Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಸಾಮಾನ್ಯ ಶೀತ-ಕೆಮ್ಮಿಗೆ ಪರಿಣಾಮಕಾರಿ ಕಷಾಯ ಪುಡಿ ಮಾಡುವುದು ಹೇಗೆ?
ಬಿಸಿಲಿನ ಧಗೆಯಲ್ಲಿ ಬೇಯುತ್ತಿದ್ದ ಭೂಮಿಗೆ ಕಳೆದ ಕೆಲ ದಿನಗಳಿಂದ ಮಳೆರಾಯ ಭೇಟಿ ಕೊಡುತ್ತಿದ್ದಾನೆ, ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಕೂಡ ಶುರುವಾಗಲಿದೆ.
ಮಳೆಗಾಲದಲ್ಲಿ ಕೆಮ್ಮ-ಶೀತ ಈ ಬಗೆಯ ಸಮಸ್ಯೆ ಸರ್ವೇ ಸಾಮಾನ್ಯ, ಇಂಥ ಸಾಮಾನ್ಯ ಶೀತ-ಕೆಮ್ಮು ಈ ಬಗೆಯ ಸಾಮಾನ್ಯ ಸಮಸ್ಯೆಗಳಿಗೆ ರಾಮಮಾಣ ಈ ಕಷಾಯ ಪುಡಿ:

ಬೇಕಾಗುವ ಸಾಮಗ್ರಿ
4-5 ಕಪ್ಪು ಏಲಕ್ಕಿ (ಒಣ ಏಲಕ್ಕಿ ಕೂಡ ಬಳಸಬಹುದು)
2 ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಒಂದು ಇಂಚಿನಷ್ಟು ದೊಡ್ಡದಿರುವ ಒಣ ಶುಂಠಿ (ಶುಂಠಿ ಪುಡಿಯಾದರೆ 1/2 ಚಮಚ)
2 ಲವಂಗ
ಕಾಳುಮೆಣಸು 1 ಚಮಚ
2 ಚಮಚ ಸೋಂಪು
ಇವುಗಳನ್ನು ನೀವು ತವಾ ಅಥವಾ ಬಾಣಲೆಗೆ ಹಾಕಿ ರೋಸ್ಟ್ ಮಾಡಬೇಕು, ನಂತರ ಅವುಗಳನ್ನು ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಕಷಾಯ ಪುಡಿ ಮಾಡುವುದರಿಂದ ಪ್ರಯೋಜನವೇನು?
ಕಷಾಯ ಮಾಡಿದರೆ ನಾವು ಒಂದು ಅಥವಾ ಎರಡು ದಿನ ಇಟ್ಟು ಸೇವಿಸಬಹುದು
ಆದರೆ ಕಷಾಯ ಪುಡಿ ಮಾಡಿದರೆ ನಮಗೆ ಯಾವಾಗ ಶೀತ-ಕೆಮ್ಮು ಈ ಬಗೆಯ ಸಮಸ್ಯೆ
ಉಂಟಾಗುವುದೋ ಆವಾಗ ಬಿಸಿ ನೀರಿನಲ್ಲಿ ಕಲೆಸಿ ಸೇವಿಸಿದರೆ ಸಾಕು.
ಹಾಸ್ಟಲ್, ಪಿಜಿಯಲ್ಲಿರುವ ಮಕ್ಕಳಿಗೆ ಮಾಡಿ ಕೊಡಬಹುದು.
ನಂತರ ಬೇಕಾದಾಗ ಬಿಸಿ ನೀರಿಗೆ ಒಂದು ಚಮಚ ಪುಡಿ ಹಾಕಿ, ನಂತರ ಸ್ವಲ್ಪ ಜೇನು, ನಿಂಬೆರಸ ಹಾಕಿ ಮಿಕ್ಸ್ ಮಾಡಿದರೆ ಕಷಾಯ ರೆಡಿ.
ಕಷಾಯ ಯಾವಾಗ ಕುಡಿದರೆ ಒಳ್ಳೆಯದು?
ವಾತ: ವಾತ ಶರೀರ ಇರುವವರೆಗೆ ಕಷಾಯ ಸಂಜೆ ಕುಡಿಯುವುದು
ಒಳ್ಳೆಯದು. ಕಷಾಯದಲ್ಲಿ ಸ್ವಲ್ಪ ತುಪ್ಪ ಬೇಕಾದರೆ ಹಾಕಬಹುದು.
ಪಿತ್ತ: ಪಿತ್ತ ಪ್ರಕೃಯೆವರೆಗೆ ಕಷಾಯವನ್ನು ಬೆಳಗ್ಗೆ ಕೊಡುವುದು ಒಳ್ಳೆಯದು. ಕಷಾಯವನ್ನು ಹದ ಬಿಸಿ ಇರುವಾಗ ಕುಡಿಯಿರಿ.
ಕಫ: ಕಫ ಶರೀರದವರು ದಿನದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಸೇವಿಸಬಹುದು. ಕಷಾಯ ಸ್ವಲ್ಪ ಬಿಸಿ ಬಿಸಿ ಇರುವಾಗ ಕುಡಿಯಬಹುದು.
ನಿಮ್ಮ ಶರೀರ ವಾತ, ಪಿತ್ತ, ಕಫ ಇದರಲ್ಲಿ ಯಾವ ಬಗೆಯದು ಎಂದು
ತಿಳಿಯದಿದ್ದರೆ
ನೀವು ಇದರ ಬಗ್ಗೆ ಆಯುರ್ವೇದ ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಿ, ನಂತರ ಕಷಾಯಕ್ಕೆ
ಸ್ವಲ್ಪ ಅಮೃತ ಬಳ್ಳಿ ಸೇವಿಸಿದರೆ ಒಳ್ಳೆಯದು.



Click it and Unblock the Notifications