Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ, ಆಕೆಯ ದೇಹವನ್ನು ಹೊರ ತೆಗೆದಿದ್ದು ಹೇಗೆ?
ತುಂಬಾನೇ ವಿಚಿತ್ರವಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ, ಮೂರು ದಿನಗಲಿಂದ ನಾಪತ್ತೆಯಾಗಿದ್ದ ಮಹಿಳೆ ಕೊನೆಗೆ ಕಂಡು ಬಂದಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ.
45 ವರ್ಷದ ಮಹಿಳೆ ದೊಡ್ಡ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ, ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯನ್ನು ನೋಡಿ ಆಕೆಯ ಗಂಡ ಹಾಗೂ ಸೌತ್ ಸುಲವೆಸಿ ಪ್ರಾವಿನೆನ್ಸ್ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಆ ಹೆಬ್ಬಾವು 16 ಅಡಿ ಉದ್ದವಿತ್ತು.

ಆಕೆ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಳು, ಆಕೆ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮದವರು ಆಕೆ ಹುಡುಕಾಟ ಪ್ರಾರಂಭಿಸಿದ್ದಾರೆ. ಹೀಗೆ ಹುಡುಕುವಾಗ ಆಕೆಯ ವಸ್ತುಗಳು ಪತ್ತೆಯಾಗಿದೆಮಜೊತೆಗೆ ದೊಡ್ಡ ಹೆಬ್ಬಾವು ಕಂಡು ಬಂದಿದೆ, ಅದರ ಹೊಟ್ಟೆ ತುಂಬಾನೇ ದಪ್ಪವಾಗಿತ್ತು.
ಅವರಿಗೆ ಆ ಹೆಬ್ಬಾವು ಆಕೆಯನ್ನು ತಿಂದಿರಬಹುದೆಂದು ಅವರಿಗೆ ಸಂಶಯವಾಗುತ್ತೆ, ಏಕೆಂದರೆ ಭರ್ಜರಿ ಊಟದ ಬಳಿಕ ಆ ಹಾವು ತುಂಬಾನೇ ಶಾಂತವಾಗಿತ್ತು, ಅದರ ಹೊಟ್ಟೆ ತುಂಬಿತ್ತು, ಇದನ್ನು ನೋಡಿದ ಮೇಲೆ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸುವ ಬಗ್ಗೆ ಯೋಚಿಸುತ್ತಾರೆ. ಅದರಂತೆ ಹಾವಿನ ಹೊಟ್ಟೆ ಕತ್ತರಿಸುತ್ತಿದ್ದಂತೆ ಆಕೆಯ ಬಟ್ಟೆ ಕಾಣ ಸಿಗುತ್ತದೆ. ನೋಡಿದರೆ ಫರಿದಾ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತು ಹೋಗಿರುತ್ತಾಳೆ.
ಈ ಬಗೆಯ ಘಟನೆ ಅಪರೂಪವಾದರೂ ಇದುವರೆಗೆ ನಡೆದೇ ಇಲ್ಲ ಎಂದು ಹೇಳುವಂತಿಲ್ಲ, ಕಳೆದ ವರ್ಷ ಇಂಡೋನೇಷ್ಯಾದಲ್ಲಿಯೇ ಒಬ್ಬ ರೈತನನ್ನು 8 ಅಡಿ ಉದ್ದ ಹೆಬ್ಬಾವು ನುಂಗಿತ್ತು. 2018ರಲ್ಲಿ 54 ವರ್ಷದ ಮಹಿಳೆಯನ್ನು ಹೆಬ್ಬಾವು ತಿಂದಿತ್ತು, ಹೀಗಾಗಿ ದೈತ್ಯ ಹೆಬ್ಬಾವು ಮನುಷ್ಯನನ್ನು ತಿಂದಂಥ ಘಟನೆಗಳು ನಡೆದಿದೆ.
ಈ ಘಟನೆಯ ಬಳಿಕ ಆಕೆಯ ಸಾವಿಗೆ ಗ್ರಾಮಸ್ಥರು ಕಂಬನಿ ಹಾಕಿದ್ದಾರೆ, ಆಕೆಯ ಗಂಡ ಆಕೆಯನ್ನು ಒಬ್ಬಳೇ ಬಿಟ್ಟು ತಪ್ಪು ಮಾಡಿದೆ ಎಂದು ಅಳುತ್ತಿದ್ದಾನೆ. ಹೆಬ್ಬಾವು ಆಕೆಯ ಕಾಲಿಗೆ ಕಚ್ಚಿ ಸುತ್ತಿಕೊಂಡು ಆಕೆಯನ್ನು ಉಸಿರುಕಟ್ಟಿಸಿದ ಬಳಿಕ ನುಂಗಿದೆ ಎಂದು ಹೇಳಲಾಗಿದೆ.
ಸರ್ಜರಿ ಮೂಲಕ ಆಕೆಯ ದೇಹವನ್ನು ಹೊರ ತೆಗೆಯಲಾಯ್ತು?
ಆಕೆಯ ದೇಹವನ್ನು ತಜ್ಞರು ಸೇರಿ ಆಪರೇಷನ್ ಮಾಡಿ ಹೊರತರಲಾಯ್ತು, ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅದರ ಆರೈಕೆ ಮಾಡಲಾಗಿದೆ, ಇದರಿಂದಾಗಿ ಹಾವಿಗೆ ಯಾವುದೇ ತೊಂದರೆ ಆಗಿಲ್ಲ.
ಈ ಘಟನೆಯ ಬಳಿಕ ಆ ಊರನವರು ತುಂಬಾನೇ ಎಚ್ಚೆತ್ತುಕೊಂಡಿದ್ದಾರೆ, ಗಾಡಿಗೆ ಸಮೀಪದ ಆ ಹಳ್ಳಿಯ ಜನರು ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದಾರೆ.



Click it and Unblock the Notifications