Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ದೇವರ ದೀಪಕ್ಕೆ ಯಾವೆಲ್ಲಾ ಬತ್ತಿ ಬಳಸಬಹುದು? ಒಂದೊಂದು ಬಗೆಯ ಬತ್ತಿಗೆ ಇದೆ ಅದರದ್ದೇ ಆದ ಪ್ರಾಮುಖ್ಯತೆ
ದೇವರಿಗೆ ದೀಪ ಹಚ್ಚಿ ದೇವರನ್ನು ಪ್ರಾರ್ಥಿಸುವುದು ಸನಾತನ ಧರ್ಮದ ಸಂಸ್ಕೃತಿ. ಮನೆಯಲ್ಲಿ ದೀಪ ಬೆಳಗುವುದರಿಂದ ಧನಾತ್ಮಕ ಶಕ್ತಿ ಹೆಚ್ಚುವುದು. ಮನಸ್ಸಿಗೆ ಕೂಡ ಒಂಥರಾ ನೆಮ್ಮದಿ ಸಿಗುವುದು. ನಮ್ಮ ಇಷ್ಟ ದೇವರನ್ನು ದೀಪ ಹಚ್ಚಿ ಬೇಡಿದರೆ ಆ ದೇವರು ನಮ್ಮನ್ನು ಸದಾ ಕಾಯುತ್ತಾನೆ ಎಂಬುವುದು ನಮ್ಮ ಬಲವಾದ ನಂಬಿಕೆ. ಬೆಳಕು ಸತ್ಯ, ಸುಜ್ಞಾನದ ಸಂಕೇತವೂ ಹೌದು.

ನಾವು ದೇವರಿಗೆ ದೀಪ ಹಚ್ಚುವಾಗ ಬತ್ತಿ ಹಾಕಿ ದೇವರಿಗೆ ದೀಪ ಹಚ್ಚುತ್ತೇವೆ, ದೇವರಿಗೆ ಅನೇಕ ಬಗೆಯ ಬತ್ತಿಗಳನ್ನು ಬಳಸಲಾಗುವುದು. ಆದರೆ ದೇವರಿಗೆ ಯಾವ ಬಗೆಯ ಬತ್ತಿ ಬಳಸುತ್ತೇವೆ ಎಂಬುವುದರ ಹಿಂದೆಯೂ ಒಂದು ಉದ್ದೇಶವಿದೆ. ಹೇಗೆ ತುಪ್ಪದ ದೀಪ, ಎಳ್ಳೆಣ್ಣೆ ದೀಪ, ಸಾಸಿವೆಯೆಣ್ಣೆ ಅದರದ್ದೇ ಪ್ರಾಮುಖ್ಯತೆ ಹೊಂದಿದೆಯೋ ಅದೇ ರೀತಿ ವಿವಿಧ ಬಗೆ ಬತ್ತಿ ಕೂಡ ಅದರದ್ದೇ ಆದ ಪ್ರಾಮುಖ್ಯತೆ ಹೊಂದಿದೆ. ದೇವರ ದೀಪ ಹಚ್ಚಲು ಯಾವೆಲ್ಲಾ ಬಗೆಯ ಬತ್ತಿ ಬಳಸಲಾಗುತ್ತಿದೆ, ಆ ಬತ್ತಿ ಬಳಸುವುದರಿಂದ ಹಿಂದಿರುವ ಪ್ರಯೋಜನವನ್ನು ಪಡೆಯಬಹುದು ಎಂದು ನೋಡೋಣ ಬನ್ನಿ:
ಹಳದಿ ಬಣ್ಣದ ನೂಲು: ದೇವರಿಗೆ ಹಳದಿ ಬಣ್ಣದ ನೂಲು ಅಥವಾ ಅಥವಾ ಬಿಳಿ ನೂಲಿಗೆ ಅರಿಶಿಣ ಹಚ್ಚಿ ಆ ನೂಲನ್ನು ಬತ್ತಿಯಾಗಿ ಬಳಸಲಾಗುವುದು. ಕೆಲವರು ಹಳದಿ ಬಣ್ಣದ ಕಾಟನ್ ಬಟ್ಟೆಯನ್ನು ಕೂಡ ಬತ್ತಿಯಾಗಿ ಬಳಸಲಾಗುವುದು. ಪಾರ್ವತಿ ದೇವಿಯನ್ನು ಪೂಜಿಸುವಾಗ ಹಳದಿ ನೂಲಿನ ಬತ್ತಿ ಬಳಸಲಾಗುವುದು.
ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಹಳದಿ ಬಣ್ಣದ ಸೀರೆಯನ್ನು ಬತ್ತಿಯಂತೆ ಬಳಸಿದರೆ ಇಬ್ಬರ ನಡುವೆ ಇದ್ದ ಸಮಸ್ಯೆ ಬಗೆಹರಿದು ವೈವಾಹಿಕ ಜೀವನ ಚೆನ್ನಾಗಿರಲಿದೆ ಎಂಬ ನಂಬಿಕೆ ಇದೆ.
ಮದುವೆ, ಸಂತಾನ ಭಾಗ್ಯಕ್ಕಾಗಿ ಬೇಡುವಾಗ
ಕೆಲವರಿಗೆ ಮದುವೆ ಯೋಗ ಕೂಡಿ ಬಂದಿರುವುದಿಲ್ಲ, ಯಾವುದೋ ಒಂದು ಕಾರಣದಿಂದ ಮದುವೆ ತಪ್ಪಿ ಹೋಗುತ್ತಿರುತ್ತದೆ, ಇನ್ನು ಕೆಲವರು ವಿವಾಹವಾಗಿ ಕೆಲ ವರ್ಷಗಳು ಕಳೆದರೂ ಮಕ್ಕಳಾಗದಿದ್ದಾಗ ಸಂತಾನ ಅಪೇಕ್ಷಿಸಿ ದೇವರನ್ನು ಪ್ರಾರ್ಥಿಸುತ್ತಾರೆ. ಈ ಬಗೆಯ ಸಮಸ್ಯೆ ಬಗೆಹರಿಸಲು ದೇವರಿಗೆ ಕೆಂಪು ಬತ್ತಿಯ ದೀಪ ಹಚ್ಚಿದರೆ ಒಳ್ಳೆಯದು ಎಂದು ಹೇಳಲಾಗುವುದು.
ತಾವರೆಯ ದಂಟು
ತಾವರೆಯ ದಂಟನ್ನು ಕೂಡ ಬತ್ತಿಯಾಗಿ ಬಳಸಲಾಗುವುದು. ಜೀವನದಲ್ಲಿ ಪಾಪಕರ್ಮದಿಂದಾಗಿ ಹಲವಾರು ಸಮಸ್ಯೆ ಉಂಟಾಗುತ್ತಿದ್ದರೆ, ಹಿಂದಿನ ಜನ್ಮದ ಪಾಪ ಕಳೆಯಲು ಹಾಗೂ ಬದುಕಿನಲ್ಲಿ ಎದುರಾಗುತ್ತಿರುವ ಕಷ್ಟಗಳಿಂದ ಮುಕ್ತಿ ಪಡೆಯಲು ತಾವರೆಯ ದಂಟಿನ ಬತ್ತಿಯನ್ನು ದೀಪಕ್ಕೆ ಹಾಕಿ ದೀಪ ಹಚ್ಚಿ ದೇವರನ್ನು ಪ್ರಾರ್ಥಿಸಲಾಗುವುದು.
ಬಾಳೆಗಿಡದ ನಾರನ್ನು ಬತ್ತಿಯಾಗಿ ಬಳಸಲಾಗುವುದು
ಬಾಳೆಗಿಡದ ನಾರನ್ನು ಕೂಡ ಬತ್ತಿಯಾಗಿ ಬಳಸಲಾಗುವುದು. ಗೊತ್ತಿಲ್ಲದೆ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಆ ತಪ್ಪನ್ನು ಕ್ಷಮಿಸುವಂತೆ ಕೋರಲು ಬಾಳೆಗಿಡದ ನಾರಿನ ಬತ್ತಿ ಬಳಸಿ.
ರೋಸ್ ವಾಟರ್ ಬತ್ತಿ
ಬತ್ತಿಗೆ ಸ್ವಲ್ಪ ರೋಸ್ವಾಟರ್ ಹಾಕಿ ಆ ಬತ್ತಿಯನ್ನು ದೇವರಿಗೆ ಹಚ್ಚಬಹುದು, ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು, ಸಂಪತ್ತು ಐಶ್ವರ್ಯ ಹೆಚ್ಚಾಗುವುದು ಎಂಬ ನಂಬಿಕೆ ಇದೆ.



Click it and Unblock the Notifications