ಯಾರು ಈ ಭೀಷ್ಮ? ಪಿತೃಪಕ್ಷಕ್ಕೂ ಮಹಾಭಾರತದ ಆತನಿಗೂ ಇರುವ ಸಂಬಂಧ ಗೊತ್ತಾ?

ಪಿತೃ ಪಕ್ಷ ಆರಂಭಗೊಂಡಿದೆ. ಹಿಂದೂ ಧರ್ಮದಲ್ಲಿ ಪೂರ್ವಜರಿಗೆ ಪಿಂಡ ಪ್ರದಾನ ಮಾಡುವುದು, ಅನ್ನ ಆಹಾರ ನೀಡುವ ಒಂದು ಸಂಪ್ರದಾಯ ಇದಾಗಿದೆ. ಭಾದ್ರಪದ ಮಾಸದ ಹುಣ್ಣಿಮೆಯ ದಿನಾಂಕದಿಂದ ಪ್ರಾರಂಭವಾಗುತ್ತದೆ, ಇದು ಅಶ್ವಿನ್ ಮಾಸದ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಮಹಾಲಯ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.

ಪಿತೃ ಪಕ್ಷದ ಕೊನೆಯ ದಿನವನ್ನು ಸರ್ವಪಿತೃ ಅಮಾವಾಸ್ಯ ಎಂದು ಕೂಡ ಕರೆಯಲಾಗುತ್ತದೆ. ಇದೇ ಸೆಪ್ಟೆಂಬರ್ 21ರಂದು ಕೊನೆಯ ದಿನವಾಗಿದೆ. ನಮ್ಮ ಪೂರ್ವಜರಿಗೆ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸಲು ಶ್ರಾದ್ಧ, ತರ್ಪಣ ಮತ್ತು ಪಿಂಡದಾನದಂತಹ ವಿಧಿಗಳನ್ನು ನಡೆಸಲಾಗುತ್ತದೆ. ಹಾಗೆ ಈ ದಿನವು ಮಹಾಭಾರತದ ಭೀಷ್ಮನ ನೆನೆಯುವುದು ನೋಡಬಹುದು.

Who Is This Bhishma Do You Know Connection Pitru Paksha

ಇಂದು ಪೂರ್ವಜನರ ನೆನೆದು ಪಿತೃ ಪಕ್ಷ ಆಚರಿಸುವುದಕ್ಕೂ ಮಹಾಭಾರತದ ಭೀಷ್ಮ ಪಿತಾಮಹನಿಗೂ ಸಂಬಂಧವಿದೆ. ಹಾಗಾದ್ರೆ ಪಿತೃ ಪಕ್ಷದಲ್ಲಿ ಭೀಷ್ಮನ ನೆನೆಯುವುದು ಏಕೆ ಎಂಬುದು ನಿಮಗೆ ಗೊತ್ತಾ? ಮಹಾಭಾರತದಲ್ಲಿ ಭೀಷ್ಮ ಪಿತಾಮಹರು ತಮ್ಮ ದೇಹವನ್ನು ತೊರೆದಾಗ, ಇಡೀ ಕುರು ಕುಲವು ದುಃಖದಲ್ಲಿ ಮುಳುಗಿತು ಎಂದು ಉಲ್ಲೇಖಿಸಲಾಗಿದೆ.

ಭೀಷ್ಮರ ಮರಣದ ನಂತರ ಪಾಂಡವರು ಅಂತ್ಯಕ್ರಿಯೆಗಳ ನೆರವೇರಿಸಲು ಮುಂದಾದರು ಹಾಗೆ ಪಿಂಡದಾನದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡರು. ಹಾಗೆ ಧರ್ಮರಾಜ ಯುಧಿಷ್ಠಿರನು ಧರ್ಮ ಮತ್ತು ನೀತಿಯನ್ನು ಅನುಸರಿಸಿ ವಿಧಿಗಳನ್ನು ಮುನ್ನಡೆಸಿದನು. ಅರ್ಜುನನು ತನ್ನ ಬಾಣಗಳಿಂದ ಅಗ್ಮಿಯನ್ನು ಭೂಮಿಗಿಳಿಸಿನು, ಅದೇ ಸಮಯದಲ್ಲಿ ನಕುಲ ಹಾಗೂ ಸಹದೇವರು ಮಂತ್ರಗಳ ಪಠಿಸಿದರು ಎಂದು ಹೇಳಲಾಗಿದೆ. ಹಾಗೆ ಆಹುತಿ ಮತ್ತು ಜಲನು ಅರ್ಪಣೆ ಮಾಡಿದನು.

ಭೀಷ್ಮ ಪಿತಾಮಹ ಶ್ರಾದ್ಧದಲ್ಲಿ ಎಲ್ಲಾ ಐವರು ಸಹೋದರರು ಭಾಗಿಯಾಗಿದ್ದರು. ಹೀಗಾಗಿ ಮಹಾಭಾರತದಲ್ಲಿ ನಡೆದ ಈ ಆಚರಣೆಯು ಕರ್ತವ್ಯ ಎಂದು ಪರಿಗಣಿಸಲ್ಪಟ್ಟಿತು. ಭೀಷ್ಮ ಪಿತಾಮಹರ ಪಿಂಡದಾನದಿಂದ, ಯುದ್ಧಭೂಮಿಯಲ್ಲಿ ಎಷ್ಟೇ ಮಹಾನ್ ಯೋಧ ಬಿದ್ದರೂ, ಧರ್ಮ ಮತ್ತು ಕರ್ತವ್ಯವನ್ನು ಅನುಸರಿಸುವುದು ಜೀವನದ ದೊಡ್ಡ ಪಾಠ ಎಂದು ಪರಿಗಣಿಸಲಾಗಿದೆ.

ಇಂದಿಗೂ ಸಹ ಭೀಷ್ಮ ಅಷ್ಟಮಿಯ ದಿನವನ್ನು ಪೂರ್ವಜರಿಗೆ ತರ್ಪಣ ಮತ್ತು ಪಿಂಡ ದಾನಕ್ಕೆ ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ಭೀಷ್ಮ ಪಿತಾಮಹನಿಗೆ ಪಿಂಡ ಪ್ರದಾನ ಮಾಡಿದ ದಿನದಂದೇ ಪೂರ್ವಜರಿಗೂ ಪಿಂಡ ದಾನ ಮಾಡುವುವು ಅನ್ನಾಹಾರ ಹಾಕುವುದು ನೋಡಬಹುದು.

ಭೀಷ್ಮ ಏಕೆ ಮುಖ್ಯ?

ಮಹಾಭಾರತದ ಭೀಷ್ಮ ಪಿತಾಮಹನು ಗಂಗೆಯ 8ನೇ ಮಗ. ಉಳಿದ 7 ಮಂದಿಯನ್ನು ಗಂಗಾ ನದಿಗೆ ಎಸೆಯಲಾಗಿತ್ತಂತೆ. ಶಾಂತನು ಹಾಗೂ ಗಂಗೆಯ ಪುತ್ರನಾದ ಭೀಷ್ಮನು ಚಿಕ್ಕಮ್ಮನಿಂದ ಮಾತು ಪಡೆದುಕೊಂಡನು. ಗಂಗೆಯ ಮರಣದ ನಂತರ ಶಾಂತನು ಸತ್ಯವತಿಯ ಮದುವೆಯಾಗಲು ಇಚ್ಛಿಸಿದನು. ಆದ್ರೆ ಸತ್ಯವತಿಯು ಭೀಷ್ಮನ ಬಳಿ ಬಂದು ಶಾಂತನನ್ನು ವಿವಾಹವಾಗಬೇಕಾದರೆ ತನ್ನ ಪುತ್ರರನ್ನು ಹಸ್ತಿನಾಪುರದ ಸಿಂಹಾಸನದಲ್ಲಿ ಕೂರುವಂತೆ ಮಾಡಬೇಕು ಎಂದು ಮಾತುಪಡೆದಳು. ಯಾಕೆಂದರೆ ಭೀಷ್ಮನು ಒಂದು ವೇಳೆ ಮದುವೆಯಾದರೆ ಆತನ ಪುತ್ರರು ಹಸ್ತಿನಾಪುರದ ರಾಜರಾಗುತ್ತಾರೆ ಎಂಬುದು ಸತ್ಯವತಿಯ ಉಪಾಯವಾಗಿತ್ತು.

ಸತ್ಯವತಿಯ ಮಾತಿಗೆ ಒಪ್ಪಿದ ಭೀಷ್ಮನು ಕೊನೆಯವರೆಗೂ ಮದುವೆಯಾಗದೆ ಬ್ರಹ್ಮಚಾರಿಯಾಗಿ ಉಳಿಯುವುದಾಗಿ ಮಾತು ನೀಡಿದ. ಈ ವಿಚಾರ ತಿಳಿದ ಶಾಂತನು ಪುತ್ರನ ಪಿತೃ ಪ್ರೇಮ ಕಂಡು ವರ ನೀಡಿದನು. ನಿನ್ನ ಸಾವು ನೀನು ಬಯಸಿದಾಗ ಬರಲಿದೆ ಎಂದು ಹೇಳಿದನು. ಹಾಗೆ ಭೀಷ್ಮನ ಪ್ರತಿಜ್ಞೆಯನ್ನು ಮುಂದೆಯೂ ನೆನೆಯುತ್ತಾರೆ ಎಂದು ಹೇಳಿದನಂತೆ.

ಇನ್ನು ಭೀಷ್ಮನು ಕೂಡ ಅರ್ಜುನನ ಬಾಣದಿಂದ ಪ್ರಾಣ ಬಿಡಬೇಕಾಯಿತು. ಆದ್ರೆ ಮಾಘ ಮಾಸದ ಶುಕ್ಲ ಪಕ್ಷ ಅರ್ಧ ಬಂದಿದೆ. ಈಗ ನಾನು ನನ್ನ ದೇಹವನ್ನು ಬಿಡಲು ಬಯಸುತ್ತೇನೆ ಎಂದು ಭೀಷ್ಮ ಹೇಳಿಕೊಂಡನು, ಹೀಗಾಗಿ ಭೀಷ್ಮನ ಮರಣದ ನಂತರ ಪಾಂಡವರು ಸೇರಿ ಪಿಂಡ ಪ್ರದಾನ ಮಾಡಿದ್ದರು.

English summary

Who Is This Bhishma? Do You Know Connection Pitru Paksha?

The last day of Pitru Paksha is also known as Sarva Pitru Amavasya. This last day falls on September 21st.
Story first published: Thursday, September 11, 2025, 19:28 [IST]
X
Desktop Bottom Promotion