Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಕಾಲ ಬದಲಾಗಿದೆ ನೋಡಿ, ಮಕ್ಕಳಿಗೂ ಚಿಂತೆ ತಪ್ಪಿದ್ದಲ್ಲ!
ಈ ಶೀರ್ಷಿಕೆಯನ್ನು ಓದಿದ ತಕ್ಷಣ ಮಕ್ಕಳಿಗೆ ಎಂಥಹ ಚಿಂತೆಗಳು ಇರುತ್ತವೆ. ಅವರೇನು ದುಡಿಯಬೇಕೆ? ಇಲ್ಲವೇ ಮನೆ-ಸಂಸಾರ ಸಾಗಿಸಬೇಕೇ ಎಂಬ ಆಲೋಚನೆ ನಿಮಗೆ ಬರಬಹುದು. ನಿಮ್ಮ ತರ್ಕ ಸರಿಯಿರಬಹುದು. ಆದರೆ ಒಂದು ಚಿಂತೆಗೆ ಸಿಕ್ಕಿಹಾಕಿಕೊಂಡಿರುವ ಮಗುವಿಗು ಸಹ ಒಂದು ಕಾಳಜಿಯ ಅಗತ್ಯವಿರುತ್ತದೆ.
ಮಕ್ಕಳಿಗೆ ಚಿಂತೆಗಳೇ ಬರುವುದಿಲ್ಲ ಎಂಬ ಮಾತು ಸುಳ್ಳು, ಅವರಿಗು ಸಹ ಅವರದೇ ಆದ ಚಿಂತೆಗಳು ಇರುತ್ತವೆ, ಅದಕ್ಕೆ ನಿಮ್ಮ ಸಹಾಯ ಅವರಿಗೆ ಅಗತ್ಯವಿರುತ್ತದೆ ಎಂಬುದನ್ನು ಮರೆಯಬೇಡಿ. ಸಾಮಾನ್ಯವಾಗಿ ಮಕ್ಕಳು ತಮ್ಮ ವಿದ್ಯಾಭ್ಯಾಸದ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ, ಅವರ ಓದು, ಮನೆಕೆಲಸ, ಪರೀಕ್ಷೆಗಳು, ಜೊತೆಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಅವರಿಗೆ ಹಿಡಿಸದ ಕೆಲವೊಂದು ಸನ್ನಿವೇಶಗಳು ಅವರನ್ನು ಚಿಂತೆ ಮಾಡುವಂತೆ ಪ್ರೇರೇಪಿಸುತ್ತವೆ. ಒಂದು ವೇಳೆ ಮಗುವೊಂದು ಚಿಂತೆ ಮಾಡಲು ಆರಂಭಿಸಿದರೆ, ಅದಕ್ಕೆ ಇರುವ ಕಾರಣದ ಕುರಿತು ಮೊದಲು ನೀವು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ನಿಮ್ಮ ಮಗು ಯಾವಾಗ ಹೆಚ್ಚು ಚಿಂತೆ ಮಾಡುತ್ತದೆಯೋ, ಆಗ ಅದಕ್ಕೆ ಸಹಾಯ ಮಾಡಲು ಕೆಲವೊಂದು ನಿರ್ದಿಷ್ಟ ಕ್ರಮಗಳು ಇರುತ್ತವೆ. ಬನ್ನಿ ಅದನ್ನು ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ. ಆ ಹಂತಗಳನ್ನು ಈ ಕೆಳಗೆ ನೀಡಿದ್ದೇವೆ ಮುಂದೆ ಓದಿ. ಆಧುನಿಕ ತಂತ್ರಜ್ಞಾನ ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದೆಯೇ?

ಕಾರಣ
ಮಕ್ಕಳು ಸಾಮಾನ್ಯವಾಗಿ ತಾವು ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳ ಕುರಿತಾಗಿ ಹೆಚ್ಚು ಚಿಂತೆ ಮಾಡುತ್ತಾರೆ ಅಥವಾ ತಮ್ಮ ಸ್ನೇಹಿತರನ್ನು ಶಾಲೆಯಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಸಹ ಅವರಿಗೆ ಚಿಂತೆಯ ವಿಚಾರವಾಗಿರುತ್ತದೆ. ತರಗತಿಯಲ್ಲಿರುವ ತರ್ಲೆ ಮಕ್ಕಳು, ತಾವು ಅನುಭವಿಸುವ ಸೋಲುಗಳು ಮತ್ತು ಇತರರ ಎದುರು ಅನುಭವಿಸುವ ಅವಮಾನಗಳು ಮಕ್ಕಳನ್ನು ಚಿಂತೆಗೆ ತಳ್ಳಿ ಬಿಡುತ್ತವೆ. ಪೋಷಕರಾಗಿ ನೀವು ಈ ಕಾರಣಗಳನ್ನು ಆದಷ್ಟು ಶೀಘ್ರವಾಗಿ ಹುಡುಕಬೇಕು.
ಅವರ ಮಾತನ್ನು ಕೇಳಿ
ಕಾಳಜಿ ತೋರಿಸಿ
ಯಾವಾಗ ನೀವು ಪರಿಪೂರ್ಣವಾಗಿ ಆಸಕ್ತಿಯನ್ನು ತೋರಿಸುತ್ತೀರೋ, ಆಗ ಮಗುವಿಗೆ ಸಂತೋಷ ಸಿಗುತ್ತದೆ. ಜೊತೆಗೆ ತನ್ನ ಬೆಂಬಲಕ್ಕೆ ನೀವಿದ್ದೀರಿ ಎಂಬ ಮನೋಭಾವ ಅವರಲ್ಲಿ ಬೆಳೆಯುತ್ತದೆ. ನಿಮ್ಮ ಮಗುವಿನ ಸಮಸ್ಯೆಯನ್ನು ಪೂರ್ತಿಯಾಗಿ ಕೇಳಿದ ನಂತರ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸಿ. ಹದಿಹರೆಯದ ಪ್ರಾಯದ ಮಕ್ಕಳ ಬಗ್ಗೆ ಎಚ್ಚರ!
ತಿಳುವಳಿಕೆಯನ್ನು ನೀಡಿ
ಧನಾತ್ಮಕ ಮನೋಭಾವವನ್ನು ತಿಳಿಸಿ



Click it and Unblock the Notifications


