Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೃತರ ಚಿತೆಗೆ ಬೆಂಕಿ ಇಟ್ಟ ಬಳಿಕ ತಿರುಗಿ ನೋಡಬಾರದು ಏಕೆ..? ಏನಿದು ನಿಯಮ?
ದೂ ಧರ್ಮದಲ್ಲಿ ಒಂದೊಂದು ಆಚರಣೆಯೂ ಸಂಕೀರ್ಣ ಸಂಪ್ರದಾಯಗಳ ತನ್ನಲ್ಲಿ ಅಡಗಿಸಿಕೊಂಡಿದೆ. ಪ್ರತಿಯೊಂದು ಆಚರಣೆಯು ತನ್ನದೇ ಆದ ವಿವರಣೆ, ಮಹತ್ವ ಹೊಂದಿದೆ. ಇಲ್ಲಿ ಹುಟ್ಟಿನಿಂದ ಸಾವಿನವರೆಗೂ ನೂರಾರು ಆಚರಣೆಗಳ ಪಾಲಿಸಬೇಕಾಗುತ್ತದೆ. ಅಲ್ಲದೆ ಕಲವು ನಿಯಮಗಳ ಜೀವನದ ಉದ್ದಕ್ಕೂ ಜೊತೆಯಾಗಿರಲಿದೆ.
ಅದರಲ್ಲೂ ಹಿಂದೂ ಧರ್ಮದಲ್ಲಿ ಸಾವಿನ ಬಳಿಕ ಆತ್ಮ ಮುಕ್ತಿ ಪಡೆದು ಹೊಸದೊಂದು ಜೀವ ಪಡೆಯಲಿದೆ ಎಂದು ನಂಬಲಾಗಿದೆ. ಸನಾತನ ಧರ್ಮದಲ್ಲಿ ಒಟ್ಟು 16 ಆಚರಣೆಗಳಿಗೆ ಮಾನವ ದೇಹ ಒಳಗಾಗಲಿದೆಯಂತೆ. ಅದರಲ್ಲಿ ಕೊನೆಯ ಆಚರಣೆಯೇ ಈ ಮರಣದ ಬಳಿಕ ನಡೆಯುವ ವಾರಣೆಯಂತೆ. ಮರಣದ ನಂತರ ಏರ್ಪಡಿಸಲಾಗುವ ಆಚರಣೆ ಸಂಪ್ರದಾಯವು ಬೇರೆಲ್ಲಾ ಆಚರಣೆಗಿಂತಲೂ ಭಿನ್ನ ಎನಿಸಿದೆ.

ಅದರಲ್ಲೂ ಸಾವಿನ ಬಳಿಕ ವ್ಯಕ್ತಿಯೊಬ್ಬ ಕರ್ಮ ನಿಯಮಗಳು ಆರಂಭವಾಗುತ್ತದೆ. ಕೊನೆಯದಾಗಿ ದೇಹವನ್ನು ಪಂಚ ಭೂತಗಳಲ್ಲಿ ಲೀನ ಮಾಡಲಾಗುತ್ತದೆ. ಆದರೆ ಅಂತಿಮ ವಿಧಿವಿಧಾನದಲ್ಲಿ ಹಲವಾರು ರೀತಿಯ ನಿಯಮಗಳಿವೆ. ಅದರಲ್ಲೂ ಕೊನೆಯದಾಗಿ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ ಬಳಿಕ ಹಿಂತಿರುಗಿ ನೋಡದೆ ಬರಬೇಕು ಎಂದು ಹಿರಿಯರು ಹೇಳುತ್ತಾರೆ. ಹಾಗಾದ್ರೆ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ ಬಳಿಕ ಹಿಂತಿರುಗಿ ಏಕೆ ನೋಡಬಾರದು? ಏನಿದು ಸಂಪ್ರದಾಯ ಎಂಬ ಕುರಿತು ತಿಳಿದುಕೊಳ್ಳೋಣ.
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಸತ್ತಾಗ, ಅವನ ಆತ್ಮವು ದೇಹವನ್ನು ತೊರೆಯುತ್ತದೆ. ಅಂತಿಮ ವಿಧಿಗಳನ್ನು ನಡೆಸಿದ ನಂತರ ದೇಹವು ಬೂದಿಯಾಗುತ್ತದೆ. ಹೀಗಾದಾಗ ಆತನ ಆತ್ಮ ಪಂಚಭೂತಗಳಲ್ಲಿ ನೆಲಸಸುತ್ತದೆ ಎಂದು ನಂಬಲಾಗಿದೆ. ಆದರೆ ಆತ್ಮಕ್ಕೆ ಸಾವಿರುವುದಿಲ್ಲವಂತೆ. ಆತ್ಮವು ಶಾಶ್ವತ ಮತ್ತು ಅವಿನಾಶಿ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಯಾವುದೇ ಆಯುಧ, ಬೆಂಕಿ ಅಥವಾ ನೀರು ಸೇರಿ ಒಂಚಭೂತದಲ್ಲಿ ಯಾವುದೂ ಸಹ ಆತ್ಮವನ್ನು ನಾಶಮಾಡಲಾಗುವುದಿಲ್ಲವಂತೆ.
ಚಿತೆಗೆ ಬೆಂಕಿ ಹಚ್ಚಿದ ಮರುಕ್ಷಣ ದೇಹ ಐಕ್ಯತೆಯ ಹಾದಿ ಹಿಡಿಯುತ್ತದೆಯಂತೆ. ಈ ವೇಳೆ ಅವರ ಕುಟುಂಬಸ್ಥರು ಚಿತೆ ಕಡೆ ನೋಡಿದರೆ ಆತ್ಮದ ಬಾಂಧವ್ಯವು ಕುಟುಂಬದ ಜೊತೆ ಉಳಿದುಬಿಡುತ್ತದೆ. ಅದು ಎಂದಿಗೂ ಮುಕ್ತಿ ಲೋಕದ ದಾರಿ ಹಿಡಿಯಲಾಗುವುದಿಲ್ಲ ಎಂದು ನಂಬಲಾಗಿದೆ.
ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ, ಮರಣದ ನಂತರ ಸತ್ತ ವ್ಯಕ್ತಿಯ ಆತ್ಮವು ಅವನ ಕೊನೆಯ ಬಲದ ಚಟುವಟಿಕೆಗಳನ್ನು ವೀಕ್ಷಿಸುತ್ತದೆ. ಮೃತನ ಕುಟುಂಬದ ಸದಸ್ಯರು ಸ್ಮಶಾನದಲ್ಲಿ ಇರುವುದರಿಂದ, ಒಬ್ಬ ವ್ಯಕ್ತಿಯು ಚಿತೆಯ ಕಡೆಗೆ ಹಿಂತಿರುಗಿ ನೋಡಿದರೆ, ಮೃತನ ಆತ್ಮವು ಸೇರಬೇಕಾಗಿದ್ದ ಸ್ಥಳ ಮುಟ್ಟುವುದಿಲ್ಲವಂತೆ. ಅಂದರೆ ಮುಕ್ತಿ ಸಿಗುವುದಿಲ್ಲವಂತೆ. ಕುಟುಂಬ ಬಂಧನದಲ್ಲಿ ಅದು ಕೊನೆಯವರೆಗೂ ಬಂಧನವಾಗುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಆತ್ಮ ಕಷ್ಟದ ದಿನಗಳ ಕಳೆಯ ಬೇಕಾಗುತ್ತದೆಯಂತೆ.
ಇದರ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂಬ ಕಾರಣಕ್ಕೆ ಸತತ 13 ದಿನಗಳ ಕಾಲ ವಿಧಿ ವಿಧಾನಗಳ ನೆರವೇರಿಸಲಾಗುತ್ತದೆ. ಪಿಂಡ ದಾನ ಕಾರ್ಯ ಸಹ ಮಾಡಲಾಗುತ್ತದೆ. ಹೀಗಾಗಿ ವ್ಯಕ್ತಿಯ ಜೀವನದ ಉದ್ದಕ್ಕೂ ಇರುವ ನಿಯಮ, ಸಂಪ್ರದಾಯದಲ್ಲಿ ಈ ಕೊನೆಯ ಆಚರಣೆಗಳು ಪ್ರಮುಖವಾಗುತ್ತವೆ. ಹೀಗಾಗಿ ಮರಣದ ನಂತರದಲ್ಲಿ ನಡೆಯುವ 13 ದಿನಗಳ ಸಂಪ್ರದಾಯಗಳು ಮೃತ ವ್ಯಕ್ತಿಯ ಮುಂದಿನ ಜೀವನದ ದಾರಿ ದೀಪವಾಗಲಿದೆಯಂತೆ.
ಮೃತರ ಕುಟುಂಬಸ್ಥರು ಸಹ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಈ ಆಚರಣೆಗಳ ನೆರವೇರಿಸುತ್ತಾರೆ. ಅದೇ ರೀತಿ ಚಿತೆಗೆ ಅಗ್ನಿ ಸ್ಪರ್ಶವಾದ ಬಳಿಕ ಹಿಂದೆ ತಿರುಗಿ ನೋಡಬಾರದು ಎಂದು ಹಿರಿಯರು ಹಾಕಿದ ನಿಯಮ ನಡೆದುಕೊಂಡು ಬಂದಿದೆ. ಚಿತೆಗೆ ಅಗ್ನಿ ಸ್ಪರ್ಶವಾದ ಬಳಿಕ ಮನೆಗೆ ಬಂದು ಎಲ್ಲರು ಸ್ನಾನ ಮಾಡಿ ಶುದ್ಧವಾಗುತ್ತಾರೆ.



Click it and Unblock the Notifications