Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ರೆಸಿಪಿ: ಮಧುಮೇಹಿಗಳಿಗೆ ಡಿನ್ನರ್ಗೆ ತುಂಬಾ ಒಳ್ಳೆಯದು ಈ ಮೆಂತೆ ಚಪಾತಿ, ರುಚಿ ಕೂಡ ಸೂಪರ್
ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ, ಮಧುಮೇಹ ಬಂದರೆ ಸಕ್ಕರೆಯಂಶ ನಿಯಂತ್ರಣದಲ್ಲಿಡುವುದು ತುಂಬಾನೇ ಮುಖ್ಯ. ಸಕ್ಕರೆಯಂಶ ನಿಯಂತ್ರಣದಲ್ಲಿಟ್ಟರೆ ಯಾವುದೇ ದೊಡ್ಡ ಸಮಸ್ಯೆಯಿಲ್ಲದೆ ಜೀವನ ನಡೆಸಬಹುದು, ಅದೇ ಸಕ್ಕರೆಯಂಶ ಹೆಚ್ಚಾದರೆ ಮಧುಮೇಹದ ಜೊತೆಗೆ ಹತ್ತ ಹಲವು ಆರೋಗ್ಯ ಸಮಸ್ಯೆಗಳು ಸೇರಿಕೊಳ್ಳುವುದು.
ಆಹಾರಕ್ರಮ ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ. ನಾವಿಲ್ಲಿ ಮೆಂತೆ ಸೊಪ್ಪಿನ ಚಪಾತಿ ರೆಸಿಪಿ ನೀಡಿದ್ದೇವೆ, ಮಧುಮೇಹಿಗಳು ಇದನ್ನು ಮಾಡಿ ತಿಂದರೆ ಒಳ್ಳೆಯದು. ಮೆಂತೆ ಸೊಪ್ಪು ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬರಿಗೂ ತುಂಬಾನೇ ಒಳ್ಳೆಯದು. ಅಲ್ಲದೆ ಈ ಚಪಾತಿ ರುಚಿ ಕೂಡ ಚೆನ್ನಾಗಿರುತ್ತದೆ.
ರಾತ್ರಿ ಮಲಗುವಾಗ ಸಕ್ಕರೆಯಂಶ ಹೆಚ್ಚಾಗದಂಥ ಆಹಾರ ಸೇವಿಸಬೇಕು, ಅದಕ್ಕೆ ಈ ಚಪಾತಿ ಸಹಕಾರಿಯಾಗಿದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಒಂದುಕಟ್ಟು ಮೆಂತೆ ಸೊಪ್ಪು (1 ಕಪ್ನಷ್ಟು ಸೊಪ್ಪು ಇರಲಿ)
ಒಂದೂವರೆ ಕಪ್ ಗೋಧಿ ಹಿಟ್ಟು
ರುಚಿಗೆ ತಕ್ಕ ಉಪ್ಪು
ಕೆಲಸಲು ನೀರು
ತುಪ್ಪ ಅಥವಾ ಎಣ್ಣೆ
ಈ ಮೆಂತೆ ಚಪಾತಿ ಮಾಡುವುದು ಹೇಗೆ?
- ನೀವು ಪಾತ್ರೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ತೊಳೆದು ಸ್ವಚ್ಛಗೊಳಿಸಿದ ಮೆಂತೆ ಸೊಪ್ಪು ಹಾಕಿ ಫ್ರೈ ಮಾಡಿ. ಅದರ ಹಸಿ ವಾಸನೆ ಹೋಗುವಷ್ಟು ಫ್ರೈ ಮಾಡಿದರೆ ಸಾಕು, ತುಂಬಾ ಫ್ರೈ ಮಾಡಿದರೆ ಸೊಪ್ಪು ಕಹಿ ಟೇಸ್ಟ್ ಕೊಡುತ್ತದೆ, ಸ್ವಲ್ಪ ಬೆಂದರೆ ಸಾಕಾಗುತ್ತದೆ.
- ಈಗ ಬೌಲ್ಗೆ ಗೋಧಿ ಹಿಟ್ಟು ಹಾಕಿ, ಅದಕ್ಕೆ ಮೆಂತೆ ಸೊಪ್ಪು, ಉಪ್ಪು, ಸ್ವಲ್ಪ ಎಣ್ಣೆ ಹಾಕಿ ನೀರು ಹಾಕಿ ಕಲೆಸಿ. ಕೆಲವರು ತಣ್ಣೀರು ಹಾಕಿ ಹಿಟ್ಟು ಕಲೆಸಿದರೆ ಇನ್ನು ಕೆಲವರು ಬಿಸಿ ನೀರು ಹಾಕಿ ಕಲೆಸುತ್ತಾರೆ. ನೀವು ಚಪಾತಿ ಹಿಟ್ಟು ಹೇಗೆ ಕಲೆಸುತ್ತೀರೋ ಅದೇ ರೀತಿ ಕಲೆಸಿ. ಕಲೆಸುವುದರಲ್ಲಿ ವ್ಯತ್ಯಾಸವಿಲ್ಲ ಮೆಂತೆ ಸೊಪ್ಪು ಹೊಸ ಫ್ಲೇವರ್ ನೀಡುತ್ತದೆ ಅಷ್ಟೇ.
- ಈ ಹಿಟ್ಟು ಕಲೆಸಿ ಒಂದು 10 ನಿಮಿಷ ಬಿಡಿ
- ನಂತರ ಚಪಾತಿಗೆ ಉಂಡೆ ಕಟ್ಟಿ, ಲಟ್ಟಿಸಿ ಚಪಾತಿ ಬೇಯಿಸಿ
- ಚಪಾತಿ ಬೇಯಿಸುವಾಗ ತುಪ್ಪ ಅಥವಾ ಎಣ್ಣೆ ಸವರಿದರೆ ರುಚಿ ಇನ್ನೂ ಸೂಪರ್ ಆಗಿರುತ್ತದೆ.
ಮೆಂತೆ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿ
ಸಹಕಾರಿಯೇ?
ಮೆಂತೆ ಬೀಜ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ ಎಂದು
ಹೆಲ್ತ್ಲೈನ್ ವೆಬ್ಸೈಟ್ ( ಆರೋಗ್ಯದ ಬಗ್ಗೆ ರಿಸರ್ಚ್ ಲೇಖನ ನೀಡುವ
ವೆಬ್ಸೈಟ್) ಕೂಡ ಹೇಳಿದೆ.
ಮೆಂತೆ ಬೀಜ ಹಾಗೂ ಮೆಂತೆ ಸೊಪ್ಪು ಎರಡೂ ಒಳ್ಳೆಯದು.
ಮೆಂತೆಯಲ್ಲಿರುವ ಪ್ರಯೋಜನಗಳು
ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಇದರಲ್ಲಿ galactomannan ಎಂಬ ಅಂಶವಿದೆ ಇದು ದೇಹಕ್ಕೆ ಸಕ್ಕರೆಯಂಶ ನಿಧಾನಕ್ಕೆ
ಬಿಡುಗಡೆಯಾಗುವಂತೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಪಟ್ ಅಂತ
ಹೆಚ್ಚಾಗುವುದಿಲ್ಲ.
ಮೆಂತೆ ಸೊಪ್ಪಿನಲ್ಲಿರುವ ಅಮೈನೋ ಆಮ್ಲ ಇನ್ಸುಲಿನ್ ಉತ್ಪತ್ತಿ ಹೆಚ್ಚಿಸಲು
ಸಹಕಾರಿ.



Click it and Unblock the Notifications