Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಪ್ರತಿ ಪೂಜೆಯಲ್ಲೂ ವೀಳ್ಯದೆಲೆಯನ್ನು ಬಳಕೆ ಮಾಡೋದ್ಯಾಕೆ ಗೊತ್ತಾ?
ವೀಳ್ಯದೆಲೆಗೆ ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಪೂಜೆಯಿಂದ ಹಿಡಿದು ಪ್ರತಿಯೊಂದು ಶುಭ ಕಾರ್ಯಗಳಿಗೂ ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತದೆ. ವೀಳ್ಯದೆಲೆ ಇಲ್ಲದೇ ಯಾವುದೇ ಶುಭ ಕಾರ್ಯಗಳು ಕೂಡ ನಡೆಯೋದಿಲ್ಲ. ಅಷ್ಟಕ್ಕು ಪ್ರತಿಯೊಂದು ಶುಭ ಸಮಾರಂಭಗಳಲ್ಲಿಯೂ ವೀಳ್ಯದೆಲೆಯನ್ನು ಬಳಕೆ ಮಾಡೋದು ಯಾಕೆ ಗೊತ್ತಾ? ಇದರ ಮಹತ್ವ ಏನು ಅನ್ನೋದನ್ನು ತಿಳಿಯೋಣ.
ಪೂಜೆಗೆ ವೀಳ್ಯದೆಲೆಯನ್ನು ಬಳಸೋದು ಯಾಕೆ?
ಪುರಾತನ ಕಾಲದಿಂದಲೂ ವೀಳ್ಯದೆಲೆಯನ್ನು ಶಾಸ್ತ್ರ ಸಂಪ್ರದಾಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಮನೆಯಲ್ಲಿ ಚಿಕ್ಕ ಹೋಮದಿಂದ ಹಿಡಿದು ದೊಡ್ಡ ದೊಡ್ಡ ಪೂಜೆ ಮಾಡಿಸಬೇಕಾದರೂ ವೀಳ್ಯದೆಲೆ ಇರಲೇಬೇಕು. ವೀಳ್ಯದೆಲೆಯ ಹೊರತಾಗಿ ಯಾವುದೇ ಸಂಪ್ರದಾಯಗಳು ಪೂರ್ತಿಯಾಗೋದಕ್ಕೆ ಸಾಧ್ಯವೇ ಇಲ್ಲ. ವೀಳ್ಯದೆಲೆಯು ಭಾರತದ ಉಪ ಖಂಡದಲ್ಲೇ ಹುಟ್ಟಿತು ಅಂತನೂ ಹೇಳಲಾಗುತ್ತಿದೆ. ಸುಮಾರು ಸಾವಿರಾರು ವರ್ಷಗಳ ಇತಿಹಾಸವೂ ಇದಕ್ಕಿದೆ. ಅಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ಅನೇಕ ರೋಗಗಳನ್ನು ಗುಣ ಪಡಿಸೋದಕ್ಕೂ ವೀಳ್ಯದೆಲೆಯನ್ನು ಬಳಕೆ ಮಾಡಲಾಗ್ತಿತ್ತು.

ವೀಳ್ಯದೆಲೆಯ ಸಾಂಕೇತಿಕ ಮಹತ್ವ
ವೀಳ್ಯದೆಲೆಗೆ ತುಂಬಾನೇ ಪವಿತ್ರವಾದ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ಆ ಸ್ಥಳವನ್ನು ಶುದ್ಧೀಕರಿಸಲು ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ವೀಳ್ಯದೆಲೆಯನ್ನು ಪ್ರೀತಿಯ ಸಂಕೇತ ಎಂತಲೂ ಕರೆಯಲಾಗುತ್ತದೆ. ಯಾರು ವೀಳ್ಯದೆಲೆಯನ್ನು ದೇವರಿಗೆ ಭಕ್ತಿಯಿಂದ ಅರ್ಪಿಸುತ್ತಾರೋ ಅವರು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇನ್ನೂ ಪೂಜೆಯ ಸಂದರ್ಭದಲ್ಲಿ ದೇವರಿಗೆ ವೀಳ್ಯದೆಲೆಯನ್ನು ಅರ್ಪಿಸೋವಾಗ ನಮಗಿಷ್ಟ ಬಂದಷ್ಟು ವೀಳ್ಯದೆಲೆಯನ್ನು ಅರ್ಪಿಸುವಂತಿಲ್ಲ. ಬದಲಾಗಿ ಪ್ರತಿಯೊಂದು ದೇವರಿಗೂ ಇಷ್ಟೇ ವೀಳ್ಯದೆಲೆಯನ್ನು ಅರ್ಪಿಸಬೇಕು ಎಂಬ ಕಟ್ಟು ಪಾಡುಗಳಿದೆ ಅದನ್ನು ಪಾಳಿಸಲೇಬೇಕು.
ಪೂಜೆಯಲ್ಲಿ ವೀಳ್ಯದೆಲೆಯ ಪಾತ್ರವೇನು?
ಪೂಜೆಯ ಸಂದರ್ಭದಲ್ಲಿ ಭಕ್ತಿ- ಭಾವದಿಂದ ದೇವರಿಗೆ ವೀಳ್ಯದೆಲೆ ಅರ್ಪಣೆ ಮಾಡಲಾಗುತ್ತದೆ. ಒಂದು ತಟ್ಟೆಯಲ್ಲಿ ಹೂವು, ಹಣ್ಣಿನ ಜೊತೆಗೆ ವೀಳ್ಯದೆಲೆಯನ್ನು ದೇವರಿಗೆ ಅರ್ಪಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇವಾನು ದೇವತೆಗಳು ಇದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ವೀಳ್ಯದೆಲೆಯನ್ನು ಪೂಜೆಯ ಸಂದರ್ಭದಲ್ಲಿ ಮಾತ್ರವಲ್ಲದೇ ಆರತಿ ಬೆಳಗೋವಾಗ ಜೊತೆಗೆ ದೇವರಿಗೆ ಅಲಂಕಾರ ಮಾಡಲು ಬಳಕೆ ಮಾಡಲಾಗುತ್ತದೆ.
ಪೂಜೆಗೆ ವೀಳ್ಯದೆಲೆ ಬಳಕೆ ಮಾಡೋದ್ರಿಂದ ಪುಣ್ಯ ಪಾಪ್ತಿಯಾಗುತ್ತಾ?
ಪೂಜೆಗೆ ವೀಳ್ಯದೆಲೆಯನ್ನು ಬಳಕೆ ಮಾಡೋದ್ರಿಂದ ಅನೇಕ ಪ್ರಯೋಜನಗಳಿದೆ. ವೀಳ್ಯದೆಲೆಯು ಮನಸ್ಸಿಗೆ ಶಾಂತಿಯನ್ನು ನೀಡುವುದು ಮಾತ್ರವಲ್ಲದೇ ನಮ್ಮ ಆತಂಕವನ್ನೂ ದೂರ ಮಾಡುತ್ತಂತೆ. ಜೊತೆಗೆ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಿ ಮಾಡಿ ಮನಶಾಂತಿಗೆ ಸಿಗುವಂತೆ ಮಾಡುತ್ತದೆ.
ಪ್ರತಿಯೊಂದು ಕಾರ್ಯಕ್ರಮದಲ್ಲೂ ವೀಳ್ಯದೆಲೆ ಇರಲೇಬೇಕು. ವೀಳ್ಯದೆಲೆಯ ಹೊರತಾಗಿ ಯಾವುದೇ ಕಾರ್ಯಗಳು ನಡೆಯೋದೇ ಇಲ್ಲ. ಇತ್ತ ವೀಳ್ಯದೆಲೆಯ ಜೊತೆಗೆ ಅಡಿಕೆಯನ್ನೂ ಇಡಬೇಕು. ಯಾಕಂದ್ರೆ ಇದು ಸಂಪ್ರದಾಯ. ತಾಂಬೂಲ ಪೂರ್ತಿಯಾಗಬೇಕಾದರೆ ಅಲ್ಲಿ ಎಲೆ ಹಾಗೂ ಅಡಿಕೆ ಇರಲೇಬೇಕು. ಇವು ಎರಡು ಒಟ್ಟಿಗೆ ಇದ್ದಾಗ ಪೂಜೆಗೊಂದು ಕಳೆ ಬರುತ್ತದೆ.
ವೀಳ್ಯದೆಲೆ ಕೇವಲ ಆರೋಗ್ಯಕಾರಿ ಪ್ರಯೋಜವನ್ನು ಮಾತ್ರ ಹೊಂದಿಲ್ಲ. ಇದರ ಜೊತೆಗೆ ಸಂಪ್ರದಾಯಿಕ ಮಹತ್ವವೂ ವೀಳ್ಯದೆಲೆಗಿದೆ.



Click it and Unblock the Notifications
