Latest Updates
-
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ
ಕೆಮ್ಮ, ಶೀತಾ, ಕಫಕ್ಕೆ ರಾಮಬಾಣ ಅಜ್ಜಿ ಮಾಡಿದ ಸ್ಪೆಷಲ್ ಕಷಾಯ !
ಇತ್ತೀಚಿಗೆ ಈ ಜ್ವರ, ಶೀತಾ, ಕೆಮ್ಮು ಹೇಳಿ ಕೇಳಿ ಬರೋದಿಲ್ಲ. ಯಾವಾಗ ಬೇಕಾದ್ರು ಜನರನ್ನು ವಕ್ಕರಿಸಿ ಬಿಡುತ್ತೆ. ಇವುಗಳು ಒಂದು ಸಾರಿ ಜನರ ಬೆನ್ನು ಹತ್ತಿ ಬಿಟ್ರೆ ಜಪ್ಪಯ್ಯ ಅಂದ್ರು ಹೋಗೋದೇ ಇಲ್ಲ. ಇಂತಹ ಸಂದರ್ಭದಲ್ಲಿ ಖಡಕ್ ಕಷಾಯ ಕುಡಿದ್ರೆ ಯಾವ ಡಾಕ್ಟರ್ ಬೇಡ. ಈ ಕೆಮ್ಮು, ಶೀತ, ಕಫಾ ಎಲ್ಲಾ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುತ್ತೆ.

ಆ ದಿನ ರಾತ್ರಿ ನನಗೆ ಕಣ್ಣು ತೆರೆಯಲು ಕಷ್ಟ ಆಗಿತ್ತು. ಏಕೆಂದರೆ ಜ್ವರ ನನ್ನನ್ನು ಅಷ್ಟರ ಮಟ್ಟಿಗೆ ಭಾದಿಸಿತ್ತು. ಮಾರನೇ ದಿನ ಡಾಕ್ಟರ್ ಬಳಿ ಹೋಗಿ ವಾಪಾಸ್ ಬಂದ ಮೇಲೆ ಜ್ವರ ಏನೋ ಕಡಿಮೆಯಾಗಿತ್ತು. ಆದರೆ ಕೆಮ್ಮು, ಕಫಾ ನನ್ನನ್ನು ಬಿಡದೇ ಕಾಡಿತ್ತು. ಆಗ ನನ್ನಜ್ಜಿ ಲೋಟದಲ್ಲಿ ಅದೇನೋ ತಂದು ಕೊಟ್ಟು ಕಣ್ಣು ಮುಚ್ಚಿ ಕುಡಿ ಅಂತ ಹೇಳಿದ್ರು. ಅಯ್ಯೋ ಆ ಅನುಭವ ಕಷ್ಟ ಕಷ್ಟ. ಆದ್ರೆ 5-6 ಬಾರಿ ಈ ಕಷಾಯ ಕುಡಿದ ಮೇಲೆ ಕೆಮ್ಮು ಹಾಗೂ ಕಫದ ಸಮಸ್ಯೆ ಸಂಪೂರ್ಣವಾಗಿ ಮಾಯವಾಗಿತ್ತು.
Recipe By: Shwetha Kumari
Recipe Type: Veg
Serves: 2
-
ಬೇಕಾಗುವ ಸಾಮಾಗ್ರಗಳು
- ಒಣ ಶುಂಠಿ- 1 ಇಂಚು (ಮಧ್ಯಮ ಗಾತ್ರ)
- ಕೇಸರಿ ಕಲ್ಲು ಸಕ್ಕರೆ - ರುಚಿಗೆ ತಕ್ಕಷ್ಟು
- ಸಂಬರ ಬಳ್ಳಿ ಅಥವಾ ದೊಡ್ಡಪತ್ರೆ(ಸಂಬರಬಳ್ಳಿ ಕಷಾಯ ಮಾಡುವಾಗ ನಮಗೆ ಸಿಗದ ಕಾರಣ ಬಳಸಿಲ್ಲ. ಆದರೆ ಇದನ್ನು ಬಳಸಿದರೆ ಉತ್ತಮ) - 3-4 ಎಲೆ
- ತುಳಸಿ - 5-6 ಎಲೆ
- ಕರಿಮೆಣಸು ಹುಡಿ - 1 ಚಮಚ
- ನೀರು - 1.5 ವರೆ ಗ್ಲಾಸ್
-
ಮಾಡುವ ವಿಧಾನ
* ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರನ್ನು ಬಿಸಿಯಾಗಲು ಇಡಿ
* ಈಗ ಒಣ ಶುಂಠಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ
* ಮೊದಲಿಗೆ ಕುಟ್ಟಿದ ಒಣಶುಂಠಿ, ಕೇಸರಿ ಕಲ್ಲು ಸಕ್ಕರೆ, ಕರಿಮೆಣಸು ಪುಡಿ, ದೊಡ್ಡ ಪತ್ರೆ ಎಲೆ, ತುಳಸಿ ಎಲೆಯನ್ನು ನೀರಿಗೆ ಸೇರಿಸಿ
* ಕಫ ಕರಗಲು ಕೇಸರಿ ಕಲ್ಲು ಸಕ್ಕರೆ ಉತ್ತಮ ಹೀಗಾಗಿ ಸಾಧ್ಯವಾದಷ್ಟು ಇದನ್ನೇ ಬಳಸಿ
*ಈಗ ಎಲ್ಲವನ್ನು ಹಾಕಿ ಸರಿ ಸುಮಾರು 15 ನಿಮಿಷ ಕುದಿಯಲು ಬಿಡಿ
* ಕುದಿದ ಮೇಲೆ ಇಳಿಸಿ ನಂತರ ಅದನ್ನು ಸೋಸಿ ಒಂದು ಗ್ಲಾಸ್ಗೆ ಹಾಕಿಕೊಳ್ಳಿ
* ಬಿಸಿ ಬಿಸಿ ಇರುವಾಗಲೇ ಈ ಕಷಾಯವನ್ನು ಕುಡಿಯಿರಿ
ಕೆಮ್ಮು, ಕಫಾ, ಶೀತ ಇರುವಾಗ ಪ್ರತಿನಿತ್ಯ ಎರಡು ಬಾರಿ ಇದನ್ನು ಕುಡಿದರೆ ಸಾಮಾನ್ಯವಾಗಿ 3-4 ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಇದಕ್ಕೆ ನೀವು ಸ್ವಲ್ಪ ಜೇನು ಕೂಡ ಸೇರಿಸಿ ಕುಡಿಯಬಹುದು
- People - 2
ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರನ್ನು ಬಿಸಿಯಾಗಲು ಇಡಿ

* ಈಗ ಒಣ ಶುಂಠಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ

* ಮೊದಲಿಗೆ ಕುಟ್ಟಿದ ಒಣಶುಂಠಿ, ಕೇಸರಿ ಕಲ್ಲು ಸಕ್ಕರೆ, ಕರಿಮೆಣಸು ಪುಡಿ, ದೊಡ್ಡ ಪತ್ರೆ ಎಲೆ, ತುಳಸಿ ಎಲೆಯನ್ನು ನೀರಿಗೆ ಸೇರಿಸಿ

* ಕಫ ಕರಗಲು ಕೇಸರಿ ಕಲ್ಲು ಸಕ್ಕರೆ ಉತ್ತಮ ಹೀಗಾಗಿ ಸಾಧ್ಯವಾದಷ್ಟು ಇದನ್ನೇ ಬಳಸಿ

*ಈಗ ಎಲ್ಲವನ್ನು ಹಾಕಿ ಸರಿ ಸುಮಾರು 15 ನಿಮಿಷ ಕುದಿಯಲು ಬಿಡಿ

* ಕುದಿದ ಮೇಲೆ ಇಳಿಸಿ ನಂತರ ಅದನ್ನು ಸೋಸಿ ಒಂದು ಗ್ಲಾಸ್ಗೆ ಹಾಕಿಕೊಳ್ಳಿ

* ಬಿಸಿ ಬಿಸಿ ಇರುವಾಗಲೇ ಈ ಕಷಾಯವನ್ನು ಕುಡಿಯಿರಿ
ಕೆಮ್ಮು, ಕಫಾ, ಶೀತ ಇರುವಾಗ ಪ್ರತಿನಿತ್ಯ ಎರಡು ಬಾರಿ ಇದನ್ನು ಕುಡಿದರೆ ಸಾಮಾನ್ಯವಾಗಿ 3-4 ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.



Click it and Unblock the Notifications