Latest Updates
-
ಮುಂಬೈ ರೆಡ್ ಅಲರ್ಟ್: ಮಳೆಯಿಂದ ನಿಮ್ಮ ಬಾಡಿಗೆ ಮನೆ ಮತ್ತು ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಮುಂಬೈ ರೆಡ್ ಅಲರ್ಟ್: ಮಳೆಗಾಲದ ಕಾಯಿಲೆಗಳಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಮುಂಬೈ ಮಳೆ ಅಬ್ಬರ: ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಮುಂಬೈ ಮಳೆ ರಜೆ: ಮನೆಯಲ್ಲೇ ಕುಟುಂಬದೊಂದಿಗೆ ಫಿಟ್ ಆಗಿರಲು 12 ನಿಮಿಷದ ಸಿಂಪಲ್ ಯೋಗ! -
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ!
ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ, ಆಕೆಯ ದೇಹವನ್ನು ಹೊರ ತೆಗೆದಿದ್ದು ಹೇಗೆ?
ತುಂಬಾನೇ ವಿಚಿತ್ರವಾದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ, ಮೂರು ದಿನಗಲಿಂದ ನಾಪತ್ತೆಯಾಗಿದ್ದ ಮಹಿಳೆ ಕೊನೆಗೆ ಕಂಡು ಬಂದಿದ್ದು ಹೆಬ್ಬಾವಿನ ಹೊಟ್ಟೆಯಲ್ಲಿ.
45 ವರ್ಷದ ಮಹಿಳೆ ದೊಡ್ಡ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದೆ, ಹೆಬ್ಬಾವಿನ ಹೊಟ್ಟೆಯಲ್ಲಿ ಮಹಿಳೆಯನ್ನು ನೋಡಿ ಆಕೆಯ ಗಂಡ ಹಾಗೂ ಸೌತ್ ಸುಲವೆಸಿ ಪ್ರಾವಿನೆನ್ಸ್ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಆ ಹೆಬ್ಬಾವು 16 ಅಡಿ ಉದ್ದವಿತ್ತು.

ಆಕೆ ಗುರುವಾರ ರಾತ್ರಿಯಿಂದ ಕಾಣೆಯಾಗಿದ್ದಳು, ಆಕೆ ಕಾಣೆಯಾದ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮದವರು ಆಕೆ ಹುಡುಕಾಟ ಪ್ರಾರಂಭಿಸಿದ್ದಾರೆ. ಹೀಗೆ ಹುಡುಕುವಾಗ ಆಕೆಯ ವಸ್ತುಗಳು ಪತ್ತೆಯಾಗಿದೆಮಜೊತೆಗೆ ದೊಡ್ಡ ಹೆಬ್ಬಾವು ಕಂಡು ಬಂದಿದೆ, ಅದರ ಹೊಟ್ಟೆ ತುಂಬಾನೇ ದಪ್ಪವಾಗಿತ್ತು.
ಅವರಿಗೆ ಆ ಹೆಬ್ಬಾವು ಆಕೆಯನ್ನು ತಿಂದಿರಬಹುದೆಂದು ಅವರಿಗೆ ಸಂಶಯವಾಗುತ್ತೆ, ಏಕೆಂದರೆ ಭರ್ಜರಿ ಊಟದ ಬಳಿಕ ಆ ಹಾವು ತುಂಬಾನೇ ಶಾಂತವಾಗಿತ್ತು, ಅದರ ಹೊಟ್ಟೆ ತುಂಬಿತ್ತು, ಇದನ್ನು ನೋಡಿದ ಮೇಲೆ ಹೆಬ್ಬಾವಿನ ಹೊಟ್ಟೆಯನ್ನು ಕತ್ತರಿಸುವ ಬಗ್ಗೆ ಯೋಚಿಸುತ್ತಾರೆ. ಅದರಂತೆ ಹಾವಿನ ಹೊಟ್ಟೆ ಕತ್ತರಿಸುತ್ತಿದ್ದಂತೆ ಆಕೆಯ ಬಟ್ಟೆ ಕಾಣ ಸಿಗುತ್ತದೆ. ನೋಡಿದರೆ ಫರಿದಾ ಹೆಬ್ಬಾವಿನ ಹೊಟ್ಟೆಯಲ್ಲಿ ಸತ್ತು ಹೋಗಿರುತ್ತಾಳೆ.
ಈ ಬಗೆಯ ಘಟನೆ ಅಪರೂಪವಾದರೂ ಇದುವರೆಗೆ ನಡೆದೇ ಇಲ್ಲ ಎಂದು ಹೇಳುವಂತಿಲ್ಲ, ಕಳೆದ ವರ್ಷ ಇಂಡೋನೇಷ್ಯಾದಲ್ಲಿಯೇ ಒಬ್ಬ ರೈತನನ್ನು 8 ಅಡಿ ಉದ್ದ ಹೆಬ್ಬಾವು ನುಂಗಿತ್ತು. 2018ರಲ್ಲಿ 54 ವರ್ಷದ ಮಹಿಳೆಯನ್ನು ಹೆಬ್ಬಾವು ತಿಂದಿತ್ತು, ಹೀಗಾಗಿ ದೈತ್ಯ ಹೆಬ್ಬಾವು ಮನುಷ್ಯನನ್ನು ತಿಂದಂಥ ಘಟನೆಗಳು ನಡೆದಿದೆ.
ಈ ಘಟನೆಯ ಬಳಿಕ ಆಕೆಯ ಸಾವಿಗೆ ಗ್ರಾಮಸ್ಥರು ಕಂಬನಿ ಹಾಕಿದ್ದಾರೆ, ಆಕೆಯ ಗಂಡ ಆಕೆಯನ್ನು ಒಬ್ಬಳೇ ಬಿಟ್ಟು ತಪ್ಪು ಮಾಡಿದೆ ಎಂದು ಅಳುತ್ತಿದ್ದಾನೆ. ಹೆಬ್ಬಾವು ಆಕೆಯ ಕಾಲಿಗೆ ಕಚ್ಚಿ ಸುತ್ತಿಕೊಂಡು ಆಕೆಯನ್ನು ಉಸಿರುಕಟ್ಟಿಸಿದ ಬಳಿಕ ನುಂಗಿದೆ ಎಂದು ಹೇಳಲಾಗಿದೆ.
ಸರ್ಜರಿ ಮೂಲಕ ಆಕೆಯ ದೇಹವನ್ನು ಹೊರ ತೆಗೆಯಲಾಯ್ತು?
ಆಕೆಯ ದೇಹವನ್ನು ತಜ್ಞರು ಸೇರಿ ಆಪರೇಷನ್ ಮಾಡಿ ಹೊರತರಲಾಯ್ತು, ಹಾವಿಗೆ ಶಸ್ತ್ರ ಚಿಕಿತ್ಸೆ ಮಾಡಿ, ಅದರ ಆರೈಕೆ ಮಾಡಲಾಗಿದೆ, ಇದರಿಂದಾಗಿ ಹಾವಿಗೆ ಯಾವುದೇ ತೊಂದರೆ ಆಗಿಲ್ಲ.
ಈ ಘಟನೆಯ ಬಳಿಕ ಆ ಊರನವರು ತುಂಬಾನೇ ಎಚ್ಚೆತ್ತುಕೊಂಡಿದ್ದಾರೆ, ಗಾಡಿಗೆ ಸಮೀಪದ ಆ ಹಳ್ಳಿಯ ಜನರು ಒಬ್ಬೊಬ್ಬರೇ ಓಡಾಡಲು ಹೆದರುತ್ತಿದ್ದಾರೆ.



Click it and Unblock the Notifications