Latest Updates
-
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ!
ಪ್ರತಿ ಪೂಜೆಯಲ್ಲೂ ವೀಳ್ಯದೆಲೆಯನ್ನು ಬಳಕೆ ಮಾಡೋದ್ಯಾಕೆ ಗೊತ್ತಾ?
ವೀಳ್ಯದೆಲೆಗೆ ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಪೂಜೆಯಿಂದ ಹಿಡಿದು ಪ್ರತಿಯೊಂದು ಶುಭ ಕಾರ್ಯಗಳಿಗೂ ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತದೆ. ವೀಳ್ಯದೆಲೆ ಇಲ್ಲದೇ ಯಾವುದೇ ಶುಭ ಕಾರ್ಯಗಳು ಕೂಡ ನಡೆಯೋದಿಲ್ಲ. ಅಷ್ಟಕ್ಕು ಪ್ರತಿಯೊಂದು ಶುಭ ಸಮಾರಂಭಗಳಲ್ಲಿಯೂ ವೀಳ್ಯದೆಲೆಯನ್ನು ಬಳಕೆ ಮಾಡೋದು ಯಾಕೆ ಗೊತ್ತಾ? ಇದರ ಮಹತ್ವ ಏನು ಅನ್ನೋದನ್ನು ತಿಳಿಯೋಣ.
ಪೂಜೆಗೆ ವೀಳ್ಯದೆಲೆಯನ್ನು ಬಳಸೋದು ಯಾಕೆ?
ಪುರಾತನ ಕಾಲದಿಂದಲೂ ವೀಳ್ಯದೆಲೆಯನ್ನು ಶಾಸ್ತ್ರ ಸಂಪ್ರದಾಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಮನೆಯಲ್ಲಿ ಚಿಕ್ಕ ಹೋಮದಿಂದ ಹಿಡಿದು ದೊಡ್ಡ ದೊಡ್ಡ ಪೂಜೆ ಮಾಡಿಸಬೇಕಾದರೂ ವೀಳ್ಯದೆಲೆ ಇರಲೇಬೇಕು. ವೀಳ್ಯದೆಲೆಯ ಹೊರತಾಗಿ ಯಾವುದೇ ಸಂಪ್ರದಾಯಗಳು ಪೂರ್ತಿಯಾಗೋದಕ್ಕೆ ಸಾಧ್ಯವೇ ಇಲ್ಲ. ವೀಳ್ಯದೆಲೆಯು ಭಾರತದ ಉಪ ಖಂಡದಲ್ಲೇ ಹುಟ್ಟಿತು ಅಂತನೂ ಹೇಳಲಾಗುತ್ತಿದೆ. ಸುಮಾರು ಸಾವಿರಾರು ವರ್ಷಗಳ ಇತಿಹಾಸವೂ ಇದಕ್ಕಿದೆ. ಅಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ಅನೇಕ ರೋಗಗಳನ್ನು ಗುಣ ಪಡಿಸೋದಕ್ಕೂ ವೀಳ್ಯದೆಲೆಯನ್ನು ಬಳಕೆ ಮಾಡಲಾಗ್ತಿತ್ತು.

ವೀಳ್ಯದೆಲೆಯ ಸಾಂಕೇತಿಕ ಮಹತ್ವ
ವೀಳ್ಯದೆಲೆಗೆ ತುಂಬಾನೇ ಪವಿತ್ರವಾದ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ಆ ಸ್ಥಳವನ್ನು ಶುದ್ಧೀಕರಿಸಲು ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ವೀಳ್ಯದೆಲೆಯನ್ನು ಪ್ರೀತಿಯ ಸಂಕೇತ ಎಂತಲೂ ಕರೆಯಲಾಗುತ್ತದೆ. ಯಾರು ವೀಳ್ಯದೆಲೆಯನ್ನು ದೇವರಿಗೆ ಭಕ್ತಿಯಿಂದ ಅರ್ಪಿಸುತ್ತಾರೋ ಅವರು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇನ್ನೂ ಪೂಜೆಯ ಸಂದರ್ಭದಲ್ಲಿ ದೇವರಿಗೆ ವೀಳ್ಯದೆಲೆಯನ್ನು ಅರ್ಪಿಸೋವಾಗ ನಮಗಿಷ್ಟ ಬಂದಷ್ಟು ವೀಳ್ಯದೆಲೆಯನ್ನು ಅರ್ಪಿಸುವಂತಿಲ್ಲ. ಬದಲಾಗಿ ಪ್ರತಿಯೊಂದು ದೇವರಿಗೂ ಇಷ್ಟೇ ವೀಳ್ಯದೆಲೆಯನ್ನು ಅರ್ಪಿಸಬೇಕು ಎಂಬ ಕಟ್ಟು ಪಾಡುಗಳಿದೆ ಅದನ್ನು ಪಾಳಿಸಲೇಬೇಕು.
ಪೂಜೆಯಲ್ಲಿ ವೀಳ್ಯದೆಲೆಯ ಪಾತ್ರವೇನು?
ಪೂಜೆಯ ಸಂದರ್ಭದಲ್ಲಿ ಭಕ್ತಿ- ಭಾವದಿಂದ ದೇವರಿಗೆ ವೀಳ್ಯದೆಲೆ ಅರ್ಪಣೆ ಮಾಡಲಾಗುತ್ತದೆ. ಒಂದು ತಟ್ಟೆಯಲ್ಲಿ ಹೂವು, ಹಣ್ಣಿನ ಜೊತೆಗೆ ವೀಳ್ಯದೆಲೆಯನ್ನು ದೇವರಿಗೆ ಅರ್ಪಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇವಾನು ದೇವತೆಗಳು ಇದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ವೀಳ್ಯದೆಲೆಯನ್ನು ಪೂಜೆಯ ಸಂದರ್ಭದಲ್ಲಿ ಮಾತ್ರವಲ್ಲದೇ ಆರತಿ ಬೆಳಗೋವಾಗ ಜೊತೆಗೆ ದೇವರಿಗೆ ಅಲಂಕಾರ ಮಾಡಲು ಬಳಕೆ ಮಾಡಲಾಗುತ್ತದೆ.
ಪೂಜೆಗೆ ವೀಳ್ಯದೆಲೆ ಬಳಕೆ ಮಾಡೋದ್ರಿಂದ ಪುಣ್ಯ ಪಾಪ್ತಿಯಾಗುತ್ತಾ?
ಪೂಜೆಗೆ ವೀಳ್ಯದೆಲೆಯನ್ನು ಬಳಕೆ ಮಾಡೋದ್ರಿಂದ ಅನೇಕ ಪ್ರಯೋಜನಗಳಿದೆ. ವೀಳ್ಯದೆಲೆಯು ಮನಸ್ಸಿಗೆ ಶಾಂತಿಯನ್ನು ನೀಡುವುದು ಮಾತ್ರವಲ್ಲದೇ ನಮ್ಮ ಆತಂಕವನ್ನೂ ದೂರ ಮಾಡುತ್ತಂತೆ. ಜೊತೆಗೆ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಿ ಮಾಡಿ ಮನಶಾಂತಿಗೆ ಸಿಗುವಂತೆ ಮಾಡುತ್ತದೆ.
ಪ್ರತಿಯೊಂದು ಕಾರ್ಯಕ್ರಮದಲ್ಲೂ ವೀಳ್ಯದೆಲೆ ಇರಲೇಬೇಕು. ವೀಳ್ಯದೆಲೆಯ ಹೊರತಾಗಿ ಯಾವುದೇ ಕಾರ್ಯಗಳು ನಡೆಯೋದೇ ಇಲ್ಲ. ಇತ್ತ ವೀಳ್ಯದೆಲೆಯ ಜೊತೆಗೆ ಅಡಿಕೆಯನ್ನೂ ಇಡಬೇಕು. ಯಾಕಂದ್ರೆ ಇದು ಸಂಪ್ರದಾಯ. ತಾಂಬೂಲ ಪೂರ್ತಿಯಾಗಬೇಕಾದರೆ ಅಲ್ಲಿ ಎಲೆ ಹಾಗೂ ಅಡಿಕೆ ಇರಲೇಬೇಕು. ಇವು ಎರಡು ಒಟ್ಟಿಗೆ ಇದ್ದಾಗ ಪೂಜೆಗೊಂದು ಕಳೆ ಬರುತ್ತದೆ.
ವೀಳ್ಯದೆಲೆ ಕೇವಲ ಆರೋಗ್ಯಕಾರಿ ಪ್ರಯೋಜವನ್ನು ಮಾತ್ರ ಹೊಂದಿಲ್ಲ. ಇದರ ಜೊತೆಗೆ ಸಂಪ್ರದಾಯಿಕ ಮಹತ್ವವೂ ವೀಳ್ಯದೆಲೆಗಿದೆ.



Click it and Unblock the Notifications
