Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರೆಸಿಪಿ: ಶೀತ, ಗಂಟಲು ಕೆರೆತವಿದ್ದರೆ ಇದನ್ನು ಮಾಡಿ ಕುಡಿಯಿರಿ
ಶೀತ, ಗಂಟಲು ಕೆರೆತ ಇವುಗಳಿಗೆಲ್ಲಾ ಮನೆಮದ್ದುಗಳು ಅಂದ್ರೆ ಕಷಾಯ ತುಂಬಾನೇ ಪರಿಣಾಮಕಾರಿ. ಈಗಂತೂ ಒಂದು ಸಾಮಾನ್ಯ ಶೀತ, ಕೆಮ್ಮು ಬಂದ್ರೂ ಜನ ಭಯ ಪಡುತ್ತಾರೆ.

ಈಗ ಬಹುತೇಕ ಕಡೆ ಮಳೆ ಸುರಿಯುತ್ತಿದೆ, ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ಕೂಡ ಶೀತ, ಕೆಮ್ಮು ಈ ರೀತಿಯ ಸಮಸ್ಯೆ ಕಂಡು ಬರುವುದು. ಏಕೋ ಶೀತವಾಗಿದೆ, ಗಂಟಲಿನಲ್ಲಿ ಕೆರೆತ ಉಂಟಾಗಿದೆ ಎಂದು ಅನಿಸಿದಾದ ಈ ರೀತಿ ಮಾಡಿ ಕುಡಿದು ನೋಡಿ ಆರಾಮ ಅನಿಸುವುದು.
ಸೂಚನೆ: ನೀವು ಈ ಕಷಾಯ ಮಾಡಿ ಕುಡಿದರೂ ಕಮ್ಮಿಯಾಗದಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಕೋವಿಡ್ 19 ಪರೀಕ್ಷೆ ಮಾಡಿಸಿ.
Recipe By: Reena TK
Recipe Type: drinks
Serves: 2
-
ಬೇಕಾಗುವ ಸಾಮಗ್ರಿ
1 ಏಲಕ್ಕಿ
1 ಚಕ್ಕೆ
3-4 ಲವಂಗ
ಒಂದು ಸುಟ್ಟ ನಿಂಬೆ ಹಣ್ಣು
ಅರ್ಧ ತಾಜಾ ನಿಂಬೆ ಹಣ್ಣು
ಒಂದು ಲೀಟರ್ ನೀರು
-
ಮಾಡುವ ವಿಧಾನ
ಒಂದು ಲೀಡರ್ ನೀರಿಗೆ ಏಲಕ್ಕಿ, ಚಕ್ಕೆ, ಲವಂಗ ಹಾಕಿ ಅದು ಅರ್ಧ ಲೀಟರ್ ಆಗುವಷ್ಟು ಹೊತ್ತು ಕುದಿಸಿ.
* ನಂತರ ಅದಕ್ಕೆ ಸುಟ್ಟ ನಿಂಬೆ ಹಣ್ಣಿನ ಒಂದು ತುಂಡು ಹಾಕಿ, ಸ್ವಲ್ಪ ನಿಂಬೆರಸ ಹಿಂಡಿ ಬಿಸಿ-ಬಿಸಿ ಇರುವಾಗಲೇ ಹೀರಿ.
ಇದಕ್ಕೆ ಬೇಕಿದ್ದರೆ ಒಂದು ಚಮಚ ಜೇನು ತುಪ್ಪ ಕೂಡ ಸೇರಿಸಬಹುದು.
- ಈ ಕಷಾಯವನ್ನು ಶೀತ, ಕೆಮ್ಮು ಇದ್ದಾಗಷ್ಟೇ ಬಳಸಿ, ತುಂಬಾ ಬಳಸಿದರೆ ಶರೀರ ಹೀಟ್ ಆಗಬಹುದು.



Click it and Unblock the Notifications