Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ಸೇವಿಸಬಾರದು ಯಾಕೆ?
ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರಸಾದವನ್ನು ಸೇವಿಸುವುದು ವಾಡಿಕೆ. ದೇವರಿಗೆ ನೈವೇದ್ಯ ಮಾಡಿದ ಪ್ರಸಾದ ಬಹಳ ಶ್ರೇಷ್ಠ ಅಂತಲೂ ಹೇಳಲಾಗುತ್ತದೆ. ಹೆಚ್ಚಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ನೈವೇದ್ಯ ರೂಪದಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ. ಜನರು ಆ ಪ್ರಸಾದವನ್ನು ಸ್ವೀಕರಿಸಿ ದೇವರ ಆಶೀರ್ವಾದಕ್ಕೂ ಪಾತ್ರರಾಗುತ್ತಾರೆ.

ಆದರೆ ನಿಮಗೊತ್ತಾ ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ನಾವು ಸೇವಿಸುವಂತಿಲ್ಲ. ಹೌದು, ಶಿವಲಿಂಗಕ್ಕೆ ನೈವೇದ್ಯ ಮಾಡಿದ ಪ್ರಸಾದವನ್ನು ಸಾಮಾನ್ಯ ಜನ ಸೇವಿಸಬಾರದು ಅಂತ ಹೇಳಲಾಗುತ್ತದೆ. ಒಂದು ವೇಳೆ ಶಿವಲಿಂಗಕ್ಕೆ ಅರ್ಪಿಸಿದ ನೈವೇದ್ಯವನ್ನು ನಾವು ಸೇವಿಸಿದ್ರೆ ಒಳ್ಳೆಯದಾಗೋದಿಲ್ಲ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ಯಾವ ಕಾರಣಕ್ಕೆ ಸೇವಿಸಬಾರದು ಅನ್ನೋದನ್ನು ತಿಳಿಯೋಣ.
ಚಂಡೇಶ್ವರನ ಭಾಗವನ್ನು ಸೇವಿಸೋದು ಒಳ್ಳೆಯದಲ್ಲ!
ಪುರಾಣಗಳ ಪ್ರಕಾರ ಚಂಡೇಶ್ವರ ಶಿವನ ಬಾಯಿಯಲ್ಲಿ ಕಾಣಿಸಿಕೊಂಡನು ಅಂತ ಹೇಳಲಾಗುತ್ತದೆ. ಚಂಡೇಶ್ವರನು ದೆವ್ವ ಮತ್ತು ಆತ್ಮಗಳ ಮುಖ್ಯಸ್ಥ. ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವು ಚಂದೇಶ್ವರನ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಅರ್ಪಿಸುವ ಚಂಡೇಶ್ವರದ ಭಾಗವನ್ನು ತೆಗೆದುಕೊಳ್ಳುವುದು ದೆವ್ವ ಮತ್ತು ಆತ್ಮಗಳ ಭಾಗವೆಂದು ಪರಿಗಣಿಸಲಾಗಿದೆ. ಹಾಗಾಗಿ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ಸ್ವೀಕರಿಸಬಾರದು ಎಂದು ಹೇಳಲಾಗುತ್ತದೆ.
ಯಾವ ಶಿವಲಿಂಗಕ್ಕೆ ಅರ್ಪಿಸಿದ ಆಹಾರ ನಾವು ಸೇವಿಸಬಾರದು?
ಲೋಹದಿಂದ ಮಾಡಿದ ಶಿವಲಿಂಗ ಎಂದರೆ ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಲೋಹಗಳಿಂದ ಮಾಡಿದ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ತಿನ್ನಬಹುದು. ಈ ಲೋಹಗಳಿಂದ ಮಾಡಿದ ಶಿವಲಿಂಗದ ಪ್ರಸಾದವನ್ನು ಸೇವಿಸುವುದರಿಂದ ಯಾವುದೇ ರೀತಿಯ ದೋಷ ಉಂಟಾಗುವುದಿಲ್ಲ.
ನೀವು ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವನ್ನು ಸೇವಿಸಿದರೆ ಅಥವಾ ಅದನ್ನು ಮನೆಗೆ ತೆಗೆದುಕೊಂಡು ಹೋದರೆ ಈ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇನ್ನೂ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ತಜ್ಞರನ್ನು ಸಂಪರ್ಕಿಸಿದರೆ ಉತ್ತಮ.
ಸೂಚನೆ : ಈ ಮೇಲಿನ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು, ಹಾಗೂ ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿ ಇರೋದಿಲ್ಲ.



Click it and Unblock the Notifications
