Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಪೋಷಕರ ಕೋಪ ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವುದು

1. ಮಕ್ಕಳು ರಸ್ತೆಯಲ್ಲಿ ಓಡುವಾಗ, ಬೆಂಕಿ ಅಥವಾ ನೀರಿನಲ್ಲಿ ಆಡುವಾಗ ಜೋರು ಮಾಡಬೇಕು. ಏಕೆಂದರೆ ಈ ಸಂದರ್ಭದಲ್ಲಿ ಮೃದುವಾಗಿ ಹೇಳಿದರೆ ಮಕ್ಕಳು ಮಾತು ಕೇಳಿಸುವುದಿಲ್ಲ. ನಂತರ ಮಕ್ಕಳನ್ನು ಕರೆದು ಮೃದುವಾಗಿ ಅವರ ಹತ್ತಿರ ತಪ್ಪು ಕೇಳಿ ರಸ್ತೆಯಲ್ಲಿ ಜೋರಾಗಿ ಓಡಿದರೆ ಅಪಘಾತವಾಗುವುದು, ಗಾಯವಾಗುತ್ತದೆ ಎಂದು ಪ್ರೀತಿಯಿಂದ ಹೇಳಿ. ಮುಂದಕ್ಕೆ ಮಕ್ಕಳು ಕೂಡ ಆ ತಪ್ಪು ಮಾಡದಂತೆ ಎಚ್ಚರಿಕೆ ವಹಿಸಿ.
2. ಮಕ್ಕಳ ಸಣ್ಣ-ಪುಟ್ಟ ತಪ್ಪುಗಳಿಗೆ ಕೋಪಗೊಂಡು ಕಿರುಚಾಡಬಾರದು. ಏಕೆಂದರೆ ನಿಮ್ಮ ಈ ರೀತಿಯ ನಡುವಳಿಕೆ ಮಕ್ಕಳು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ತಡೆಯುತ್ತದೆ. ಎಲ್ಲಾ ಸಮಯದಲ್ಲಿ ಬೈಯ್ಯುತ್ತಿದ್ದರೆ ಮಕ್ಕಳು ನಿಮ್ಮ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ನಡುವಳಿಕೆ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು.
ಮಕ್ಕಳು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ದೋಷ ಹುಡುಕಬಾರದು. ಸಣ್ಣ ವಿಷಯಕ್ಕೆ ನಿಮಗೆ ಕೋಪ ಬರುವುದಾದರೆ ಕೋಪ ಬಂದಾಗ ಸ್ವಲ್ಪ ದೂರ ನಡೆಯಿರಿ, ಕೋಪ ತಣ್ಣಗೆ ಆದ ಮೇಲೆ ಮಕ್ಕನ್ನು ಕರೆದು ಪ್ರೀತಿಯಿಂದ ಅವರ ತಪ್ಪುಗಳಿಗೆ ತಿಳಿ ಹೇಳಬೇಕು. ಇಲ್ಲಿ ನೀವು ತೋರಿಸುವ ಕೋಪಕ್ಕಿಂತ ಪ್ರೀತಿ ನಿಮ್ಮ ಮಕ್ಕಳ ನಡುವಳಿಕೆಯನ್ನು ಸರಿಪಡಿಸುವಲ್ಲಿ ಪರಿಣಾಮಕಾರಿಯಾದ ಅಸ್ತ್ರವಾಗಿದೆ.
3. ಮಕ್ಕಳ ನಡುವಳಿಕೆಯನ್ನು ತಿದ್ದುವಾಗ ಕಿರುಚಾಡಿ ಹೇಳುವ ಬದಲು ಗಡಸಾಗಿ ಹೇಳಿ. ಉದಾಹರಣೆಗೆ ಮಗು ಗೊಂಬೆಯನ್ನು ಎಸೆದರೆ ಅದು ಅವರ ಹತ್ತಿರ ತೆಗೆದು ಇಡಲು ಹೇಳಬೇಕು. ಸಹಪಾಠಿಯ ವಸ್ತುಗಳನ್ನು ಎತ್ತಿಕೊಂಡು ಬಂದಿದ್ದರೆ ಅದನ್ನು ವಾಪಸ್ಸು ಮಾಡಲು ಹೇಳಬೇಕು.
4. ಹೋಲಿಕೆ ಬೇಡ: ಅನೇಕ ಪೋಷಕರು ಮಾಡುವ ದೊಡ್ಡ ತಪ್ಪು ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡುವುದು. ನಿನಗಿಂತ ಅವನು ಬುದ್ಧಿವಂತ ಈ ಎಲ್ಲಾ ಮಾತುಗಳು ಮಕ್ಕಳ ಆತ್ಮವಿಶ್ವಾಸವನ್ನು ಮತ್ತಷ್ಟು ಕಡಿಮೆ ಮಾಡುವುದು.
ನೆನಪಿಡಿ:ಮಕ್ಕಳನ್ನು ತುಂಬಾ ಹೊಡೆದರೆ ಅಥವಾ ಅಳಿಸಿದರೆ ಅವರಲ್ಲಿ ಆತ್ಮವಿಶ್ವಾಸ ಕುಗ್ಗುವುದು ಅಥವಾ ನಕರಾತ್ಮಕ ಗುಣಗಳು ಹೆಚ್ಚಾಗುವುದು. ಆದ್ದರಿಂದ ಮಕ್ಕಳೊಂದಿಗೆ ದರ್ಪದ ಬದಲು ಸ್ನೇಹಿತರಂತೆ ವರ್ತಿಸುವುದು ಜಾಣತನ.



Click it and Unblock the Notifications











