Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮಕ್ಕಳ ಮನಸ್ಸು ಹೂವಿನಂತೆ, ಏಕಾಂಗಿತನ ಕಾಡದಿರಲಿ
ಮಕ್ಕಳು ಹೆಚ್ಚು ಚಟುವಟಿಕೆಯಿಂದ ಇದ್ದರೆ ಮಾತ್ರವೇ ಅವರ ಬಾಲ್ಯ ಮಾಸದ ನೆನಪಾಗಿ ಅವರಲ್ಲಿ ಉಳಿಯುತ್ತದೆ. ಈ ಚಟುವಟಿಕೆ ಅವರಲ್ಲಿ ಉಂಟಾಗುವುದು ನೆರೆಹೊರೆಯವರೊಂದಿಗೆ ಅವರ ಕಲೆತು ಬೆರೆತಾಗ ಮಾತ್ರವೇ. ಸುತ್ತಲಿನ ಮಕ್ಕಳಗೊಂದಿಗೆ ನಿತ್ಯದ ಆಟಪಾಠದಲ್ಲಿ ಅವರು ತೊಡಗಿಕೊಂಡಾಗ ಚುರುಕಾಗಿ ತಮ್ಮೊಳಗಿನ ಪ್ರತಿಭೆಯನ್ನು ತಾವೇ ಕಂಡುಕೊಳ್ಳುತ್ತಾರೆ.

ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆತಾಗ ಎಲ್ಲವರು ಹಾಳಾಗುತ್ತಾರೋ ಎಂದು ಭಯಪಟ್ಟುಕೊಂಡು ಎಷ್ಟೋ ಹೆತ್ತವರು ಅವರಲ್ಲಿ ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ. ಇದರಿಂದ ಮಕ್ಕಳ ಮೃದು ಮನಸ್ಸು ಮುದುಡಿ ಹೋಗುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಲೂ ಹೆಚ್ಚು ಜನರಿದ್ದು ಚಟುವಟಿಕೆ ಇದೆ ಎಂದಾದಲ್ಲಿ ನಾವು ಸಂತೋಷವಾಗಿರುತ್ತೇವೆ. ಖಿನ್ನತೆ ನಮ್ಮನ್ನು ಕಾಡುವುದಿಲ್ಲ.
ನಮ್ಮೊಡನೆ ಯಾರೂ ಇಲ್ಲ ಮತ್ತು ನಾವು ಒಬ್ಬಂಟಿಯಾಗಿ ಇದ್ದ ಸಂದರ್ಭದಲ್ಲಿ ನಾವು ಅಂತರ್ಮುಖಿಗಳಾಗುತ್ತೇವೆ ಮತ್ತು ಮನೋವ್ಯಾಧಿ ನಮ್ಮನ್ನು ಕಾಡುತ್ತದೆ. ಮಕ್ಕಳ ವಿಷಯದಲ್ಲೂ ಈ ಅಂಶ ಇನ್ನೂ ಹೆಚ್ಚು ಪ್ರಖರವಾಗಿರುತ್ತದೆ. ಆದಷ್ಟು ನಿಮ್ಮ ಮಕ್ಕಳನ್ನು ನೆರೆಹೊರೆಯವರೊಂದಿಗೆ ಆಡಲು ಬಿಡಿ.
ಮಾರುಕಟ್ಟೆ, ಗಾರ್ಡನ್ ಮೊದಲಾದ ಜನನಿಬಿಡ ಪ್ರದೇಶಗಳ ನಿಮ್ಮ ಮನೆಯ ಹತ್ತಿರ ಇದೆಯೇ ಎಂಬುದನ್ನು ಕಂಡುಕೊಳ್ಳಿ. ದೊಡ್ಡ ದೊಡ್ಡ ನಗರಗಳಲ್ಲಿ ಕೂಡ ಫ್ಲಾಟ್ ಅಪಾರ್ಟ್ಮೆಂಟ್ಗಳು ಇದೇ ರೀತಿಯ ಯೋಜನೆಯನ್ನಿಟ್ಟುಕೊಂಡೇ ಮನೆಗಳನ್ನು ಕಟ್ಟುತ್ತಿವೆ.
ಅಪಾರ್ಟ್ಮೆಂಟ್ ಎದುರುಗಡೆ ದೊಡ್ಡ ಗಾರ್ಡನ್, ಮಕ್ಕಳು ಆಟವಾಡಲು ಬೇಕಾಗಿರುವ ಸ್ಥಳ, ಮಾರುಕಟ್ಟೆ ಅಂತೆಯೇ ಸಾಮಾಜಿಕ ಒಟ್ಟುಗೂಡುವಿಕೆಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನೇ ನಿರ್ಮಿಸುತ್ತಿವೆ. ಆದ್ದರಿಂದ ಹೊಸ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳಿಗೆ ನೀವು ಆದ್ಯತೆ ನೀಡಬೇಕಾಗುತ್ತದೆ.
ನಿಮ್ಮ ಮಕ್ಕಳು ಆದಷ್ಟು ಒಬ್ಬಂಟಿಗರಾಗಿ ಇರದಂತೆ ನೀವು ನೋಡಿಕೊಳ್ಳಬೇಕು. ಮಕ್ಕಳ ಮನಸ್ಸು ಹೂವಿನಂತೆ. ಈ ಹೂವಿಗೆ ಕೊಂಚ ಘಾಸಿಯಾದರೂ ಅದನ್ನು ಸರಿಪಡಿಸುವುದು ತುಂಬಾ ಕಷ್ಟ ಎಂಬುದು ನಿಮ್ಮ ನೆನಪಿನಲ್ಲಿರಲಿ.



Click it and Unblock the Notifications















