Latest Updates
-
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು!
ದುಡ್ಡು, ಗೌರವ ಸಂಪಾದಿಸಬೇಕಾ? ಹಾಗಾದ್ರೆ ಈ ಗುಣ ಇರಲೇಬೇಕು : ವಿಧುರ ನೀತಿ
ವಿಧುರನು ಮಹಾಭಾರತ ಕಾಲದಲ್ಲಿ ಪ್ರಾಮಾಣಿಕತೆ, ಬುದ್ಧಿವಂತಿಕೆ, ರಾಜನೀತಿ ರೂಪಿಸುವುದರಲ್ಲಿ ಪ್ರಖ್ಯಾತಿ ಪಡೆದಿದ್ದ ವ್ಯಕ್ತಿ. ಶ್ರೀ ಕೃಷ್ಣನ ಮೆಚ್ಚುಗೆಗೆ ಪಾತ್ರರಾಗಿದ್ದ ಮಹಾನ್ ವ್ಯಕ್ತಿ ಈತ. ಇವರ ಒಂದೊಂದು ಮಾತುಗಳು ಇಂದಿಗೂ ನಮ್ಮ ಜೀವನಕ್ಕೆ ಪಾಠಗಳಾಗಿದೆ.
ವಿಧುರ ನೀತಿಯನ್ನು ಪಾಲಿಸಿದವರು ಜೀವನದಲ್ಲಿ ಎಂದಿಗೂ ಸೋತಿಲ್ಲ. ಅದೇ ರೀತಿ ಜೀವನದಲ್ಲಿ ಆಸ್ತಿ ಹಾಗೂ ಗೌರವಗಳನ್ನು ಪಡೆಯಬೇಕಾದರೆ ಈ ಗುಣಗಳು ನಿಮ್ಮಲ್ಲಿ ಇರಲೇಬೇಕು ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.

ಹಾಗಾದ್ರೆ ಆ ಗುಣಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಜ್ಞಾನ
ವಿಧುರನ ಪ್ರಕಾರ ಜ್ಞಾನ ಸಂಪಾದನೆಯ ಹಿಂದೆ ನಮ್ಮ ಪರಿಶ್ರಮ ಹಾಗೂ ತ್ಯಾಗ ಇರಲೇಬೇಕು. ಯಾರೂ ಜೀವನದಲ್ಲಿ ಖುಷಿಯನ್ನು ಮಾತ್ರ ಬಯಸುತ್ತಾರೋ ಅಂತವರಿಗೆ ಜ್ಞಾನ ಸಂಪಾದಿಸೋ ಮಾರ್ಗ ಕಷ್ಟವೇ ಸರಿ. ಆದರೆ ಯಾರಿಗೆ ನಿಜವಾಗಿ ಜ್ಞಾನ ಸಂಪಾದಿಸಲೇಬೇಕು ಎಂಬ ಮನಸ್ಸಿರುತ್ತದೆಯೋ ಅವರು ತಮ್ಮೆಲ್ಲಾ ಆಸೆಗಳನ್ನು ತ್ಯಜಿಸಲೇಬೇಕಾಗುತ್ತದೆ. ಇದನ್ನು ಮಾಡುವುದರ ಮುಖಾಂತರ ನೀವು ನಿಮ್ಮ ಭವಿಷ್ಯದಲ್ಲಿ ಆಸ್ತಿ ಹಾಗೂ ಗೌರವವನ್ನು ಸಂಪಾದನೆ ಮಾಡಬಹುದು.
2. ಸತ್ಯ ಮಾರ್ಗದಲ್ಲಿ ನಡೆಯಿರಿ
ವಿಧುರನ ಪ್ರಕಾರ ಯಾರು ಸತ್ಯ ಮಾರ್ಗದಲ್ಲಿ ನಡೆಯುತ್ತಾರೋ ಅವರು ಆರ್ಥಿಕವಾಗಿ ಸದೃಢರಾಗುತ್ತಾರೋ, ಹೆಸರು, ಗೌರವ ಎಲ್ಲವನ್ನೂ ಪಡೆಯುತ್ತಾರೆ. ಧರ್ಮ ಮಾರ್ಗದಲ್ಲಿ ನಡೆಯುವ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಸಂಕಷ್ಟಗಳನ್ನು ಎದುರಿಸೋದಿಲ್ಲ. ವಿಧುರನ ಪ್ರಕಾರ ಅಧರ್ಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದರೆ ಅದು ನಮ್ಮ ಬಳಿ ಉಳಿಯೋದಿಲ್ಲ ಎಂದು ಹೇಳಿದ್ದಾರೆ.
3. ಏಕಾಗ್ರತೆ
ವಿಧುರನ ಪ್ರಕಾರ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಅಲ್ಲಿ ಏಕಾಗ್ರತೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಯಾರು ತಾವು ಮಾಡೋ ಕೆಲಸದಲ್ಲಿ ಖುಷಿ ಕಂಡುಕೊಳ್ಳುತ್ತಾರೋ ಅವರು ಜೀವನ ಪರ್ಯಂತ ಖುಷಿಯಾಗಿರುತ್ತಾರೆ. ಅಂಥವರನ್ನು ಗೌರವ, ದುಡ್ಡು, ಹೆಸರು ಹುಡುಕಿಕೊಂಡು ಬರುತ್ತದೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಗುರಿಯ ಕಡೆಗೆ ಸಾಗಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
ಅಧರ್ಮ ಮಾರ್ಗದಿಂದ ಸಂಪಾದಿಸಿದ ಹಣ, ಗೌರವ ಎಲ್ಲವೂ ಕ್ಷಣಿಕ. ಹೀಗಾಗಿ ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವಂತೆ ಧರ್ಮ ಮಾರ್ಗದಲ್ಲಿ ನಡೆದರೆ ನಾವು ಪಡೆದುಕೊಂಡಿದ್ದೆಲ್ಲಾ ನಮ್ಮ ಬಳಿ ಕೊನೆವರೆಗೂ ಇರುತ್ತೆ ಎಂದು ಹೇಳಲಾಗಿದೆ.



Click it and Unblock the Notifications


