Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಪೋಷಕರ ಕೋಪ ಮಕ್ಕಳ ಆತ್ಮವಿಶ್ವಾಸ ಕುಗ್ಗಿಸುವುದು

1. ಮಕ್ಕಳು ರಸ್ತೆಯಲ್ಲಿ ಓಡುವಾಗ, ಬೆಂಕಿ ಅಥವಾ ನೀರಿನಲ್ಲಿ ಆಡುವಾಗ ಜೋರು ಮಾಡಬೇಕು. ಏಕೆಂದರೆ ಈ ಸಂದರ್ಭದಲ್ಲಿ ಮೃದುವಾಗಿ ಹೇಳಿದರೆ ಮಕ್ಕಳು ಮಾತು ಕೇಳಿಸುವುದಿಲ್ಲ. ನಂತರ ಮಕ್ಕಳನ್ನು ಕರೆದು ಮೃದುವಾಗಿ ಅವರ ಹತ್ತಿರ ತಪ್ಪು ಕೇಳಿ ರಸ್ತೆಯಲ್ಲಿ ಜೋರಾಗಿ ಓಡಿದರೆ ಅಪಘಾತವಾಗುವುದು, ಗಾಯವಾಗುತ್ತದೆ ಎಂದು ಪ್ರೀತಿಯಿಂದ ಹೇಳಿ. ಮುಂದಕ್ಕೆ ಮಕ್ಕಳು ಕೂಡ ಆ ತಪ್ಪು ಮಾಡದಂತೆ ಎಚ್ಚರಿಕೆ ವಹಿಸಿ.
2. ಮಕ್ಕಳ ಸಣ್ಣ-ಪುಟ್ಟ ತಪ್ಪುಗಳಿಗೆ ಕೋಪಗೊಂಡು ಕಿರುಚಾಡಬಾರದು. ಏಕೆಂದರೆ ನಿಮ್ಮ ಈ ರೀತಿಯ ನಡುವಳಿಕೆ ಮಕ್ಕಳು ನಿಮ್ಮೊಂದಿಗೆ ಮುಕ್ತವಾಗಿ ಮಾತನಾಡಲು ತಡೆಯುತ್ತದೆ. ಎಲ್ಲಾ ಸಮಯದಲ್ಲಿ ಬೈಯ್ಯುತ್ತಿದ್ದರೆ ಮಕ್ಕಳು ನಿಮ್ಮ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ನಡುವಳಿಕೆ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು.
ಮಕ್ಕಳು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ದೋಷ ಹುಡುಕಬಾರದು. ಸಣ್ಣ ವಿಷಯಕ್ಕೆ ನಿಮಗೆ ಕೋಪ ಬರುವುದಾದರೆ ಕೋಪ ಬಂದಾಗ ಸ್ವಲ್ಪ ದೂರ ನಡೆಯಿರಿ, ಕೋಪ ತಣ್ಣಗೆ ಆದ ಮೇಲೆ ಮಕ್ಕನ್ನು ಕರೆದು ಪ್ರೀತಿಯಿಂದ ಅವರ ತಪ್ಪುಗಳಿಗೆ ತಿಳಿ ಹೇಳಬೇಕು. ಇಲ್ಲಿ ನೀವು ತೋರಿಸುವ ಕೋಪಕ್ಕಿಂತ ಪ್ರೀತಿ ನಿಮ್ಮ ಮಕ್ಕಳ ನಡುವಳಿಕೆಯನ್ನು ಸರಿಪಡಿಸುವಲ್ಲಿ ಪರಿಣಾಮಕಾರಿಯಾದ ಅಸ್ತ್ರವಾಗಿದೆ.
3. ಮಕ್ಕಳ ನಡುವಳಿಕೆಯನ್ನು ತಿದ್ದುವಾಗ ಕಿರುಚಾಡಿ ಹೇಳುವ ಬದಲು ಗಡಸಾಗಿ ಹೇಳಿ. ಉದಾಹರಣೆಗೆ ಮಗು ಗೊಂಬೆಯನ್ನು ಎಸೆದರೆ ಅದು ಅವರ ಹತ್ತಿರ ತೆಗೆದು ಇಡಲು ಹೇಳಬೇಕು. ಸಹಪಾಠಿಯ ವಸ್ತುಗಳನ್ನು ಎತ್ತಿಕೊಂಡು ಬಂದಿದ್ದರೆ ಅದನ್ನು ವಾಪಸ್ಸು ಮಾಡಲು ಹೇಳಬೇಕು.
4. ಹೋಲಿಕೆ ಬೇಡ: ಅನೇಕ ಪೋಷಕರು ಮಾಡುವ ದೊಡ್ಡ ತಪ್ಪು ಮಕ್ಕಳನ್ನು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡುವುದು. ನಿನಗಿಂತ ಅವನು ಬುದ್ಧಿವಂತ ಈ ಎಲ್ಲಾ ಮಾತುಗಳು ಮಕ್ಕಳ ಆತ್ಮವಿಶ್ವಾಸವನ್ನು ಮತ್ತಷ್ಟು ಕಡಿಮೆ ಮಾಡುವುದು.
ನೆನಪಿಡಿ:ಮಕ್ಕಳನ್ನು ತುಂಬಾ ಹೊಡೆದರೆ ಅಥವಾ ಅಳಿಸಿದರೆ ಅವರಲ್ಲಿ ಆತ್ಮವಿಶ್ವಾಸ ಕುಗ್ಗುವುದು ಅಥವಾ ನಕರಾತ್ಮಕ ಗುಣಗಳು ಹೆಚ್ಚಾಗುವುದು. ಆದ್ದರಿಂದ ಮಕ್ಕಳೊಂದಿಗೆ ದರ್ಪದ ಬದಲು ಸ್ನೇಹಿತರಂತೆ ವರ್ತಿಸುವುದು ಜಾಣತನ.



Click it and Unblock the Notifications