Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
ಈ ಊರಿನಲ್ಲಿ ಹನುಮನ ಗುಡಿಯಿಲ್ಲ...ಮಾರುತಿ ಕಾರು ಬಂದರೂ ಸಹಿಸಲ್ಲ..! ಏಕೆ ಗೊತ್ತಾ?
ಭಾರತ ವಿವಿಧತೆಯಲ್ಲಿ ಏಕತೆಯ ರಾಷ್ಟ್ರ. ಇಲ್ಲಿ ಪ್ರತಿ ಹೆಜ್ಜೆಗೂ ಹೊಸ ಸಂಸ್ಕೃತಿಗಳು, ಹೊಸ ಆಚರಣೆಗಳ ನೋಡಬಹುದು. ಅಷ್ಟೊಂದು ವಿಭಿನ್ನ ಆಚರಣೆಗಳು ಈ ನೆಲದಲ್ಲಿವೆ. ಹೀಗಾಗಿ ಭಾರತ ವಿವಿಧ ಸಂಸ್ಕೃತಿಗಳಿಂದ ತುಂಬಿರುವ ಬಹಳ ವಿಶೇಷ ನಾಡು. ಹಾಗೆ ಇಲ್ಲಿನ ಆಚರಣೆಗಳನ್ನು ಬೇರೆಲ್ಲೂ ನೀವು ನೋಡಲು ಸಾಧ್ಯವಾಗದಿಲ್ಲ. ಹಾಗೆ ಕೆಲವೊಂದು ಆಚರಣೆಗಳ ಕೇಳಿದ್ರೆ ನಿಮಗೂ ಅಚ್ಚರಿ ಆಗುತ್ತೆ.
ಅದ್ರಲ್ಲೂ ಇಲ್ಲೊಂದು ಕಡೆ ರಾಮಾಯಣದಲ್ಲಿ ಬರುವ ರಾವಣನಂತೆ ರಾಕ್ಷಸನಿಗೆ ಪೂಜೆ ಮಾಡಲಾಗುತ್ತದೆ. ಬಹುತೇಕ ಭಾಗದಲ್ಲಿ ರಾವಣನನ್ನು ರಾಕ್ಷಸ ಎಂದು ಪರಿಗಣಿಸಿರುವುದು ಹಾಗೆ ಆತನ ಗುಣಗಳನ್ನು ಕೆಟ್ಟದೆಂದು ಪರಿಗಣಿಸಲಾಗಿದೆ.

ಆದ್ರೆ ಇಲ್ಲೊಂದು ಊರಿನಲ್ಲಿ ಈ ರಾಕ್ಷಸನಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗೆ ಅಚ್ಚರಿ ವಿಚಾರ ಏನೆಂದರೆ ಆ ಊರಿನಲ್ಲಿ ಹನುಮಂತನ ಒಂದೇ ಒಂದು ಗುಡಿ ಇಲ್ಲ. ಜೊತೆಗೆ ಇಲ್ಲಿ ಮಾರುತಿಗೆ ನಿಷೇಧವಿದೆ. ಇಲ್ಲಿ ಹನುಮನ ಗುಡಿ ಮಾತ್ರವಲ್ಲ ಮಾರುತಿ ಕಾರುಗಳಿಗೂ ಜಾಗವಿಲ್ಲ. ಈ ಊರು ಇರುವುದು ಮಹಾರಾಷ್ಟ್ರದಲ್ಲಿ.
ಮಹಾರಾಷ್ಟ್ರದ ಬಿಸ್ರಾಖ್ ಎಂಬ ಊರಿನಲ್ಲಿ ಇಂತಹವೊಂದು ವಿಶೇಷ ಆಚರಣೆ ನೋಡಲಾಗುತ್ತದೆ. ಅಲ್ಲಿನ ಸ್ಥಳೀಯರು ರಾವಣನನ್ನು ತನ್ನ ಪೂರ್ವಜ ಎಂದು ಪರಿಗಣಿಸುತ್ತಾರೆ. ಇಲ್ಲಿನ ನಂದೂರ್ ಎಂಬ ಗ್ರಾಮವು ಅಹಮದಾಬಾದ್ನ ಪಠಾರ್ಡಿ ತಾಲೂಕಿನಲ್ಲಿದೆ. ಈ ಗ್ರಾಮದಲ್ಲಿ ಒಂದೇ ಒಂದು ಹನುಮನ ಗುಡಿ ಇಲ್ಲ. ಹಾಗೆ ಮಕ್ಕಳಿಗೂ ಹನುಮನ ಹೆಸರು ನಾಮಕರಣ ಮಾಡುವುದಿಲ್ಲ.
ಈ ವಿಶಿಷ್ಟ ಪದ್ಧತಿಯನ್ನು ಸುತ್ತುವರೆದಿರುವ ದಂತಕಥೆಯು ಹನುಮ ಹಾಗೂ ಗ್ರಾಮದ ನಡುವಿನ ಸಂಘರ್ಷ ಕುರಿತು ಹೇಳಲಿದೆ. ಇಲ್ಲಿ ನಿಂಬಾ ಎಂಬ ರಾಕ್ಷಸನಿದ್ದನಂತೆ ಆತ ರಾಮನಿಗೆ ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದನಂತೆ. ಹಾಗೆ ರಾಮನ ಕುರಿತು ಆತ ತಪಸ್ಸು ಮಾಡಿ ಒಲಿಸಿಕೊಂಡು ವರ ಕೇಳಿದ್ದನಂತೆ ಈ ಊರಿನಲ್ಲಿ ಆತನನ್ನು ಬಿಟ್ಟು ಬೇರೆ ಯಾರನ್ನು ಪೂಜಿಸಬಾರದು ನನಗೆ ಪ್ರಧಾನ ದೇವಗತೆಯ ಸ್ಥಾನ ನೀಡುವಂತೆ ವರ ಪಡೆದನಂತೆ.
ಮಾರುತಿ ಕಾರು ತಂದಿದ್ದ ವೈದ್ಯರ ಬಳಿ ಬರಲಿಲ್ಲ ರೋಗಿಗಳು
ಈ ಊರಿಗೆ ಹೊಸದಾಗಿ ಆಗಮಿಸಿದ್ದ ಡಾ. ಸುಭಾಷ್ ದೇಶಮುಖ್ ಎಂಬ ವೈದ್ಯರ ಬಳಿ ಯಾರೊಬ್ಬ ರೋಗಿಗಳು ಚಿಕಿತ್ಸೆಗೆ ಬರುತ್ತಿರಲಿಲ್ಲವಂತೆ. ಈ ಕುರಿತು ಅಚ್ಚರಿಗೊಂಡ ವೈದ್ಯರು ಸ್ಥಳೀಯರನ್ನು ವಿಚಾರಿಸಿದ್ದರಂತೆ. ಬಳಿಕ ಅವರು ಮಾರುತಿ 800 ಕಾರು ಬಳಸುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿದರಂತೆ. ನಂತರ ಅದನ್ನು ಮಾರಾಟ ಮಾಡಿ ಟಾಟಾ ಸುಮೋ ಕಾರು ಖರೀದಿಸಿದರಂತೆ. ಆದರೆ ಹನುಮಂತನ ಗುಡಿಯನ್ನು ಏಕೆ ಹೊಂದಿಲ್ಲ ಹಾಗೆ ಆತನ ಏಕೆ ಪೂಜಿಸುವುದಿಲ್ಲ ಎಂಬ ವಿಚಾರದಲ್ಲಿ ಒಂದೊಂದು ರೀತಿಯ ಕಥೆಗಳಿವೆ.
ನಿಂಬ ರಾಕ್ಷಸ ರಾಮನ ಕುರಿತು ತಪಸ್ಸಿಗೆ ಕುಳಿತಾಗ ಕೋತಿಯೊಂದು ಬಂದು ಆತನ ತಪಸ್ಸಿಗೆ ಭಂಗ ತರುವ ಯತ್ನ ಮಾಡಿತ್ತಂತೆ. ಅದರ ಅರಿವಿದ್ದರ ನಿಂಬ ತನ್ನ ತಪಸ್ಸು ಮುಂದುವರೆಸಿದನಂತೆ. ರಾಮ ವರ ನೀಡಿದ ಬಳಿಕ ಊರಿನಲ್ಲಿದ್ದ ಕೋತಿಗಳನ್ನು ಆತ ಶಿಕ್ಷಿಸಲು ಮುಂದಾದನಂತೆ ಎಂಬ ಕಥೆ ಇದೆ. ಹೀಗಾಗಿ ಇಲ್ಲಿ ಹನುಮನಿಗೆ ಗುಡಿ ಇಲ್ಲ. ಹಾಗೆ ಆ ಹೆಸರಿನವರು ಯಾರು ಇಲ್ಲಿ ನೆಲೆಸಿಲ್ಲ. ಒಮ್ಮೆ ಇಲ್ಲಿನ ಸರ್ಕಾರಿ ಶಾಲೆಗೆ ಇಬ್ಬರು ಹನುಮನ ಹೆಸರಿನ ಶಿಕ್ಷಕರು ಬಂದಿದ್ದರಂತೆ, ಆದರೆ ಶಾಲೆಯಲ್ಲಿ ಪಾಠ ಮಾಡಲು ಬರಲಿಲ್ಲವಂತೆ ಎಂದು ಕೂಡ ಗ್ರಾಮಸ್ಥರು ಹೇಳಿಕೊಳ್ಳುತ್ತಾರೆ.
ಹಾಗೆ ಊರಿನಲ್ಲಿ ಕೆಲಸಕ್ಕೆಂದು ಬಂದು ದೂರದಲ್ಲಿ ನೆಲೆಗೊಂಡಿದ್ದ ಕಾರ್ಮಿಕನೊಬ್ಬನ ಆರೋಗ್ಯ ಏರುಪೇರು ಆಗಿತ್ತು ಆತ ಉಳಿಯುವುದು ಕಷ್ಟ ಎನ್ನಲಾಗಿತ್ತು. ಆದ್ರೆ ಆನ ಹೆಸರು ಮಾರುತಿ ಎಂದು ತಿಳಿದ ಜನರು ಆತನನ್ನು ನಿಂಬ ರಕ್ಕಸನ ಗುಡಿಗೆ ತಂದು ಪ್ರಾರ್ಥನೆ ಸಲ್ಲಿಸಿದ್ದರಂತೆ ಬಳಿಕ ಆತ ಗುಣಮುಖನಾದ ಎಂದು ಹೇಳಲಾಗಿದೆ.



Click it and Unblock the Notifications