Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...
ಮಕ್ಕಳು ದೇವರಿಗೆ ಸಮಾನ ಎಂಬ ಮಾತಿದೆ. ಅವರ ಆಟ ಪಾಠ ಹಾವ ಭಾವ ಹೀಗೆ ಪ್ರತಿಯೊಂದೂ ಕಣ್ಣಿಗೆ ಆನಂದ ನೀಡುವ ಸಂಗತಿಗಳೇ. ಮಕ್ಕಳು ಬಾಲ್ಯದಲ್ಲಿ ತಮ್ಮ ಪೋಷಕರ ಒಡನಾಟವನ್ನು ಹೆಚ್ಚು ಹಚ್ಚಿಕೊಳ್ಳುವುದರಿಂದ ತಂದೆ ತಾಯಿ ತಮ್ಮೊಡನೇ ಇರಬೇಕು ಅವರೊಂದಿಗೆ ಹೆಚ್ಚುವರಿ ಸಮಯವನ್ನು ಕಳೆಯಬೇಕು ಎಂಬ ಇಂಗಿತ ಅವರಲ್ಲಿರುತ್ತದೆ. ಸಂಜೆಯ ಸಮಯದಲ್ಲಿ ತಮ್ಮೊಂದಿಗೆ ಆಟವಾಡುವುದು, ತಮ್ಮನ್ನು ಪಾರ್ಕ್ಗೆ ಕರೆದೊಯ್ಯುವುದು, ಶಾಲಾ ಚಟುವಟಿಕೆಗಳಲ್ಲಿ ತಮ್ಮ ಸಾಧನೆಯನ್ನು ನೋಡಿ ಹೆತ್ತವರು ಖುಷಿಪಡಬೇಕು ಎಂಬುದಾಗಿ ಮಕ್ಕಳು ಭಾವಿಸುತ್ತಾರೆ.

ಆದರೆ ಮುಂಚಿನ ದಿನಗಳಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳಿಗೆ ನೀಡುತ್ತಿದ್ದ ಕಾಳಜಿ ಸಮಯ ಈಗ ಇಲ್ಲವಾಗಿದೆ. ಪೋಷಕರಿಬ್ಬರೂ ದುಡಿಯುವುದರ ಕಡೆಗೆ ಗಮನ ನೀಡುವುದರಿಂದ ಮಕ್ಕಳ ಕಡೆಗೆ ಸಾಕಷ್ಟು ಗಮನ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಆಟಪಾಠಗಳನ್ನು ಕಣ್ತುಂಬಿಕೊಳ್ಳಲು ಈಗ ಅವರಲ್ಲಿ ಸಮಯವೇ ಇಲ್ಲ. ಇದರಿಂದ ಹೂವಿನಂತಹ ಮಕ್ಕಳ ಹೃದಯಕ್ಕೆ ಬರೆ ಎಳೆದಂತಾಗುತ್ತದೆ. ಅವರುಗಳು ಕೀಳರಿಮೆಯಿಂದ ಬಳಲುತ್ತಾರೆ. ತಾವು ಏಕಾಂಗಿಯೆಂಬ ಭಾವನೆಯಿಂದ ತತ್ತರಿಸಿ ಹೋಗುತ್ತಾರೆ. ಹೂವಿನಂತಹ ಆ ಮೃದು ಮನಸ್ಸಿಗೆ ಒಂದು ಸ್ವಲ್ಪ ವೇದನೆಯಾದರೂ ಅದು ಮಾಸಲಾಗದೇ ಇರುವ ಕಲೆಯಾಗಿ ಅಚ್ಚೊತ್ತದೆ.
ಇಂದಿನ ಲೇಖನದಲ್ಲಿ ಮಕ್ಕಳು ಪೋಷಕರ ಪಾಲನೆಯನ್ನು ಪಡೆದುಕೊಳ್ಳದೇ ಬೆಳೆದಾಗ ಏನು ಸಂಭವಿಸುತ್ತದೆ ಎಂಬುದನ್ನು ನಾವು ನಿಮಗೆ ವಿಷದವಾಗಿ ತಿಳಿಸಲಿದ್ದು ನಿಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ತಿಳಿಸಿಕೊಡಲಿದೆ. ಅಂತೆಯೇ ನಿಮ್ಮ ಮಗು ಈ ಕೆಳಗಿನ ಗುಣಗಳನ್ನು ಹೊಂದಿದೆ ಎಂದಾದಲ್ಲಿ ನೀವು ಆ ಮಗುವಿಗೆ ಸಾಕಷ್ಟು ಕಾಳಜಿ ಪ್ರಾಧಾನ್ಯತೆ ನೀಡುತ್ತಿಲ್ಲ ಎಂದೇ ಅರ್ಥವಾಗಿದೆ.
ಒಂಟಿ ಭಾವನೆ
ಪೋಷಕರು ತಮ್ಮದೇ ಕೆಲಸದಲ್ಲಿ ನಿರತರಾದಾಗ ಮಕ್ಕಳು ಒಬ್ಬಂಟಿಗರಾಗಿ ಬಿಡುತ್ತಾರೆ. ಈ ಒಂಟಿತನ ಅವರಿಗೆ ಸಾಕಷ್ಟು ನೋವನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಖಿನ್ನತೆ ಅವರಲ್ಲಿ ಉಂಟಾಗುತ್ತದೆ.
ಪ್ರೀತಿಯೇ ಅವರಿಗೆ ದೊರೆಯುವುದಿಲ್ಲ
ಅವರ ಭಾವನೆಗಳಿಗೆ ಸ್ಪಂದಿಸುವವರು ಇಲ್ಲದಾದಾಗ, ಪೋಷಕರು ವಿರಳವಾಗಿ ಮಕ್ಕಳಗೊಂದಿಗೆ ಸಮಯ ಕಳೆಯುವಾಗ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲವಾಗುತ್ತದೆ ಮತ್ತು ಅಸಡ್ಡೆಯನ್ನು ತೋರ್ಪಡಿಸುತ್ತಾರೆ.
ವ್ಯಗ್ರರಾಗುವುದು
ಪ್ರೀತಿ ದೊರೆಯದೇ ಇದ್ದ ಮಕ್ಕಳು ವ್ಯಗ್ರರಾಗುತ್ತಾರೆ. ಒಳಗೆ ಕೋಪವನ್ನು ಇಟ್ಟುಕೊಂಡು ಅದನ್ನು ಇತರ ಮಕ್ಕಳ ಮೇಲೆ ದೊಡ್ಡವರ ಮೇಲೆ ತೋರಿಸಿಕೊಳ್ಳಲು ಆರಂಭಿಸುತ್ತಾರೆ.
ಕೀಳರಿಮೆ
ತಮ್ಮ ಮೇಲೆ ಪ್ರೀತಿ ತೋರಿಸುವವರು ಇಲ್ಲ ನಮ್ಮನ್ನು ಬೆಂಬಲಿಸುವವರು ಇಲ್ಲ ಎಂದಾದಾಗ ಕೀಳರಿಮೆಯನ್ನು ಅವರು ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಆತ್ಮವಿಶ್ವಾಸವನ್ನೇ ಅವರು ಕಳೆದುಕೊಳ್ಳುತ್ತಾರೆ.



Click it and Unblock the Notifications













