ದುಡ್ಡು, ಗೌರವ ಸಂಪಾದಿಸಬೇಕಾ? ಹಾಗಾದ್ರೆ ಈ ಗುಣ ಇರಲೇಬೇಕು : ವಿಧುರ ನೀತಿ

ವಿಧುರನು ಮಹಾಭಾರತ ಕಾಲದಲ್ಲಿ ಪ್ರಾಮಾಣಿಕತೆ, ಬುದ್ಧಿವಂತಿಕೆ, ರಾಜನೀತಿ ರೂಪಿಸುವುದರಲ್ಲಿ ಪ್ರಖ್ಯಾತಿ ಪಡೆದಿದ್ದ ವ್ಯಕ್ತಿ. ಶ್ರೀ ಕೃಷ್ಣನ ಮೆಚ್ಚುಗೆಗೆ ಪಾತ್ರರಾಗಿದ್ದ ಮಹಾನ್‌ ವ್ಯಕ್ತಿ ಈತ. ಇವರ ಒಂದೊಂದು ಮಾತುಗಳು ಇಂದಿಗೂ ನಮ್ಮ ಜೀವನಕ್ಕೆ ಪಾಠಗಳಾಗಿದೆ.

ವಿಧುರ ನೀತಿಯನ್ನು ಪಾಲಿಸಿದವರು ಜೀವನದಲ್ಲಿ ಎಂದಿಗೂ ಸೋತಿಲ್ಲ. ಅದೇ ರೀತಿ ಜೀವನದಲ್ಲಿ ಆಸ್ತಿ ಹಾಗೂ ಗೌರವಗಳನ್ನು ಪಡೆಯಬೇಕಾದರೆ ಈ ಗುಣಗಳು ನಿಮ್ಮಲ್ಲಿ ಇರಲೇಬೇಕು ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.

Vidura Neeti: These Qualities Ensure Wealth and Honor in Life in Kannada

ಹಾಗಾದ್ರೆ ಆ ಗುಣಗಳು ಯಾವುದು ಅನ್ನೋದನ್ನ ತಿಳಿಯೋಣ.

1. ಜ್ಞಾನ

ವಿಧುರನ ಪ್ರಕಾರ ಜ್ಞಾನ ಸಂಪಾದನೆಯ ಹಿಂದೆ ನಮ್ಮ ಪರಿಶ್ರಮ ಹಾಗೂ ತ್ಯಾಗ ಇರಲೇಬೇಕು. ಯಾರೂ ಜೀವನದಲ್ಲಿ ಖುಷಿಯನ್ನು ಮಾತ್ರ ಬಯಸುತ್ತಾರೋ ಅಂತವರಿಗೆ ಜ್ಞಾನ ಸಂಪಾದಿಸೋ ಮಾರ್ಗ ಕಷ್ಟವೇ ಸರಿ. ಆದರೆ ಯಾರಿಗೆ ನಿಜವಾಗಿ ಜ್ಞಾನ ಸಂಪಾದಿಸಲೇಬೇಕು ಎಂಬ ಮನಸ್ಸಿರುತ್ತದೆಯೋ ಅವರು ತಮ್ಮೆಲ್ಲಾ ಆಸೆಗಳನ್ನು ತ್ಯಜಿಸಲೇಬೇಕಾಗುತ್ತದೆ. ಇದನ್ನು ಮಾಡುವುದರ ಮುಖಾಂತರ ನೀವು ನಿಮ್ಮ ಭವಿಷ್ಯದಲ್ಲಿ ಆಸ್ತಿ ಹಾಗೂ ಗೌರವವನ್ನು ಸಂಪಾದನೆ ಮಾಡಬಹುದು.

2. ಸತ್ಯ ಮಾರ್ಗದಲ್ಲಿ ನಡೆಯಿರಿ

ವಿಧುರನ ಪ್ರಕಾರ ಯಾರು ಸತ್ಯ ಮಾರ್ಗದಲ್ಲಿ ನಡೆಯುತ್ತಾರೋ ಅವರು ಆರ್ಥಿಕವಾಗಿ ಸದೃಢರಾಗುತ್ತಾರೋ, ಹೆಸರು, ಗೌರವ ಎಲ್ಲವನ್ನೂ ಪಡೆಯುತ್ತಾರೆ. ಧರ್ಮ ಮಾರ್ಗದಲ್ಲಿ ನಡೆಯುವ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಸಂಕಷ್ಟಗಳನ್ನು ಎದುರಿಸೋದಿಲ್ಲ. ವಿಧುರನ ಪ್ರಕಾರ ಅಧರ್ಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದರೆ ಅದು ನಮ್ಮ ಬಳಿ ಉಳಿಯೋದಿಲ್ಲ ಎಂದು ಹೇಳಿದ್ದಾರೆ.

3. ಏಕಾಗ್ರತೆ

ವಿಧುರನ ಪ್ರಕಾರ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಅಲ್ಲಿ ಏಕಾಗ್ರತೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಯಾರು ತಾವು ಮಾಡೋ ಕೆಲಸದಲ್ಲಿ ಖುಷಿ ಕಂಡುಕೊಳ್ಳುತ್ತಾರೋ ಅವರು ಜೀವನ ಪರ್ಯಂತ ಖುಷಿಯಾಗಿರುತ್ತಾರೆ. ಅಂಥವರನ್ನು ಗೌರವ, ದುಡ್ಡು, ಹೆಸರು ಹುಡುಕಿಕೊಂಡು ಬರುತ್ತದೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಗುರಿಯ ಕಡೆಗೆ ಸಾಗಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.

ಅಧರ್ಮ ಮಾರ್ಗದಿಂದ ಸಂಪಾದಿಸಿದ ಹಣ, ಗೌರವ ಎಲ್ಲವೂ ಕ್ಷಣಿಕ. ಹೀಗಾಗಿ ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವಂತೆ ಧರ್ಮ ಮಾರ್ಗದಲ್ಲಿ ನಡೆದರೆ ನಾವು ಪಡೆದುಕೊಂಡಿದ್ದೆಲ್ಲಾ ನಮ್ಮ ಬಳಿ ಕೊನೆವರೆಗೂ ಇರುತ್ತೆ ಎಂದು ಹೇಳಲಾಗಿದೆ.

English summary

Vidura Neeti: These Qualities Ensure Wealth and Honor in Life in Kannada

According to Vidura neeti these qualities ensure wealth and honor in life. Read More.
Story first published: Saturday, April 1, 2023, 11:22 [IST]
X
Desktop Bottom Promotion