Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಯಶ್ ಅವರು ಈ ಕಾರಣಕ್ಕೆ ಮತ್ತಷ್ಟು ಗ್ರೇಟ್ ಅನಿಸುವುದು
ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೇಶದ ಎಲ್ಲಾ ಕಡೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ, ಪ್ಯಾನ್ ಇಂಡಿಯಾ ಸ್ಟಾರ್ ಕಂಡರೆ ಕನ್ನಡಿಗರಿಗೆ ತುಂಬಾನೇ ಪ್ರೀತಿ. ಒಂದು ಕಾಲದಲ್ಲಿ ಬಾಲಿವುಡ್ ಎಂದರೆ ಶ್ರೇಷ್ಠ ಎಂಬ ಭಾವನೆ ಇತ್ತು. ಆದರೆ ನಮ್ಮ ಕನ್ನಡ ಸಿನಿಮಾ ಕೆಜಿಎಫ್ ಬಾಲಿವುಡ್ನ ಚಿತ್ರಗಳನ್ನು ಮೀರಿ ಸದ್ದು ಮಾಡಿತು, ಯಶ್ ಅವರು ತಮ್ಮ ಅಭಿನಯ ಕೌಶಲ್ಯ ಮೂಲಕ ಇಡೀ ದೇಶವನ್ನೇ ಮೋಡಿ ಮಾಡಿದರು.

ಜನವರಿ 8ಕ್ಕೆ ಯಶ್ ಅವರ ಹುಟ್ಟುಹಬ್ಬ, ಅವರು ಅಭಿಮಾನಿಗಳು ಈ ದಿನ ತುಂಬಾ ಸಂಭ್ರಮದಿಂದ ಆಚರಿಸುವ ಪ್ಲ್ಯಾನ್ ಮಾಡುತ್ತಾರೆ, ಆದರೆ ಈ ವರ್ಷ ಅವರ ಬರ್ತ್ಡೇ ದಿನ ಅಭಿಮಾನಿಗಳಿಗೆ ಆದ ಅವಘಡದಿಂದಾಗಿ 3 ಜನ ಯಶ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ನೋಡಿ ಯಶ್ ಅವರಿಗೂ ಸೇರಿ ಇಡೀ ಕರ್ನಾಟ ಬೇಸರ ವ್ಯಕ್ತಿಪಡಿಸಿದೆ.
ಮಕ್ಕಳನ್ನು ಕಳೆದುಗೊಂಡ ಹೆತ್ತವರ ಸಂಕಟ ಹೇಳತೀರದು
ಯಶ್ ಅವರ ಬ್ಯಾನರ್ ಕಟ್ಟುವಾಗ ವಿದ್ಯುತ್ ತಗುಲಿ ಮೂರು ಜನ ಸಾವನ್ನಪ್ಪಿದರು, ಇದನ್ನು ಕೇಳಿ ಯಶ್ ಕೂಡ ಗದಗ್ಗೆ ಧಾವಿಸಿ ಕುಟುಂಬಸ್ಥರಿಗೆ ಸಾಂತ್ವಾನ ನುಡಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮೃತರನ್ನು ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಭಿಮಾನಿಗಳ ಅಭಿಮಾನಕ್ಕೆ ತಲೆಬಾಗಿದ ಯಶ್
ಅಭಿಮಾನಿಗಳು ಸಾವನ್ನಪ್ಪಿರುವುದು ಕೇಳಿ ಯಶ್ ಅವರಿಗೂ ದುಃಖವಾಯಿತು. ಅವರು ಗೋವಾದಲ್ಲಿದ್ದರು, ಆದರೆ ತನ್ನ ಅಭಿಮಾನಿಗಳ ಸಾವಿನ ಸುದ್ದಿ ಕೇಳಿ ಗದಗ್ಗೆ ಬಂದು ಮಕ್ಕಳನ್ನು ಕಳೆದುಕೊಂಡು ಗೋಳಾಡುತ್ತಿದ್ದ ಪೋಷಕರಿಗೆ ಸಾಂತ್ವಾನ ನುಡಿದಿದ್ದಾರೆ, ನಮಗೆ ಮಗವಿಲ್ಲ ಎಂದು ಅಳುತ್ತಿದ್ದ ಪೋಷಕರನ್ನು ನೋಡಿ ನಾನು ಕೂಡ ನಿಮ್ಮ ಮಗ ಎಂದು ಹೇಳಿರುವುದು ನಿಜವಾಗಲೂ ಯಶ್ ಅವರ ದೊಡ್ಡತನ. ಅಷ್ಟೊಂದು ದೊಡ್ಡ ಬೇಕಿದ್ದರೆ ಇದ್ದಲ್ಲಿಯೇ ಪ್ರೆಸ್ಮೀಟ್ ಮಾಡಿ, ಕುಟುಂಬಕ್ಕೆ ಪರಿಹಾರ ನೀಡುತ್ತೇನೆ ಎಂದು ಹೇಳಬಹುದಿತ್ತು, ಆದರೆ ಯಶ್ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಿ ಆ ಕುಟುಂಬದ ನೋವಿಗೆ ಸ್ಪಂದಿಸಿದ್ದಾರೆ.



Click it and Unblock the Notifications
