ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ಸೇವಿಸಬಾರದು ಯಾಕೆ?

ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರಸಾದವನ್ನು ಸೇವಿಸುವುದು ವಾಡಿಕೆ. ದೇವರಿಗೆ ನೈವೇದ್ಯ ಮಾಡಿದ ಪ್ರಸಾದ ಬಹಳ ಶ್ರೇಷ್ಠ ಅಂತಲೂ ಹೇಳಲಾಗುತ್ತದೆ. ಹೆಚ್ಚಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ನೈವೇದ್ಯ ರೂಪದಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ. ಜನರು ಆ ಪ್ರಸಾದವನ್ನು ಸ್ವೀಕರಿಸಿ ದೇವರ ಆಶೀರ್ವಾದಕ್ಕೂ ಪಾತ್ರರಾಗುತ್ತಾರೆ.

Why Is Prasad Offered to a Shivling Not Meant to Be Consumed? in Kannada.

ಆದರೆ ನಿಮಗೊತ್ತಾ ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ನಾವು ಸೇವಿಸುವಂತಿಲ್ಲ. ಹೌದು, ಶಿವಲಿಂಗಕ್ಕೆ ನೈವೇದ್ಯ ಮಾಡಿದ ಪ್ರಸಾದವನ್ನು ಸಾಮಾನ್ಯ ಜನ ಸೇವಿಸಬಾರದು ಅಂತ ಹೇಳಲಾಗುತ್ತದೆ. ಒಂದು ವೇಳೆ ಶಿವಲಿಂಗಕ್ಕೆ ಅರ್ಪಿಸಿದ ನೈವೇದ್ಯವನ್ನು ನಾವು ಸೇವಿಸಿದ್ರೆ ಒಳ್ಳೆಯದಾಗೋದಿಲ್ಲ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ಯಾವ ಕಾರಣಕ್ಕೆ ಸೇವಿಸಬಾರದು ಅನ್ನೋದನ್ನು ತಿಳಿಯೋಣ.

ಚಂಡೇಶ್ವರನ ಭಾಗವನ್ನು ಸೇವಿಸೋದು ಒಳ್ಳೆಯದಲ್ಲ!

ಪುರಾಣಗಳ ಪ್ರಕಾರ ಚಂಡೇಶ್ವರ ಶಿವನ ಬಾಯಿಯಲ್ಲಿ ಕಾಣಿಸಿಕೊಂಡನು ಅಂತ ಹೇಳಲಾಗುತ್ತದೆ. ಚಂಡೇಶ್ವರನು ದೆವ್ವ ಮತ್ತು ಆತ್ಮಗಳ ಮುಖ್ಯಸ್ಥ. ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವು ಚಂದೇಶ್ವರನ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಅರ್ಪಿಸುವ ಚಂಡೇಶ್ವರದ ಭಾಗವನ್ನು ತೆಗೆದುಕೊಳ್ಳುವುದು ದೆವ್ವ ಮತ್ತು ಆತ್ಮಗಳ ಭಾಗವೆಂದು ಪರಿಗಣಿಸಲಾಗಿದೆ. ಹಾಗಾಗಿ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ಸ್ವೀಕರಿಸಬಾರದು ಎಂದು ಹೇಳಲಾಗುತ್ತದೆ.

ಯಾವ ಶಿವಲಿಂಗಕ್ಕೆ ಅರ್ಪಿಸಿದ ಆಹಾರ ನಾವು ಸೇವಿಸಬಾರದು?

ಲೋಹದಿಂದ ಮಾಡಿದ ಶಿವಲಿಂಗ ಎಂದರೆ ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಲೋಹಗಳಿಂದ ಮಾಡಿದ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ತಿನ್ನಬಹುದು. ಈ ಲೋಹಗಳಿಂದ ಮಾಡಿದ ಶಿವಲಿಂಗದ ಪ್ರಸಾದವನ್ನು ಸೇವಿಸುವುದರಿಂದ ಯಾವುದೇ ರೀತಿಯ ದೋಷ ಉಂಟಾಗುವುದಿಲ್ಲ.

ನೀವು ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವನ್ನು ಸೇವಿಸಿದರೆ ಅಥವಾ ಅದನ್ನು ಮನೆಗೆ ತೆಗೆದುಕೊಂಡು ಹೋದರೆ ಈ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇನ್ನೂ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ತಜ್ಞರನ್ನು ಸಂಪರ್ಕಿಸಿದರೆ ಉತ್ತಮ.

ಸೂಚನೆ : ಈ ಮೇಲಿನ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು, ಹಾಗೂ ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿ ಇರೋದಿಲ್ಲ.

English summary

Why Is Prasad Offered to a Shivling Not Meant to Be Consumed? in Kannada.

Why Is Prasad Offered to a Shivling Not Meant to Be Consumed. Read more.
Story first published: Thursday, August 17, 2023, 18:00 [IST]
X
Desktop Bottom Promotion