Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!
ಈ ಶೀರ್ಷಿಕೆಯನ್ನು ಓದಿದ ತಕ್ಷಣ ಮಕ್ಕಳಿಗೆ ಎಂಥಹ ಚಿಂತೆಗಳು ಇರುತ್ತವೆ. ಅವರೇನು ದುಡಿಯಬೇಕೆ? ಇಲ್ಲವೇ ಮನೆ-ಸಂಸಾರ ಸಾಗಿಸಬೇಕೇ ಎಂಬ ಆಲೋಚನೆ ನಿಮಗೆ ಬರಬಹುದು. ನಿಮ್ಮ ತರ್ಕ ಸರಿಯಿರಬಹುದು. ಆದರೆ ಒಂದು ಚಿಂತೆಗೆ ಸಿಕ್ಕಿಹಾಕಿಕೊಂಡಿರುವ ಮಗುವಿಗು ಸಹ ಒಂದು ಕಾಳಜಿಯ ಅಗತ್ಯವಿರುತ್ತದೆ.
ಮಕ್ಕಳಿಗೆ ಚಿಂತೆಗಳೇ ಬರುವುದಿಲ್ಲ ಎಂಬ ಮಾತು ಸುಳ್ಳು, ಅವರಿಗು ಸಹ ಅವರದೇ ಆದ ಚಿಂತೆಗಳು ಇರುತ್ತವೆ, ಅದಕ್ಕೆ ನಿಮ್ಮ ಸಹಾಯ ಅವರಿಗೆ ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ಸಾಮಾನ್ಯವಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ, ಅವರ ಓದು, ಮನೆಕೆಲಸ, ಪರೀಕ್ಷೆಗಳು, ಜೊತೆಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಅವರಿಗೆ ಹಿಡಿಸದ ಕೆಲವೊಂದು ಸನ್ನಿವೇಶಗಳು ಅವರನ್ನು ಚಿಂತೆ ಮಾಡುವಂತೆ ಪ್ರೇರೇಪಿಸುತ್ತವೆ. ಒಂದು ವೇಳೆ ಮಗುವೊಂದು ಚಿಂತೆ ಮಾಡಲು ಆರಂಭಿಸಿದರೆ, ಅದಕ್ಕೆ ಇರುವ ಕಾರಣದ ಕುರಿತು ಮೊದಲು ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ನಿಮ್ಮ ಮಗು ಯಾವಾಗ ಹೆಚ್ಚು ಚಿಂತೆ ಮಾಡುತ್ತದೆಯೋ, ಆಗ ಅದಕ್ಕೆ ಸಹಾಯ ಮಾಡಲು ಕೆಲವೊಂದು ನಿರ್ದಿಷ್ಟ ಕ್ರಮಗಳು ಇರುತ್ತವೆ. ಬನ್ನಿ ಅದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಹಂತಗಳನ್ನು ಈ ಕೆಳಗೆ ನೀಡಿದ್ದೇವೆ ಮುಂದೆ ಓದಿ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಕಾರಣ
ಮಕ್ಕಳು ಸಾಮಾನ್ಯವಾಗಿ ತಾವು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ ಅಥವಾ ತಮ್ಮ ಸ್ನೇಹಿತರನ್ನು ಶಾಲೆಯಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಸಹ ಅವರಿಗೆ ಚಿಂತೆಯ ವಿಚಾರವಾಗಿರುತ್ತದೆ. ತರಗತಿಯಲ್ಲಿರುವ ತರ್ಲೆ ಮಕ್ಕಳು, ತಾವು ಅನುಭವಿಸುವ ಸೋಲುಗಳು ಮತ್ತು ಇತರರ ಎದುರು ಅನುಭವಿಸುವ ಅವಮಾನಗಳು ಮಕ್ಕಳನ್ನು ಚಿಂತೆಗೆ ತಳ್ಳಿ ಬಿಡುತ್ತವೆ. ಪೋಷಕರಾಗಿ ನೀವು ಈ ಕಾರಣಗಳನ್ನು ಆದಷ್ಟು ಶೀಘ್ರವಾಗಿ ಹುಡುಕಬೇಕು.
ಅವರ ಮಾತನ್ನು ಕೇಳಿ
ಕಾಳಜಿ ತೋರಿಸಿ
ಯಾವಾಗ ನೀವು ಪರಿಪೂರ್ಣವಾಗಿ ಆಸಕ್ತಿಯನ್ನು ತೋರಿಸುತ್ತೀರೋ, ಆಗ ಮಗುವಿಗೆ ಸಂತೋಷ ಸಿಗುತ್ತದೆ. ಜೊತೆಗೆ ತನ್ನ ಬೆಂಬಲಕ್ಕೆ ನೀವಿದ್ದೀರಿ ಎಂಬ ಮನೋಭಾವ ಅವರಲ್ಲಿ ಬೆಳೆಯುತ್ತದೆ. ನಿಮ್ಮ ಮಗುವಿನ ಸಮಸ್ಯೆಯನ್ನು ಪೂರ್ತಿಯಾಗಿ ಕೇಳಿದ ನಂತರ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ. ಹದಿಹರೆಯದ ಪ್ರಾಯದ ಮಕ್ಕಳ ಬಗ್ಗೆ ಎಚ್ಚರ!
ತಿಳುವಳಿಕೆಯನ್ನು ನೀಡಿ
ಧನಾತ್ಮಕ ಮನೋಭಾವವನ್ನು ತಿಳಿಸಿ



Click it and Unblock the Notifications



