Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಆಡುವ ಮಕ್ಕಳಲ್ಲಿ ಮಾನಸಿಕ ಖಿನ್ನತೆ! ನಿವಾರಿಸುವುದು ಹೇಗೆ?
ಖಿನ್ನತೆ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಪೋಷಕರು ತಮ್ಮ ಪೋಷಕ ಪಾತ್ರವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಮಕ್ಕಳ ಖಿನ್ನತೆಯನ್ನು ದೂರ ಮಾಡಬಹುದು ಎಂದು ತಿಳಿದುಬಂದಿದೆ. ಅದರಲ್ಲೂ ತಾಯಿಯಿಂದ ಖಿನ್ನತೆಯನ್ನು ಪಡೆಯುವ ಮಗುವಿಗೆ ಈ ಮಾತು ನೂರಕ್ಕೆ ನೂರು ಅನ್ವಯಿಸುತ್ತದೆ ಎಂದು ಹೇಳಲಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಒತ್ತಡವು ಭ್ರೂಣದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ ಮತ್ತು ಇದು ಜನನದ ಸಮಯದಲ್ಲಿ ಕಡಿಮೆ ತೂಕ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆ ಮತ್ತು ದುರ್ಬಲ ಮೆದುಳಿನ ಬೆಳವಣಿಗೆಗೆ ಕಾರಣವಾಗುತ್ತದೆಯಂತೆ. ಅಧ್ಯಯನಕಾರರು, ಮಕ್ಕಳ ಜನನದ ಸಂದರ್ಭದಲ್ಲಿ ಉತ್ತಮ ಕಾಳಜಿಯನ್ನು ತೋರಿದರೆ ಈ ಖಿನ್ನತೆಯ ಪ್ರಮಾಣವನ್ನು ಮಕ್ಕಳಲ್ಲಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಖಿನ್ನತೆಯಿಂದ ಬಳಲುವ ಮಕ್ಕಳ ತಾಯಂದಿರಲ್ಲಿ ಸುಮಾರು 100 ಜನರನ್ನು ಅಧ್ಯಯನಕಾರರು ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಮತ್ತು ಅವರ DNA ಯನ್ನು ಸಹ ಸಂಗ್ರಹಿಸಿದ್ದಾರೆ. ಮಕ್ಕಳ ಒತ್ತಡವನ್ನು ನಿವಾರಿಸುವ ಉಸಿರಾಟದ ವ್ಯಾಯಮಗಳು
ನಂತರ, ಸ್ವಲ್ಪ ದಿನಗಳ ನಂತರ ಆ ಮಕ್ಕಳನ್ನು ತಾಯಂದಿರ ಜೊತೆಗೆ ಆಟವಾಡಲು ಬಿಟ್ಟಿದ್ದಾರೆ. ಮೊದಲ ಹಂತದಲ್ಲಿ ಮಕ್ಕಳ ಜೊತೆಗೆ ತಾಯಂದಿರನ್ನು ಆಟವಾಡಲು ಬಿಟ್ಟಿದ್ದಾರೆ. ಎರಡನೆ ಹಂತದಲ್ಲಿ ಮಕ್ಕಳ ಜೊತೆಗೆ ತಾಯಂದಿರು ಆಟವಾಡದೆ ಇರಲು ಸಲಹೆ ನೀಡಿದ್ದಾರೆ. ಕೊನೆಗೆ ಮೂರನೆ ಹಂತದಲ್ಲಿ ಮತ್ತೆ ಮಕ್ಕಳ ಜೊತೆಗೆ ತಾಯಂದಿರು ಆಟವಾಡಲು ಬಿಟ್ಟಿದ್ದಾರೆ.
ಹೀಗೆ ನಡೆಯುವಾಗ ಮಕ್ಕಳ ಮೇಲೆ ತಾಯಿ ತೋರಿಸುವ ಮಮಕಾರ ಮತ್ತು ಪ್ರೀತಿಯು ಮಕ್ಕಳಲ್ಲಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಕರಿಸಿದೆ ಎಂದು ತಿಳಿದು ಬಂದಿದೆ. ಇದರರ್ಥ, ಮಕ್ಕಳ ಪೋಷಕರ ಪಾತ್ರವು ಅವರಲ್ಲಿ ಧನಾತ್ಮಕ ಪರಿಣಾಮವನ್ನು ತರುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಷಕರು ಕೆಲವೊಂದು ಧನಾತ್ಮಕ ಗುಣಗಳನ್ನು ಹೊಂದಬೇಕು ಎಂದು ಈ ಅಧ್ಯಯನ ಸಾಬೀತು ಮಾಡಿದೆ.
ಇಂದಿನ ಜಂಜಾಟ ಜೀವನ ಶೈಲಿಯಲ್ಲಿ, ಪೋಷಕರಿಗೆ ತಮ್ಮ ಮಕ್ಕಳ ಜೊತೆಗೆ ಕಾಲ ಕಳೆಯಲು ಹೆಚ್ಚಿನ ಅವಧಿ ಇರುವುದಿಲ್ಲ. ಈ ಅಧ್ಯಯನವು ನೀವು ನಿಮ್ಮ ಮಕ್ಕಳ ಜೊತೆಗೆ ಕಳೆಯಬೇಕಾದ ಗುಣಮಟ್ಟದ ಸಮಯದ ಕುರಿತು ತಿಳಿಸುತ್ತದೆ. ಪ್ರೀತಿ, ಮಮತೆ, ಅನುಬಂಧಗಳು ಮಕ್ಕಳ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂದು ಇದು ತಿಳಿಸಿದೆ. ಅದರಲ್ಲೂ ತಾಯಿಯ ಪ್ರೀತಿಯು ಮಕ್ಕಳಲ್ಲಿರುವ ಅಸುರಕ್ಷತೆಯನ್ನು ಮತ್ತು ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ತಿಳಿದುಬಂದಿದೆ.



Click it and Unblock the Notifications














