Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಯಶ್ ಅವರು ಈ ಕಾರಣಕ್ಕೆ ಮತ್ತಷ್ಟು ಗ್ರೇಟ್ ಅನಿಸುವುದು
ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೇಶದ ಎಲ್ಲಾ ಕಡೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ, ಪ್ಯಾನ್ ಇಂಡಿಯಾ ಸ್ಟಾರ್ ಕಂಡರೆ ಕನ್ನಡಿಗರಿಗೆ ತುಂಬಾನೇ ಪ್ರೀತಿ. ಒಂದು ಕಾಲದಲ್ಲಿ ಬಾಲಿವುಡ್ ಎಂದರೆ ಶ್ರೇಷ್ಠ ಎಂಬ ಭಾವನೆ ಇತ್ತು. ಆದರೆ ನಮ್ಮ ಕನ್ನಡ ಸಿನಿಮಾ ಕೆಜಿಎಫ್ ಬಾಲಿವುಡ್ನ ಚಿತ್ರಗಳನ್ನು ಮೀರಿ ಸದ್ದು ಮಾಡಿತು, ಯಶ್ ಅವರು ತಮ್ಮ ಅಭಿನಯ ಕೌಶಲ್ಯ ಮೂಲಕ ಇಡೀ ದೇಶವನ್ನೇ ಮೋಡಿ ಮಾಡಿದರು.

ಜನವರಿ 8ಕ್ಕೆ ಯಶ್ ಅವರ ಹುಟ್ಟುಹಬ್ಬ, ಅವರು ಅಭಿಮಾನಿಗಳು ಈ ದಿನ ತುಂಬಾ ಸಂಭ್ರಮದಿಂದ ಆಚರಿಸುವ ಪ್ಲ್ಯಾನ್ ಮಾಡುತ್ತಾರೆ, ಆದರೆ ಈ ವರ್ಷ ಅವರ ಬರ್ತ್ಡೇ ದಿನ ಅಭಿಮಾನಿಗಳಿಗೆ ಆದ ಅವಘಡದಿಂದಾಗಿ 3 ಜನ ಯಶ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನೋಡಿ ಯಶ್ ಅವರಿಗೂ ಸೇರಿ ಇಡೀ ಕರ್ನಾಟ ಬೇಸರ ವ್ಯಕ್ತಿಪಡಿಸಿದೆ.
ಮಕ್ಕಳನ್ನು ಕಳೆದುಗೊಂಡ ಹೆತ್ತವರ ಸಂಕಟ ಹೇಳತೀರದು
ಯಶ್ ಅವರ ಬ್ಯಾನರ್ ಕಟ್ಟುವಾಗ ವಿದ್ಯುತ್ ತಗುಲಿ ಮೂರು ಜನ ಸಾವನ್ನಪ್ಪಿದರು, ಇದನ್ನು ಕೇಳಿ ಯಶ್ ಕೂಡ ಗದಗ್ಗೆ ಧಾವಿಸಿ ಕುಟುಂಬಸ್ಥರಿಗೆ ಸಾಂತ್ವಾನ ನುಡಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೃತರನ್ನು ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗಿದ ಯಶ್
ಅಭಿಮಾನಿಗಳು ಸಾವನ್ನಪ್ಪಿರುವುದು ಕೇಳಿ ಯಶ್ ಅವರಿಗೂ ದುಃಖವಾಯಿತು. ಅವರು ಗೋವಾದಲ್ಲಿದ್ದರು, ಆದರೆ ತನ್ನ ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಗದಗ್ಗೆ ಬಂದು ಮಕ್ಕಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ಪೋಷಕರಿಗೆ ಸಾಂತ್ವಾನ ನುಡಿದಿದ್ದಾರೆ, ನಮಗೆ ಮಗವಿಲ್ಲ ಎಂದು ಅಳುತ್ತಿದ್ದ ಪೋಷಕರನ್ನು ನೋಡಿ ನಾನು ಕೂಡ ನಿಮ್ಮ ಮಗ ಎಂದು ಹೇಳಿರುವುದು ನಿಜವಾಗಲೂ ಯಶ್ ಅವರ ದೊಡ್ಡತನ. ಅಷ್ಟೊಂದು ದೊಡ್ಡ ಬೇಕಿದ್ದರೆ ಇದ್ದಲ್ಲಿಯೇ ಪ್ರೆಸ್ಮೀಟ್ ಮಾಡಿ, ಕುಟುಂಬಕ್ಕೆ ಪರಿಹಾರ ನೀಡುತ್ತೇನೆ ಎಂದು ಹೇಳಬಹುದಿತ್ತು, ಆದರೆ ಯಶ್ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಆ ಕುಟುಂಬದ ನೋವಿಗೆ ಸ್ಪಂದಿಸಿದ್ದಾರೆ.



Click it and Unblock the Notifications