Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಅಧಿಕ ಮಾರ್ಕ್ಸ್ ಬಂದರೆ ಮಾತ್ರ ಉತ್ತಮ ಭವಿಷ್ಯವೇ?

ಪ್ರತೀವರ್ಷ ಫಲಿತಾಂಶ ಬಂದಾಗ ಪಾಸ್ ಆಗಲಿಲ್ಲವೆಂದೂ, ಯೋಚಿಸಿದಷ್ಟು ಮಾರ್ಕ್ಸ್ ಬಂದಿಲ್ಲವೆಂದೋ ಪ್ರಾಣಕ್ಕೆ ಅಪಾಯ ತಂದುಕೊಳ್ಳುವ ಕೆಲವು ಮಕ್ಕಳನ್ನು ನೋಡುತ್ತೇವೆ. ಆದ್ದರಿಂದ ಇವತ್ತು ಪೋಷಕರು ತಮ್ಮ ಮಕ್ಕಳ ಕಡೆ ಸ್ವಲ್ಪ ಹೆಚ್ಚಿನ ಗಮನ ಕೊಡುವುದು ಒಳ್ಳೆಯದು. ಪೋಷಕರು ಅಷ್ಟೇ ಮಕ್ಕಳಿಗೆ ಒಳ್ಳೆಯ ಮಾರ್ಕ್ಸ್ ಬರದಿದ್ದರೆ ಅವರನ್ನು ಬೈಯ್ಯುವುದು, ಹೊಡೆಯುವುದು ಮಾಡದಿರುವುದು ಒಳ್ಳೆಯದು. ಒಳ್ಳೆಯ ಅಂಕ ದೊರೆಯಲಿಲ್ಲವೆಂದು ಮಕ್ಕಳು ಮಾನಸಿಕವಾಗಿ ನೊಂದಿರುತ್ತಾರೆ, ಇದರ ಜೊತೆಗೆ ಪೋಷಕರ ವಾಕ್ ಪ್ರಹಾರವನ್ನು ಸಹಿಸಿಕೊಳ್ಳಲು ಆ ಮನಸ್ಸು ಸಿದ್ಧವಿರುವುದಿಲ್ಲ. ಒಳಿತು-ಕೆಡುಕಗಳ ಬಗ್ಗೆ ಯೋಚನೆ ಮಾಡುವ ಬುದ್ದಿಯೂ ಈ ಹದಿಹರೆಯದ ಪ್ರಾಯದ ಮಕ್ಕಳಲ್ಲಿ ಇರುವುದಿಲ್ಲ.
ತುಂಬಾ ಫೀಸ್ ತೆತ್ತು, ಮಕ್ಕಳಿಗೆ ಏನು ಬೇಕೋ ಅದನ್ನೆಲ್ಲಾ ತೆಗೆದುಕೊಟ್ಟು ಓದಲು ಕಳುಹಿಸಿರುತ್ತೀರಿ. ನಿಮ್ಮ ಮಕ್ಕಳು ಒಳ್ಳೆಯ ಅಂಕ ತೆಗೆಯಬೇಕೆಂಬ ಆಸೆ ಪೋಷಕರಲ್ಲಿರುವುದು ಸಹಜ. ಆದರೆ ಮಕ್ಕಳು ಒಳ್ಳೆಯ ಅಂಕ ತೆಗೆಯದಿದ್ದರೆ ಅದಕ್ಕಾಗಿ ದುಃಖಿಸಿಕೊಂಡು ಕೂರುವ ಬದಲು, ಅವರ ಆಸಕ್ತಿ ತಿಳಿದು, ಅವರನ್ನು ಪ್ರೋತ್ಸಾಹಿಸುವುದು ಒಳ್ಳೆಯದು.
ಉತ್ತಮ ಅಂಕ ತೆಗೆದರೆ ಮಾತ್ರ ಒಳ್ಳೆಯ ಹುದ್ದೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಒಳ್ಳೆಯ ಕಮ್ಯೂನಿಕೇಷನ್ ಸ್ಕಿಲ್, ತಾಂತ್ರಿಕ ಕೌಶಲ್ಯ, ಪ್ರತಿಭೆಯಿದ್ದರೆ, ಬದುಕುವ ಛಲವಿದ್ದರೆ ಕೆಲಸ ಸಿಗುವುದು ಕಷ್ಟವೇನಲ್ಲ, ಆದ್ದರಿಂದ ಅದರತ್ತ ಮಕ್ಕಳನ್ನು ತಯಾರು ಮಾಡಿ. ಆದ್ದರಿಂದ ಮಾರ್ಕ್ಸ್ ಹೆಚ್ಚು ತೆಗೆದಿಲ್ಲ ಅಂತ ಬೈಯಲು ಹೋಗಬೇಡಿ, ಈಗ ಬೈಯುವುದರಿಂದ ನಿಮ್ಮ ಮಗನ/ಮಗಳ ಅಂಕವೇನು ಹೆಚ್ಚುವುದಿಲ್ಲ, ನೆನಪಿರಲಿ.



Click it and Unblock the Notifications