Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ, ಆಕೆಯ ದೇಹವನ್ನು ಹೊರ ತೆಗೆದಿದ್ದು ಹೇಗೆ?
ತುಂಬಾನೇ ವಿಚಿತ್ರವಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ, ಮೂರು ದಿನಗಲಿಂದ ನಾಪತ್ತೆಯಾಗಿದ್ದ ಮಹಿಳೆ ಕೊನೆಗೆ ಕಂಡು ಬಂದಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ.
45 ವರ್ಷದ ಮಹಿಳೆ ದೊಡ್ಡ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ, ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯನ್ನು ನೋಡಿ ಆಕೆಯ ಗಂಡ ಹಾಗೂ ಸೌತ್ ಸುಲವೆಸಿ ಪ್ರಾವಿನೆನ್ಸ್ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಆ ಹೆಬ್ಬಾವು 16 ಅಡಿ ಉದ್ದವಿತ್ತು.

ಆಕೆ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಳು, ಆಕೆ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮದವರು ಆಕೆ ಹುಡುಕಾಟ ಪ್ರಾರಂಭಿಸಿದ್ದಾರೆ. ಹೀಗೆ ಹುಡುಕುವಾಗ ಆಕೆಯ ವಸ್ತುಗಳು ಪತ್ತೆಯಾಗಿದೆಮಜೊತೆಗೆ ದೊಡ್ಡ ಹೆಬ್ಬಾವು ಕಂಡು ಬಂದಿದೆ, ಅದರ ಹೊಟ್ಟೆ ತುಂಬಾನೇ ದಪ್ಪವಾಗಿತ್ತು.
ಅವರಿಗೆ ಆ ಹೆಬ್ಬಾವು ಆಕೆಯನ್ನು ತಿಂದಿರಬಹುದೆಂದು ಅವರಿಗೆ ಸಂಶಯವಾಗುತ್ತೆ, ಏಕೆಂದರೆ ಭರ್ಜರಿ ಊಟದ ಬಳಿಕ ಆ ಹಾವು ತುಂಬಾನೇ ಶಾಂತವಾಗಿತ್ತು, ಅದರ ಹೊಟ್ಟೆ ತುಂಬಿತ್ತು, ಇದನ್ನು ನೋಡಿದ ಮೇಲೆ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸುವ ಬಗ್ಗೆ ಯೋಚಿಸುತ್ತಾರೆ. ಅದರಂತೆ ಹಾವಿನ ಹೊಟ್ಟೆ ಕತ್ತರಿಸುತ್ತಿದ್ದಂತೆ ಆಕೆಯ ಬಟ್ಟೆ ಕಾಣ ಸಿಗುತ್ತದೆ. ನೋಡಿದರೆ ಫರಿದಾ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತು ಹೋಗಿರುತ್ತಾಳೆ.
ಈ ಬಗೆಯ ಘಟನೆ ಅಪರೂಪವಾದರೂ ಇದುವರೆಗೆ ನಡೆದೇ ಇಲ್ಲ ಎಂದು ಹೇಳುವಂತಿಲ್ಲ, ಕಳೆದ ವರ್ಷ ಇಂಡೋನೇಷ್ಯಾದಲ್ಲಿಯೇ ಒಬ್ಬ ರೈತನನ್ನು 8 ಅಡಿ ಉದ್ದ ಹೆಬ್ಬಾವು ನುಂಗಿತ್ತು. 2018ರಲ್ಲಿ 54 ವರ್ಷದ ಮಹಿಳೆಯನ್ನು ಹೆಬ್ಬಾವು ತಿಂದಿತ್ತು, ಹೀಗಾಗಿ ದೈತ್ಯ ಹೆಬ್ಬಾವು ಮನುಷ್ಯನನ್ನು ತಿಂದಂಥ ಘಟನೆಗಳು ನಡೆದಿದೆ.
ಈ ಘಟನೆಯ ಬಳಿಕ ಆಕೆಯ ಸಾವಿಗೆ ಗ್ರಾಮಸ್ಥರು ಕಂಬನಿ ಹಾಕಿದ್ದಾರೆ, ಆಕೆಯ ಗಂಡ ಆಕೆಯನ್ನು ಒಬ್ಬಳೇ ಬಿಟ್ಟು ತಪ್ಪು ಮಾಡಿದೆ ಎಂದು ಅಳುತ್ತಿದ್ದಾನೆ. ಹೆಬ್ಬಾವು ಆಕೆಯ ಕಾಲಿಗೆ ಕಚ್ಚಿ ಸುತ್ತಿಕೊಂಡು ಆಕೆಯನ್ನು ಉಸಿರುಕಟ್ಟಿಸಿದ ಬಳಿಕ ನುಂಗಿದೆ ಎಂದು ಹೇಳಲಾಗಿದೆ.
ಸರ್ಜರಿ ಮೂಲಕ ಆಕೆಯ ದೇಹವನ್ನು ಹೊರ ತೆಗೆಯಲಾಯ್ತು?
ಆಕೆಯ ದೇಹವನ್ನು ತಜ್ಞರು ಸೇರಿ ಆಪರೇಷನ್ ಮಾಡಿ ಹೊರತರಲಾಯ್ತು, ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅದರ ಆರೈಕೆ ಮಾಡಲಾಗಿದೆ, ಇದರಿಂದಾಗಿ ಹಾವಿಗೆ ಯಾವುದೇ ತೊಂದರೆ ಆಗಿಲ್ಲ.
ಈ ಘಟನೆಯ ಬಳಿಕ ಆ ಊರನವರು ತುಂಬಾನೇ ಎಚ್ಚೆತ್ತುಕೊಂಡಿದ್ದಾರೆ, ಗಾಡಿಗೆ ಸಮೀಪದ ಆ ಹಳ್ಳಿಯ ಜನರು ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದಾರೆ.



Click it and Unblock the Notifications
