Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ರಾಮಮಂದಿರ ಉದ್ಘಾಟನೆ ದಿನ ಮನೆಯಲ್ಲಿ ರಾಮನ ಪೂಜಿಸಿ ನೈವೇದ್ಯ ಅರ್ಪಿಸಲು 3 ರೆಸಿಪಿ
ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ. ಈ ದಿನದಂದು ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುವುದು, ಹಿಂದೂಗಳ ಮನೆ-ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುವುದು, ಶ್ರೀರಾಮನಿಗೆ ಪೂಜೆ ಸಲ್ಲಿಸುವಾಗ ನೈವೇದ್ಯವಾಗಿ ಇವುಗಳನ್ನು ಅರ್ಪಿಸಬಹುದು.

ರೆಸಿಪಿ 1
ಅಕ್ಕಿಪಾಯಸ
ಬಾಸುಮತಿ ಅಕ್ಕಿ 1/2ಕಪ್
ಬಾದಾಮಿ 6-8
ಪಿಸ್ತಾ 6-8
ಒಣದ್ರಾಕ್ಷಿ 8-10
ಹಾಲು 1 ಲೀಟರ್
ಸಕ್ಕರೆ 3/4 ಕಪ್
ಏಲಕ್ಕಿ 3-4
ಸ್ವಲ್ಪ ಕೇಸರಿ
ವಿಧಾನ
ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಹಾಕಿ, ನಂತರ ಅದರ ನಿರನ್ನು ಸೋಸಿ,ನೀರಿನಂಶ
ಸಂಪೂರ್ಣ ಹೋಗಿರಬೇಕು, ತರಿತರಿಯಾಗಿ ರುಬ್ಬಿ.
* ಬಾದಾಮಿ, ಪಿಸ್ತವನ್ನು ಚಿಕ್ಕದಾಗಿ ಕತ್ತರಿಸಿ
* ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ
* ಅದಕ್ಕೆ ಅಕ್ಕಿಪುಡಿ, ಸಕ್ಕರೆ ಸೇರಿಸಿ, ಏಲಕ್ಕಿ ಗುದ್ದಿ ಹಾಕಿ, ನಂತರ ಬೆಂದ
ಮೇಲೆ ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.
ರೆಸಿಪಿ 2
ಬೇಕಾಗುವ ಸಾಮಗ್ರಿ
1/2 ಕಪ್ ಹೆಸರು ಬೇಳೆ
1 ಹಸಿ ಮೆಣಸಿನಕಾಯಿ
1 ಚಮಚ ಸೌತೆ
1 ಚಮಚ ತೆಂಗಿನತುರಿ
2 ಚಮಚ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
1 ಚಮಚ ನಿಂಬೆರಸ
ಮಾಡುವ ವಿಧಾನ
ಹೆಸರುಬೇಳೆಯನ್ನು ಒಂದು ಗಂಟೆ ಕಾಲ ನೆನೆ ಹಾಕಿ, ನಂತರ ಅದರ ನೀರನ್ನು ಚೆನ್ನಾಗಿ
ಸೋಸಿ, ನಂತರ ಉಳಿದೆಲ್ಲಾ ಸಾಮಗ್ರಿ ಸೇರಿಸಿ ಮಿಕ್ಸ್ ಮಾಡಿ, ನಂತರ 1 ಚಮಚ ನಿಂಬೆರಸ
ಹಾಕಿ ಮಿಕ್ಸ್ ಮಾಡಿ ಶ್ರೀರಾಮನಿಗೆ ನೈವೇದ್ಯವನ್ನಾಗಿ ಅರ್ಪಿಸಿ.
ರೆಸಿಪಿ 3
ಕಡ್ಲೆ ಕಾಳು ಉಸಳಿ
ಇದನ್ನು ಕೂಡ ನೈವೇದ್ಯವನ್ನಾಗಿ ಇಡಲಾಗುವುದು.
ಬೇಕಾಗುವ ಸಾಮಗ್ರಿ
1/4 ಕೆಜಿ ಕಡ್ಲೆಕಾಳು (ರಾತ್ರಿಯೇ ನೆನೆಹಾಕಿ), ಬೇಯಿಸಿ
ಕೊತ್ತಂಬರಿಸೊಪ್ಪು 1-2 ಚಮಚ
ಎಣ್ಣೆ 1 ಚಮಚ
ಹಸಿ ಮೆಣಸು 2-3 ಚಮಚ
ಸ್ವಲ್ಪ ಶುಂಠಿ ಪುಡಿ
ಜೀರಿಗೆ ಪುಡಿ1/2 ಚಮಚ
ಅರಿಶಿಣ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1 ಚಮಚ
ಮ್ಯಾಂಗೋ ಪುಡಿ 1/4 ಚಮಚ
ಗರಂ ಮಸಾಲ 1/4 ಚಮಚ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
* ಮೊಡಲು ಕಡ್ಲೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ
* ನಂತರ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಜೀರಿಗೆ ಹಾಕಿ,
ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಬೇಯಿಸಿದ ಕಡ್ಲೆ, ನಂತರ ಇತರ ಉಳಿದ ಸಾಮಗ್ರಿ
ಹಾಕಿ ಒಂದು 5 ನಿಮಿಷ ಫ್ರೈ ಮಾಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್
ಮಾಡಿ, ನಂತರ ಇದನ್ನು ಪೂಜೆಗೆ ಬಂದವರಿಗೆ ಪ್ರಸಾದವನ್ನಾಗಿ ಮಾಡಬಹುದು.



Click it and Unblock the Notifications