Recipe Type: sweet
Serves: many
-
ಬೇಕಾಗುವ ಸಾಮಗ್ರಿ
1/4 ಕಪ್ ಮಟ್ಟಾ ರೈಸ್ (ಕೆಂಪು ಕುಚಲಕ್ಕಿ)
1/4 ಕಪ್ ತುಪ್ಪ
2 ಕಪ್ ನೀರು
1.5 ಕಪ್ ತುಪ್ಪ
2 ಚಮಚ ತೆಂಗಿನಕಾಯಿ ತುಂಡು
1/4 ಚಮಚ ಶುಂಠಿ ಪುಡಿ (ಚುಕ್ಕು)
3-4 ಹಸಿರು ಏಲಕ್ಕಿ
-
ಮಾಡುವ ವಿಧಾನ
* ಉರುಳಿ (ದಪ್ಪ ತಳವಿರುವ ತಾಮ್ರದ ಪಾತ್ರೆ) ಬಿಸಿ ಮಾಡಿ 1/4 ಕಪ್ ತುಪ್ಪ ಹಾಕಿ ಬಿಸಿ ಮಾಡಿ
* ಈಗ ಅದಕ್ಕೆ ಕತ್ತರಿಸಿದ ತೆಂಗಿನಕಾಯಿ ತುಂಡು ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ನಂತರ ಆ ತೆಂಗಿನ ಕಾಯಿ ತೆಗೆದು ಒಂದು ಬದಿಯಲ್ಲಿ ಇಡಿ
* ಈಗ ಅದೇ ತುಪ್ಪಕ್ಕೆ ಮಟ್ಟಾ ರೈಸ್ ಹಾಕಿ 5 ನಿಮಿಷ ಫ್ರೈ ಮಾಡಿ. ನಂತರ 2 ಕಪ್ ಹಾಕಿ ಬೇಯಿಸಿ.
* ಅದಕ್ಕೆ 3/4 ಕಪ್ ತುರಿದ ಬೆಲ್ಲ ಹಾಕಿ, ಬೆಲ್ಲ ಕರಗುವವರೆಗೆ ಬಿಡಿ.
* ಈಗ ಅದಕ್ಕೆ 3-4 ಜಜ್ಜಿದ ಏಲಕ್ಕಿ ಹಾಕಿ.
* ಅಕ್ಕಿಯಿಂದ ತುಪ್ಪ ಬಿಟ್ಟು ಮೇಲ್ಭಾಗದಲ್ಲಿ ತೇಲುವವರೆಗೆ ಬೇಯಿಸಿ. ಮಿಶ್ರಣ ಗಟ್ಟಿಯಾದಾಗ ಗ್ಯಾಸ್ ಆಫ್ ಮಾಡಿ.
* ನಂತರ ಫ್ರೈ ಮಾಡಿಟ್ಟ ತೆಂಗಿನಕಾಯಿ ಪೀಸ್ ಸೇರಿಸಿ, ನಂತರ ಚುಕ್ಕು ಪುಡಿ ಹಾಕಿ ಮಿಶ್ರ ಮಾಡಿ.
* ನಂತರ ದೇವರಿಗೆ ನೈವೇದ್ಯ ಅರ್ಪಿಸಿ, ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.
- ಇದನ್ನು ಮಾಡಲು ನೀವು ಉರುಳಿ ಪಾತ್ರೆ ಬಳಸಬೇಕು. ಈ ಪಾತ್ರೆ ಕೇರಳದ ಮನೆಗಳಲ್ಲಿ ಇರುತ್ತದೆ, ಉರುಳಿ ಇಲ್ಲದಿದ್ದರೆ ದಪ್ಪ ತಳದ ಕಡಾಯಿ ಬಳಸಿ, ಆದರೆ ತಾಮ್ರದ ಕಡಾಯಿಯಲ್ಲಿ ಮಾಡಿದರೆ ರುಚಿ ಹೆಚ್ಚು
- ಕ್ಯಾಲೋರಿ: - 47ಕ್ಯಾ
- ಕೊಬ್ಬು: - 12 ಗ್ರಾಂ



Click it and Unblock the Notifications