Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮದ್ದೂರು ವಡೆ ಹಿಂದಿರುವ ಸ್ವಾರಸ್ಯಕರ ಕತೆ ಗೊತ್ತೇ? ಏನು ಮಾಡಬೇಕು ಎಂದು ಗೊತ್ತಾಗದೆ ಮಾಡಿದ ಸ್ನ್ಯಾಕ್ಸ್ ಇದು
ನೀವು ಮಂಡ್ಯ-ಮದ್ದೂರು ಕಡೆ ಹೋದರೆ ಅಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಸ್ನ್ಯಾಕ್ಸ್ ಅಂದರೆ ಮದ್ದೂರು ವಡೆ. ಅಲ್ಲಿ ಹೋಟೆಲ್ಗಳಲ್ಲಿ , ಬಸ್ಸ್ಟ್ಯಾಂಡ್ನಲ್ಲಿ ಈ ಮದ್ದೂರು ವಡೆ ಮಾರುವವರನ್ನು ಕಾಣುತ್ತೇವೆ. ಕೆಲವರು 10 ರೂಪಾಯಿಗೆ ಒಂದು ಕೊಟ್ಟರೆ, ಸ್ವಲ್ಪ ದೊಡ್ಡ ಗಾತ್ರದ ವಡೆಗೆ 20 ರುಪಾಯಿ ಇರುತ್ತದೆ. ಆ ವಡೆ ನೋಡುವಾಗ ಯಾರಿಗಾದರು ಅದರ ಟೇಸ್ಟ್ ನೋಡಬೇಕೆನಿಸುತ್ತದೆ, ತಿಂದಾಗ ರುಚಿಯಾಗಿರುವುದರಿಂದ ಇಷ್ಟವಾಗುವುದು.

ಆದರೆ ಈ ಮದ್ದೂರು ವಡೆ ಹುಟ್ಟಿಕೊಂಡಿದ್ದು ಹೇಗೆ? ಇದನ್ನು ಮೊದಲು ತಯಾರಿಸಿದ್ದು ಹೇಗೆ ಎಂಬುವುದು ಗೊತ್ತೇ? ಇದು ಪ್ಲ್ಯಾನ್ ಮಾಡಿ ತಯಾರಿಸಿದ ರೆಸಿಪಿ ಅಲ್ಲ, ಆಕಸ್ಮಿಕವಾಗಿ ತಯಾರಿಸಿದ್ದು, ಮದ್ದೂರು ವಡೆ ತಯಾರಾದ ಇಂಟೆರೆಸ್ಟಿಂಗ್ ಕತೆ ನೋಡುವುದಾದರೆ...
1917ರಲ್ಲಿ ರಾಮಚಂದ್ರ ಬುದ್ಧಯ್ಯ ಎಂಬುವವರು ಮದ್ದೂರು ರೈಲ್ವೆ ಸ್ಟೆಷನ್ ಬಳಿ ವೆಜ್ ಹೋಟೆಲ್ ನಡೆಸುತ್ತಿದ್ದರು. ಪ್ರತಿನಿತ್ಯ ನೂರಾರು ಜನರು ಆ ಹೋಟೆಲ್ಗೆ ಬರುತ್ತಿದ್ದರು. ಕೆಲಸದಿಂದ ಮರಳುತ್ತಿರುವವರು ರಾಮಚಂದ್ರರವರ ಹೋಟೆಲ್ಗೆ ಬಂದು ತಿಂಡಿ ತಿಂದು ಹೋಗುತ್ತಿದ್ದರು. ಇಡ್ಲಿ, ವಡೆ, ಸಾಂಬಾರ್, ಪಕೋಡಾ ಈ ಬಗೆಯ ತಿಂಡಿಗಳನ್ನು ಮಾರುತ್ತಿದ್ದರು.
ಮದ್ದೂರು ವಡೆ ತಯಾರಾದ ಕತೆ
ಹೀಗಿರುವಾಗ ಏಪ್ರಿಲ್ ತಿಂಗಳಿನ ಒಂದು ದಿನ ವಡೆ ತಯಾರಿಗೆ ಸಾಮಗ್ರಿ, ಬಂದ ಸಿದ್ಧಪಡಿಸಲು ಸ್ವಲ್ಪ ತಡವಾಗುತ್ತೆ, ತನ್ನ ಗ್ರಾಹಕರಿಗೆ ಏನಾದರೂ ಮಾಡಿ ಕೊಡಲೇಬೇಕು ಎಂದು ಪಕೋಡಾ ಸಾಮಗ್ರಿ ಜೊತೆ ಮತ್ತಿತರ ಸಾಮಗ್ರಿ ಸೇರುಸು ಮಿಶ್ರ ಮಾಡಿ ತಟ್ಟಿ ಏನೋ ಒಂದು ತಯಾರಿಸಿ ಎಣ್ಣೆಯಲ್ಲಿ ಫ್ರೈ ಮಾಡುತ್ತಾರೆ, ನೋಡಿದರೆ ರುಚಿ ತುಂಬಾನೇ ಚೆನ್ನಾಗಿರುತ್ತದೆ, ಗ್ರಾಹಕರಿಗೆ ತುಂಬಾನೇ ಇಷ್ಟವಾಗುವುದು, ನಿಧಾನಕ್ಕೆ ಡಿಮ್ಯಾಂಡ್ ಹೆಚ್ಚಾಗುವುದು, ಹೀಗೆ ಮದ್ದೂರು ವಡೆ ಪ್ರಸಿದ್ಧಿಯನ್ನು ಪಡೆಯಿತು.
ರಾಮಚಂದ್ರರ ನಂತರ ಅವರ ಮಕ್ಕಳು ಕೂಡ ಮದ್ದೂರು ವಡೆ ಮಾಡಲಾರಂಭಿಸಿದರು, ಈಗ ನಿಮಗೆ ಎಲ್ಲಾ ಕಡೆ ಮದ್ದೂರು ವಡೆ ಸಿಗುತ್ತದೆ.
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು 3/4 ಕಪ್
ಸೂಜಿ ರವೆ 2 ಚಮಚ
ಮೈದಾ 1 ಚಮಚ
ಕಡಲೆ ಹಿಟ್ಟು 2 ಚಮಚ
ಜೀರಿಗೆ 1/2 ಚಮಚ
ಕೊತ್ತಂಬರಿ ಸೊಪ್ಪು 1ಕಪ್
ಹಸಿಮೆಣಸು 1
ಈರುಳ್ಳಿ 1 ಕಪ್
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಇಂಗು
ಎಣ್ಣೆ (ಫ್ರೈ ಮಾಡಲು)
1/2 ಲೋಟಕ್ಕಿಂತ ಕಡಿಮೆ ನೀರು (ಕಲೆಸುವಾಗ ನೋಡಿ ಹಾಕಿ ಹಿಟ್ಟು ನೀರು ನೀರಾಗಬಾರದು)
-
ತಯಾರಿಸುವುದು ಹೇಗೆ?
* ಒಂದು ಬೌಲ್ನಲ್ಲಿ ಮೈದಾ ಹಿಟ್ಟು, ಸೂಜಿ ರವೆ, ಅಕ್ಕಿ ಹಿಟ್ಟು, ಜೀರಿಗೆ ಹಾಕಿ.
* ಕತ್ತರಿಸಿ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಈರುಳ್ಳಿ, ರುಚಿಗೆ ತಕ್ಕ ಉಪ್ಪು ಹಾಕಿ, ಸೇರಿಸಿ ಮಿಕ್ಸ್ ಮಾಡಿ.
* ಈಗ ಪ್ಯಾನ್ಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಇಂಗು ಹಾಕಿ, ನಂತರ ಮಿಶ್ರಣ ಹಾಕಿ, ಸ್ವಲ್ಪ-ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ ಮಿಶ್ರಣವನ್ನು ಮೃದುವಾಗಿ ಮಿಕ್ಸ್ ಮಾಡಿ.
* ಈಗ ಎಣ್ಣೆಯನ್ನು ಕಾಯಿಸಿ.
* ಈಗ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ, ತಟ್ಟಿ ಎಣ್ಣೆಯಲ್ಲಿ ಹಾಕಿ ಫ್ರೈ
- ನೀವು ಮದ್ದೂರು ವಡೆ ಮಾಡಿಟ್ಟು ಒಮದು ವಾರದವರೆಗೆ ಬಳಸಬಹುದು, ಸ್ನಾಕ್ಸ್ಗೆ ರುಚಿ ರುಚಿಯಾದ ತಿಂಡಿ ಇದಾಗಿದೆ.



Click it and Unblock the Notifications