Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬಾಳೆದಿಂಡು ಹಾಗೂ ಬಾಳೆಹೂ ಹಾಕಿ ಮಾಡುವ ಪಲ್ಯ:ಕಿಡ್ನಿ ಸ್ಟೋನ್ ಹೋಗಲಾಡಿಸಲು ತುಂಬಾ ಒಳ್ಳೆಯದು
ಬಾಳೆಹೂವು ಹಾಗೂ ಬಾಳೆದಿಂಡು ಮಿಕ್ಸ್ ಮಾಡಿ ಮಾಡುವ ಪಲ್ಯದ ರೆಸಿಪಿ, ಇವುಗಳು ತುಂಬಾ ಟೇಸ್ಟ್ ಆಗಿರುತ್ತದೆ, ಅಲ್ಲದೆ ರುಚಿಯೂ ಸೂಪರ್ ಆಗಿರುತ್ತದೆ, ಇದೊಂದು ಸಿಂಪಲ್ ರೆಸಿಪಿ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಬಾಳೆದಿಂಡು 1 ಚಿಕ್ಕ ಪೀಸ್
ಬಾಳೆಹೂ 1
ಈರುಳ್ಳಿ 1
ಹಸಿ ಮೆಣಸು 2-3
ಎಣ್ಣೆ 2 ಚಮಚ
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
ತೆಂಗಿನ ತುರಿ ಅಥವಾ 2 ಮೊಟ್ಟೆ
ಮಾಡುವ ವಿಧಾನ:
- ಬಾಳೆದಿಂಡು ಹಾಗೂ ಹೂವನ್ನು ಚಿಕ್ಕದಾಗಿ ಕತ್ತರಿಸಿ(ತುಂಬಾ ಚಿಕ್ಕದಾಗಿ ಕತ್ತರಿಸಬೇಕು)
- ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ನೀರು ಹಾಕಿಡಿ, ಅದರ ಕರೆ ಹೋಗಬೇಕು.
- ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ನಂತರ ಸಾಸಿವೆ ಹಾಕಿ
- ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವು ಹಾಕಿ
- ನಂತರ ಈರುಳ್ಳಿ ಹಾಕಿ, ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿ
- ಈಗ ಕತ್ತರಿಸಿಟ್ಟ ಬಾಳೆಹೂವು ಹಾಗೂ ಬಾಳೆದಿಂಡು ಹಾಕಿ ಹಾಕಿ ಮಿಕ್ಸ್ ಮಾಡಿ
- ನಂತರ ಸ್ವಲ್ಪ ನೀರು ಹಾಕಿ ಬೇಯಿಸಿ
- ನೀರು ಡ್ರೈಯಾಗುವವರೆಗೆ ಬೇಯಿಸಿ
- ನೀರು ಆವಿಯಾದ ಮೇಲೆ ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
- ನೀವು ತೆಂಗಿನತುರಿ ಬದಲಿಗೆ ಮೊಟ್ಟೆ ಹಾಕಿ ಮಿಕ್ಸ್ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.
- ಈ ಪಲ್ಯ ಸೇವನೆಯ ಪ್ರಯೋಜನಗಳು
- ದೇಹವನ್ನು ಡಿಟಾ್ಸ್ ಮಾಡುತ್ತದೆ: ಇದಲ್ಲಿರುವ ನಾರಿನಂಶ ಹೊಟ್ಟೆಯನ್ನು ಡಿಟಾಕ್ಸ್ ಮಾಡಿ ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕಲು ಸಹಕಾರಿ. ಹೊಟ್ಟೆ ಶುದ್ಧವಾಗಿದ್ದರೆ ಒಟ್ಟು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ: ಈ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ, ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.
ಕಿಡ್ನಿ ಸ್ಟೋನ್ ಹೊರ ಹಾಕಲು ಸಹಾಯ ಮಾಡುತ್ತದೆ: ಯಾರಿಗೆ ಕಿಡ್ನಿಸ್ಟೋನ್ ಸಮಸ್ಯೆ ಇದೆಯೋ ಅವರು ತಮ್ಮ ಆಹಾರಕ್ರಮದಲ್ಲಿ ಈ ಆಹಾರ ಸೇರಿಸಿದರೆ ತುಂಬಾ ಒಳ್ಳೆಯ ಪ್ರಯೋಜನ ಪಡೆಯಬಹುದು, ಮೂತ್ರದ ಮೂಲಕ ಕಿಡ್ನಿ ಸ್ಟೋನ್ ಹಾಕುತ್ತೆ, ಆರೋಗ್ಯ ವೃದ್ದಿಸಲು ತುಂಬಾನೇ ಸಹಕಾರಿಯಾಗಿದೆ. ಚಿಕ್ಕ ಕಿಡ್ನಿ ಸ್ಟೋನ್ ಯಾವುದೇ ಔಷಧಿ ತೆಗೆದುಕೊಳ್ಳದೆ ಈ ಆಹಾರ ಹೊರಹಾಕುತ್ತೆ, ಹಾಗಾಗಿ ಇಂಥ ಆಹಾರ ನಮ್ಮ ಆಹಾರಕ್ರಮದಲ್ಲಿ ಸೇರಿಸುವುದರಿಂದ ಕಿಡ್ನಿ ಸ್ಟೋನ್ ತಡೆಗಟ್ಟಲು ಸಹಕಾರಿಯಾಗಿದೆ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ: ಬಾಳೆದಿಂಡು ಹಾಗೂ ಹೂವು ರಕ್ತದೊತ್ತಡ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿಯಾಗಿದೆ.
ಮಧುಮೇಹಿಗಳಿಗೂ ತುಂಬಾ ಒಳ್ಳೆಯದು: ಈ ಬಾಳೆದಿಂಡು ಹಾಗೂ ಅದರ ಹೂವು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿರುವುದರಿಂದ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.



Click it and Unblock the Notifications
