Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ವಿಧುರರ ಈ ನೀತಿಗಳನ್ನು ಪಾಲಿಸಿದರೆ ಸಮಸ್ಯೆ ಹತ್ತಿರ ಸುಳಿಯೋದಕ್ಕೂ ಸಾಧ್ಯವಿಲ್ಲ!
ಮಹಾತ್ಮ ವಿಧುರರು ಮಹಾಭಾರತ ಕಾಲದ ಮಹಾನ್ ವಿಧ್ವಾಂಸ ಹಾಗೂ ತತ್ವಜ್ಞಾನಿಯಾಗಿದ್ದರು. ಇವರ ಜೀವನ ಪಾಠಗಳನ್ನು ಇಂದಿಗೂ ಜನ ಪಾಲಿಸುತ್ತಿದ್ದಾರೆ. ಇಂತಹ ವಿಧುರರು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಅನ್ನೋದ್ರ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.
ಮಹಾತ್ಮ ವಿಧುರರ ಪ್ರಕಾರ ಸಮಸ್ಯೆಗಳು ಬರೋ ಮೊದಲೇ ನಾವು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಅವುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಒಂದು ವೇಳೆ ಮಹಾತ್ಮ ವಿಧುರರು ಹೇಳಿದ ಈ ನೀತಿಗಳನ್ನು ಪಾಲಿಸಿದ್ರೆ ನಿಮಗೆ ಯಾವ ಸಮಸ್ಯೆಗಳು ಎದುರಾಗೋದಿಲ್ಲ. ಹಾಗಾದ್ರೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲೋದಕ್ಕೆ ವಿಧುರರು ಹೇಳಿಕೊಟ್ಟ ಆ ನೀತಿಗಳು ಯಾವುದು ಅನ್ನೋದನ್ನ ತಿಳಿಯೋಣ.

1. ದೇವರ ಮೇಲೆ ನಂಬಿಕೆ ಇಡಿ
ಮಹಾತ್ಮ ವಿಧುರರು ಪ್ರಕಾರ ನಾವು ಯಾವ ಕೆಲಸವನ್ನು ಮಾಡಬೇಕಾದರೂ ದೇವರನ್ನು ಸ್ತುತಿಸಬೇಕು. ಆಗ ಮಾತ್ರ ನಾವು ಮಾಡೋ ಕೆಲಸದಲ್ಲಿ ನಮಗೆ ಯಶಸ್ಸು ಒಲಿಯೋದಕ್ಕೆ ಸಾಧ್ಯ. ಯಾರು ದೇವರನ್ನು ಪೂಜಿಸುವುದಿಲ್ಲವೂ, ತಮ್ಮನ್ನು ತಾವು ದೇವರಿಗಿಂತ ಮಿಗಿಲು ಅಂತ ಯಾರು ಅಂದುಕೊಂಡಿರುತ್ತಾರೋ ಅವರು ಜೀವನದಲ್ಲಿಉದ್ಧಾರವಾಗೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
2. ಹಿರಿಯರಿಗೆ ಗೌರವ ನೀಡಿ
ಮಾಹಾತ್ಮ ವಿಧುರರ ಪ್ರಕಾರ ಹಿರಿಯರಿಗೆ ನಾವು ಗೌರವ ನೀಡಬೇಕು. ಯಾವ ಮನೆಯಲ್ಲಿ ಹಿರಿಯರಿಗೆ ಗೌರವವನ್ನು ನೀಡಲಾಗುತ್ತದೆಯೋ ಆ ಮನೆಯಲ್ಲಿ ಸುಖ ಹಾಗೂ ಶಾಂತಿ ನೆಲೆಸಿರುತ್ತದೆ. ಹಾಗೂ ತಾಯಿ ಲಕ್ಷ್ಮೀಯ ಆಶೀರ್ವಾದ ಯಾವಾಗಲೂ ಅವರ ಮೇಲಿರುತ್ತದೆ. ಯಾವ ಮನೆಯಲ್ಲಿ ಹಿರಿಯರಿಗೆ ಗೌರವ ನೀಡುವುದಿಲ್ಲವೋ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತೆ ಅಂತ ಮಹಾತ್ಮ ವಿಧುರರು ಹೇಳಿದ್ದಾರೆ.
3. ಮನೆಯನ್ನು ಸ್ವಚ್ಛವಾಗಿಡಿ
ವಿಧುರ ನೀತಿಯ ಪ್ರಕಾರ ಯಾವ ಮನೆಯನ್ನು ಪ್ರತಿನಿತ್ಯ ಸ್ವಚ್ಛವಾಗಿ ಇಡೋದಿಲ್ಲವೋ? ಮನೆಯೆಲ್ಲಾ ಗಲೀಜು ತುಂಬಿಕೊಂಡಿರುತ್ತದೆಯೋ ಅಂತಹ ಮನೆಯಲ್ಲಿ ಬಡತನ ಹೆಚ್ಚಾಗುತ್ತಂತೆ. ಹೀಗಾಗಿ ಪ್ರತಿನಿತ್ಯ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಅಂತಹ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಮತ್ತು ಆ ಮನೆಯಲ್ಲಿ ಖುಷಿ, ಸಮೃದ್ಧಿ ಹೆಚ್ಚಾಗುತ್ತದೆ.
4. ಇಂತಹ ವ್ಯಕ್ತಿಗಳೇ ಶ್ರೇಷ್ಠ
ಮಹಾತ್ಮ ವಿಧುರರ ಪ್ರಕಾರ ಯಾವ ವ್ಯಕ್ತಿಗೆ ಒಬ್ಬರ ತಪ್ಪನ್ನು ಕ್ಷಮಿಸುವ ಗುಣ ಇಡುತ್ತದೆಯೋ ಅಂತಹ ವ್ಯಕ್ತಿಗಳು ಶ್ರೇಷ್ಠ. ಸಾಮಾನ್ಯವಾಗಿ ಯಾರು ಕೂಡ ಅಷ್ಟೊಂದು ಸುಲಭವಾಗಿ ಒಬ್ಬರ ತಪ್ಪನ್ನು ಕ್ಷಮಿಸೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ಕ್ಷಮಿಸುವ ಗುಣ ಇರುವವರ ಮನಸ್ಸು ನಿಜಕ್ಕೂ ತುಂಬಾನೇ ನಿಷ್ಕಲ್ಮಷ. ಇವರು ಜೀವನದಲ್ಲಿ ಎಂತಹ ಸಮಸ್ಯೆಗಳನ್ನಾದರೂ ಮೆಟ್ಟಿ ನಿಲ್ಲುತ್ತಾರೆ.
5. ಇಂಥಹ ವ್ಯಕ್ತಿಗಳಿಂದ ದೂರವಿರಿ
ವಿಧುರ ನೀತಿಯ ಪ್ರಕಾರ ಉದಾಸೀನ, ಕೋಪ, ದುರಾಸೆ, ಅಮಲಿನಲ್ಲಿ ಮಗ್ನವಾಗಿರುವ ವ್ಯಕ್ತಿಗಳಿಂದ ದೂರವಿರಿ ಎಂದು ಹೇಳಿದ್ದಾರೆ. ಇಂಥಹ ಗುಣವಿರುವ ವ್ಯಕ್ತಿಗಳು ತಾವಾಗಿ ಅಭಿವೃದ್ಧಿ ಹೊಂದುವುದಿಲ್ಲ ಹಾಗೂ ತಮ್ಮ ಜೊತೆಗಿರುವವರನ್ನು ಅಭಿವೃದ್ಧಿ ಹೊಂದಲು ಬಿಡೋದಿಲ್ಲ. ಆದಷ್ಟು ಇವರಿಂದ ದೂರವಿದ್ದರೆ ಒಳ್ಳೆಯದು. ಇಲ್ಲವಾದರೆ ಸಮಸ್ಯೆಗಳನ್ನು ನೀವೆ ಮೈಮೇಲೆ ಎಳೆದುಕೊಂಡಂತೆ ಎಂದು ವಿಧುರರು ಹೇಳಿದ್ದಾರೆ.
ಸಮಸ್ಯೆ ಮನುಷ್ಯನಿಗೆ ಬಾರದೆ ಮರಕ್ಕೆ ಬರೋದಿಕ್ಕೆ ಸಾಧ್ಯಾನಾ? ಹೀಗಾಗಿ ಎಂತಹ ಸಮಸ್ಯೆಗಳೇ ಬಂದರೂ ಅದನ್ನು ಎದುರಿಸೋದು ಹೇಗೆ ಅನ್ನೋದು ನಮಗೆ ಗೊತ್ತಿರಬೇಕು.



Click it and Unblock the Notifications


