Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಮಕ್ಕಳಿಗೆ ಪೆಡಂಭೂತದಂತೆ ಕಾಡುವ ಸ್ಥೂಲಕಾಯದ ಸಮಸ್ಯೆ
ಸ್ಥೂಲಕಾಯವೆಂಬುದು ವಂಶಪಾರ್ಯವಾಗಿ ಬರುವಂತಹ ಕಾಯಿಲೆಯಾಗಿರುವುದಿಲ್ಲ. ಆಹಾರದಲ್ಲಿ ಸಮತೋಲನ ಇಲ್ಲದಿರುವುದು, ದೈಹಿಕ ಚಟುವಟಿಕೆ ಇಲ್ಲದಾಗಿರುವುದು, ನಿದ್ದೆಗೆಡುವುದು ಮತ್ತು ಆಲಸ್ಯದಿಂದಾಗಿ ಸ್ಥೂಲಕಾಯ ವ್ಯಕ್ತಿಯನ್ನು ಕಾಡುತ್ತದೆ ನಂತರ ರೋಗವಾಗಿ ಮಾರ್ಪಟ್ಟು ಇತರ ರೋಗಗಳಿಗೆ ಆಹ್ವಾನವನ್ನು ನೀಡುತ್ತದೆ. ನೀವು ಎಷ್ಟೇ ದೊಡ್ಡವರಿರಲಿ ಎಷ್ಟೇ ಸಣ್ಣವರಿರಲಿ ಬೊಜ್ಜು ದೇಹಕ್ಕೆ ಮಾರಕವಾಗುವುದು ಅದು ಅತಿರೇಕಕ್ಕೆ ಹೋದಾಗ ಮಾತ್ರ.

ಸ್ಥೂಲಕಾಯ ದೇಹವನ್ನು ಆವರಿಸಿದಾಗ ಸೊಂಟನೋವು, ಕಾಲುನೋವು, ಮೈಕೈನೋವು ಹೀಗೆ ನಿಮ್ಮನ್ನು ಕಾಡದ ನೋವುಗಳು ಆವರಿಸಿಲು ಆರಂಭಗೊಳ್ಳುತ್ತದೆ. ಹೃದಯಕ್ಕೆ ಒತ್ತಡ ಬಿದ್ದು ಹೃದಯಾಘಾತ ಆಗುವ ಸಂಭವ ಕೂಡ ಇದೆ. ದೇಹ ನಿಮ್ಮ ನಿಯಂತ್ರಣಕ್ಕೆ ಸಿಗದೇ ಹೋದಾಗ ದೇಹವು ರೋಗಗಳ ಗೂಡಾಗಿಬಿಡುತ್ತದೆ. ಅದಕ್ಕೆ ಸಮತೋಲಿತ ಡಯೆಟ್ ಅನ್ನು ನೀವು ಪಾಲಿಸಿದರೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯ ಹೆಚ್ಚು ಕಂಡುಬರುತ್ತಿರುವುದು ಎಳೆರಲ್ಲಾಗಿದೆ. ಫಾಸ್ಟ್ ಫುಡ್, ಕರಿದ ತಿಂಡಿಗಳು, ಬೇಕರಿಯ ಸಿಹಿ, ಚಟುವಟಿಕೆ ಇಲ್ಲದಿರುವುದು ಇಂದಿನ ಮಕ್ಕಳಲ್ಲಿ ಹೆಚ್ಚು ಕಂಡುಬರುತ್ತಿರುವುದರಿಂದ ಬೊಜ್ಜು ಸಣ್ಣವರಲ್ಲಿ ರೋಗವಾಗಿ ಮಾರ್ಪಡುತ್ತಿದೆ. ಅಂತೆಯೇ ಸ್ಥೂಲಕಾಯದ ಮಕ್ಕಳು ಸಾಮಾನ್ಯ ಮಕ್ಕಳಿಗಿಂತಲೂ ಭಿನ್ನವಾಗಿರುತ್ತಾರೆ ಮತ್ತು ರೋಗಕ್ಕೆ ಹೆಚ್ಚು ಒಳಗಾಗಿರುತ್ತಾರೆ. ಸ್ಥೂಲಕಾಯ ಮಕ್ಕಳು ರಸ್ತೆದಾಟುವಾಗ ಹೆಚ್ಚು ಅಶಾಂತರಾಗಿರುತ್ತಾರೆ ಅಂತೆಯೇ ಇದು ಇವರಲ್ಲಿ ಅಪಾಯವನ್ನು ತಂದೊಡ್ಡುತ್ತದೆ ಎಂಬುದಾಗಿ ಅಧ್ಯಯನಗಳು ತಿಳಿಸುತ್ತಿವೆ. ಇತರ ಮಕ್ಕಳಿಗೆ ಹೋಲಿಸಿದಾಗ ಇವರ ಆಲೋಚನಾ ಶಕ್ತಿ ಹೆಚ್ಚು ವೇಗವಾಗಿದ್ದು ಸಮಾಧಾನಕರವಾಗಿ ಕಾರ್ಯನಿರ್ವಿಹಿಸಬೇಕು ಎಂಬ ಸಿದ್ಧಾಂತ ಕಡಿಮೆಯಾಗಿರುತ್ತದೆ. ಏನಿದ್ದರೂ ಬೇಗನೇ ಮಾಡಬೇಕು ಎಂಬುದರಿಂದಲೇ ಅವಸರ ಅಪಾಯವನ್ನು ತಂದೊಡ್ಡುತ್ತದೆ.
ರಸ್ತೆಯನ್ನು ದಾಟುವಾಗ ಪಾಲಿಸಬೇಕಾದ ನಿಯಮಗಳಾದ ತಾಳ್ಮೆ, ಚುರುಕುತನ ಮತ್ತು ಜಾಗರೂಕತೆಯ ಕೊರತೆಯನ್ನು ಸ್ಥೂಲಕಾಯ ಮಕ್ಕಳು ಅನುಭವಿಸುತ್ತಾರೆ. ಇನ್ನು ಈ ಅಧ್ಯಯನ ಹೇಳುವಂತೆ ಸ್ಥೂಲಮಕ್ಕಳಲ್ಲಿ ಅವರು ರಸ್ತೆ ದಾಟುವ ಸಂದರ್ಭದಲ್ಲಿ ಅವರ ಸೆಲ್ಡಮ್ ನಿಧಾನವಾಗಿ ಪ್ರತಿಕ್ರಿಯಿಸುತ್ತದೆ ಇದರಿಂದ ಅಜಾಗರೂಕತೆ ಕೊರತೆ ಅವರನ್ನು ಕಾಡುತ್ತದೆ. ಇಂತಹ ಮಕ್ಕಳು ಹೆಚ್ಚು ಬೀಳುವುದು ಎಡುವುದು ಮಾಡುತ್ತಿರುತ್ತಾರೆ. ಅಂತೆಯೇ ಅವರು ವಾಹನ ದಟ್ಟಣೆಯಲ್ಲಿರುವಾಗ ಅವರ ರಸ್ತೆ ದಾಟುವಿಕೆ ಕ್ರಿಯೆಯು ಅವರ ದೇಹ ತೂಕವು ಟ್ರಾಫಿಕ್ಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಆಧರಿಸಿರುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.
ಹೆಚ್ಚುವರಿ ತೂಕವು ವ್ಯಕ್ತಿಯ ಕೀಲುಗಳ ಮೇಲೆ ಒತ್ತಡವನ್ನು ಹೇರುವುದರಿಂದ ಇದು ಸಾಕಷ್ಟು ಅನಾನುಕೂಲವನ್ನು ಉಂಟುಮಾಡುತ್ತದೆ. ಮಗುವಿನ ಆಲೋಚನೆ, ಸಮಯ ಹೊಂದಿಸುವಿಕೆ, ಜ್ಞಾಪಕ ಶಕ್ತಿ, ಸಂಘಟಿಸುವ ಕೌಶಲ್ಯಗಳು ಮತ್ತು ಯೋಜಿಸುವುದರ ಮೇಲೆ ಸ್ಥೂಲಕಾಯ ಪರಿಣಾಮ ಬೀರುತ್ತದೆ. 200 ಮಕ್ಕಳ ಮೇಲೆ ಅಧ್ಯಯನವನ್ನು ಕೈಗೊಳ್ಳಲಾಗಿದ್ದು ರಸ್ತೆ ದಾಟುವ ಸಂದರ್ಭದಲ್ಲಿ ಇವರು ಹಠಾತ್ ಆಗಿ ಕಾರ್ಯಪ್ರವೃತ್ತರಾಗುತ್ತಾರೆ ಎಂಬುದು ತಿಳಿದು ಬಂದಿದೆ.
ಆದ್ದರಿಂದ ಸ್ಥೂಲಕಾಯ ಮಕ್ಕಳನ್ನು ಹೊಂದಿರುವ ಪೋಷಕರು ಈ ವಿಷಯದ ಮೇಲೂ ಹೆಚ್ಚು ಗಮನ ನೀಡಬೇಕಾಗುತ್ತದೆ. ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಮಕ್ಕಳ ಆಲೋಚನೆ ಮತ್ತು ನಿರ್ಧರಿಸುವ ಶಕ್ತಿಯ ಮೇಲೂ ಬೊಜ್ಜು ಋಣಾತ್ಮಕ ಪ್ರಭಾವವನ್ನು ಬೀರುತ್ತದೆ. ಆದ್ದರಿಂದ ನಿಮ್ಮ ಮಕ್ಕಳು ಆರೋಗ್ಯಕರ ಆಹಾರವನ್ನು ಸೇವಿಸುವಂತೆ ನೋಡಿಕೊಂಡು ನಿಯಮಿತ ವ್ಯಾಯಾಮವನ್ನು ಮಾಡಿಸಿ ಸ್ಥೂಲಕಾಯವೆಂಬ ಭೂತದಿಂದ ಅವರನ್ನು ರಕ್ಷಿಸಿ.



Click it and Unblock the Notifications















