Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ, ಆಕೆಯ ದೇಹವನ್ನು ಹೊರ ತೆಗೆದಿದ್ದು ಹೇಗೆ?
ತುಂಬಾನೇ ವಿಚಿತ್ರವಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ, ಮೂರು ದಿನಗಲಿಂದ ನಾಪತ್ತೆಯಾಗಿದ್ದ ಮಹಿಳೆ ಕೊನೆಗೆ ಕಂಡು ಬಂದಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ.
45 ವರ್ಷದ ಮಹಿಳೆ ದೊಡ್ಡ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ, ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯನ್ನು ನೋಡಿ ಆಕೆಯ ಗಂಡ ಹಾಗೂ ಸೌತ್ ಸುಲವೆಸಿ ಪ್ರಾವಿನೆನ್ಸ್ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಆ ಹೆಬ್ಬಾವು 16 ಅಡಿ ಉದ್ದವಿತ್ತು.

ಆಕೆ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಳು, ಆಕೆ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮದವರು ಆಕೆ ಹುಡುಕಾಟ ಪ್ರಾರಂಭಿಸಿದ್ದಾರೆ. ಹೀಗೆ ಹುಡುಕುವಾಗ ಆಕೆಯ ವಸ್ತುಗಳು ಪತ್ತೆಯಾಗಿದೆಮಜೊತೆಗೆ ದೊಡ್ಡ ಹೆಬ್ಬಾವು ಕಂಡು ಬಂದಿದೆ, ಅದರ ಹೊಟ್ಟೆ ತುಂಬಾನೇ ದಪ್ಪವಾಗಿತ್ತು.
ಅವರಿಗೆ ಆ ಹೆಬ್ಬಾವು ಆಕೆಯನ್ನು ತಿಂದಿರಬಹುದೆಂದು ಅವರಿಗೆ ಸಂಶಯವಾಗುತ್ತೆ, ಏಕೆಂದರೆ ಭರ್ಜರಿ ಊಟದ ಬಳಿಕ ಆ ಹಾವು ತುಂಬಾನೇ ಶಾಂತವಾಗಿತ್ತು, ಅದರ ಹೊಟ್ಟೆ ತುಂಬಿತ್ತು, ಇದನ್ನು ನೋಡಿದ ಮೇಲೆ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸುವ ಬಗ್ಗೆ ಯೋಚಿಸುತ್ತಾರೆ. ಅದರಂತೆ ಹಾವಿನ ಹೊಟ್ಟೆ ಕತ್ತರಿಸುತ್ತಿದ್ದಂತೆ ಆಕೆಯ ಬಟ್ಟೆ ಕಾಣ ಸಿಗುತ್ತದೆ. ನೋಡಿದರೆ ಫರಿದಾ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತು ಹೋಗಿರುತ್ತಾಳೆ.
ಈ ಬಗೆಯ ಘಟನೆ ಅಪರೂಪವಾದರೂ ಇದುವರೆಗೆ ನಡೆದೇ ಇಲ್ಲ ಎಂದು ಹೇಳುವಂತಿಲ್ಲ, ಕಳೆದ ವರ್ಷ ಇಂಡೋನೇಷ್ಯಾದಲ್ಲಿಯೇ ಒಬ್ಬ ರೈತನನ್ನು 8 ಅಡಿ ಉದ್ದ ಹೆಬ್ಬಾವು ನುಂಗಿತ್ತು. 2018ರಲ್ಲಿ 54 ವರ್ಷದ ಮಹಿಳೆಯನ್ನು ಹೆಬ್ಬಾವು ತಿಂದಿತ್ತು, ಹೀಗಾಗಿ ದೈತ್ಯ ಹೆಬ್ಬಾವು ಮನುಷ್ಯನನ್ನು ತಿಂದಂಥ ಘಟನೆಗಳು ನಡೆದಿದೆ.
ಈ ಘಟನೆಯ ಬಳಿಕ ಆಕೆಯ ಸಾವಿಗೆ ಗ್ರಾಮಸ್ಥರು ಕಂಬನಿ ಹಾಕಿದ್ದಾರೆ, ಆಕೆಯ ಗಂಡ ಆಕೆಯನ್ನು ಒಬ್ಬಳೇ ಬಿಟ್ಟು ತಪ್ಪು ಮಾಡಿದೆ ಎಂದು ಅಳುತ್ತಿದ್ದಾನೆ. ಹೆಬ್ಬಾವು ಆಕೆಯ ಕಾಲಿಗೆ ಕಚ್ಚಿ ಸುತ್ತಿಕೊಂಡು ಆಕೆಯನ್ನು ಉಸಿರುಕಟ್ಟಿಸಿದ ಬಳಿಕ ನುಂಗಿದೆ ಎಂದು ಹೇಳಲಾಗಿದೆ.
ಸರ್ಜರಿ ಮೂಲಕ ಆಕೆಯ ದೇಹವನ್ನು ಹೊರ ತೆಗೆಯಲಾಯ್ತು?
ಆಕೆಯ ದೇಹವನ್ನು ತಜ್ಞರು ಸೇರಿ ಆಪರೇಷನ್ ಮಾಡಿ ಹೊರತರಲಾಯ್ತು, ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅದರ ಆರೈಕೆ ಮಾಡಲಾಗಿದೆ, ಇದರಿಂದಾಗಿ ಹಾವಿಗೆ ಯಾವುದೇ ತೊಂದರೆ ಆಗಿಲ್ಲ.
ಈ ಘಟನೆಯ ಬಳಿಕ ಆ ಊರನವರು ತುಂಬಾನೇ ಎಚ್ಚೆತ್ತುಕೊಂಡಿದ್ದಾರೆ, ಗಾಡಿಗೆ ಸಮೀಪದ ಆ ಹಳ್ಳಿಯ ಜನರು ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದಾರೆ.



Click it and Unblock the Notifications