Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೊಹಿನೂರ್ ವಜ್ರ ಸಿಕ್ಕಿದ್ದು ಎಲ್ಲಿ? ಮೊದಲು ಸಿಕ್ಕಿದ್ದು ಯಾರಿಗೆ? ಈಗ 13 ಬುರ್ಜ್ ಖಲೀಫಾ ಮೌಲ್ಯ ಹೊಂದಿದೆ!
ನೀವು ಕೋಹಿನೂರ್ ವಜ್ರದ ಹೆಸರು ಖಂಡಿತ ಕೇಳಿರುತ್ತೀರಿ. ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದಿರುವ ಅತ್ಯಮೂಲ್ಯ ವಸ್ತು ಅದು. ಭಾರತದಿಂದ ಇಂಗ್ಲೆಂಡ್ಗೆ ಕಕೊಡೊಯ್ದು, ಅಲ್ಲಿನ ರಾಜರ ಪಟ್ಟಾಭಿಷೇಕ ಸೇರಿದಂತೆ ಹಲವು ಸಮಾರಂಭಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಆ ಕೋಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಕೂಗು ಸಹ ಕೇಳಿಬಂದಿದ್ದು, ಈ ಕುರಿತಂತೆ ಸಿದ್ಧತೆಗಳು ಸಹ ನಡೆಯುತ್ತಲೇ ಇವೆ.
1739 ರಲ್ಲಿ ಪರ್ಷಿಯಾದ ನಾದಿರ್ ಶಾ ಭಾರತವನ್ನು ಆಕ್ರಮಿಸುವವರೆಗೂ ವಜ್ರವು ಮೊಘಲ್ ಖಜಾನೆಗೆ ಸೇರಿತ್ತು. ಕ್ರೂರ ವಿಜಯದ ನಂತರ, ಅವರು ಕೊಹಿನೂರ್ ಅನ್ನು ವಶಪಡಿಸಿಕೊಂಡರು ಮತ್ತು ಅದನ್ನು ಪರ್ಷಿಯಾಕ್ಕೆ ಕೊಂಡೊಯ್ದರು.

ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಬೆಲೆಬಾಳುವ ರತ್ನಗಳಲ್ಲಿ ಒಂದಾದ ಕೊಹಿನೂರ್ ವಜ್ರವು ತನ್ನ ಬೆರಗುಗೊಳಿಸುವ ತೇಜಸ್ಸಿನಷ್ಟು ರಹಸ್ಯಗಳನ್ನು ಹೊಂದಿದೆ. ಇಂದು 1.67 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿರುವ ಈ ವಜ್ರವು ಇಂದಿಗೂ ವಿಶ್ವದ ಅತೀ ಹೆಚ್ಚು ಮೌಲ್ಯದ ವ್ರಜ ಎಂಬ ಕೀರ್ತಿ ಪಡೆದುಕೊಂಡಿದೆ.
ಭಾರತದಲ್ಲಿ ಯಾವ ಭಾಗದಲ್ಲಿ ಈ ವಜ್ರ ಸಿಕ್ಕಿತ್ತು?
ಕೊಹಿನೂರ್ನ ಕಥೆಯು ಆಂಧ್ರಪ್ರದೇಶದಿಂದ ಆರಂಭಗೊಳ್ಳುತ್ತದೆ. ಇಲ್ಲಿನ ಐತಿಹಾಸಿಕ ಗೋಲ್ಕೊಂಡಾ ಕೋಟೆಯಲ್ಲಿ ಈ ವಜ್ರದ ಕಥೆ ಹುಟ್ಟಿಕೊಳ್ಳುತ್ತದೆ. ಅದರಲ್ಲೀ ಈ ಕೋಟೆಯ ಕೊಲ್ಲೂರು ಗಣಿಯಲ್ಲಿ ಈ ವಜ್ರ ಸಿಕ್ಕಿತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಪರ್ಷಿಯನ್ ಭಾಷೆಯಲ್ಲಿ ಕೊಹಿನೂರ್ ಎಂದರೆ ಬೆಳಕಿನ ಪರ್ವತ ಎಂಬ ಹೆಸರು ಬರುತ್ತದೆ. ಈ ವಜ್ರವು ಆರಂಭದಲ್ಲಿ ಗೋಲ್ಕೊಂಡಾದ ಸುಲ್ತಾನ್ ಅಬ್ದುಲ್ಲಾ ಕುತುಬ್ ಷಾ ಅವರ ವಶದಲ್ಲಿತ್ತು. ಆದಾಗ್ಯೂ, ಪರ್ಷಿಯನ್ ಸಾಹಸಿ ಮತ್ತು ಸುಲ್ತಾನನ ವಿಶ್ವಾಸಾರ್ಹ ಮಂತ್ರಿಯಾದ ಮೀರ್ ಜುಮ್ಲಾ, ಮೊಘಲ್ ಚಕ್ರವರ್ತಿ ಷಹಜಹಾನ್ಗೆ ರತ್ನವನ್ನು ಉಡುಗೊರೆಯಾಗಿ ನೀಡಿದಾಗ ಅದರ ಪ್ರಾಮುಖ್ಯತೆಯ ಪ್ರಯಾಣ ಪ್ರಾರಂಭವಾಯಿತು.
ಮೊಘಲ್ ರಾಜ ಷಹಜಹಾನ್ ಐಶ್ವರ್ಯದ ಸಂಕೇತವಾದ ತನ್ನ ಪ್ರಸಿದ್ಧ ನವಿಲು ಸಿಂಹಾಸನದಲ್ಲಿ ಕೊಹಿನೂರ್ ವಜ್ರವನ್ನು ಸ್ಥಾಪಿಸಿದನು. 1739 ರಲ್ಲಿ ಪರ್ಷಿಯಾದ ನಾದಿರ್ ಶಾ ಭಾರತವನ್ನು ಆಕ್ರಮಿಸುವವರೆಗೂ ವಜ್ರವು ಮೊಘಲ್ ಖಜಾನೆಯಲ್ಲಿಯೇ ಈ ವಜ್ರವಿತ್ತು. ಆದರೆ ಆತ ಈ ಕೊಹಿನೂರ್ ಅನ್ನು ವಶಪಡಿಸಿಕೊಂಡು ಪರ್ಷಿಯಾಕ್ಕೆ ಕೊಂಡೊಯ್ದನು. ಅಲ್ಲಿಂದ ಈ ವಜ್ರ ಅಫ್ಘಾನಿಸ್ತಾನಕ್ಕೆ ಮರಳಿತು. ಅಲ್ಲಿಂದ ಸಿಖ್ ಆಡಳಿತಗಾರ ಮಹಾರಾಜ ರಣಜಿತ್ ಸಿಂಗ್ ಮರುಳಿ ಪಡೆದಿದ್ದ.
ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ಸಂಪತ್ತನ್ನು ವಿಸ್ತರಿಸಲು ಉತ್ಸುಕರಾಗಿದ್ದರು, ಭಾರತದಲ್ಲಿ ತಮ್ಮ ವಸಾಹತುಶಾಹಿ ಆಳ್ವಿಕೆಯಲ್ಲಿ ಕೊಹಿನೂರ್ ಅನ್ನು ನೋಡಿದರು. ಅಂತಿಮವಾಗಿ, ಅವರು ಅದನ್ನು ವಶಪಡಿಸಿಕೊಂಡರು ಮತ್ತು ಅದನ್ನು ಇಂಗ್ಲೆಂಡ್ಗೆ ಸಾಗಿಸಿದರು, ಅಲ್ಲಿ ಅದು ಬ್ರಿಟಿಷ್ ಕ್ರೌನ್ ಜ್ಯುವೆಲ್ಸ್ನ ಭಾಗವಾಯಿತು.
13 ಬುರ್ಜ್ ಖಲೀಫಾ ನಿರ್ಮಿಸಬಹುದು
ಬುರ್ಜ್ ಖಲೀಫಾ ಈಗ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿದೆ, ಇತ್ತ ಕೊಹಿನೂರ್ ವಜ್ರದ ಮೌಲ್ಯ ಬರೋಬ್ಬರಿ 1.67 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಹಣದಲ್ಲಿ 13 ಬುರ್ಜ್ ಖಲೀಫಾವನ್ನು ನಿರ್ಮಿಸಬಹುದು.
ಕೊಹಿನೂರ್ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು?
ಕೊಹಿನೂರ್ ವಜ್ರವು ಭಗವಾನ್ ಜಗನ್ನಾಥನಿಗೆ ಸೇರಿದ್ದು ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯು ಹೇಳಿಕೆ ನೀಡಿ ಈ ಹಿಂದೆ ಸುದ್ದಿಯಾಗಿತ್ತು. ಇದನ್ನು ಇಂಗ್ಲೆಂಡ್ನಿಂದ ಭಾರತಕ್ಕೆ ತಂದು ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನಕ್ಕೆ ನೀಡಬೇಕು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆಯನ್ನು ವಹಿಸಬೇಕು ಎಂದು ಸಂಸ್ಥೆ ಮನವಿ ಸಲ್ಲಿಸಿ ಭಾರಿ ಚರ್ಚೆಗೆ ಕಾರಣವಾಗಿತ್ತು.



Click it and Unblock the Notifications









