Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಏಕಾದಶಿ ಮತ್ತಿರ ಪೂಜೆಗೆ ನೈವೇದ್ಯವಾಗಿ ಇಡಲು ಹಯಗ್ರೀವ ಮಡ್ಡಿ ಪ್ರಸಾದ: ಈ ಪಾಯಸ ಮಾಡುವುದು ಸುಲಭ
ಹಯಗ್ರೀವ ಮಡ್ಡಿ ದೇವರಿಗೆ ಪ್ರಸಾದವನ್ನಾಗಿ ಅರ್ಪಿಸಲಾಗುವುದು. ಇದು ಕಡ್ಲೆಬೇಳೆ ಪಾಯಸವಾಗಿದ್ದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದಕ್ಕೆ ನೀವು ಗೋಡಂಬಿ, ದ್ರಾಕ್ಷಿ ಕೂಡ ಸೇರಿಸಿದರೆ ಈ ಪ್ರಸಾದ ಇನ್ನಷ್ಟು ಸ್ವಾದಿಷ್ಟಕರವಾಗಿರುತ್ತದೆ. ಈ ನೈವೇದ್ಯ ಅಥವಾ ಪ್ರಸಾದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಕಡ್ಲೆಬೇಳೆ 1ಕಪ್
ಅರಿಶಿಣ ಪುಡಿ 1/4 ಚಮಚ
4 ಕಪ್
ಬೆಲ್ಲ ಅರ್ಧ ಕಪ್(ಸಿಹಿ ಬೇಕೆಂದರೆ ಇನ್ನೂ ಸ್ವಲ್ಪ ಸೇರಿಸಬಹುದು)
ತುಪ್ಪ 2 ಚಮಚ
ಗಸೆಗಸೆ 2 ಚಮಚ
ಸಾಬುದಾನ 1/2 ಕಪ್
ಲವಂಗ 3-4
ತೆಂಗಿನಕಾಯಿ ತುಂಡು (ಅರ್ಧ ತೆಂಗಿನಕಾಯಿ ಚಿಕ್ಕ-ಚಿಕ್ಕ ತುಂಡುಗಳಾಗಿ
ಕತ್ತರಿಸಿ)
ಒಣದ್ರಾಕ್ಷಿ ಸ್ವಲ್ಪ
ಗೋಡಂಬಿ 2-3 ಚಮಚ
ಏಲಕ್ಕಿ ಪುಡಿ 1/2 ಚಮಚ
ಮಾಡುವ ವಿಧಾನ
ಕಡ್ಲೆಬೇಳೆಗೆ ಸ್ವಲ್ಪ ಅರಿಶಿಣ ಸೇರಿಸಿ, ನೀರು ಸೇರಿಸಿ ಬೇಯಿಸಿ.
ಈಗ ಬೆಲ್ಲದ ಪಾಕ ಮಾಡಿ
ಅದರಲ್ಲಿ ಬೇಯಿಸಿದ ಕಡ್ಲೆಬೇಳೆ ಸೇರಿಸಿ, ಗಸೆಗಸೆ ಸೇರಿಸಿ ಕುದಿಸಿ.
ಕಡ್ಲೆಬೇಳೆ ಬೆಲ್ಲದ ಪಾಕ ಸೇರಿಸಿ.
ಈಗ ಬಾಣಲೆಗೆ ತುಪ್ಪ ಹಾಕಿ, ಅದರಲ್ಲಿ ತೆಂಗಿನತುಂಡು ಹಾಕಿ ಫ್ರೈ ಮಾಡಿ ಇದನ್ನು
ಪಾಯಸಕ್ಕೆ ಸೇರಿಸಿ, ನಂತರ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಉರಿಯಿಂದ
ಇಳಿಸಿ.
ನಂತರ ಇದನ್ನು ದೇವರಿಗೆ ನೈವೇದ್ಯ ಅರ್ಪಿಸಿ
- ಏಕಾದಶಿ, ಮತ್ತಿತರ ಪೂಜಾ ಕಾರ್ಯಕ್ರಮದಲ್ಲಿ ಇದನ್ನು ನೀವು ಪ್ರಸಾದವನ್ನಾಗಿ ಬಳಸಬಹುದು.
- ಸಾಬುದಾನ ಕೂಡ ಬಳಸುವುದರಿಂದ ಈ ಪ್ರಸಾದ ತುಂಬಾನೇ ರುಚಿ ಅನಿಸುವುದು.
- ಈ ಪಾಯಸ ಒಂದು ಬೌಲ್ ತಿಂದರೂ ಸಾಕು ಅನಿಸಲ್ಲ, ಅಷ್ಟೊಂದು ರುಚಿಯಾಗಿರುತ್ತದೆ.
- ಪೂಜೆಯಲ್ಲಿ ನೈವೇದ್ಯ ಅರ್ಪಿಸುವುದು ಏಕೆ?
ದೇವರಿಗೆ ನೈವೇದ್ಯ ಇಟ್ಟಾಗ ದೇವರಿಗೆ ನಾವು ಅದನ್ನು ಸಮರ್ಪಿಸಿದ್ದೇವೆ ಎಂಬ ಭಾವನೆ ಮೂಡುತ್ತದೆ, ಸಮರ್ಪಣೆ ಭಾವನೆ ಮನುಷ್ಯನಲ್ಲಿರಬೇಕು. ದೇವರಿಗೆ ಸಾತ್ವಿಕ ಆಹಾರವನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುವುದು. ಅಕ್ಕಿಯಿಂದ ಮಾಡಿದ ಪಾಯಸ, ಬೇಳೆಯಿಂದ ಮಾಡಿದ ಪಾಯಸ, ಬಾಳೆಹಣ್ಣು, ಅನ್ನ,ಮೊಸರನ್ನ, ಮೊಸರು ಇವುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುವುದು.
ಪಾಯಸವನ್ನು ನಾವು ಶುದ್ಧವಾದ ಪಾತ್ರೆಯಲ್ಲಿ ದೇವರೊಗೆ ಅರ್ಪಿಸಬೇಕು. ತಾಮ್ರ ಅಥವಾ ಕಂಚಿನ ಪಾತ್ರೆಯಲ್ಲಿ ನೈವೇದ್ಯ ಮಾಡಿ ಅರ್ಪಿಸಲಾಗುವುದು. ಕಮಲದ ಎಲೆ, ಬಾಳೆಯಲ್ಲಿಯೂ ನೈವೇದ್ಯ ಅರ್ಪಿಸುತ್ತಾರೆ. ಮಣ್ಣಿನ ಪಾತ್ರೆಯಲ್ಲಿಯೂ ನೈವೇದ್ಯ ಅರ್ಪಿಸಬೇಕು.
ನೈವೇದ್ಯ ಮಾಡುವಾಗ ಅದರ ರುಚಿ ನೋಡದೆ ಮಾಡಬೇಕು. ಎಲ್ಲಾ ಸಾಮಗ್ರಿ ಅಂದಾಜಿನ ಪ್ರಕಾರ ಹಾಕಿ ನೈವೇದ್ಯ ಅರ್ಪಿಸಬೇಕು. ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕವಷ್ಟೇ ಆ ಆಹಾರವನ್ನು ಬಡಿಸಲಾಗುವುದು.
ನೈವೇದ್ಯ ಎಂಬುವುದು ಶ್ರೇಷ್ಠ ಆಹಾರವಾಗಿದೆ. ಈ ಆಹಾರ ಸೇವನೆ ಮನುಷ್ಯನ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು, ಹಾಗಾಗಿ ದೇವರಿಗೆ ಇಟ್ಟ ಆಹಾರ ಸೇವಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ನೀವು ಹಯಗ್ರೀವ ಮಡ್ಡಿಯನ್ನು ನೇವೇದ್ಯವಾಗಿ ಮಾತ್ರವಲ್ಲ, ಹಬ್ಬಗಳ ಸಡಗರದಲ್ಲಿಯೂ ತಯಾರಿಸಿ ಸವಿಯಬಹುದಾಗಿದೆ. ಈ ಪಾಯಸ ನೀರು-ನೀರಾಗಿ ಇರುವುದಕ್ಕಿಂತ ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ.



Click it and Unblock the Notifications