Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಕೊಹಿನೂರ್ ವಜ್ರ ಸಿಕ್ಕಿದ್ದು ಎಲ್ಲಿ? ಮೊದಲು ಸಿಕ್ಕಿದ್ದು ಯಾರಿಗೆ? ಈಗ 13 ಬುರ್ಜ್ ಖಲೀಫಾ ಮೌಲ್ಯ ಹೊಂದಿದೆ!
ನೀವು ಕೋಹಿನೂರ್ ವಜ್ರದ ಹೆಸರು ಖಂಡಿತ ಕೇಳಿರುತ್ತೀರಿ. ಬ್ರಿಟಿಷರು ಭಾರತದಿಂದ ಕೊಳ್ಳೆ ಹೊಡೆದಿರುವ ಅತ್ಯಮೂಲ್ಯ ವಸ್ತು ಅದು. ಭಾರತದಿಂದ ಇಂಗ್ಲೆಂಡ್ಗೆ ಕಕೊಡೊಯ್ದು, ಅಲ್ಲಿನ ರಾಜರ ಪಟ್ಟಾಭಿಷೇಕ ಸೇರಿದಂತೆ ಹಲವು ಸಮಾರಂಭಗಳಲ್ಲಿ ಬಳಸಲಾಗುತ್ತಿತ್ತು. ಆದರೆ ಇತ್ತೀಚಿಗೆ ಆ ಕೋಹಿನೂರ್ ವಜ್ರವನ್ನು ಭಾರತಕ್ಕೆ ಮರಳಿ ತರಬೇಕು ಎಂಬ ಕೂಗು ಸಹ ಕೇಳಿಬಂದಿದ್ದು, ಈ ಕುರಿತಂತೆ ಸಿದ್ಧತೆಗಳು ಸಹ ನಡೆಯುತ್ತಲೇ ಇವೆ.
1739 ರಲ್ಲಿ ಪರ್ಷಿಯಾದ ನಾದಿರ್ ಶಾ ಭಾರತವನ್ನು ಆಕ್ರಮಿಸುವವರೆಗೂ ವಜ್ರವು ಮೊಘಲ್ ಖಜಾನೆಗೆ ಸೇರಿತ್ತು. ಕ್ರೂರ ವಿಜಯದ ನಂತರ, ಅವರು ಕೊಹಿನೂರ್ ಅನ್ನು ವಶಪಡಿಸಿಕೊಂಡರು ಮತ್ತು ಅದನ್ನು ಪರ್ಷಿಯಾಕ್ಕೆ ಕೊಂಡೊಯ್ದರು.

ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಬೆಲೆಬಾಳುವ ರತ್ನಗಳಲ್ಲಿ ಒಂದಾದ ಕೊಹಿನೂರ್ ವಜ್ರವು ತನ್ನ ಬೆರಗುಗೊಳಿಸುವ ತೇಜಸ್ಸಿನಷ್ಟು ರಹಸ್ಯಗಳನ್ನು ಹೊಂದಿದೆ. ಇಂದು 1.67 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿರುವ ಈ ವಜ್ರವು ಇಂದಿಗೂ ವಿಶ್ವದ ಅತೀ ಹೆಚ್ಚು ಮೌಲ್ಯದ ವ್ರಜ ಎಂಬ ಕೀರ್ತಿ ಪಡೆದುಕೊಂಡಿದೆ.
ಭಾರತದಲ್ಲಿ ಯಾವ ಭಾಗದಲ್ಲಿ ಈ ವಜ್ರ ಸಿಕ್ಕಿತ್ತು?
ಕೊಹಿನೂರ್ನ ಕಥೆಯು ಆಂಧ್ರಪ್ರದೇಶದಿಂದ ಆರಂಭಗೊಳ್ಳುತ್ತದೆ. ಇಲ್ಲಿನ ಐತಿಹಾಸಿಕ ಗೋಲ್ಕೊಂಡಾ ಕೋಟೆಯಲ್ಲಿ ಈ ವಜ್ರದ ಕಥೆ ಹುಟ್ಟಿಕೊಳ್ಳುತ್ತದೆ. ಅದರಲ್ಲೀ ಈ ಕೋಟೆಯ ಕೊಲ್ಲೂರು ಗಣಿಯಲ್ಲಿ ಈ ವಜ್ರ ಸಿಕ್ಕಿತು ಎಂದು ಇತಿಹಾಸದಲ್ಲಿ ಉಲ್ಲೇಖವಿದೆ. ಪರ್ಷಿಯನ್ ಭಾಷೆಯಲ್ಲಿ ಕೊಹಿನೂರ್ ಎಂದರೆ ಬೆಳಕಿನ ಪರ್ವತ ಎಂಬ ಹೆಸರು ಬರುತ್ತದೆ. ಈ ವಜ್ರವು ಆರಂಭದಲ್ಲಿ ಗೋಲ್ಕೊಂಡಾದ ಸುಲ್ತಾನ್ ಅಬ್ದುಲ್ಲಾ ಕುತುಬ್ ಷಾ ಅವರ ವಶದಲ್ಲಿತ್ತು. ಆದಾಗ್ಯೂ, ಪರ್ಷಿಯನ್ ಸಾಹಸಿ ಮತ್ತು ಸುಲ್ತಾನನ ವಿಶ್ವಾಸಾರ್ಹ ಮಂತ್ರಿಯಾದ ಮೀರ್ ಜುಮ್ಲಾ, ಮೊಘಲ್ ಚಕ್ರವರ್ತಿ ಷಹಜಹಾನ್ಗೆ ರತ್ನವನ್ನು ಉಡುಗೊರೆಯಾಗಿ ನೀಡಿದಾಗ ಅದರ ಪ್ರಾಮುಖ್ಯತೆಯ ಪ್ರಯಾಣ ಪ್ರಾರಂಭವಾಯಿತು.
ಮೊಘಲ್ ರಾಜ ಷಹಜಹಾನ್ ಐಶ್ವರ್ಯದ ಸಂಕೇತವಾದ ತನ್ನ ಪ್ರಸಿದ್ಧ ನವಿಲು ಸಿಂಹಾಸನದಲ್ಲಿ ಕೊಹಿನೂರ್ ವಜ್ರವನ್ನು ಸ್ಥಾಪಿಸಿದನು. 1739 ರಲ್ಲಿ ಪರ್ಷಿಯಾದ ನಾದಿರ್ ಶಾ ಭಾರತವನ್ನು ಆಕ್ರಮಿಸುವವರೆಗೂ ವಜ್ರವು ಮೊಘಲ್ ಖಜಾನೆಯಲ್ಲಿಯೇ ಈ ವಜ್ರವಿತ್ತು. ಆದರೆ ಆತ ಈ ಕೊಹಿನೂರ್ ಅನ್ನು ವಶಪಡಿಸಿಕೊಂಡು ಪರ್ಷಿಯಾಕ್ಕೆ ಕೊಂಡೊಯ್ದನು. ಅಲ್ಲಿಂದ ಈ ವಜ್ರ ಅಫ್ಘಾನಿಸ್ತಾನಕ್ಕೆ ಮರಳಿತು. ಅಲ್ಲಿಂದ ಸಿಖ್ ಆಡಳಿತಗಾರ ಮಹಾರಾಜ ರಣಜಿತ್ ಸಿಂಗ್ ಮರುಳಿ ಪಡೆದಿದ್ದ.
ಬ್ರಿಟಿಷರು ತಮ್ಮ ಸಾಮ್ರಾಜ್ಯಶಾಹಿ ಸಂಪತ್ತನ್ನು ವಿಸ್ತರಿಸಲು ಉತ್ಸುಕರಾಗಿದ್ದರು, ಭಾರತದಲ್ಲಿ ತಮ್ಮ ವಸಾಹತುಶಾಹಿ ಆಳ್ವಿಕೆಯಲ್ಲಿ ಕೊಹಿನೂರ್ ಅನ್ನು ನೋಡಿದರು. ಅಂತಿಮವಾಗಿ, ಅವರು ಅದನ್ನು ವಶಪಡಿಸಿಕೊಂಡರು ಮತ್ತು ಅದನ್ನು ಇಂಗ್ಲೆಂಡ್ಗೆ ಸಾಗಿಸಿದರು, ಅಲ್ಲಿ ಅದು ಬ್ರಿಟಿಷ್ ಕ್ರೌನ್ ಜ್ಯುವೆಲ್ಸ್ನ ಭಾಗವಾಯಿತು.
13 ಬುರ್ಜ್ ಖಲೀಫಾ ನಿರ್ಮಿಸಬಹುದು
ಬುರ್ಜ್ ಖಲೀಫಾ ಈಗ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿದೆ, ಇತ್ತ ಕೊಹಿನೂರ್ ವಜ್ರದ ಮೌಲ್ಯ ಬರೋಬ್ಬರಿ 1.67 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಹಣದಲ್ಲಿ 13 ಬುರ್ಜ್ ಖಲೀಫಾವನ್ನು ನಿರ್ಮಿಸಬಹುದು.
ಕೊಹಿನೂರ್ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು?
ಕೊಹಿನೂರ್ ವಜ್ರವು ಭಗವಾನ್ ಜಗನ್ನಾಥನಿಗೆ ಸೇರಿದ್ದು ಎಂದು ಒಡಿಶಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯು ಹೇಳಿಕೆ ನೀಡಿ ಈ ಹಿಂದೆ ಸುದ್ದಿಯಾಗಿತ್ತು. ಇದನ್ನು ಇಂಗ್ಲೆಂಡ್ನಿಂದ ಭಾರತಕ್ಕೆ ತಂದು ಪ್ರಸಿದ್ಧ ಪುರಿ ಜಗನ್ನಾಥ ದೇವಸ್ಥಾನಕ್ಕೆ ನೀಡಬೇಕು. ಇದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಸ್ಥಿಕೆಯನ್ನು ವಹಿಸಬೇಕು ಎಂದು ಸಂಸ್ಥೆ ಮನವಿ ಸಲ್ಲಿಸಿ ಭಾರಿ ಚರ್ಚೆಗೆ ಕಾರಣವಾಗಿತ್ತು.



Click it and Unblock the Notifications