Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ರಾಮಮಂದಿರ ಉದ್ಘಾಟನೆ ದಿನ ಮನೆಯಲ್ಲಿ ರಾಮನ ಪೂಜಿಸಿ ನೈವೇದ್ಯ ಅರ್ಪಿಸಲು 3 ರೆಸಿಪಿ
ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ. ಈ ದಿನದಂದು ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುವುದು, ಹಿಂದೂಗಳ ಮನೆ-ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುವುದು, ಶ್ರೀರಾಮನಿಗೆ ಪೂಜೆ ಸಲ್ಲಿಸುವಾಗ ನೈವೇದ್ಯವಾಗಿ ಇವುಗಳನ್ನು ಅರ್ಪಿಸಬಹುದು.

ರೆಸಿಪಿ 1
ಅಕ್ಕಿಪಾಯಸ
ಬಾಸುಮತಿ ಅಕ್ಕಿ 1/2ಕಪ್
ಬಾದಾಮಿ 6-8
ಪಿಸ್ತಾ 6-8
ಒಣದ್ರಾಕ್ಷಿ 8-10
ಹಾಲು 1 ಲೀಟರ್
ಸಕ್ಕರೆ 3/4 ಕಪ್
ಏಲಕ್ಕಿ 3-4
ಸ್ವಲ್ಪ ಕೇಸರಿ
ವಿಧಾನ
ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಹಾಕಿ, ನಂತರ ಅದರ ನಿರನ್ನು ಸೋಸಿ,ನೀರಿನಂಶ
ಸಂಪೂರ್ಣ ಹೋಗಿರಬೇಕು, ತರಿತರಿಯಾಗಿ ರುಬ್ಬಿ.
* ಬಾದಾಮಿ, ಪಿಸ್ತವನ್ನು ಚಿಕ್ಕದಾಗಿ ಕತ್ತರಿಸಿ
* ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ
* ಅದಕ್ಕೆ ಅಕ್ಕಿಪುಡಿ, ಸಕ್ಕರೆ ಸೇರಿಸಿ, ಏಲಕ್ಕಿ ಗುದ್ದಿ ಹಾಕಿ, ನಂತರ ಬೆಂದ
ಮೇಲೆ ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.
ರೆಸಿಪಿ 2
ಬೇಕಾಗುವ ಸಾಮಗ್ರಿ
1/2 ಕಪ್ ಹೆಸರು ಬೇಳೆ
1 ಹಸಿ ಮೆಣಸಿನಕಾಯಿ
1 ಚಮಚ ಸೌತೆ
1 ಚಮಚ ತೆಂಗಿನತುರಿ
2 ಚಮಚ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
1 ಚಮಚ ನಿಂಬೆರಸ
ಮಾಡುವ ವಿಧಾನ
ಹೆಸರುಬೇಳೆಯನ್ನು ಒಂದು ಗಂಟೆ ಕಾಲ ನೆನೆ ಹಾಕಿ, ನಂತರ ಅದರ ನೀರನ್ನು ಚೆನ್ನಾಗಿ
ಸೋಸಿ, ನಂತರ ಉಳಿದೆಲ್ಲಾ ಸಾಮಗ್ರಿ ಸೇರಿಸಿ ಮಿಕ್ಸ್ ಮಾಡಿ, ನಂತರ 1 ಚಮಚ ನಿಂಬೆರಸ
ಹಾಕಿ ಮಿಕ್ಸ್ ಮಾಡಿ ಶ್ರೀರಾಮನಿಗೆ ನೈವೇದ್ಯವನ್ನಾಗಿ ಅರ್ಪಿಸಿ.
ರೆಸಿಪಿ 3
ಕಡ್ಲೆ ಕಾಳು ಉಸಳಿ
ಇದನ್ನು ಕೂಡ ನೈವೇದ್ಯವನ್ನಾಗಿ ಇಡಲಾಗುವುದು.
ಬೇಕಾಗುವ ಸಾಮಗ್ರಿ
1/4 ಕೆಜಿ ಕಡ್ಲೆಕಾಳು (ರಾತ್ರಿಯೇ ನೆನೆಹಾಕಿ), ಬೇಯಿಸಿ
ಕೊತ್ತಂಬರಿಸೊಪ್ಪು 1-2 ಚಮಚ
ಎಣ್ಣೆ 1 ಚಮಚ
ಹಸಿ ಮೆಣಸು 2-3 ಚಮಚ
ಸ್ವಲ್ಪ ಶುಂಠಿ ಪುಡಿ
ಜೀರಿಗೆ ಪುಡಿ1/2 ಚಮಚ
ಅರಿಶಿಣ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1 ಚಮಚ
ಮ್ಯಾಂಗೋ ಪುಡಿ 1/4 ಚಮಚ
ಗರಂ ಮಸಾಲ 1/4 ಚಮಚ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
* ಮೊಡಲು ಕಡ್ಲೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ
* ನಂತರ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಜೀರಿಗೆ ಹಾಕಿ,
ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಬೇಯಿಸಿದ ಕಡ್ಲೆ, ನಂತರ ಇತರ ಉಳಿದ ಸಾಮಗ್ರಿ
ಹಾಕಿ ಒಂದು 5 ನಿಮಿಷ ಫ್ರೈ ಮಾಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್
ಮಾಡಿ, ನಂತರ ಇದನ್ನು ಪೂಜೆಗೆ ಬಂದವರಿಗೆ ಪ್ರಸಾದವನ್ನಾಗಿ ಮಾಡಬಹುದು.



Click it and Unblock the Notifications