Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಕಿತ್ತೂರ ರಾಣಿ ಚೆನ್ನಮ್ಮ ಕತೆ ಈ ಪುಟಾಣಿ ಹೇಗೆ ವರ್ಣಿಸಿದ್ದಾಳೆ ನೋಡಿ
ಕಿತ್ತೂರ ರಾಣಿ ಚೆನ್ನಮ್ಮ ಕತೆಯನ್ನು ಎಷ್ಟೊಂದು ವೀರಾವೇಷದಿಂದ ವರ್ಣಿಸುತ್ತಿದ್ದಾಳೆ ನೋಡಿ ಈ ಪುಟಾಣಿ....
ನಮ್ಮ ಮಕ್ಕಳಿಗೆ ತಂತ್ರಜ್ಞಾನದ ಅರಿವು ಎಷ್ಟಿರುತ್ತದೋ ಅಷ್ಟೇ ಅರಿವು ಇತಿಹಾಸದ ಬಗ್ಗೆ ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ. ನಮ್ಮ ಸ್ವಾತಂತ್ರ್ಯ ಚಳುವಳಿ, ನಮ್ಮ ಪರಂಪರೆ ಇವೆಲ್ಲಾ ಮಕ್ಕಳಿಗೆ ಕಲಿಸುವುದರಿಂದ ಅವರಲ್ಲಿ ದೇಶಪ್ರೇಮ ಹಾಗೂ ಸಂಸ್ಕಾರ ಬೆಳೆಯುವುದು.

ನಮ್ಮ ನಾಡಿನ ಇತಿಹಾಸವನ್ನು ಪುಟಾಣಿಗಳ ಬಾಯಿಂದ ಕೇಳಿದರೆ ಎಷ್ಟೊಂದು ಖುಷಿಯಾಗುತ್ತದೆ ಅಲ್ಲವೇ? ಇಲ್ಲಿ ಬೇಬಿ ಮನನ್ಯ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಅವರ ಕತೆಯನ್ನು ಎಷ್ಟೊಂದು ಚೆನ್ನಾಗಿ, ವೀರಾವೇಷದಿಂದ ವರ್ಣಿಸುತ್ತಿದ್ದಾಳೆ.
ಕನ್ನಡ ನಾಡಿನ ನಮ್ಮೆಲ್ಲರ ವೀರ ಮಹಿಳೆ ಕಿತ್ತೂರ ರಾಣಿ, ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ರಾಜ್ಯದ ಮೇಲೆ ಬ್ರಿಟಿಷರು ಮುಗಿ ಬಿದ್ದಾಗ ಬ್ರಿಟಿಷರ ದೊಡ್ಡ ಸಯನ್ಯಗೆ ಹೆದರದೆ, ಸೆಟೆದು ನಿಂತು ಅವರ ವಿರುದ್ಧ ಹೋರಾಡಿದ ಸಾಹಸಿ.
ಈಕೆಯ ಹೋರಾಟದ ಕತೆ ಕೇಳುತ್ತಿದ್ದರೆ ಮೈಯಲ್ಲಿ ವೀರಾವೇಶ ಮೂಡುವುದು, ಅದೇ ವೀರಾವೇಶದಿಂದ ಈ ಪುಟಾಣಿ ವರ್ಣಿಸುತ್ತಿರುವ ಶೈಲಿ ಮನೋಜ್ಞವಾಗಿದೆ ಅಲ್ಲವೇ?.



Click it and Unblock the Notifications