Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಅಂಬಾರಿ ಹೊತ್ತ ಮೊಟ್ಟ ಮೊದಲ ಆನೆ ಯಾವುದು? ಇದು ರಾಜರ ಮುದ್ದಿನ ಆನೆ ಆಗಿದ್ದೇಕೆ?
ಮೈಸೂರು ದಸರಾ ಸಂಭ್ರಮ ಆರಂಭಗೊಂಡಿದೆ. ಮೈಸೂರು ದಸರಾ ಅಂದರೆ ಇಡೀ ವಿಶ್ವದಲ್ಲೇ ಪ್ರಸಿದ್ಧಿ, ಇತಿಹಾಸದ ದಿನಗಳನ್ನು ನೆನಪು ಮಾಡುವ ಈ ಹಬ್ಬದಲ್ಲಿ ಇಡೀ ಮೈಸೂರು ಹಬ್ಬದ ಸಂಭ್ರಮದಲ್ಲಿ ಮಿಂದೇಳಲಿದೆ. ಈ 9 ದಿನಗಳ ಉತ್ಸವದಲ್ಲಿ ಕೊನೆಯದಾಗಿ ನಡೆಯುವ ಜಂಬೂಸವಾರಿ ಉತ್ಸವ ನೋಡಲೆಂದೆ ವಿಶ್ವದ ಮೂಲೆ ಮೂಲೆಯಿಂದಲೂ ಜನರು ಆ ದಿನ ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಾರೆ.
ಈ ಜಂಬೂಸವಾರಿಯಲ್ಲಿ ಪ್ರಮುಖ ಆಕರ್ಷಣೆ ಅಂದರೆ ಚಿನ್ನದ ಅಂಬಾರಿ. ಬೇರೆ ಎಲ್ಲಿಯೂ ನೋಡಲು ಸಿಗದ ಚಿನ್ನದ ಅಂಬಾರಿ ಅಂದು ಮೈಸೂರು ಬೀದಿಯಲ್ಲಿ ಮೆರವಣಿಗೆಯಲ್ಲಿ ನೋಡಬಹುದು. ಚಾಮುಂಡೇಶ್ವರಿ ತಾಯಿ ಈ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಭಕ್ತರನ್ನು ಆಶೀರ್ವದಿಸುತ್ತಾಳೆ. ಈ ಸಂಭ್ರಮ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸೇರುತ್ತಾರೆ.

ಇನ್ನು ಈ ಸಂಭ್ರಮದಲ್ಲಿ ಮತ್ತೊಂದು ಆಕರ್ಷಣೆ ಅಂದರೆ ಅಂಬಾರಿಯನ್ನು ಹೊರುವ ಆನೆಗಳು, ಈ ಆನೆಗಳಿಗೆ ಅಲಂಕಾರಿ ಮಾಡಿ ಮೆರವಣಿಗೆಗೆ ತರವುವಾಗ ಅವು ಸಹ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತವೆ, ಯಾವುದೆ ಅವಘಡ ಮಾಡದೆ ಜಂಬೂಸವಾರಿಯಲ್ಲಿ ಭಾಗಿಯಾಗುತ್ತವೆ. ಅಲ್ಲದೆ ಅಂಬಾರಿ ಹೊರುವ ಆನೆ ಮಿಕ್ಕೆಲ್ಲಾ ಆನೆಗಳಿಗಿಂತ ಹೆಚ್ಚು ಗಮನ ಸೆಳೆಯುತ್ತದೆ.
ಅಂಬಾರಿಯನ್ನು ಆನೆಯ ಮೇಲೆ ಮೆರವಣಿಗೆ ಮಾಡುವುದು ದಶಕಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಮೊಟ್ಟ ಮೊದಲ ಬಾರಿಗೆ ಈ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು ಎಂದು ನಿಮಗೆ ಗೊತ್ತಾ? ಮೈಸೂರಿನ ಬೀದಿಯಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗಿದ ಆನೆ ಯಾವುದು?
ಅದು 1860ರ ದಶಕ, ಮೈಸೂರು ರಾಜರ ಮನೆತನ ಆಗ ಅತ್ಯಂತ ಸುಭಿಕ್ಷ, ಸಂಪತ್ಭರಿತ ನಾಡಾಗಿತ್ತು. ಈ ವೇಳೆಯಲ್ಲಿ ದಸರಾ ಉತ್ಸವ ಸಹ ನಡೆಯುತ್ತಿತ್ತು. ಆದರೆ ಆನೆಗಳ ಮೂಲಕ ಅಂಬಾರಿ ಹೊರುವ ಸಂಪ್ರದಾಯ ಆರಂಭಗೊಂಡಿದ್ದು ಕೂಡ ಇದೇ ವರ್ಷ. ಅದು ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಆನೆಯೊಂದು ಜನರಿಗೆ ಭಯ ಹುಟ್ಟಿಸಿತ್ತು. ಈ ಆನೆಯನ್ನು ಸೆರೆಹಿಡಿದು ಮೈಸೂರಿಗೆ ತರಲಾಗಿತ್ತು. ಬಳಿಕ ಇದೇ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ರಾಜರು ದಸರಾ ಉತ್ಸವಕ್ಕೆ ಮುಂದಾದರು. ಅದೇ ಮೊಟ್ಟ ಮೊದಲ ಬಾರಿಗೆ ರಾಜರನ್ನು ಹೊತ್ತ ಜಯಮಾರ್ತಾಂಡ ಆನೆ.
ರಾಜರ ಮುದ್ದಿನ ಆನೆ ಜಯಮಾರ್ತಾಂಡ
ಈ ಆನೆ ಮೊಟ್ಟ ಮೊದಲ ಬಾರಿಗೆ ರಾಜರನ್ನು ಹೊತ್ತಿತ್ತು. ಹೀಗಾಗಿ ರಾಜರ ಪಾಲಿನ ಅತ್ಯಂತ ಮುದ್ದಿನ ಆನೆಯಾಗಿ ಬೆಳೆದಿತ್ತು. ದಶಕಳ ಕಾಲ ಇದೇ ಆನೆ ಅಂಬಾರಿ ಹೊರಲು ಮುಂದಾಗಿತ್ತು. ದೀರ್ಘಕಾಲ ದಸರಾದಲ್ಲಿ ಪಾಲ್ಗೊಂಡ ಆನೆ ಕೂಡ ಇದೆ ಆಗಿದೆ. ಹೀಗಾಗಿ ಮೈಸೂರಿನ ಅರಮನೆ ಬಳಿ ರಾಜಮಾರ್ತಾಂಡ ಪ್ರವೇಶ ದ್ವಾರ ಎಂಬುದಾಗಿ ನಾಮಕರಣ ಮಾಡಲಾಗಿದೆ.
ರಾಜರನ್ನು ಹೊತ್ತ ಕೊನೆಯ ಆನೆ ಯಾವುದು?
ಜಯಮಾರ್ತಾಂಡ ರಾಜರ ಮುದ್ದಿನ ಆನೆಯಾಗಿ ರಾಜರನ್ನು ಅಂಬಾರಿಯಲ್ಲಿ ಕೂರಿಸಿಕೊಂಡು ಮೈಸೂರು ದಸರಾದಲ್ಲಿ ಭಾಗಿಯಾಗುತ್ತಿತ್ತು. ಆದರೆ ವರ್ಷಗಳು ಉರುಳಿದಂತೆ ಸಂಪ್ರದಾಯಗಳು ಬದಲಾದವು. ನಂತರದಲ್ಲಿ ರಾಜರ ಆಳ್ವಿಕೆ ಕೊನೆಗೊಂಡಾಗ ಅಂಬಾರಿಯಲ್ಲಿ ರಾಜರ ಬದಲಾಗಿ ಚಾಮುಂಡೇಶ್ವರಿ ದೇವಿಯ ಮೂರ್ತಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಹೀಗಾಗಿ ರಾಜರನ್ನು ಕೊನೆಯದಾಗಿ ಹೊತ್ತು ಸಾಗಿದ ಆನೆ ಅಂದರೆ ಬಿಳಿಗಿರಿ. 7 ಸಾವಿರ ಕೆ.ಜಿ ತೂಕವಿದ್ದ ಈ ಬಿಳಿಗಿರಿ ಎಂಬ ಆನೆ ರಾಜರನ್ನು ಹೊತ್ತು ಸಾಗಿದ ಕೊನೆಯ ಆನೆ. ಇದು 1975ರಲ್ಲಿ ಮರಣ ಹೊಂದಿತ್ತು.
ಸಿನಿಮಾದಲ್ಲಿ ನಟಿಸಿದ ಅಂಬಾರಿ ಆನೆ
ಅಂಬಾರಿ ಹೊತ್ತು ಸಾಗುತ್ತಿದ್ದ ರಾಜೇಂದ್ರ ಎಂಬ ಆನೆ ಮೊಟ್ಟ ಮೊದಲ ಬಾರಿಗೆ ಸಿನಿಮಾದಲ್ಲೂ ಕಾಣಿಸಿಕೊಂಡಿತು. ಡಾ. ರಾಜ್ ಕುಮಾರ್ ನಟನೆಯ ಗಂಧದಗುಡಿ ಸಿನಿಮಾದಲ್ಲಿ ಬರುವ ಹಾಡೊಂದರಲ್ಲಿ ರಾಜ್ಕುಮಾರ್ ಅವರು ಕುಳಿತು ಸಾಗುವ ಆನೆ ದಸರಾದಲ್ಲಿ ಅಂಬಾರಿ ಹೊತ್ತು ಸಾಗಿದ ರಾಜೇಂದ್ರ ಆನೆಯಾಗಿತ್ತು.



Click it and Unblock the Notifications











