Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಈ ಊರಿನಲ್ಲಿ ಹನುಮನ ಗುಡಿಯಿಲ್ಲ...ಮಾರುತಿ ಕಾರು ಬಂದರೂ ಸಹಿಸಲ್ಲ..! ಏಕೆ ಗೊತ್ತಾ?
ಭಾರತ ವಿವಿಧತೆಯಲ್ಲಿ ಏಕತೆಯ ರಾಷ್ಟ್ರ. ಇಲ್ಲಿ ಪ್ರತಿ ಹೆಜ್ಜೆಗೂ ಹೊಸ ಸಂಸ್ಕೃತಿಗಳು, ಹೊಸ ಆಚರಣೆಗಳ ನೋಡಬಹುದು. ಅಷ್ಟೊಂದು ವಿಭಿನ್ನ ಆಚರಣೆಗಳು ಈ ನೆಲದಲ್ಲಿವೆ. ಹೀಗಾಗಿ ಭಾರತ ವಿವಿಧ ಸಂಸ್ಕೃತಿಗಳಿಂದ ತುಂಬಿರುವ ಬಹಳ ವಿಶೇಷ ನಾಡು. ಹಾಗೆ ಇಲ್ಲಿನ ಆಚರಣೆಗಳನ್ನು ಬೇರೆಲ್ಲೂ ನೀವು ನೋಡಲು ಸಾಧ್ಯವಾಗದಿಲ್ಲ. ಹಾಗೆ ಕೆಲವೊಂದು ಆಚರಣೆಗಳ ಕೇಳಿದ್ರೆ ನಿಮಗೂ ಅಚ್ಚರಿ ಆಗುತ್ತೆ.
ಅದ್ರಲ್ಲೂ ಇಲ್ಲೊಂದು ಕಡೆ ರಾಮಾಯಣದಲ್ಲಿ ಬರುವ ರಾವಣನಂತೆ ರಾಕ್ಷಸನಿಗೆ ಪೂಜೆ ಮಾಡಲಾಗುತ್ತದೆ. ಬಹುತೇಕ ಭಾಗದಲ್ಲಿ ರಾವಣನನ್ನು ರಾಕ್ಷಸ ಎಂದು ಪರಿಗಣಿಸಿರುವುದು ಹಾಗೆ ಆತನ ಗುಣಗಳನ್ನು ಕೆಟ್ಟದೆಂದು ಪರಿಗಣಿಸಲಾಗಿದೆ.

ಆದ್ರೆ ಇಲ್ಲೊಂದು ಊರಿನಲ್ಲಿ ಈ ರಾಕ್ಷಸನಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಾಗೆ ಅಚ್ಚರಿ ವಿಚಾರ ಏನೆಂದರೆ ಆ ಊರಿನಲ್ಲಿ ಹನುಮಂತನ ಒಂದೇ ಒಂದು ಗುಡಿ ಇಲ್ಲ. ಜೊತೆಗೆ ಇಲ್ಲಿ ಮಾರುತಿಗೆ ನಿಷೇಧವಿದೆ. ಇಲ್ಲಿ ಹನುಮನ ಗುಡಿ ಮಾತ್ರವಲ್ಲ ಮಾರುತಿ ಕಾರುಗಳಿಗೂ ಜಾಗವಿಲ್ಲ. ಈ ಊರು ಇರುವುದು ಮಹಾರಾಷ್ಟ್ರದಲ್ಲಿ.
ಮಹಾರಾಷ್ಟ್ರದ ಬಿಸ್ರಾಖ್ ಎಂಬ ಊರಿನಲ್ಲಿ ಇಂತಹವೊಂದು ವಿಶೇಷ ಆಚರಣೆ ನೋಡಲಾಗುತ್ತದೆ. ಅಲ್ಲಿನ ಸ್ಥಳೀಯರು ರಾವಣನನ್ನು ತನ್ನ ಪೂರ್ವಜ ಎಂದು ಪರಿಗಣಿಸುತ್ತಾರೆ. ಇಲ್ಲಿನ ನಂದೂರ್ ಎಂಬ ಗ್ರಾಮವು ಅಹಮದಾಬಾದ್ನ ಪಠಾರ್ಡಿ ತಾಲೂಕಿನಲ್ಲಿದೆ. ಈ ಗ್ರಾಮದಲ್ಲಿ ಒಂದೇ ಒಂದು ಹನುಮನ ಗುಡಿ ಇಲ್ಲ. ಹಾಗೆ ಮಕ್ಕಳಿಗೂ ಹನುಮನ ಹೆಸರು ನಾಮಕರಣ ಮಾಡುವುದಿಲ್ಲ.
ಈ ವಿಶಿಷ್ಟ ಪದ್ಧತಿಯನ್ನು ಸುತ್ತುವರೆದಿರುವ ದಂತಕಥೆಯು ಹನುಮ ಹಾಗೂ ಗ್ರಾಮದ ನಡುವಿನ ಸಂಘರ್ಷ ಕುರಿತು ಹೇಳಲಿದೆ. ಇಲ್ಲಿ ನಿಂಬಾ ಎಂಬ ರಾಕ್ಷಸನಿದ್ದನಂತೆ ಆತ ರಾಮನಿಗೆ ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದನಂತೆ. ಹಾಗೆ ರಾಮನ ಕುರಿತು ಆತ ತಪಸ್ಸು ಮಾಡಿ ಒಲಿಸಿಕೊಂಡು ವರ ಕೇಳಿದ್ದನಂತೆ ಈ ಊರಿನಲ್ಲಿ ಆತನನ್ನು ಬಿಟ್ಟು ಬೇರೆ ಯಾರನ್ನು ಪೂಜಿಸಬಾರದು ನನಗೆ ಪ್ರಧಾನ ದೇವಗತೆಯ ಸ್ಥಾನ ನೀಡುವಂತೆ ವರ ಪಡೆದನಂತೆ.
ಮಾರುತಿ ಕಾರು ತಂದಿದ್ದ ವೈದ್ಯರ ಬಳಿ ಬರಲಿಲ್ಲ ರೋಗಿಗಳು
ಈ ಊರಿಗೆ ಹೊಸದಾಗಿ ಆಗಮಿಸಿದ್ದ ಡಾ. ಸುಭಾಷ್ ದೇಶಮುಖ್ ಎಂಬ ವೈದ್ಯರ ಬಳಿ ಯಾರೊಬ್ಬ ರೋಗಿಗಳು ಚಿಕಿತ್ಸೆಗೆ ಬರುತ್ತಿರಲಿಲ್ಲವಂತೆ. ಈ ಕುರಿತು ಅಚ್ಚರಿಗೊಂಡ ವೈದ್ಯರು ಸ್ಥಳೀಯರನ್ನು ವಿಚಾರಿಸಿದ್ದರಂತೆ. ಬಳಿಕ ಅವರು ಮಾರುತಿ 800 ಕಾರು ಬಳಸುತ್ತಿರುವುದು ಇದಕ್ಕೆ ಕಾರಣ ಎಂದು ತಿಳಿದರಂತೆ. ನಂತರ ಅದನ್ನು ಮಾರಾಟ ಮಾಡಿ ಟಾಟಾ ಸುಮೋ ಕಾರು ಖರೀದಿಸಿದರಂತೆ. ಆದರೆ ಹನುಮಂತನ ಗುಡಿಯನ್ನು ಏಕೆ ಹೊಂದಿಲ್ಲ ಹಾಗೆ ಆತನ ಏಕೆ ಪೂಜಿಸುವುದಿಲ್ಲ ಎಂಬ ವಿಚಾರದಲ್ಲಿ ಒಂದೊಂದು ರೀತಿಯ ಕಥೆಗಳಿವೆ.
ನಿಂಬ ರಾಕ್ಷಸ ರಾಮನ ಕುರಿತು ತಪಸ್ಸಿಗೆ ಕುಳಿತಾಗ ಕೋತಿಯೊಂದು ಬಂದು ಆತನ ತಪಸ್ಸಿಗೆ ಭಂಗ ತರುವ ಯತ್ನ ಮಾಡಿತ್ತಂತೆ. ಅದರ ಅರಿವಿದ್ದರ ನಿಂಬ ತನ್ನ ತಪಸ್ಸು ಮುಂದುವರೆಸಿದನಂತೆ. ರಾಮ ವರ ನೀಡಿದ ಬಳಿಕ ಊರಿನಲ್ಲಿದ್ದ ಕೋತಿಗಳನ್ನು ಆತ ಶಿಕ್ಷಿಸಲು ಮುಂದಾದನಂತೆ ಎಂಬ ಕಥೆ ಇದೆ. ಹೀಗಾಗಿ ಇಲ್ಲಿ ಹನುಮನಿಗೆ ಗುಡಿ ಇಲ್ಲ. ಹಾಗೆ ಆ ಹೆಸರಿನವರು ಯಾರು ಇಲ್ಲಿ ನೆಲೆಸಿಲ್ಲ. ಒಮ್ಮೆ ಇಲ್ಲಿನ ಸರ್ಕಾರಿ ಶಾಲೆಗೆ ಇಬ್ಬರು ಹನುಮನ ಹೆಸರಿನ ಶಿಕ್ಷಕರು ಬಂದಿದ್ದರಂತೆ, ಆದರೆ ಶಾಲೆಯಲ್ಲಿ ಪಾಠ ಮಾಡಲು ಬರಲಿಲ್ಲವಂತೆ ಎಂದು ಕೂಡ ಗ್ರಾಮಸ್ಥರು ಹೇಳಿಕೊಳ್ಳುತ್ತಾರೆ.
ಹಾಗೆ ಊರಿನಲ್ಲಿ ಕೆಲಸಕ್ಕೆಂದು ಬಂದು ದೂರದಲ್ಲಿ ನೆಲೆಗೊಂಡಿದ್ದ ಕಾರ್ಮಿಕನೊಬ್ಬನ ಆರೋಗ್ಯ ಏರುಪೇರು ಆಗಿತ್ತು ಆತ ಉಳಿಯುವುದು ಕಷ್ಟ ಎನ್ನಲಾಗಿತ್ತು. ಆದ್ರೆ ಆನ ಹೆಸರು ಮಾರುತಿ ಎಂದು ತಿಳಿದ ಜನರು ಆತನನ್ನು ನಿಂಬ ರಕ್ಕಸನ ಗುಡಿಗೆ ತಂದು ಪ್ರಾರ್ಥನೆ ಸಲ್ಲಿಸಿದ್ದರಂತೆ ಬಳಿಕ ಆತ ಗುಣಮುಖನಾದ ಎಂದು ಹೇಳಲಾಗಿದೆ.



Click it and Unblock the Notifications