Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಬುಧವಾರ ಗಣೇಶನ ಪೂಜಿಸುವುದೇಕೆ ಗೊತ್ತಾ.? ಯಾವ ಪರಿಹಾರ ಪ್ರಾಪ್ತಿಯಾಗಲಿದೆ.?
ಪ್ರತಿಯೊಂದು ದಿನವನ್ನು ನಿರ್ದಿಷ್ಟ ದೇವರ ಪೂಜೆಗೆ ಮೀಸಲಿಡಲಾಗಿದ್ದು, ಬುಧವಾರದಂದು ಗಣಪತಿಯ ದಿನ ಎಂದು ಕರೆಯುತ್ತಾರೆ, ಈ ದಿನ ಗಣಪನನ್ನು ಪೂಜಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಈ ದಿನದಂದು ಉಪವಾಸ ಮಾಡುವುದರಿಂದ, ಸುಖ, ಶಾಂತಿ, ಸಮೃದ್ಧಿಯ ಜೊತೆಗೆ ಬುಧ ದೋಷಗಳು ನಿವಾರಣೆಯಾಗುತ್ತದೆ.
ಜ್ಯೋತಿಷ್ಯದಲ್ಲಿ, ಬುಧವು ಬುದ್ಧಿವಂತಿಕೆ, ಮನಸ್ಸು, ಆಲೋಚನಾ ಪ್ರಕ್ರಿಯೆ, ಮಾನಸಿಕ ಬೆಳವಣಿಗೆ, ಸಂಪತ್ತು, ವೃತ್ತಿ ಬೆಳವಣಿಗೆ, ವ್ಯವಹಾರದ ಬೆಳವಣಿಗೆ ಇತ್ಯಾದಿಗಳನ್ನು ಸೂಚಿಸುತ್ತದೆ. ಬುಧವಾರದ ದಿನವು ಬುಧ ಗ್ರಹಕ್ಕೆ ಮೀಸಲಾಗಿದ್ದು, ಬುಧ ಗ್ರಹವು ಗಣೇಶನಿಗೆ ಸಂಬಂಧಿಸಿದೆ. ಅಲ್ಲದೆ, ಧರ್ಮಗ್ರಂಥಗಳ ಪ್ರಕಾರ, ಬುಧವು ಯಶಸ್ಸಿನ ಗ್ರಹವಾಗಿದ್ದು, ಜಾತಕದಲ್ಲಿ ಬುಧ ದೋಷ ಇದ್ದರೆ, ಅದನ್ನು ಸರಿಪಡಿಸಲು, ಬುಧವಾರದಂದು ಗಣೇಶನನ್ನು ಪೂಜಿಸಬೇಕು. ಇದು ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ಸಹ ತರುತ್ತದೆ ಎನ್ನಲಾಗುತ್ತದೆ.

ಬುಧವಾರದಂದು ಗಣೇಶನ ಪೂಜೆ ಮಾಡುವುದು ಹೇಗೆ? ಅದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ಇಲ್ಲಿ ನೋಡೋಣ:
ಬುಧವಾರ ವಿಘ್ನವಿನಾಶಕನನ್ನು ಪೂಜಿಸುವುದರ ಮಹತ್ವ
ಗಣೇಶನನ್ನು ವಿಘ್ನವಿನಾಶಕ ಎನ್ನುತ್ತಾರೆ. ಎಲ್ಲಾ ದುಃಖ ಮತ್ತು ಕಷ್ಟಗಳನ್ನು ಸೋಲಿಸುವವನು ಎಂದರ್ಥ. ಆದ್ದರಿಂದಲೇ ಯಾವುದೇ ಪೂಜೆಗೂ ಮುನ್ನ ಆತನನ್ನು ಪೂಜಿಸುತ್ತೇವೆ. ಭಕ್ತರಿಗೆ ಎದುರಾಗುವ ಎಲ್ಲಾ ಅಡೆತಡೆಗಳು, ರೋಗಗಳು, ಶತ್ರುಗಳು ಮತ್ತು ದಾರಿದ್ರ್ಯಗಳನ್ನು ನಿವಾರಿಸುತ್ತಾನೆ. ಬುಧವಾರದಂದು ಗಣಪತಿಯನ್ನು ಪೂಜಿಸಿ ಪೂಜಿಸುವುದರಿಂದ ಸಮೃದ್ಧಿ ಹೆಚ್ಚುತ್ತದೆ ಮತ್ತು ಬುಧನ ದೋಷಗಳೂ ದೂರವಾಗುತ್ತವೆ.
ಬುಧ ಗ್ರಹವು ಅಶುಭ ಸ್ಥಿತಿಯಲ್ಲಿದ್ದರೆ, ಬುಧವಾರದಂದು ಗಣೇಶನನ್ನು ಪೂಜಿಸುವುದು ಲಾಭದಾಯಕವೆಂದು ಹೇಳಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ ಮನೆಯಲ್ಲಿ ಹಣ ನಿಲ್ಲದಿದ್ದರೆ, ಅನವಶ್ಯಕ ಹಣ ವ್ಯರ್ಥವಾದರೆ, ಮನೆಯಲ್ಲಿ ತೊಂದರೆ ಇದ್ದರೆ, ಬುಧವಾರದಂದು ಉಪವಾಸ ಅಥವಾ ಪೂಜೆಯಿಂದ ಇದೆಲ್ಲವನ್ನೂ ಹೋಗಲಾಡಿಸಬಹುದು. ಈ ಉಪವಾಸವು ಬುಧ ಗ್ರಹದ ಅಶುಭ ಪರಿಣಾಮಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ.
ಬುಧವಾರದಂದು ಗಣೇಶನನ್ನು ಪೂಜಿಸುವ ವಿಧಾನ
ಈ ದಿನ ನೀವು ಮನೆಯಲ್ಲಿ ಶ್ರೀ ಗಣೇಶನ ಪ್ರತಿಮೆ ಅಥವಾ ಫೋಟೋವನ್ನು ಸ್ಥಾಪಿಸಿದರೆ ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಣೇಶನಿಗೆ ಸಿಂಧೂರ, ಶ್ರೀಗಂಧ, ಗರಿಕೆ, ಲಡ್ಡು ಅಥವಾ ಬೆಲ್ಲ, ಸಿಹಿತಿಂಡಿಗಳನ್ನು ಅರ್ಪಿಸಿ. ಗಣೇಶನ ಪೂಜೆಯ ಸ್ಥಳದಲ್ಲಿ ಧೂಪ, ಹೂವು, ದೀಪ, ಕರ್ಪೂರ ಇತ್ಯಾದಿಗಳನ್ನು ಇಟ್ಟು ಪೂಜೆಯ ಕೊನೆಯಲ್ಲಿ ಗಣೇಶನಿಗೆ ಮೋದಕವನ್ನು ಪ್ರಸಾದವಾಗಿ ಅರ್ಪಿಸಿ, ಆರತಿಯನ್ನು ಮಾಡಿ. ಪೂಜೆಯ ಕೊನೆಯಲ್ಲಿ ಗಣಪನನ್ನು ಧ್ಯಾನಿಸಿ, ಓಂ ಗಣ ಗಣಪತಯೇ ನಮಃ ಮಂತ್ರವನ್ನು 108 ಬಾರಿ ಪಠಿಸುತ್ತಿರಿ. ಬುಧವಾರದ ಪೂಜೆಯಲ್ಲಿ ಹಸಿರು ಬಣ್ಣಕ್ಕೆ ಬಹಳ ಮಹತ್ವವಿದೆ. ಈ ದಿನ ಹಸಿರು ಬಣ್ಣದ ಹಣ್ಣುಗಳು, ಹೂವುಗಳು ಮತ್ತು ಬಟ್ಟೆಗಳನ್ನು ದಾನ ಮಾಡಿ. ಅದೇ ಸಮಯದಲ್ಲಿ ಮೊಸರು, ಹೆಸರುಕಾಳು ಅಥವಾ ಹಸಿರು ವಸ್ತುಗಳಿಂದ ಮಾಡಿದ ಯಾವುದನ್ನಾದರೂ ಸೇವಿಸಿ.
ಬುಧವಾರ ಉಪವಾಸ
ಬುಧವಾರದ ಉಪವಾಸವನ್ನು ಕೃಷ್ಣ ಪಕ್ಷದಲ್ಲಿ ಪ್ರಾರಂಭಿಸಬೇಕು ಎನ್ನಲಾಗುತ್ತದೆ. ಯಾವುದೇ ತಿಂಗಳ ಶುಕ್ಲ ಪಕ್ಷದ ಮೊದಲ ಬುಧವಾರದಿಂದ ಈ ಉಪವಾಸವನ್ನು ಆಚರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಕನಿಷ್ಠ 21 ಬುಧವಾರ ಮತ್ತು ಗರಿಷ್ಠ 41 ಬುಧವಾರದ ಉಪವಾಸವು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇತರ ಉಪವಾಸಗಳಂತೆ, ಈ ಉಪವಾಸದಲ್ಲಿ ಉಪ್ಪನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೊತೆಗೆ ಈ ಉಪವಾಸದಲ್ಲಿ ದಾನಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದ್ದು, ದಾನ ಮಾಡಿದ ನಂತರವೇ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಗಣೇಶನ ಮಂತ್ರಗಳು
''ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ''
''ನಿರ್ವಿಘ್ನಂ ಕುರು ಮೇ ದೇವ ಸರ್ವ-ಕಾರ್ಯೇಷು ಸರ್ವದಾ'' ||
"ಓಂ ಗಂ ಗಣಪತಯೇ ನಮಃ"
ಪೂರ್ಣರಮ್ಮಿ ಚತುರಾನನವನ್ದ್ಯಂಛಿನುಕೂಲಮಖಿಲಂ ತಥಾ ದರ್ದಾನಮ್ ।
ತಾನ್ ತುಂಡಿಲಂ ದ್ವಿರಸ್ನಾಧಿಪಯಜ್ಞಸೂತ್ರಂ ಪುತ್ರ ವಿಲಶ್ಚತುರಂ ಶಿವಯೋ: ಶಿವಾಯಃ |
ಪ್ರತಭಾಜಾಮ್ಯಭಯನ್ದಂ ಖಲು ಭಕ್ತಶೋಕ್ದವಾನಲಂ ಗಾನವಿಭುಂವರಕುಂಜರಸ್ಯಮ್ ।
ಅಜ್ಞಾನ ಕನ್ವಿಕ್ಷನ್ಹವಹ್ಮುತ್ಸವರ್ಧನಮಂ ಸುತ್ಮೀಶ್ವರಸ್ಯ ।



Click it and Unblock the Notifications