Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
Krishna Janmashtami 2021: ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳಿಗೆ ಕಂಫರ್ಟ್ ಡ್ರೆಸ್ಸಿಂಗ್ ಐಡಿಯಾ
ಆಗಸ್ಟ್ 30ಕ್ಕೆ ಕೃಷ್ಣ ಜನ್ಮಾಷ್ಟಮಿ. ವಿಷ್ಣುವಿನ 8ನೇ ಅವತಾರವಾದ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಕೃಷ್ಣ ಜನ್ಮಾಷ್ಟಮಿ ಅಂದರೆ ಏನೋ ಸಡಗರ. ಮನೆಯಲ್ಲಿ ಮುದ್ದು ಮಕ್ಕಳಿದ್ದರೆ ಅವರಿಗೆ ಕೃಷ್ಣ, ರಾಧೆಯ ಡ್ರೆಸ್ಸಿಂಗ್ ಮಾಡಿ ಸಂಭ್ರಮಿಸುವ ಕ್ಷಣ.
ಮಕ್ಕಳಿಗೆ ಕೃಷ್ಣ ವೇಷ ತೊಡಿಸಿದಾಗ ಆ ನಿಷ್ಕಲ್ಮಷ ಮನಸ್ಸಿನ ಮಗು ಥೇಟ್ ಭಗವಾನ್ ಸ್ವರೂಪದಂತೆಯೇ ಕಾಣುವುದು. ಆದರೆ ಮಕ್ಕಳಿಗೆ ಅಲಂಕಾರ ಮಾಡುವಾಗ ತುಂಬಾ ಭಾರದ ಆಭರಣಗಳನ್ನು ಹಾಕಿದರೆ ಅವರಿಗೆ ಕಿರಿಕಿರಿ ಉಂಟಾಗುತ್ತದೆ. ನಮಗೆ ಅವರನ್ನು ನೋಡಲು ಇಷ್ಟವಾಗುವುದೇನೋ ಸರಿ, ಆದರೆ ಅವರು ಕೂಡ ಕಂಫರ್ಟ್ ಆಗಿರಬೇಕು ಅಲ್ಲವೇ.

ಅಲ್ಲದೆ ಕೃಷ್ಣ ಅಲಂಕಾರಕ್ಕೆ ನೀವು ಫ್ಯಾನ್ಸಿ ಸ್ಟೋರ್ನಿಂದ ಕಾಸ್ಟ್ಯೂಮ್ ಕೊಂಡು ತರಬೇಕಾಗಿಲ್ಲ. ಅದಕ್ಕೆ ಬೇಕಾದ ಸಾಮಗ್ರಿ ತಂದರಷ್ಟೇ ಸಾಕು ಗೋಲ್ಡನ್ ಪೇಪರ್ನಿಂದ ಮುಕುಟ, ತೋಳು ಬಂದಿ, ಸೊಂಟಕ್ಕೆ ಪಟ್ಟಿ ಹಾಗೂ ಚೈನ್ ಎಲ್ಲಾ ಮಾಡಬಹುದು. ಇಲ್ಲಿ ಅಂಜಲಿಯವರು ವೀಡಿಯೋದಲ್ಲಿ ತುಂಬಾ ಸರಳವಾಗಿ ಕೃಷ್ಣನ ಅಲಂಕಾರ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದಾರೆ ನೋಡಿ.

ಕೃಷ್ಣ ಎಂದಿಗೂ ಭಕ್ತರ ಬಾಲ ಕೃಷ್ಣ
ಬಾಲ ಕೃಷ್ಣನ ಫೋಟೋಗಳನ್ನು ನೋಡಲು, ಅವನ ಲೀಲೆಗಳನ್ನು ಕೇಳಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಕೃಷ್ಣನ ಒಂದೊಂದು ಲೀಲೆಯೂ ಸುಂದರ. ಮನೆಯಲ್ಲಿ ಬೆಣ್ಣೆಯಿದ್ದರೆ ಮಗುವಿಗೆ ಕೃಷ್ಣನ ವೇಷ ತೋಡಿಸಿ ಬೆಣ್ಣೆ ತಿನ್ನಲು ನೀಡಿದರೆ ಆಹಾ ನೋಡಲು ಎಂಥ ಸೊಬಗು.

ಕೃಷ್ಣನ ಉಡುಗೆ
ಕೃಷ್ಣ ಉಡುಗೆ ತುಂಬಾ ಸರಳ. ಮನೆಯಲ್ಲಿ ಶಲ್ಯ ಅಥವಾ ಚಿಕ್ಕ ಪಂಚೆ ಇದ್ದರೆ ಸಾಕು, ಮಗುವಿಗೆ ಪಂಚೆ ಉಡಿಸಬಹುದು. ಪಂಚೆ ಹಳದಿ, ನೀಲಿ ಹೀಗೆ ಬಣ್ಣದ ಪಂಚೆಯಾಗಿದ್ದರೆ ತುಂಬಾ ಆಕರ್ಷಕ.

ಕೊಳಲು ಕೃಷ್ಣ
ಕೃಷ್ಣ ಎಂದರೆ ತಕ್ಷಣ ನೆನಪಾಗುವುದು ಕೊಳಲು ಊದುತ್ತಾ ಗೋಪಿಕೆಯರ ನಡುವೆ ಇರುವ ತುಂಟ ಕೃಷ್ಣ. ಕೊಳಲು, ತಲೆಗೆ ನವಿಲು ಗಿರಿ ಇಲ್ಲಾ ಅಂದ್ರೆ ಕೃಷ್ಣ ಲುಕ್ ಕಂಪ್ಲೀಟ್ ಆಗುವುದೇ ಇಲ್ಲ. ಕಿರೀಟಕ್ಕೆ ನವಿಲು ಗಿರಿ ಅಂಟಿಸಿ. ಇನ್ನು ಕೊಳಲು ಅನ್ನು ಗಟ್ಟಿ ರಟ್ಟಿನ ಪೇಪರ್ನಿಂದ ತಯಾರಿಸಿ ಅದಕ್ಕೆ ಗೋಲ್ಡನ್ ಬಣ್ಣದ ಪೇಪರ್ ಸುತ್ತಿದರೆ ಸಾಕು.

ಸಿಂಗಾರ ಬೊಟ್ಟು
ಇನ್ನು ಬೊಟ್ಟು ಹಾಕಿದ ಮೇಲೆ ಬಿಳಿ ಹಾಗೂ ಕೆಂಪು ಬಣ್ಣದ ಸಿಂಗಾರದಿಂದ ಬೊಟ್ಟು ಹಾಕಬೇಕು. ಹುಬ್ಬು ಮೇಲೆ ಕೂಡ ಬಿಳಿ, ಕೆಂಪು ಚುಕ್ಕಿ ಇಡಬೇಕು. ಇಷ್ಟು ಮಾಡಿದರೆ ಕೃಷ್ಣನ ಲುಕ್ ಪರ್ಫೆಕ್ಟ್.

ರಾಧೆ
ಇನ್ನು ಜನ್ಮಾಷ್ಟಮಿಗೆ ಮುದ್ದು ಕೃಷ್ಣ ಜೋಡಿ ರಾಧೆಯ ವೇಷ ತೊಡಿಸುವುದಾದರೆ ಸ್ವಲ್ಪ ಅಧಿಕವೇ ಅಲಂಕಾರ ಬೇಕು. ಮಗುವಿಗೆ ಉದ್ದ ಲಂಗವಿದ್ದರೆ ತುಂಬಾ ಒಳ್ಳೆಯದು. ಹಣೆಗೆ ನೆತ್ತಿ ಬೊಟ್ಟು ಹಾಕಿ, ಆಭರಣಗಳನ್ನು ಮುದ್ದು ರಾಧೆಯನ್ನು ಸಿದ್ಧ ಪಡಿಸಬಹುದು. ಆದರೆ ಮಕ್ಕಳು 5 ವರ್ಷಕ್ಕಿಂತ ಮೇಲ್ಪಟ್ಟವರು ಆದರೆ ಓಕೆ, ಆದರೆ ತುಂಬಾ ಚಿಕ್ಕವರಾದರೆ ಅವರಿಗೆ ತುಂಬಾ ಅಲಂಕಾರ ಮಾಡಿದಾಗ ಕಿರಿಕಿರಿ ಆಗುವುದು. ಆದ್ದರಿಂದ ಆಗ ಸ್ವಲ್ಪ ಸರಳ ಅಲಂಕಾರ ಮಾಡಿ.



Click it and Unblock the Notifications