Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕಡ್ಲೆ ಹಾಕಿ ಮಾಡುವ ಕಣಲೆ ಸಾರಿನ ರೆಸಿಪಿ
ಕಳಲೆ ಅಥವಾ ಕಣಲೆ ಎಂದು ಕರೆಯಲ್ಪಡುವ ಬಿದಿರಿನ ಮೊಳಕೆ ಅಥವಾ ಎಳೆ ಬಿದಿರು ಆನೆಗೂ ಪ್ರಿಯವಾದ ಆಹಾರ, ಮನುಷ್ಯನಿಗೂ ಪ್ರಿಯವಾದ ಆಹಾರ. ಈ ಕಳಲ ಅಥವಾ ಕಣಲೆ ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದ. ಇದನ್ನು ತಿನ್ನಲು ತುಂಬಾನೇ ರುಚಿ, ಕೆಲವರು ಇದರಿಂದ ಉಪ್ಪಿನಕಾಯಿ ಕೂಡ ಮಾಡಿಡುತ್ತಾರೆ. ಬೆಂಗಳೂರಿನವರಿಗೆ ಈ ಕಣಲೆ ಸಿಗುವುದು ಅಪರೂಪ, ಕೆಲವೊಂದು ಶಾಪ್ಗಳಲ್ಲಿ ಸಿಕ್ಕರೆ ಸಿಗಬಹುದು, ಆದರೆ ಮಲೆನಾಡಿನ ಕಡೆ, ಕೊಡಗಿನ ಕಡೆ ಮಳೆಗಾಲದ ಪ್ರಮುಖ ಆಹಾರ.

ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಹಾಗಾಗಿ ಮಳೆಗಾಲದಲ್ಲಿ ಇದನ್ನು ಮಾಡಿ ಸವಿಯಲಾಗುವುದು. ನಾವಿಲ್ಲಿ ಕಣಲೆ ಹಾಗೂ ಕಡ್ಲೆ ಹಾಕಿ ಮಾಡಿದ ಸಾರಿನ ರೆಸಿಪಿ ನೀಡಿದ್ದೇವೆ.
ಕಣಲೆ ತಂದ ತಕ್ಷಣ ಕತ್ತರಿಸಿ ತಿನ್ನುವಂತಿಲ್ಲ: ಕಣಲೆ ತಂದು ಅದನ್ನು ಚಿಕ್ಕದಾಗಿ ಕತ್ತರಿಸಿ 3-4 ದಿನ ನೀರಿನಲ್ಲಿ ಹಾಕಿಡುತ್ತಾರೆ, ಪ್ರತಿದಿನ ಇದರ ನೀರು ಬದಲಾಯಿಸಬೇಕು, ಅಲ್ಲದೆ ಣಲೆ ನೆನೆ ಹಾಕಿದ್ದ ನೀರನ್ನು ತುಂಬಾನೇ ದೂರ ಬಿಸಾಡಬೇಕು, ಹಸು, ನಾಯಿ ಆ ನೀರು ಕುಡಿದರೆ ಸತ್ತೇ ಹೋಗುತ್ತದೆ ಹಾಗಾಗಿ ಜಾಗ್ರತೆವಹಿಸಿ. 3-4 ದಿನ ನೀರಿನಲ್ಲಿ ಹಾಕಿ ಬೇಯಿಸಿ ತಿಂದರೆ ಹೆದರ ಬೇಕಾಗಿಲ್ಲ, ಆರೋಗ್ಯಕ್ಕೆ ಯಾವ ತೊಂದರೆಯೂ ಆಗಲ್ಲ.
ಬೇಕಾಗುವ ಸಾಮಗ್ರಿ
ಕಣಲೆ
ಒಂದು ಮುಷ್ಠಿಯಷ್ಟು
ಕಡಲೆ 1 ಕಪ್( 8 ಗಂಟೆ ನೀರಿನಲ್ಲಿ ನೆನೆ ಹಾಕಿದ್ದು)
1 ಕಪ್ ತೆಂಗಿನ ತುರಿ
2 ಹಸಿ ಮೆಣಸು
1 ಈರುಳ್ಳಿ
2 ಟೊಮೆಟೊ
ಖಾರಡಿ 1/2 ಚ ಚಮಚ
ಕೊತ್ತಂಬರಿ ಪುಡಿ 1 ಚಮಚ
1/2 ಚಮಚ ಗರಂ ಮಸಾಲ
1/2 ಚಮಚ ಅರಶಿಣ ಪುಡಿ
ಉಪ್ಪು 1 ಚಮಚ
ಮಾಡುವ ವಿಧಾನ
- ಕಣಲೆ ಅಥವಾ ಕಳಲೆ, ಕಡಲೆ, ಹಸಿ ಮೆಣಸು,ಟೊಮೆಟೊ, ಈರುಳ್ಳಿ, ಹಸಿ ಮೆಣಸು, ಟೊಮೆಟೊ ಹಾಕಿ 2 ಕಪ್ ನೀರು ಹಾಕಿ, ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.
- ಇದೇ ಸಮಯದಲ್ಲಿ ತೆಂಗಿನಕಾಯಿ ತುರಿದು ಬಾಣಲೆಗೆ ಹಾಕಿ 1 ಚಮಚ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಹುರಿಯಿರಿ, ತೆಂಗಿನ ತುರಿ ಕೆಂಪು ಬಣ್ಣಕ್ಕೆ ಬರುವವಷ್ಟು ಹೊತ್ತು ಹುರಿಯಿರಿ, ನಮತರ ಖಾರದ ಪುಡಿ, ಗಂ ಸಾಲಪುಡಿ (ಇದರ ಬದಲಿಗೆ ಚಕ್ಕೆ, ಲವಂಗ ಹಾಕಬಹುದು), ಕೊತ್ತಂಬರಿ ಪುಡಿ ಸೇರಿಸಿ ಹುರಿಯಿರಿ.
- ತೆಂಗಿನ ತುರಿ ಕಂದು ಬಣ್ಣಕ್ಕೆ ಬಂದಾಗ ಉರಿಯಿಂದ ತೆಗೆಯಿರಿ, ನಂತರ ಗ್ರೈಂಡ್ ಮಾಡಿ
ಈಗ ಸಾರು ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಬೇಯಿಸಿದ ಸಾಮಗ್ರಿ ಹಾಕಿ, ಮಸಾಲೆ ಸೇರಿಸಿ ಕುದಿಸಿ, ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿ, ಇಷ್ಟು ಮಾಡಿದರೆ ಸವಿರುಚಿಯ ಕಳೆಲೆ ಸಾರು ರೆಡಿ, ಇದನ್ನು ರೊಟ್ಟಿ, ಚಪಾತಿ, ಬಿಸಿ ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications
