Latest Updates
-
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್!
ಮಕ್ಕಳ ಮನಸ್ಸು ಹೂವಿನಂತೆ, ಏಕಾಂಗಿತನ ಕಾಡದಿರಲಿ
ಮಕ್ಕಳು ಹೆಚ್ಚು ಚಟುವಟಿಕೆಯಿಂದ ಇದ್ದರೆ ಮಾತ್ರವೇ ಅವರ ಬಾಲ್ಯ ಮಾಸದ ನೆನಪಾಗಿ ಅವರಲ್ಲಿ ಉಳಿಯುತ್ತದೆ. ಈ ಚಟುವಟಿಕೆ ಅವರಲ್ಲಿ ಉಂಟಾಗುವುದು ನೆರೆಹೊರೆಯವರೊಂದಿಗೆ ಅವರ ಕಲೆತು ಬೆರೆತಾಗ ಮಾತ್ರವೇ. ಸುತ್ತಲಿನ ಮಕ್ಕಳಗೊಂದಿಗೆ ನಿತ್ಯದ ಆಟಪಾಠದಲ್ಲಿ ಅವರು ತೊಡಗಿಕೊಂಡಾಗ ಚುರುಕಾಗಿ ತಮ್ಮೊಳಗಿನ ಪ್ರತಿಭೆಯನ್ನು ತಾವೇ ಕಂಡುಕೊಳ್ಳುತ್ತಾರೆ.

ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆತಾಗ ಎಲ್ಲವರು ಹಾಳಾಗುತ್ತಾರೋ ಎಂದು ಭಯಪಟ್ಟುಕೊಂಡು ಎಷ್ಟೋ ಹೆತ್ತವರು ಅವರಲ್ಲಿ ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ. ಇದರಿಂದ ಮಕ್ಕಳ ಮೃದು ಮನಸ್ಸು ಮುದುಡಿ ಹೋಗುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಲೂ ಹೆಚ್ಚು ಜನರಿದ್ದು ಚಟುವಟಿಕೆ ಇದೆ ಎಂದಾದಲ್ಲಿ ನಾವು ಸಂತೋಷವಾಗಿರುತ್ತೇವೆ. ಖಿನ್ನತೆ ನಮ್ಮನ್ನು ಕಾಡುವುದಿಲ್ಲ.
ನಮ್ಮೊಡನೆ ಯಾರೂ ಇಲ್ಲ ಮತ್ತು ನಾವು ಒಬ್ಬಂಟಿಯಾಗಿ ಇದ್ದ ಸಂದರ್ಭದಲ್ಲಿ ನಾವು ಅಂತರ್ಮುಖಿಗಳಾಗುತ್ತೇವೆ ಮತ್ತು ಮನೋವ್ಯಾಧಿ ನಮ್ಮನ್ನು ಕಾಡುತ್ತದೆ. ಮಕ್ಕಳ ವಿಷಯದಲ್ಲೂ ಈ ಅಂಶ ಇನ್ನೂ ಹೆಚ್ಚು ಪ್ರಖರವಾಗಿರುತ್ತದೆ. ಆದಷ್ಟು ನಿಮ್ಮ ಮಕ್ಕಳನ್ನು ನೆರೆಹೊರೆಯವರೊಂದಿಗೆ ಆಡಲು ಬಿಡಿ.
ಮಾರುಕಟ್ಟೆ, ಗಾರ್ಡನ್ ಮೊದಲಾದ ಜನನಿಬಿಡ ಪ್ರದೇಶಗಳ ನಿಮ್ಮ ಮನೆಯ ಹತ್ತಿರ ಇದೆಯೇ ಎಂಬುದನ್ನು ಕಂಡುಕೊಳ್ಳಿ. ದೊಡ್ಡ ದೊಡ್ಡ ನಗರಗಳಲ್ಲಿ ಕೂಡ ಫ್ಲಾಟ್ ಅಪಾರ್ಟ್ಮೆಂಟ್ಗಳು ಇದೇ ರೀತಿಯ ಯೋಜನೆಯನ್ನಿಟ್ಟುಕೊಂಡೇ ಮನೆಗಳನ್ನು ಕಟ್ಟುತ್ತಿವೆ.
ಅಪಾರ್ಟ್ಮೆಂಟ್ ಎದುರುಗಡೆ ದೊಡ್ಡ ಗಾರ್ಡನ್, ಮಕ್ಕಳು ಆಟವಾಡಲು ಬೇಕಾಗಿರುವ ಸ್ಥಳ, ಮಾರುಕಟ್ಟೆ ಅಂತೆಯೇ ಸಾಮಾಜಿಕ ಒಟ್ಟುಗೂಡುವಿಕೆಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನೇ ನಿರ್ಮಿಸುತ್ತಿವೆ. ಆದ್ದರಿಂದ ಹೊಸ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳಿಗೆ ನೀವು ಆದ್ಯತೆ ನೀಡಬೇಕಾಗುತ್ತದೆ.
ನಿಮ್ಮ ಮಕ್ಕಳು ಆದಷ್ಟು ಒಬ್ಬಂಟಿಗರಾಗಿ ಇರದಂತೆ ನೀವು ನೋಡಿಕೊಳ್ಳಬೇಕು. ಮಕ್ಕಳ ಮನಸ್ಸು ಹೂವಿನಂತೆ. ಈ ಹೂವಿಗೆ ಕೊಂಚ ಘಾಸಿಯಾದರೂ ಅದನ್ನು ಸರಿಪಡಿಸುವುದು ತುಂಬಾ ಕಷ್ಟ ಎಂಬುದು ನಿಮ್ಮ ನೆನಪಿನಲ್ಲಿರಲಿ.



Click it and Unblock the Notifications



