ಮಕ್ಕಳ ಮನಸ್ಸು ಹೂವಿನಂತೆ, ಏಕಾಂಗಿತನ ಕಾಡದಿರಲಿ

By Jaya Subramanya

ಮಕ್ಕಳು ಹೆಚ್ಚು ಚಟುವಟಿಕೆಯಿಂದ ಇದ್ದರೆ ಮಾತ್ರವೇ ಅವರ ಬಾಲ್ಯ ಮಾಸದ ನೆನಪಾಗಿ ಅವರಲ್ಲಿ ಉಳಿಯುತ್ತದೆ. ಈ ಚಟುವಟಿಕೆ ಅವರಲ್ಲಿ ಉಂಟಾಗುವುದು ನೆರೆಹೊರೆಯವರೊಂದಿಗೆ ಅವರ ಕಲೆತು ಬೆರೆತಾಗ ಮಾತ್ರವೇ. ಸುತ್ತಲಿನ ಮಕ್ಕಳಗೊಂದಿಗೆ ನಿತ್ಯದ ಆಟಪಾಠದಲ್ಲಿ ಅವರು ತೊಡಗಿಕೊಂಡಾಗ ಚುರುಕಾಗಿ ತಮ್ಮೊಳಗಿನ ಪ್ರತಿಭೆಯನ್ನು ತಾವೇ ಕಂಡುಕೊಳ್ಳುತ್ತಾರೆ.

Why Raise Kids In Active Neighbourhoods

ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆತಾಗ ಎಲ್ಲವರು ಹಾಳಾಗುತ್ತಾರೋ ಎಂದು ಭಯಪಟ್ಟುಕೊಂಡು ಎಷ್ಟೋ ಹೆತ್ತವರು ಅವರಲ್ಲಿ ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ. ಇದರಿಂದ ಮಕ್ಕಳ ಮೃದು ಮನಸ್ಸು ಮುದುಡಿ ಹೋಗುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಲೂ ಹೆಚ್ಚು ಜನರಿದ್ದು ಚಟುವಟಿಕೆ ಇದೆ ಎಂದಾದಲ್ಲಿ ನಾವು ಸಂತೋಷವಾಗಿರುತ್ತೇವೆ. ಖಿನ್ನತೆ ನಮ್ಮನ್ನು ಕಾಡುವುದಿಲ್ಲ.

ನಮ್ಮೊಡನೆ ಯಾರೂ ಇಲ್ಲ ಮತ್ತು ನಾವು ಒಬ್ಬಂಟಿಯಾಗಿ ಇದ್ದ ಸಂದರ್ಭದಲ್ಲಿ ನಾವು ಅಂತರ್ಮುಖಿಗಳಾಗುತ್ತೇವೆ ಮತ್ತು ಮನೋವ್ಯಾಧಿ ನಮ್ಮನ್ನು ಕಾಡುತ್ತದೆ. ಮಕ್ಕಳ ವಿಷಯದಲ್ಲೂ ಈ ಅಂಶ ಇನ್ನೂ ಹೆಚ್ಚು ಪ್ರಖರವಾಗಿರುತ್ತದೆ. ಆದಷ್ಟು ನಿಮ್ಮ ಮಕ್ಕಳನ್ನು ನೆರೆಹೊರೆಯವರೊಂದಿಗೆ ಆಡಲು ಬಿಡಿ.

ಮಾರುಕಟ್ಟೆ, ಗಾರ್ಡನ್ ಮೊದಲಾದ ಜನನಿಬಿಡ ಪ್ರದೇಶಗಳ ನಿಮ್ಮ ಮನೆಯ ಹತ್ತಿರ ಇದೆಯೇ ಎಂಬುದನ್ನು ಕಂಡುಕೊಳ್ಳಿ. ದೊಡ್ಡ ದೊಡ್ಡ ನಗರಗಳಲ್ಲಿ ಕೂಡ ಫ್ಲಾಟ್ ಅಪಾರ್ಟ್‌ಮೆಂಟ್‌ಗಳು ಇದೇ ರೀತಿಯ ಯೋಜನೆಯನ್ನಿಟ್ಟುಕೊಂಡೇ ಮನೆಗಳನ್ನು ಕಟ್ಟುತ್ತಿವೆ.

ಅಪಾರ್ಟ್‌ಮೆಂಟ್ ಎದುರುಗಡೆ ದೊಡ್ಡ ಗಾರ್ಡನ್, ಮಕ್ಕಳು ಆಟವಾಡಲು ಬೇಕಾಗಿರುವ ಸ್ಥಳ, ಮಾರುಕಟ್ಟೆ ಅಂತೆಯೇ ಸಾಮಾಜಿಕ ಒಟ್ಟುಗೂಡುವಿಕೆಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನೇ ನಿರ್ಮಿಸುತ್ತಿವೆ. ಆದ್ದರಿಂದ ಹೊಸ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳಿಗೆ ನೀವು ಆದ್ಯತೆ ನೀಡಬೇಕಾಗುತ್ತದೆ.


ನಿಮ್ಮ ಮಕ್ಕಳು ಆದಷ್ಟು ಒಬ್ಬಂಟಿಗರಾಗಿ ಇರದಂತೆ ನೀವು ನೋಡಿಕೊಳ್ಳಬೇಕು. ಮಕ್ಕಳ ಮನಸ್ಸು ಹೂವಿನಂತೆ. ಈ ಹೂವಿಗೆ ಕೊಂಚ ಘಾಸಿಯಾದರೂ ಅದನ್ನು ಸರಿಪಡಿಸುವುದು ತುಂಬಾ ಕಷ್ಟ ಎಂಬುದು ನಿಮ್ಮ ನೆನಪಿನಲ್ಲಿರಲಿ.

X
Desktop Bottom Promotion