Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ರಾಮಮಂದಿರ ಉದ್ಘಾಟನೆ ದಿನ ಮನೆಯಲ್ಲಿ ರಾಮನ ಪೂಜಿಸಿ ನೈವೇದ್ಯ ಅರ್ಪಿಸಲು 3 ರೆಸಿಪಿ
ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ. ಈ ದಿನದಂದು ಎಲ್ಲಾ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಗುವುದು, ಹಿಂದೂಗಳ ಮನೆ-ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಲಾಗುವುದು, ಶ್ರೀರಾಮನಿಗೆ ಪೂಜೆ ಸಲ್ಲಿಸುವಾಗ ನೈವೇದ್ಯವಾಗಿ ಇವುಗಳನ್ನು ಅರ್ಪಿಸಬಹುದು.

ರೆಸಿಪಿ 1
ಅಕ್ಕಿಪಾಯಸ
ಬಾಸುಮತಿ ಅಕ್ಕಿ 1/2ಕಪ್
ಬಾದಾಮಿ 6-8
ಪಿಸ್ತಾ 6-8
ಒಣದ್ರಾಕ್ಷಿ 8-10
ಹಾಲು 1 ಲೀಟರ್
ಸಕ್ಕರೆ 3/4 ಕಪ್
ಏಲಕ್ಕಿ 3-4
ಸ್ವಲ್ಪ ಕೇಸರಿ
ವಿಧಾನ
ಅಕ್ಕಿಯನ್ನು ತೊಳೆದು 15 ನಿಮಿಷ ನೆನೆಹಾಕಿ, ನಂತರ ಅದರ ನಿರನ್ನು ಸೋಸಿ,ನೀರಿನಂಶ
ಸಂಪೂರ್ಣ ಹೋಗಿರಬೇಕು, ತರಿತರಿಯಾಗಿ ರುಬ್ಬಿ.
* ಬಾದಾಮಿ, ಪಿಸ್ತವನ್ನು ಚಿಕ್ಕದಾಗಿ ಕತ್ತರಿಸಿ
* ನಂತರ ದಪ್ಪ ತಳವಿರುವ ಪಾತ್ರೆಯಲ್ಲಿ ಹಾಲು ಬಿಸಿ ಮಾಡಿ
* ಅದಕ್ಕೆ ಅಕ್ಕಿಪುಡಿ, ಸಕ್ಕರೆ ಸೇರಿಸಿ, ಏಲಕ್ಕಿ ಗುದ್ದಿ ಹಾಕಿ, ನಂತರ ಬೆಂದ
ಮೇಲೆ ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.
ರೆಸಿಪಿ 2
ಬೇಕಾಗುವ ಸಾಮಗ್ರಿ
1/2 ಕಪ್ ಹೆಸರು ಬೇಳೆ
1 ಹಸಿ ಮೆಣಸಿನಕಾಯಿ
1 ಚಮಚ ಸೌತೆ
1 ಚಮಚ ತೆಂಗಿನತುರಿ
2 ಚಮಚ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
1 ಚಮಚ ನಿಂಬೆರಸ
ಮಾಡುವ ವಿಧಾನ
ಹೆಸರುಬೇಳೆಯನ್ನು ಒಂದು ಗಂಟೆ ಕಾಲ ನೆನೆ ಹಾಕಿ, ನಂತರ ಅದರ ನೀರನ್ನು ಚೆನ್ನಾಗಿ
ಸೋಸಿ, ನಂತರ ಉಳಿದೆಲ್ಲಾ ಸಾಮಗ್ರಿ ಸೇರಿಸಿ ಮಿಕ್ಸ್ ಮಾಡಿ, ನಂತರ 1 ಚಮಚ ನಿಂಬೆರಸ
ಹಾಕಿ ಮಿಕ್ಸ್ ಮಾಡಿ ಶ್ರೀರಾಮನಿಗೆ ನೈವೇದ್ಯವನ್ನಾಗಿ ಅರ್ಪಿಸಿ.
ರೆಸಿಪಿ 3
ಕಡ್ಲೆ ಕಾಳು ಉಸಳಿ
ಇದನ್ನು ಕೂಡ ನೈವೇದ್ಯವನ್ನಾಗಿ ಇಡಲಾಗುವುದು.
ಬೇಕಾಗುವ ಸಾಮಗ್ರಿ
1/4 ಕೆಜಿ ಕಡ್ಲೆಕಾಳು (ರಾತ್ರಿಯೇ ನೆನೆಹಾಕಿ), ಬೇಯಿಸಿ
ಕೊತ್ತಂಬರಿಸೊಪ್ಪು 1-2 ಚಮಚ
ಎಣ್ಣೆ 1 ಚಮಚ
ಹಸಿ ಮೆಣಸು 2-3 ಚಮಚ
ಸ್ವಲ್ಪ ಶುಂಠಿ ಪುಡಿ
ಜೀರಿಗೆ ಪುಡಿ1/2 ಚಮಚ
ಅರಿಶಿಣ ಪುಡಿ 1/4 ಚಮಚ
ಕೊತ್ತಂಬರಿ ಪುಡಿ 1 ಚಮಚ
ಮ್ಯಾಂಗೋ ಪುಡಿ 1/4 ಚಮಚ
ಗರಂ ಮಸಾಲ 1/4 ಚಮಚ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
* ಮೊಡಲು ಕಡ್ಲೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ
* ನಂತರ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದಕ್ಕೆ ಜೀರಿಗೆ ಹಾಕಿ,
ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಬೇಯಿಸಿದ ಕಡ್ಲೆ, ನಂತರ ಇತರ ಉಳಿದ ಸಾಮಗ್ರಿ
ಹಾಕಿ ಒಂದು 5 ನಿಮಿಷ ಫ್ರೈ ಮಾಡಿ, ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್
ಮಾಡಿ, ನಂತರ ಇದನ್ನು ಪೂಜೆಗೆ ಬಂದವರಿಗೆ ಪ್ರಸಾದವನ್ನಾಗಿ ಮಾಡಬಹುದು.



Click it and Unblock the Notifications