Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಉಪ್ಪಿಟ್ಟು ಬೇಡ ಅನ್ನೋರು ಕೂಡ ಈ ಉತ್ತರ ಕರ್ನಾಟಕ ಶೈಲಿಯ ತಿಂಡಿ ಸವಿಯುತ್ತಾರೆ!
ಉತ್ತರ ಕರ್ನಾಟಕ ಶೈಲಿಯ ಊಟ ತಿಂಡಿ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಖಾರ ಖಾರವಾದ ಊಟದ ಶೈಲಿಯ ರುಚಿಯೇ ಬೇರೆ. ಅದ್ರಲ್ಲೂ ಬೆಳಗ್ಗಿನ ತಿಂಡಿಗೆ ಉತ್ತರ ಕರ್ನಾಟಕದಲ್ಲಿ ಹಲವು ಬಗೆಯ ಖಾದ್ಯಗಳ ಮಾಡಿ ಸವಿಯುತ್ತಾರೆ. ಆದ್ರೆ ಉಳಿದ ಕರ್ನಾಟದ ಭಾಗದಲ್ಲಿ ಈ ರೀತಿಯ ಖಾದ್ಯ ನೋಡಲು ಸಿಗುವುದಿಲ್ಲ. ಅಂತಹ ಖಾದ್ಯಗಳಲ್ಲಿ ಉಪ್ಪಿಟ್ಟು ಕೂಡ ಒಂದಾಗಿದೆ.
ಉಪ್ಪಿಟ್ಟು ಬಹುತೇಕರ ಮನೆಯ ಬೆಳಗ್ಗಿನ ತಿಂಡಿ ಎನ್ನಬಹುದು, ರವೆ ಬಳಸಿ ಅತ್ಯಂತ ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ತಿಂಡಿ ಆಗಿರುವುದರಿಂದ ಎಲ್ಲರಿಗೂ ಇದು ಇಷ್ಟವಾಗುತ್ತೆ. ಆದ್ರೆ ಹಲವರು ಉಪ್ಪಿಟ್ಟು ರುಚಿಯನ್ನು ಇಷ್ಟಪಡುವುದಿಲ್ಲ. ಆದ್ರೆ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡುವಂತಹ ಈ ರೀತಿಯ ಉಪ್ಪಿಟ್ಟು ಮಾಡಿದ್ರೆ ಎಲ್ಲರೂ ಸವಿಯಲು ಮುಂದಾಗುತ್ತಾರೆ.

ಹಾಗೆ ಈ ರೀತಿಯ ಉಪ್ಪಿಟ್ಟು ಖಾರ ಖಾರವಾಗಿ ಮಸಾಲೆ ಭರಿತವಾಗಿರುತ್ತೆ. ಹೀಗಾಗಿ ಎಲ್ಲರಿಗೂ ಇಷ್ಟವಾಗುತ್ತೆ. ಹಾಗಾದ್ರೆ ಈ ರೀತಿಯ ಹೋಟೆಲ್ ಶೈಲಿ ಉತ್ತರ ಕರ್ನಾಟಕ ಭಾಗದಲ್ಲಿ ಮಾಡುವಂತಹ ರುಚಿ ರುಚಿಯ ಉಪ್ಪಿಟ್ಟು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಈ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉತ್ತರ ಕರ್ನಾಟಕ ಶೈಲಿಯ ಉಪ್ಪಿಟ್ಟು ಮಾಡಲು ಬೇಕಾಗುವ ವಸ್ತುಗಳು
- ರವೆ
- ಈರುಳ್ಳಿ
- ಹಸಿ ಮೆಣಸು
- ಉದ್ದಿನ ಬೇಳೆ
- ಜೀರಿಗೆ
- ಸಾಸಿವೆ
- ಇಂಗು
- ಎಣ್ಣೆ
- ಉಪ್ಪು
ಉತ್ತರ ಕರ್ನಾಟಕ ಶೈಲಿಯ ಉಪ್ಪಿಟ್ಟು ಮಾಡುವ ವಿಧಾನ ಹೇಗೆ?
ಮೊದಲು ಒಲೆ ಮೇಲೆ ಬಾಣಲೆ ಇಟ್ಟು 2 ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಜೀರಿಗೆ, ಸಾಸಿವೆ, 1 ಸ್ಪೂನ್ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. 1 ನಿಮಿಷ ಬಿಟ್ಟು ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಈರುಳ್ಳಿ ಕೂಡ ಒಂದು ನಿಮಿಷ ಹುರಿದು ಇಂಗು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಎಲ್ಲಾ ಪದಾರ್ಥಗಳು ಮೆತ್ತಗಾದ ಬಳಿಕ ರವೆ ಹಾಕಬೇಕು.
ರವೆಯನ್ನು ಹುರಿದುಕೊಳ್ಳದೆ ತೆಗೆದುಕೊಳ್ಳಬೇಕು. ಈಗ ರವೆ ಹಾಕುವ ಮುನ್ನ 1 ಕಪ್ ರವೆ ತೆಗೆದುಕೊಂಡು ಮೂರು ಕಪ್ ನೀರು ಹಾಕಬೇಕು. ನೀವು ಹಾಕಿಕೊಂಡ ಬಳಿಕ 3 ಸ್ಪೂನ್ ಸಕ್ಕರೆ ಸಹ ಹಾಕಿಕೊಳ್ಳಿ. ಹಾಗೆ ಉಪ್ಪು ಸಹ ಹಾಕಿ ಮಿಕ್ಸ್ ಮಾಡಿ ನೀರು ಕುದಿಬರಲು ಮುಚ್ಚಳ ಮುಚ್ಚಿ ಬಿಡಿ.
ನೀರು ಕುದಿಯಲು ಆರಂಭಿಸಿದಾಗ ರವೆಯನ್ನು ಹಾಕಿಕೊಳ್ಳುತ್ತಾ ನಿಧಾನಕ್ಕೆ ತಿರುಗಿಸಿಕೊಳ್ಳಿ. ಸಣ್ಣ ಉರಿಯಲ್ಲಿ ಇಟ್ಟುಕೊಂಡಿರಿ. ರವೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ. 1 ನಿಮಿಷದ ಬಳಿಕ ಮುಚ್ಚಳ ಮುಚ್ಚಿ ಮತ್ತೆ 2 ನಿಮಿಷ ಬಿಟ್ಟು ಮುಚ್ಚಳ ತೆಗೆದು ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಮಿಕ್ಸ್ ಮಾಡಿಕೊಂಡು ಮತ್ತೆ ಮುಚ್ಚಳ ಮುಚ್ಚಿ
2 ನಿಮಿಷದ ಬಳಿಕ ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ. ಈ ವಿಧಾನದಲ್ಲಿ ನೀವು ಕೂಡ ಉಪ್ಪಿಟ್ಟು ಮಾಡಿ ಸವಿದು ನೋಡಿ. ಮಾಡೋದು ಕೂಡ ಬಹಳ ಸುಲಭ. ಹಾಗೆ ಬೆಳಗ್ಗೆ ಇದನ್ನು ಸವಿಯಲು ನೀಡಿದರೆ ಎಲ್ಲರಿಗೂ ಇಷ್ಟವಾಗುತ್ತೆ. ಮಸಾಲೆ ಭರಿತ ಉಪ್ಪಿಟ್ಟು ನಿಮಿಷದಲ್ಲಿ ಖಾಲಿಯಾಗುತ್ತೆ. ನೀವು ಸಹ ಮನೆಯಲ್ಲಿ ಇದನ್ನು ಮಾಡಿ ನೋಡಿ. ಉತ್ತರ ಕರ್ನಾಟಕ ಭಾಗದಲ್ಲಿ ಈ ಉಪ್ಪಿಟ್ಟು ಮಾಡಿ ಸವಿಯುತ್ತಾರೆ, ಹಲವರಿಗೆ ಈ ಉಪ್ಪಿಟ್ಟು ಬಹಳ ರುಚಿಸುತ್ತದೆ. ಉಪ್ಪಿಟ್ಟು ಬೇಡ ಎನ್ನುವವರು ಕೂಡ ಇದನ್ನು ಸವಿಯಲು ಮುಂದಾಗುತ್ತಾರೆ.



Click it and Unblock the Notifications