ಅಂಗಳದಲ್ಲಿದ್ದ ಹೂವು ತಿಂದು ಯುವತಿ ಸಾವು..! ಶಬರಿಮಲೆಯಲ್ಲಿ ಈ ಹೂವಿಗೆ ನಿಷೇಧ

ನಮ್ಮ ಸುತ್ತಮುತ್ತವೇ ಅಪಾಯಗಳಿದ್ದರೂ ನಮಗೆ ತಿಳಿಯೋದಿಲ್ಲ. ಇದರ ಜೊತೆಗೆ ಸಾವು ಯಾವಾಗ ಯಾರ ಬೆನ್ನ ಹಿಂದೆ ಬರುತ್ತೆ ಅನ್ನೋದನ್ನು ಸಹ ನಾವು ಊಹಿಸಲು ಸಾಧ್ಯವಾಗುವುದಿಲ್ಲ. ಯಾವ ವಸ್ತುಗಳು ಯಾವಾಗ ಅಪಾಯಕಾರಿಯಾಗಿ ಬದಲಾಗುತ್ತವೆ ಎಂಬುದು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

ಏಕೆಂದರೆ ಯಾವಾಗ? ಯಾರಿಗೆ ಯಾವ ರೀತಿಯಲ್ಲಿ ಸಾವು ಬರುತ್ತವೆ ಎಂಬುದನ್ನು ನಾವು ತಿಳಿಯಲು ಸಾಧ್ಯವಿಲ್ಲ. ಕೆಲವರ ಸಾವು ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ನಾವದನ್ನು ಊಹಿಸಿರುವುದಿಲ್ಲ. ಈಗ ಇಲ್ಲೊಬ್ಬ ಮಹಿಳೆ ಸಹ ವಿಚಿತ್ರ ಕಾರಣದಿಂದಾಗಿ ಮೃತಪಟ್ಟಿದ್ದಾಳೆ.

Young Woman Died After Eating A Flower In The Yard Flower Is Banned In Sabarimala

ಮನೆ ಅಂಗಳದಲ್ಲಿ ಬಿಟ್ಟಿದ್ದ ಹೂವು ತಿಂದ ಯುವತಿಯೊಬ್ಬಳು ಮೃತಪಟ್ಟಿರುವ ವಿಚಿತ್ರ ಘಟನೆ ನಡೆದಿದೆ. ಕೇರಳದಲ್ಲಿ ಈ ಘಟನೆ ನಡೆದಿದ್ದು, ಎಲ್ಲರಿಗೂ ಆಘಾತ ಉಂಟು ಮಾಡಿದೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ಆಕೆ ಹೂವು ಹಾಗೂ ಆ ಗಿಡದ ಎಲೆಯನ್ನು ಸೇವಿಸಿದ್ದಳು ಎಂದು ತಿಳಿದುಬಂದಿದೆ.

ಸೂರ್ಯ ಸುರೇಂದ್ರನ್ ಎಂಬ 24 ವರ್ಷದ ಯುವತಿ ಕಳೆದ ಮೂರು ದಿನದ ಹಿಂದೆ ಅರಳಿ ಹೂವನ್ನು ತಿಂದು ಸಾವನ್ನಪ್ಪಿದ್ದಾಳೆ. ವರದಿಗಳ ಪ್ರಕಾರ, ವೃತ್ತಿಯಲ್ಲಿ ನರ್ಸ್ ಆಗಿರುವ ಯುವತಿ ವಿಮಾನ ನಿಲ್ದಾಣದಲ್ಲಿ ಅಸ್ವಸ್ಥಳಾಗಿದ್ದಳು ಮತ್ತು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.

ಆದರೆ ಮೃತಪಟ್ಟ ಕಾರಣ ತಕ್ಷಣಕ್ಕೆ ತಿಳಿದಿರಲಿಲ್ಲ. ಬಳಿಕ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅರಳಿ ಹೂವು ಮತ್ತು ಎಲೆ ಸೇವಿಸಿದ್ದೇ ಆಕೆಯ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಸಂಬಂಧಿಕರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಆಕೆ ಒಂದು ಹೂವು ಹಾಗೂ ಅರಳಿಯ ಎಲೆಯನ್ನು ಕಿತ್ತು ತಿಂದಿದ್ದಾಳೆ. ಆದರೆ ಆ ಜಾಗದಲ್ಲಿ ಆಕೆ ಎಲೆಯನ್ನು ತುಪ್ಪಿದ್ದಳು ಆದರೆ ಅಷ್ಟರಾಗಲೇ ಅವಳ ದೇಹಕ್ಕೆ ಅದರ ದ್ರವ ಸೇರಿಬಿಟ್ಟಿತ್ತು. ಬಳಿಕ ಒಂದು ದಿನದ ನಂತರ ಆಕೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಳು.

ಭಾನುವಾರ ಈ ಘಟನೆ ನಡೆದಿತ್ತು, ಬೆಳಗ್ಗೆ 11.30ಕ್ಕೆ ಪಳ್ಳಿಪಟ್ಟೆಯಲ್ಲಿರುವ ಮನೆಯಿಂದ ಸಂಬಂಧಿಕರೊಂದಿಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಆದರೆ ವಿಮಾನ ನಿಲ್ದಾಣದಲ್ಲಿ ಆಕೆ ಕುಸಿದು ಬಿದ್ದಾಗ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿತ್ತು. ಆದರೆ ಬಳಿಕ ಹೂವಿನ ಎಲೆ ತಿಂದ ಕಾರಣ ಆಕೆ ಅದ್ವಸ್ಥಳಾಗಿದ್ದಳು ಎಂದು ವರದಿಯಾಗಿದೆ.

ಅದೇ ಸಮಯದಲ್ಲಿ ಯುವತಿಗೆ ಬೇರೆ ಯಾವುದಾದರೂ ಕಾಯಿಲೆ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ವಂದನಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೂರ್ಯನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಆಂತರಿಕ ಅಂಗಗಳನ್ನು ರಾಸಾಯನಿಕ ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕವಷ್ಟೇ ಸಾವಿನ ಕಾರಣ ಸ್ಪಷ್ಟವಾಗಲಿದೆ. ಸೂರ್ಯ ಬಿಎಸ್‌ಸಿ ನರ್ಸಿಂಗ್ ಪದವೀಧರರಾಗಿದ್ದರು. ಭಾನುವಾರ ಆಕೆ ಕೆಲಸದ ನಿಮಿತ್ತ ಇಂಗ್ಲೆಂಡ್‌ಗೆ ತೆರಳುತ್ತಿದ್ದರು.

ಶಬರಿಮಲೆಯಲ್ಲಿ ಅರಳಿ ಹೂವು ನಿಷೇಧ

ಈ ಘಟನೆ ನಡೆಯುತ್ತಿದ್ದಂತೆ ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಣಾಯಕ ನಿರ್ಧಾರ ಕೈಗೊಂಡಿದೆ. ದೇವರ ಪೂಜೆಗೆ ಈ ಹೂವು ಬಳಸದಂತೆ ನಿರ್ಬಂಧ ಹೇರಿದೆ. ಈ ಹೂವಿನ ಬದಲಿಗೆ ತುಳಸಿ ದಳ ಪೂಜೆಗೆ ಬಳಸುವಂತೆ ಸೂಚಿಸಲಾಗಿದೆ. ಈ ಹೂವು ಹಾಗೂ ಎಲೆ ವಿಷಕಾರಿ ಅಂಶ ಹೊಂದಿವೆ ಎಂಬುದು ಈವರೆಗೆ ವರದಿಯಾಗಿರಲಿಲ್ಲ. ಈ ಪ್ರಕರಣದ ಬಳಿಕ ಈಗ ಆತಂಕ ಎದುರಾಗಿದೆ. ಅದರಲ್ಲೂ ಮನೆಯಲ್ಲಿ ಮಕ್ಕಳಿದರೆ ಈ ಹೂವಿನ ಗಿಡ ಬೆಳೆಸುವುದು ಅಪಾಯಕಾರಿಯಾಗಲಿದೆ.

English summary

Young Woman Died After Eating A Flower In The Yard..! Flower Is Banned In Sabarimala

A strange incident has happened in which a young woman died after eating a flower left in the house yard.
Story first published: Sunday, May 12, 2024, 19:30 [IST]
X
Desktop Bottom Promotion