Latest Updates
-
ಬಿಸಿಲ ಬೇಗೆಗೆ ರೆಡ್ ಅಲರ್ಟ್: ಹೀಟ್ ಸ್ಟ್ರೋಕ್ನಿಂದ ಪಾರಾಗಲು ಈ ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ! -
ಮಳೆಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಸಿಂಪಲ್ ಟಿಪ್ಸ್ ನಿಮ್ಮನ್ನು ಮಳೆಗಾಲದ ಫ್ಯಾಷನ್ ಐಕಾನ್ ಮಾಡೋದು ಗ್ಯಾರಂಟಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು ತಪ್ಪಿದ್ದಲ್ಲ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ!
ಜೀವನದಲ್ಲಿ ಯಶಸ್ಸು ಸಾಧಿಸಲು ಈ ನಾಲ್ಕು ಜನರ ಆಶೀರ್ವಾದ ಬೇಕೇ ಬೇಕು : ವಿಧುರ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಬೇಕು, ಸಮಾಜದಲ್ಲಿ ಹೆಸರು, ಗೌರವ ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲರಿಂದಲೂ ಅದು ಸಾಧ್ಯವಾಗೋದಿಲ್ಲ. ಯಾಕಂದ್ರೆ ಮಹಾತ್ಮ ವಿಧುರರ ಪ್ರಕಾರ ಮನುಷ್ಯನಲ್ಲಿ ಈ ಐದು ಗುಣಗಳು ಇದ್ದರಷ್ಟೇ ಆತ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಹಾಗಾದ್ರೆ ವಿಧುರರು ಹೇಳಿರೋ ಆ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.

1. ತಾಯಿಯ ಆಶೀರ್ವಾದ
ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರೆ ಹಾಗೆ ನಾವು ಪ್ರತಿಯೊಂದು ಕೆಲಸ ಮಾಡಬೇಕಾದರೂ ಅದಕ್ಕೆ ತಾಯಿಯ ಆಶೀರ್ವಾದ ಬೇಕೇ ಬೇಕು. ತಾಯಿಯ ಆಶೀರ್ವಾದದ ಹೊರತಾಗಿ ಯಾವುದೇ ಕೆಲಸಗಳು ಯಶಸ್ವಿಯಾಗೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ತಾಯಿಗೆ ಯಾವುದೇ ಕಾರಣಕ್ಕೂ ನೋವು ಮಾಡೋದಕ್ಕೆ ಹೋಗಬಾರದು. ಆಕೆಗೆ ನಿಮ್ಮ ಮೇಲೆ ಅಸಮಾಧಾನವಿದ್ದರೆ ಆ ಆಶೀರ್ವಾದ ಫಲ ನೀಡುವುದಿಲ್ಲ ಎಂದು ವಿಧುರರು ಹೇಳಿದ್ದಾರೆ.
2. ತಂದೆಯ ಆಶೀರ್ವಾದ
"ಅಪ್ಪ ಎಂದರೆ ಆಕಾಶ". ಅಪ್ಪ ಅನ್ನೋ ಒಬ್ಬ ವ್ಯಕ್ತಿ ಮಕ್ಕಳಿಗಾಗಿ ಇಡೀ ಜೀವನವನ್ನು ಮುಡಿಪಾಗಿ ಇಡುತ್ತಾನೆ. ಮಹಾತ್ಮ ವಿಧುರರ ಪ್ರಕಾರ ಅಪ್ಪ ಮುಗಿಲಿಗಿಂತಲೂ ಮಿಗಿಲು ಎಂದು ಹೇಳಿದ್ದಾರೆ. ಜೀವನವೆಲ್ಲಾ ತನ್ನ ಕುಟುಂಬಕ್ಕಾಗಿ ಬದುಕುವ ವ್ಯಕ್ತಿ ಅಪ್ಪ. ಹೀಗಾಗಿ ಅಪ್ಪನನ್ನು ಕಡೆಗಣಿಸಬಾರದು. ನೀವು ದುಡಿಯುವ ಸಮಯದಲ್ಲಿ ಅಪ್ಪನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಕಣ್ಣಲ್ಲಿ ನೀರು ಬಾರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೀಗಾದಾಗ ಅಪ್ಪ ನಿಮಗೆ ಮನತುಂಬಿ ಆಶೀರ್ವಾದ ಮಾಡುತ್ತಾರೆ.
3. ಗುರುವಿನ ಆಶೀರ್ವಾದ
ಒರ್ವ ವ್ಯಕ್ತಿಯನ್ನು ಪರಿಪೂರ್ಣ ಮಾಡಬೇಕಾದರೆ ಅದಕ್ಕೆ ಗುರುವಿನ ಸಹಾಯಬೇಕೇ ಬೇಕು. ಶೂನ್ಯ ಜ್ಞಾನ ಹೊಂದಿದ ಒಂದು ಮಗುವಿಗೆ ಗುರುವೊಬ್ಬ ವಿದ್ಯಾರ್ಜನೆಯನ್ನು ನೀಡಿ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತಾನೆ. ಇಂತಹ ಗುರುವಿಗೆ ಅವಮಾನ ಮಾಡಬಾರದು. ಯಾಕಂದ್ರೆ ಗುರುವಿಗೆ ಅವಮಾನ ಮಾಡಿ ಆತನ ಕೋಪಕ್ಕೆ ಗುರಿಯಾಗಬೇಡಿ. ಗುರುವಿನ ಆಶೀರ್ವಾದ ತುಂಬಾನೇ ಮುಖ್ಯವಾಗುತ್ತದೆ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ.
4. ಅಗ್ನಿಯ ಆಶೀರ್ವಾದವು ಇರಬೇಕು
ಪಂಚಭೂತಗಳಲ್ಲಿ ಅಗ್ನಿಯು ಕೂಡ ಒಂದು. ಪುರಾಣಗಳಲ್ಲಿ ಅಗ್ನಿಗೆ ಮಹತ್ವದ ಸ್ನಾನವನ್ನು ನೀಡಲಾಗಿದೆ. ಅಗ್ನಿಯ ಹೊರತಾಗಿ ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡೋದಕ್ಕೆ ಸಾಧ್ಯವಿಲ್ಲ. ಪಾಪ ಪರಿಹಾರವಾಗಬೇಕಾದರೆ, ಪುಣ್ಯ ಫಲಗಳು ಪ್ರಾಪ್ತಿಯಾಗಬೇಕಾದರೆ ಹೋಮ-ಹವನಗಳನ್ನು ಕೈಗೊಳ್ಳಲೇಬೇಕು. ಹೀಗಾಗಿ ಪ್ರತಿಯೊಂದು ಕೆಲಸ ಮಾಡಬೇಕಾದರೂ ಅಗ್ನಿಯ ಆಶೀರ್ವಾದ ಮುಖ್ಯವಾಗಿ ಬೇಕಾಗುತ್ತದೆ.
ಜೀವನದಲ್ಲಿ ಮುಂದೆ ಬರಲು ನಿಮ್ಮ ಶ್ರಮ ಒಂದೇ ಸಾಕಾಗುವುದಿಲ್ಲ. ಇದರ ಜೊತೆಗೆ ಈ ನಾಲ್ಕು ವ್ಯಕ್ತಿಗಳ ಆಶೀರ್ವಾದವು ನಮ್ಮ ಅಭಿವೃದ್ಧಿಯಲ್ಲಿ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications

