Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ದುಡ್ಡು, ಗೌರವ ಸಂಪಾದಿಸಬೇಕಾ? ಹಾಗಾದ್ರೆ ಈ ಗುಣ ಇರಲೇಬೇಕು : ವಿಧುರ ನೀತಿ
ವಿಧುರನು ಮಹಾಭಾರತ ಕಾಲದಲ್ಲಿ ಪ್ರಾಮಾಣಿಕತೆ, ಬುದ್ಧಿವಂತಿಕೆ, ರಾಜನೀತಿ ರೂಪಿಸುವುದರಲ್ಲಿ ಪ್ರಖ್ಯಾತಿ ಪಡೆದಿದ್ದ ವ್ಯಕ್ತಿ. ಶ್ರೀ ಕೃಷ್ಣನ ಮೆಚ್ಚುಗೆಗೆ ಪಾತ್ರರಾಗಿದ್ದ ಮಹಾನ್ ವ್ಯಕ್ತಿ ಈತ. ಇವರ ಒಂದೊಂದು ಮಾತುಗಳು ಇಂದಿಗೂ ನಮ್ಮ ಜೀವನಕ್ಕೆ ಪಾಠಗಳಾಗಿದೆ.
ವಿಧುರ ನೀತಿಯನ್ನು ಪಾಲಿಸಿದವರು ಜೀವನದಲ್ಲಿ ಎಂದಿಗೂ ಸೋತಿಲ್ಲ. ಅದೇ ರೀತಿ ಜೀವನದಲ್ಲಿ ಆಸ್ತಿ ಹಾಗೂ ಗೌರವಗಳನ್ನು ಪಡೆಯಬೇಕಾದರೆ ಈ ಗುಣಗಳು ನಿಮ್ಮಲ್ಲಿ ಇರಲೇಬೇಕು ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.

ಹಾಗಾದ್ರೆ ಆ ಗುಣಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಜ್ಞಾನ
ವಿಧುರನ ಪ್ರಕಾರ ಜ್ಞಾನ ಸಂಪಾದನೆಯ ಹಿಂದೆ ನಮ್ಮ ಪರಿಶ್ರಮ ಹಾಗೂ ತ್ಯಾಗ ಇರಲೇಬೇಕು. ಯಾರೂ ಜೀವನದಲ್ಲಿ ಖುಷಿಯನ್ನು ಮಾತ್ರ ಬಯಸುತ್ತಾರೋ ಅಂತವರಿಗೆ ಜ್ಞಾನ ಸಂಪಾದಿಸೋ ಮಾರ್ಗ ಕಷ್ಟವೇ ಸರಿ. ಆದರೆ ಯಾರಿಗೆ ನಿಜವಾಗಿ ಜ್ಞಾನ ಸಂಪಾದಿಸಲೇಬೇಕು ಎಂಬ ಮನಸ್ಸಿರುತ್ತದೆಯೋ ಅವರು ತಮ್ಮೆಲ್ಲಾ ಆಸೆಗಳನ್ನು ತ್ಯಜಿಸಲೇಬೇಕಾಗುತ್ತದೆ. ಇದನ್ನು ಮಾಡುವುದರ ಮುಖಾಂತರ ನೀವು ನಿಮ್ಮ ಭವಿಷ್ಯದಲ್ಲಿ ಆಸ್ತಿ ಹಾಗೂ ಗೌರವವನ್ನು ಸಂಪಾದನೆ ಮಾಡಬಹುದು.
2. ಸತ್ಯ ಮಾರ್ಗದಲ್ಲಿ ನಡೆಯಿರಿ
ವಿಧುರನ ಪ್ರಕಾರ ಯಾರು ಸತ್ಯ ಮಾರ್ಗದಲ್ಲಿ ನಡೆಯುತ್ತಾರೋ ಅವರು ಆರ್ಥಿಕವಾಗಿ ಸದೃಢರಾಗುತ್ತಾರೋ, ಹೆಸರು, ಗೌರವ ಎಲ್ಲವನ್ನೂ ಪಡೆಯುತ್ತಾರೆ. ಧರ್ಮ ಮಾರ್ಗದಲ್ಲಿ ನಡೆಯುವ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಸಂಕಷ್ಟಗಳನ್ನು ಎದುರಿಸೋದಿಲ್ಲ. ವಿಧುರನ ಪ್ರಕಾರ ಅಧರ್ಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದರೆ ಅದು ನಮ್ಮ ಬಳಿ ಉಳಿಯೋದಿಲ್ಲ ಎಂದು ಹೇಳಿದ್ದಾರೆ.
3. ಏಕಾಗ್ರತೆ
ವಿಧುರನ ಪ್ರಕಾರ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಅಲ್ಲಿ ಏಕಾಗ್ರತೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಯಾರು ತಾವು ಮಾಡೋ ಕೆಲಸದಲ್ಲಿ ಖುಷಿ ಕಂಡುಕೊಳ್ಳುತ್ತಾರೋ ಅವರು ಜೀವನ ಪರ್ಯಂತ ಖುಷಿಯಾಗಿರುತ್ತಾರೆ. ಅಂಥವರನ್ನು ಗೌರವ, ದುಡ್ಡು, ಹೆಸರು ಹುಡುಕಿಕೊಂಡು ಬರುತ್ತದೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಗುರಿಯ ಕಡೆಗೆ ಸಾಗಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
ಅಧರ್ಮ ಮಾರ್ಗದಿಂದ ಸಂಪಾದಿಸಿದ ಹಣ, ಗೌರವ ಎಲ್ಲವೂ ಕ್ಷಣಿಕ. ಹೀಗಾಗಿ ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವಂತೆ ಧರ್ಮ ಮಾರ್ಗದಲ್ಲಿ ನಡೆದರೆ ನಾವು ಪಡೆದುಕೊಂಡಿದ್ದೆಲ್ಲಾ ನಮ್ಮ ಬಳಿ ಕೊನೆವರೆಗೂ ಇರುತ್ತೆ ಎಂದು ಹೇಳಲಾಗಿದೆ.



Click it and Unblock the Notifications


