Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಈ ರಾಶಿಯವರು ಅತಿಯಾದ ಮೂಢನಂಬಿಕೆ ಹೊಂದಿರುತ್ತಾರೆ!
ಹಿಂದಿನ ಕಾಲದಲ್ಲಿ ಜನ ಮೂಢನಂಬಿಕೆಗೆ ಮರುಳಾಗಿ ಹೋಗಿದ್ದರು. ಮೌಢ್ಯತೆಯೇ ತುಂಬಿದ್ದ ಕಾಲವದು. ಆಗ ಜನರನ್ನು ಸಲಭವಾಗಿ ನಂಬಿಸಿ ಕತ್ತು ಕುಯ್ಯಲಾಗುತ್ತಿತ್ತು. ಆದರೆ ಶಿಕ್ಷಣ ಪಡೆದಂತೆ ಎಲ್ಲವೂ ನಿಧಾನವಾಗಿ ಬದಲಾಗುತ್ತಾ ಹೋಯಿತು. ಜನ ಮೂಢ ನಂಬಿಕೆಯಿಂದ ಹೊರ ಬಂದು ಈಗಿನ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳೋದಕ್ಕೆ ಶುರು ಮಾಡಿದ್ದಾರೆ.
ಆದರೆ ಇಂದಿಗೂ ಕೂಡ ಈ ಮಾರ್ಡನ್ ಯುಗದಲ್ಲಿ ಕೆಲ ಜನರು ಜನ ಮೂಢ ನಂಬಿಕೆಯನ್ನು ಆಳವಾಗಿ ನಂಬಿಕೊಂಡಿದ್ದಾರೆ. ಪ್ರತಿಯೊಂದು ಕೆಲಸ ಮಾಡುವಾಗಲೂ ಕೂಡ ಅವರು ಅಂತಹ ನಂಬಿಕಗೆ ಮರುಳಾಗಿ ಅದನ್ನೇ ನಂಬಿಕೊಂಡಿರುತ್ತಾರೆ. ಅದ್ರಲ್ಲೂ ಕೆಲ ರಾಶಿಯವರು ಈ ಬಗ್ಗೆ ಹೆಚ್ಚಿನ ನಂಬಿಕೆಯನ್ನು ಹೊಂದಿದ್ದಾರೆ. ಹಾಗಾದ್ರೆ ಆ ರಾಶಿಯವರು ಯಾರು ಅನ್ನೋದನ್ನು ನೋಡೋಣ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಕೆಲವೊಂದು ವಿಚಾರಗಳನ್ನು ಅತಿಯಾಗಿ ನಂಬುತ್ತಾರೆ. ಮಂಗಳವಾರದ ದಿನ ಶುಭ ಕಾರ್ಯ ಮಾಡಬಾರದೆಂದು ಅವರು ಬಲವಾಗಿ ನಂಬಿರುತ್ತಾರೆ. ಯಾವುದಾದರೂ ಒಂದು ದಿನ ಕೆಟ್ಟ ಘಟನೆ ನಡೆದರೆ ಮತ್ತೆ ಮುಂದಿನ ವಾರ ಆ ದಿನ ಅವರು ಹೊರಗಡೆ ಹೋಗೋದಕ್ಕೆ ಹೆದರುತ್ತಾರೆ. ಹಾಗೂ ಮನೆಯವರನ್ನೂ ಹೊರಗಡೆ ಹೋಗೋದಕ್ಕೆ ಬಿಡೋದಿಲ್ಲ. ಇದರಿಂದ ಅವರ ಮನೆಯವರಿಗೂ ಕಿರಿಕಿರಿ ಉಂಟಾಗುತ್ತದೆ.
ಕನ್ಯಾರಾಶಿ
ಕನ್ಯಾ ರಾಶಿಯವರು ಕೂಡ ಮೂಢ ನಂಬಿಕೆಗಳನ್ನು ಅತಿಯಾಗಿ ನಂಬುವ ಜನ ಇವರು. ಆಚಾರ ವಿಚಾರ ಕಟ್ಟು ಪಾಡುಗಳನ್ನು ಅತಿಯಾಗಿ ನಂಬುವವರು ಇವರು. ನಾವು ಕೈಗೊಳ್ಳುವ ಪೂಜೆಯಲ್ಲಿ ಕೊಂಚ ತಪ್ಪಾದರೂ ಇದರಿಂದ ವಿಘ್ನ ಉಂಟಾಗುತ್ತೆ ಎಂದು ಇವರು ಆಳವಾಗಿ ನಂಬಿರುತ್ತಾರೆ. ಪ್ರತಿಯೊಂದು ವಿಚಾರದಲ್ಲೂ ಇವರು ಅತಿಯಾಗಿ ಆಡುವುದರಿಂದ ಇವರ ಮನೆಯವರು ಇದರಿಂದ ಕಿರಿ ಕಿರಿ ಅನುಭವಿಸುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಕೂಡ ಮೂಢ ನಂಬಿಕೆಗಳನ್ನು ಹೆಚ್ಚಾಗಿ ನಂಬುತ್ತಾರೆ. ಕನ್ನಡಿಯೊಂದು ಒಡೆದು ಹೋದರೆ ಮುಂದಿನ ಏಳು ವರ್ಷಗಳು ದುರಾದೃಷ್ಟ ಎಂದು ನಂಬುವ ಜನರು. ಇನ್ನೂ ಕೆಲವರು ಮನೆಯ ಒಳಗಡೆ ಕೊಡೆ ಬಿಡಸಬಾರದು ಎಂಬ ಮೂಢನಂಬಿಕೆಯನ್ನು ಹೊದಿದ್ದಾರೆ. ಇದರಿಂದ ದುರಾದೃಷ್ಟ ಉಂಟಾಗುತ್ತೆ ಎಂದು ನಂಬಲಾಗಿದೆ. ಮೀನ ರಾಶಿಯವರ ಈ ರೀತಿಯ ನಂಬಿಕೆಯಿಂದ ಅವರ ಆಪ್ತರೇ ಅವರಲ್ಲಿ ಅಸಮಾಧಾನ ಹೊಂದಿರುತ್ತಾರೆ.
ಧನು ರಾಶಿ
ಧನು ರಾಶಿಯವರು ಬಲ ಅಂಗೈ ತುರಿಸುತ್ತಿದ್ದರೆ ಹಣ ಬರುತ್ತೆ ಅನ್ನೋ ನಂಬಿಕೆಯನ್ನು ಹೊಂದಿರುವ ಜನರಾಗಿದ್ದಾರೆ. ಎಡ ಅಂಗೈ ತುರಿಸುತ್ತಿದ್ದರೆ ದುಡ್ಡು ಹೋಗುತ್ತದೆ ಎಂದು ನಂಬುತ್ತಾರೆ. ನಿಮ್ಮ ಮೂಢ ನಂಬಿಕೆಗಳು ಅನೇಕರಿಗೆ ಮನೋರಂಜನೆ ಆಗಬಹುದು. ನಿಮ್ಮ ದೈನಂದಿನ ಜೀವನದಲ್ಲಿ ಮೂಢನಂಬಿಕೆಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ನಂಬಿಕೆ ಇರಲಿ ಆದರೆ ಅತಿಯಾದ ನಂಬಿಕೆ ಎಂದಿಗೂ ಒಳ್ಳೆಯದಲ್ಲ.



Click it and Unblock the Notifications