Latest Updates
-
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ಕಡ್ಲೆ ಹಾಕಿ ಮಾಡುವ ಕಣಲೆ ಸಾರಿನ ರೆಸಿಪಿ
ಕಳಲೆ ಅಥವಾ ಕಣಲೆ ಎಂದು ಕರೆಯಲ್ಪಡುವ ಬಿದಿರಿನ ಮೊಳಕೆ ಅಥವಾ ಎಳೆ ಬಿದಿರು ಆನೆಗೂ ಪ್ರಿಯವಾದ ಆಹಾರ, ಮನುಷ್ಯನಿಗೂ ಪ್ರಿಯವಾದ ಆಹಾರ. ಈ ಕಳಲ ಅಥವಾ ಕಣಲೆ ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದ. ಇದನ್ನು ತಿನ್ನಲು ತುಂಬಾನೇ ರುಚಿ, ಕೆಲವರು ಇದರಿಂದ ಉಪ್ಪಿನಕಾಯಿ ಕೂಡ ಮಾಡಿಡುತ್ತಾರೆ. ಬೆಂಗಳೂರಿನವರಿಗೆ ಈ ಕಣಲೆ ಸಿಗುವುದು ಅಪರೂಪ, ಕೆಲವೊಂದು ಶಾಪ್ಗಳಲ್ಲಿ ಸಿಕ್ಕರೆ ಸಿಗಬಹುದು, ಆದರೆ ಮಲೆನಾಡಿನ ಕಡೆ, ಕೊಡಗಿನ ಕಡೆ ಮಳೆಗಾಲದ ಪ್ರಮುಖ ಆಹಾರ.

ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಹಾಗಾಗಿ ಮಳೆಗಾಲದಲ್ಲಿ ಇದನ್ನು ಮಾಡಿ ಸವಿಯಲಾಗುವುದು. ನಾವಿಲ್ಲಿ ಕಣಲೆ ಹಾಗೂ ಕಡ್ಲೆ ಹಾಕಿ ಮಾಡಿದ ಸಾರಿನ ರೆಸಿಪಿ ನೀಡಿದ್ದೇವೆ.
ಕಣಲೆ ತಂದ ತಕ್ಷಣ ಕತ್ತರಿಸಿ ತಿನ್ನುವಂತಿಲ್ಲ: ಕಣಲೆ ತಂದು ಅದನ್ನು ಚಿಕ್ಕದಾಗಿ ಕತ್ತರಿಸಿ 3-4 ದಿನ ನೀರಿನಲ್ಲಿ ಹಾಕಿಡುತ್ತಾರೆ, ಪ್ರತಿದಿನ ಇದರ ನೀರು ಬದಲಾಯಿಸಬೇಕು, ಅಲ್ಲದೆ ಣಲೆ ನೆನೆ ಹಾಕಿದ್ದ ನೀರನ್ನು ತುಂಬಾನೇ ದೂರ ಬಿಸಾಡಬೇಕು, ಹಸು, ನಾಯಿ ಆ ನೀರು ಕುಡಿದರೆ ಸತ್ತೇ ಹೋಗುತ್ತದೆ ಹಾಗಾಗಿ ಜಾಗ್ರತೆವಹಿಸಿ. 3-4 ದಿನ ನೀರಿನಲ್ಲಿ ಹಾಕಿ ಬೇಯಿಸಿ ತಿಂದರೆ ಹೆದರ ಬೇಕಾಗಿಲ್ಲ, ಆರೋಗ್ಯಕ್ಕೆ ಯಾವ ತೊಂದರೆಯೂ ಆಗಲ್ಲ.
ಬೇಕಾಗುವ ಸಾಮಗ್ರಿ
ಕಣಲೆ
ಒಂದು ಮುಷ್ಠಿಯಷ್ಟು
ಕಡಲೆ 1 ಕಪ್( 8 ಗಂಟೆ ನೀರಿನಲ್ಲಿ ನೆನೆ ಹಾಕಿದ್ದು)
1 ಕಪ್ ತೆಂಗಿನ ತುರಿ
2 ಹಸಿ ಮೆಣಸು
1 ಈರುಳ್ಳಿ
2 ಟೊಮೆಟೊ
ಖಾರಡಿ 1/2 ಚ ಚಮಚ
ಕೊತ್ತಂಬರಿ ಪುಡಿ 1 ಚಮಚ
1/2 ಚಮಚ ಗರಂ ಮಸಾಲ
1/2 ಚಮಚ ಅರಶಿಣ ಪುಡಿ
ಉಪ್ಪು 1 ಚಮಚ
ಮಾಡುವ ವಿಧಾನ
- ಕಣಲೆ ಅಥವಾ ಕಳಲೆ, ಕಡಲೆ, ಹಸಿ ಮೆಣಸು,ಟೊಮೆಟೊ, ಈರುಳ್ಳಿ, ಹಸಿ ಮೆಣಸು, ಟೊಮೆಟೊ ಹಾಕಿ 2 ಕಪ್ ನೀರು ಹಾಕಿ, ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.
- ಇದೇ ಸಮಯದಲ್ಲಿ ತೆಂಗಿನಕಾಯಿ ತುರಿದು ಬಾಣಲೆಗೆ ಹಾಕಿ 1 ಚಮಚ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಹುರಿಯಿರಿ, ತೆಂಗಿನ ತುರಿ ಕೆಂಪು ಬಣ್ಣಕ್ಕೆ ಬರುವವಷ್ಟು ಹೊತ್ತು ಹುರಿಯಿರಿ, ನಮತರ ಖಾರದ ಪುಡಿ, ಗಂ ಸಾಲಪುಡಿ (ಇದರ ಬದಲಿಗೆ ಚಕ್ಕೆ, ಲವಂಗ ಹಾಕಬಹುದು), ಕೊತ್ತಂಬರಿ ಪುಡಿ ಸೇರಿಸಿ ಹುರಿಯಿರಿ.
- ತೆಂಗಿನ ತುರಿ ಕಂದು ಬಣ್ಣಕ್ಕೆ ಬಂದಾಗ ಉರಿಯಿಂದ ತೆಗೆಯಿರಿ, ನಂತರ ಗ್ರೈಂಡ್ ಮಾಡಿ
ಈಗ ಸಾರು ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಬೇಯಿಸಿದ ಸಾಮಗ್ರಿ ಹಾಕಿ, ಮಸಾಲೆ ಸೇರಿಸಿ ಕುದಿಸಿ, ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿ, ಇಷ್ಟು ಮಾಡಿದರೆ ಸವಿರುಚಿಯ ಕಳೆಲೆ ಸಾರು ರೆಡಿ, ಇದನ್ನು ರೊಟ್ಟಿ, ಚಪಾತಿ, ಬಿಸಿ ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications