Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮದ್ದೂರು ವಡೆ ಹಿಂದಿರುವ ಸ್ವಾರಸ್ಯಕರ ಕತೆ ಗೊತ್ತೇ? ಏನು ಮಾಡಬೇಕು ಎಂದು ಗೊತ್ತಾಗದೆ ಮಾಡಿದ ಸ್ನ್ಯಾಕ್ಸ್ ಇದು
ನೀವು ಮಂಡ್ಯ-ಮದ್ದೂರು ಕಡೆ ಹೋದರೆ ಅಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಸ್ನ್ಯಾಕ್ಸ್ ಅಂದರೆ ಮದ್ದೂರು ವಡೆ. ಅಲ್ಲಿ ಹೋಟೆಲ್ಗಳಲ್ಲಿ , ಬಸ್ಸ್ಟ್ಯಾಂಡ್ನಲ್ಲಿ ಈ ಮದ್ದೂರು ವಡೆ ಮಾರುವವರನ್ನು ಕಾಣುತ್ತೇವೆ. ಕೆಲವರು 10 ರೂಪಾಯಿಗೆ ಒಂದು ಕೊಟ್ಟರೆ, ಸ್ವಲ್ಪ ದೊಡ್ಡ ಗಾತ್ರದ ವಡೆಗೆ 20 ರುಪಾಯಿ ಇರುತ್ತದೆ. ಆ ವಡೆ ನೋಡುವಾಗ ಯಾರಿಗಾದರು ಅದರ ಟೇಸ್ಟ್ ನೋಡಬೇಕೆನಿಸುತ್ತದೆ, ತಿಂದಾಗ ರುಚಿಯಾಗಿರುವುದರಿಂದ ಇಷ್ಟವಾಗುವುದು.

ಆದರೆ ಈ ಮದ್ದೂರು ವಡೆ ಹುಟ್ಟಿಕೊಂಡಿದ್ದು ಹೇಗೆ? ಇದನ್ನು ಮೊದಲು ತಯಾರಿಸಿದ್ದು ಹೇಗೆ ಎಂಬುವುದು ಗೊತ್ತೇ? ಇದು ಪ್ಲ್ಯಾನ್ ಮಾಡಿ ತಯಾರಿಸಿದ ರೆಸಿಪಿ ಅಲ್ಲ, ಆಕಸ್ಮಿಕವಾಗಿ ತಯಾರಿಸಿದ್ದು, ಮದ್ದೂರು ವಡೆ ತಯಾರಾದ ಇಂಟೆರೆಸ್ಟಿಂಗ್ ಕತೆ ನೋಡುವುದಾದರೆ...
1917ರಲ್ಲಿ ರಾಮಚಂದ್ರ ಬುದ್ಧಯ್ಯ ಎಂಬುವವರು ಮದ್ದೂರು ರೈಲ್ವೆ ಸ್ಟೆಷನ್ ಬಳಿ ವೆಜ್ ಹೋಟೆಲ್ ನಡೆಸುತ್ತಿದ್ದರು. ಪ್ರತಿನಿತ್ಯ ನೂರಾರು ಜನರು ಆ ಹೋಟೆಲ್ಗೆ ಬರುತ್ತಿದ್ದರು. ಕೆಲಸದಿಂದ ಮರಳುತ್ತಿರುವವರು ರಾಮಚಂದ್ರರವರ ಹೋಟೆಲ್ಗೆ ಬಂದು ತಿಂಡಿ ತಿಂದು ಹೋಗುತ್ತಿದ್ದರು. ಇಡ್ಲಿ, ವಡೆ, ಸಾಂಬಾರ್, ಪಕೋಡಾ ಈ ಬಗೆಯ ತಿಂಡಿಗಳನ್ನು ಮಾರುತ್ತಿದ್ದರು.
ಮದ್ದೂರು ವಡೆ ತಯಾರಾದ ಕತೆ
ಹೀಗಿರುವಾಗ ಏಪ್ರಿಲ್ ತಿಂಗಳಿನ ಒಂದು ದಿನ ವಡೆ ತಯಾರಿಗೆ ಸಾಮಗ್ರಿ, ಬಂದ ಸಿದ್ಧಪಡಿಸಲು ಸ್ವಲ್ಪ ತಡವಾಗುತ್ತೆ, ತನ್ನ ಗ್ರಾಹಕರಿಗೆ ಏನಾದರೂ ಮಾಡಿ ಕೊಡಲೇಬೇಕು ಎಂದು ಪಕೋಡಾ ಸಾಮಗ್ರಿ ಜೊತೆ ಮತ್ತಿತರ ಸಾಮಗ್ರಿ ಸೇರುಸು ಮಿಶ್ರ ಮಾಡಿ ತಟ್ಟಿ ಏನೋ ಒಂದು ತಯಾರಿಸಿ ಎಣ್ಣೆಯಲ್ಲಿ ಫ್ರೈ ಮಾಡುತ್ತಾರೆ, ನೋಡಿದರೆ ರುಚಿ ತುಂಬಾನೇ ಚೆನ್ನಾಗಿರುತ್ತದೆ, ಗ್ರಾಹಕರಿಗೆ ತುಂಬಾನೇ ಇಷ್ಟವಾಗುವುದು, ನಿಧಾನಕ್ಕೆ ಡಿಮ್ಯಾಂಡ್ ಹೆಚ್ಚಾಗುವುದು, ಹೀಗೆ ಮದ್ದೂರು ವಡೆ ಪ್ರಸಿದ್ಧಿಯನ್ನು ಪಡೆಯಿತು.
ರಾಮಚಂದ್ರರ ನಂತರ ಅವರ ಮಕ್ಕಳು ಕೂಡ ಮದ್ದೂರು ವಡೆ ಮಾಡಲಾರಂಭಿಸಿದರು, ಈಗ ನಿಮಗೆ ಎಲ್ಲಾ ಕಡೆ ಮದ್ದೂರು ವಡೆ ಸಿಗುತ್ತದೆ.
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು 3/4 ಕಪ್
ಸೂಜಿ ರವೆ 2 ಚಮಚ
ಮೈದಾ 1 ಚಮಚ
ಕಡಲೆ ಹಿಟ್ಟು 2 ಚಮಚ
ಜೀರಿಗೆ 1/2 ಚಮಚ
ಕೊತ್ತಂಬರಿ ಸೊಪ್ಪು 1ಕಪ್
ಹಸಿಮೆಣಸು 1
ಈರುಳ್ಳಿ 1 ಕಪ್
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಇಂಗು
ಎಣ್ಣೆ (ಫ್ರೈ ಮಾಡಲು)
1/2 ಲೋಟಕ್ಕಿಂತ ಕಡಿಮೆ ನೀರು (ಕಲೆಸುವಾಗ ನೋಡಿ ಹಾಕಿ ಹಿಟ್ಟು ನೀರು ನೀರಾಗಬಾರದು)
-
ತಯಾರಿಸುವುದು ಹೇಗೆ?
* ಒಂದು ಬೌಲ್ನಲ್ಲಿ ಮೈದಾ ಹಿಟ್ಟು, ಸೂಜಿ ರವೆ, ಅಕ್ಕಿ ಹಿಟ್ಟು, ಜೀರಿಗೆ ಹಾಕಿ.
* ಕತ್ತರಿಸಿ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಈರುಳ್ಳಿ, ರುಚಿಗೆ ತಕ್ಕ ಉಪ್ಪು ಹಾಕಿ, ಸೇರಿಸಿ ಮಿಕ್ಸ್ ಮಾಡಿ.
* ಈಗ ಪ್ಯಾನ್ಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಇಂಗು ಹಾಕಿ, ನಂತರ ಮಿಶ್ರಣ ಹಾಕಿ, ಸ್ವಲ್ಪ-ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ ಮಿಶ್ರಣವನ್ನು ಮೃದುವಾಗಿ ಮಿಕ್ಸ್ ಮಾಡಿ.
* ಈಗ ಎಣ್ಣೆಯನ್ನು ಕಾಯಿಸಿ.
* ಈಗ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ, ತಟ್ಟಿ ಎಣ್ಣೆಯಲ್ಲಿ ಹಾಕಿ ಫ್ರೈ
- ನೀವು ಮದ್ದೂರು ವಡೆ ಮಾಡಿಟ್ಟು ಒಮದು ವಾರದವರೆಗೆ ಬಳಸಬಹುದು, ಸ್ನಾಕ್ಸ್ಗೆ ರುಚಿ ರುಚಿಯಾದ ತಿಂಡಿ ಇದಾಗಿದೆ.



Click it and Unblock the Notifications