Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ಮಕ್ಕಳಿಗೆ ಆಟ-ಪಾಠದ ಜೊತೆಗೆ ತಾಳ್ಮೆ ಕೂಡ ಅತ್ಯಗತ್ಯ
ನಿಮ್ಮ ಮಕ್ಕಳಿಗೆ ತಾಳ್ಮೆಯನ್ನು ಕಲಿಸುವುದು ತುಂಬಾ ಮುಖ್ಯವಾದ ಕೆಲಸ. ಆದರೆ ಏಕೆ? ಎಂಬುದು ನಿಮ್ಮ ಪ್ರಶ್ನೆಯೇ? ಹೌದು, ನಾಳೆ ನಿಮ್ಮ ಮಗು ಸಮಾಜದಲ್ಲಿ ವಿವಿಧ ಸಮುದಾಯದ, ವಿವಿಧ ಮನಃಸ್ಥಿತಿಯ ಮತ್ತು ವಿವಿಧ ಜೀವನಶೈಲಿಗಳನ್ನು ಹೊಂದಿರುವ ಜನರ ಜೊತೆಗೆ ಬಾಳಬೇಕು ಮತ್ತು ಬೆರೆಯಬೇಕಾಗುತ್ತದೆ. ಆಗ ನಿಮ್ಮ ಮಗುವಿಗೆ ತಾಳ್ಮೆ ಮತ್ತು ಸಹಿಷ್ಣುತೆ ಎಂಬ ಗುಣಗಳು ನಿಜಕ್ಕೂ ಅವರಿಗೆ ಮುಂದೆ ಸಹಾಯಕ್ಕೆ ಬರುತ್ತವೆ.
ಏಕೆಂದರೆ ನಿಮ್ಮ ಮಗುವಿಗೆ ತಾಳ್ಮೆ ಎನ್ನುವುದು ಇದ್ದಲ್ಲಿ, ಅವರು ಎಂತಹ ಕಠಿಣ ಪರಿಸ್ಥಿತಿಗಳಲ್ಲಿಯೂ ಸಹ ಗೆದ್ದು ಹೊರ ಬರಬಲ್ಲರು. ಜೊತೆಗೆ ತಾಳ್ಮೆಯು ಅವರಿಗೆ ಹೊಸ ವಿಚಾರಗಳನ್ನು ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ. ತಾಳ್ಮೆಯೊಂದಿದ್ದರೆ, ನಿಮ್ಮ ಮಕ್ಕಳು ತರಗತಿಯ ಹೊರಗೆ ಸಹ ಮಕ್ಕಳು ಕೆಲವು ವಿಚಾರಗಳನ್ನು ಕಲಿಯುತ್ತಾರೆ. ತಾಳ್ಮೆಯು ಮಕ್ಕಳಿಗೆ ತೀರಾ ಅವಶ್ಯಕ, ತಾಳ್ಮೆಯಿರುವ ಮಕ್ಕಳು ಜೀವನದಲ್ಲಿ ಉತ್ತಮ ಏಳಿಗೆಯನ್ನು ಕಾಣುತ್ತಾರೆ. ಬನ್ನಿ ಈ ತಾಳ್ಮೆಯನ್ನು ಮಕ್ಕಳಿಗೆ ಹೇಗೆ ಕಲಿಸುವುದು ಎಂದು ತಿಳಿಯೋಣ....

ನಿಮ್ಮ ಮಗುವಿಗೆ ರೋಲ್ ಮಾಡೆಲ್ ಆಗಿರಿ
ಮಕ್ಕಳು ತಮ್ಮ ಪೋಷಕರನ್ನು ಮೊದಲು ಅನುಕರಿಸುತ್ತವೆ. ಆದ್ದರಿಂದ ಅವರಿಗೆ ಮೊದಲು ನೀವು ತಾಳ್ಮೆಯನ್ನು ತಿಳಿಸಿಕೊಡಿ. ನಿಮ್ಮ ನಡೆ ನುಡಿ ಮುಂತಾದವುಗಳಿಂದ ಅವರಿಗೆ ತಾಳ್ಮೆ ಎಂದರೆ ಏನು ಎಂದು ಮನವರಿಕೆ ಮಾಡಿಕೊಡಿ. ಅದನ್ನು ನೋಡಿ ಅವರು ಸಹ ಕಲಿಯುತ್ತಾರೆ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?
ಪ್ರಭಾವ
ಒಳ್ಳೆಯ ಸಂಗೀತ, ಚಲನಚಿತ್ರಗಳು, ಪುಸ್ತಕಗಳು ಅಥವಾ ಕಲೆಯು ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಇವು ಅವರ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರದಂತೆ ಕಾಪಾಡುತ್ತವೆ. ಯಾವಾಗ ನೀವು ನಿಮ್ಮ ಮಕ್ಕಳ ಮೇಲೆ ಸರಿಯಾದ ವಿಚಾರಗಳ ಪ್ರಭಾವ ಬೀರುವಂತೆ ಮಾಡುತ್ತೀರೋ, ಆಗ ಅವರು ಸರಿಯಾದ ದಾರಿಯಲ್ಲಿಯೇ ನಡೆಯುತ್ತಾರೆ.
ಹಕ್ಕುತ್ಯಾಗ
ತಾಳ್ಮೆಯಿಂದ ಇರುವುದು ಎಂದರೆ ನಿಮ್ಮ ಮಕ್ಕಳಿಗೆ ಇತರರು ತೊಂದರೆ ಮಾಡಿದಾಗ ಸುಮ್ಮನಿರುವುದು ಎಂದರ್ಥವಲ್ಲ. ತಾಳ್ಮೆ ಮತ್ತು ತಮ್ಮ ಸ್ವಾಭಿಮಾನ ರಕ್ಷಣೆಗೆ ಬೇಕಾದ ಅತ್ಯಗತ್ಯ ಅಂಶಗಳನ್ನು ಅವರಿಗೆ ತಿಳಿಸಿ. ತಾಳ್ಮೆಯಿರಲಿ, ಜೊತೆಗೆ ಸಾತ್ವಿಕ ಕೋಪವು ಇರಲಿ.
ಅನುಮತಿಸಿ
ನಿಮ್ಮ ಮಕ್ಕಳನ್ನು ಅಕ್ಕಪಕ್ಕದ ಮಕ್ಕಳ ಜೊತೆಗೆ ಬೆರೆಯಲು ಬಿಡಿ, ಇದರಿಂದ ಅವರಿಗೆ ತಾಳ್ಮೆ ಎಂಬುದರ ಪ್ರಾಯೋಗಿಕ ಚಿತ್ರಣ ದೊರೆಯುತ್ತದೆ.



Click it and Unblock the Notifications











