Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ಸೇವಿಸಬಾರದು ಯಾಕೆ?
ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಪ್ರಸಾದವನ್ನು ಸೇವಿಸುವುದು ವಾಡಿಕೆ. ದೇವರಿಗೆ ನೈವೇದ್ಯ ಮಾಡಿದ ಪ್ರಸಾದ ಬಹಳ ಶ್ರೇಷ್ಠ ಅಂತಲೂ ಹೇಳಲಾಗುತ್ತದೆ. ಹೆಚ್ಚಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ನೈವೇದ್ಯ ರೂಪದಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ. ಜನರು ಆ ಪ್ರಸಾದವನ್ನು ಸ್ವೀಕರಿಸಿ ದೇವರ ಆಶೀರ್ವಾದಕ್ಕೂ ಪಾತ್ರರಾಗುತ್ತಾರೆ.

ಆದರೆ ನಿಮಗೊತ್ತಾ ಶಿವಲಿಂಗಕ್ಕೆ ಅರ್ಪಿಸಿದ ಆಹಾರವನ್ನು ನಾವು ಸೇವಿಸುವಂತಿಲ್ಲ. ಹೌದು, ಶಿವಲಿಂಗಕ್ಕೆ ನೈವೇದ್ಯ ಮಾಡಿದ ಪ್ರಸಾದವನ್ನು ಸಾಮಾನ್ಯ ಜನ ಸೇವಿಸಬಾರದು ಅಂತ ಹೇಳಲಾಗುತ್ತದೆ. ಒಂದು ವೇಳೆ ಶಿವಲಿಂಗಕ್ಕೆ ಅರ್ಪಿಸಿದ ನೈವೇದ್ಯವನ್ನು ನಾವು ಸೇವಿಸಿದ್ರೆ ಒಳ್ಳೆಯದಾಗೋದಿಲ್ಲ ಅಂತ ಹೇಳಲಾಗುತ್ತದೆ. ಅಷ್ಟಕ್ಕು ಶಿವಲಿಂಗಕ್ಕೆ ಅರ್ಪಿಸಿದ ಪ್ರಸಾದವನ್ನು ಯಾವ ಕಾರಣಕ್ಕೆ ಸೇವಿಸಬಾರದು ಅನ್ನೋದನ್ನು ತಿಳಿಯೋಣ.
ಚಂಡೇಶ್ವರನ ಭಾಗವನ್ನು ಸೇವಿಸೋದು ಒಳ್ಳೆಯದಲ್ಲ!
ಪುರಾಣಗಳ ಪ್ರಕಾರ ಚಂಡೇಶ್ವರ ಶಿವನ ಬಾಯಿಯಲ್ಲಿ ಕಾಣಿಸಿಕೊಂಡನು ಅಂತ ಹೇಳಲಾಗುತ್ತದೆ. ಚಂಡೇಶ್ವರನು ದೆವ್ವ ಮತ್ತು ಆತ್ಮಗಳ ಮುಖ್ಯಸ್ಥ. ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವು ಚಂದೇಶ್ವರನ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಮೇಲೆ ಅರ್ಪಿಸುವ ಚಂಡೇಶ್ವರದ ಭಾಗವನ್ನು ತೆಗೆದುಕೊಳ್ಳುವುದು ದೆವ್ವ ಮತ್ತು ಆತ್ಮಗಳ ಭಾಗವೆಂದು ಪರಿಗಣಿಸಲಾಗಿದೆ. ಹಾಗಾಗಿ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ಸ್ವೀಕರಿಸಬಾರದು ಎಂದು ಹೇಳಲಾಗುತ್ತದೆ.
ಯಾವ ಶಿವಲಿಂಗಕ್ಕೆ ಅರ್ಪಿಸಿದ ಆಹಾರ ನಾವು ಸೇವಿಸಬಾರದು?
ಲೋಹದಿಂದ ಮಾಡಿದ ಶಿವಲಿಂಗ ಎಂದರೆ ತಾಮ್ರ, ಚಿನ್ನ, ಬೆಳ್ಳಿ ಮುಂತಾದ ಲೋಹಗಳಿಂದ ಮಾಡಿದ ಶಿವಲಿಂಗದ ಮೇಲೆ ಅರ್ಪಿಸಿದ ಪ್ರಸಾದವನ್ನು ತಿನ್ನಬಹುದು. ಈ ಲೋಹಗಳಿಂದ ಮಾಡಿದ ಶಿವಲಿಂಗದ ಪ್ರಸಾದವನ್ನು ಸೇವಿಸುವುದರಿಂದ ಯಾವುದೇ ರೀತಿಯ ದೋಷ ಉಂಟಾಗುವುದಿಲ್ಲ.
ನೀವು ಶಿವಲಿಂಗದ ಮೇಲೆ ಅರ್ಪಿಸುವ ಪ್ರಸಾದವನ್ನು ಸೇವಿಸಿದರೆ ಅಥವಾ ಅದನ್ನು ಮನೆಗೆ ತೆಗೆದುಕೊಂಡು ಹೋದರೆ ಈ ವಸ್ತುಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಇನ್ನೂ ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನೀವು ತಜ್ಞರನ್ನು ಸಂಪರ್ಕಿಸಿದರೆ ಉತ್ತಮ.
ಸೂಚನೆ : ಈ ಮೇಲಿನ ಮಾಹಿತಿ ಇಂಟರ್ನೆಟ್ ಆಧಾರಿತವಾಗಿದ್ದು, ಹಾಗೂ ಬೋಲ್ಡ್ ಸ್ಕೈ ಕನ್ನಡ ಇದಕ್ಕೆ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿ ಇರೋದಿಲ್ಲ.



Click it and Unblock the Notifications