Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಜೀವನದಲ್ಲಿ ಯಶಸ್ಸು ಸಾಧಿಸಲು ಈ ನಾಲ್ಕು ಜನರ ಆಶೀರ್ವಾದ ಬೇಕೇ ಬೇಕು : ವಿಧುರ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಬೇಕು, ಸಮಾಜದಲ್ಲಿ ಹೆಸರು, ಗೌರವ ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲರಿಂದಲೂ ಅದು ಸಾಧ್ಯವಾಗೋದಿಲ್ಲ. ಯಾಕಂದ್ರೆ ಮಹಾತ್ಮ ವಿಧುರರ ಪ್ರಕಾರ ಮನುಷ್ಯನಲ್ಲಿ ಈ ಐದು ಗುಣಗಳು ಇದ್ದರಷ್ಟೇ ಆತ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಹಾಗಾದ್ರೆ ವಿಧುರರು ಹೇಳಿರೋ ಆ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.

1. ತಾಯಿಯ ಆಶೀರ್ವಾದ
ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರೆ ಹಾಗೆ ನಾವು ಪ್ರತಿಯೊಂದು ಕೆಲಸ ಮಾಡಬೇಕಾದರೂ ಅದಕ್ಕೆ ತಾಯಿಯ ಆಶೀರ್ವಾದ ಬೇಕೇ ಬೇಕು. ತಾಯಿಯ ಆಶೀರ್ವಾದದ ಹೊರತಾಗಿ ಯಾವುದೇ ಕೆಲಸಗಳು ಯಶಸ್ವಿಯಾಗೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ತಾಯಿಗೆ ಯಾವುದೇ ಕಾರಣಕ್ಕೂ ನೋವು ಮಾಡೋದಕ್ಕೆ ಹೋಗಬಾರದು. ಆಕೆಗೆ ನಿಮ್ಮ ಮೇಲೆ ಅಸಮಾಧಾನವಿದ್ದರೆ ಆ ಆಶೀರ್ವಾದ ಫಲ ನೀಡುವುದಿಲ್ಲ ಎಂದು ವಿಧುರರು ಹೇಳಿದ್ದಾರೆ.
2. ತಂದೆಯ ಆಶೀರ್ವಾದ
"ಅಪ್ಪ ಎಂದರೆ ಆಕಾಶ". ಅಪ್ಪ ಅನ್ನೋ ಒಬ್ಬ ವ್ಯಕ್ತಿ ಮಕ್ಕಳಿಗಾಗಿ ಇಡೀ ಜೀವನವನ್ನು ಮುಡಿಪಾಗಿ ಇಡುತ್ತಾನೆ. ಮಹಾತ್ಮ ವಿಧುರರ ಪ್ರಕಾರ ಅಪ್ಪ ಮುಗಿಲಿಗಿಂತಲೂ ಮಿಗಿಲು ಎಂದು ಹೇಳಿದ್ದಾರೆ. ಜೀವನವೆಲ್ಲಾ ತನ್ನ ಕುಟುಂಬಕ್ಕಾಗಿ ಬದುಕುವ ವ್ಯಕ್ತಿ ಅಪ್ಪ. ಹೀಗಾಗಿ ಅಪ್ಪನನ್ನು ಕಡೆಗಣಿಸಬಾರದು. ನೀವು ದುಡಿಯುವ ಸಮಯದಲ್ಲಿ ಅಪ್ಪನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಕಣ್ಣಲ್ಲಿ ನೀರು ಬಾರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೀಗಾದಾಗ ಅಪ್ಪ ನಿಮಗೆ ಮನತುಂಬಿ ಆಶೀರ್ವಾದ ಮಾಡುತ್ತಾರೆ.
3. ಗುರುವಿನ ಆಶೀರ್ವಾದ
ಒರ್ವ ವ್ಯಕ್ತಿಯನ್ನು ಪರಿಪೂರ್ಣ ಮಾಡಬೇಕಾದರೆ ಅದಕ್ಕೆ ಗುರುವಿನ ಸಹಾಯಬೇಕೇ ಬೇಕು. ಶೂನ್ಯ ಜ್ಞಾನ ಹೊಂದಿದ ಒಂದು ಮಗುವಿಗೆ ಗುರುವೊಬ್ಬ ವಿದ್ಯಾರ್ಜನೆಯನ್ನು ನೀಡಿ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತಾನೆ. ಇಂತಹ ಗುರುವಿಗೆ ಅವಮಾನ ಮಾಡಬಾರದು. ಯಾಕಂದ್ರೆ ಗುರುವಿಗೆ ಅವಮಾನ ಮಾಡಿ ಆತನ ಕೋಪಕ್ಕೆ ಗುರಿಯಾಗಬೇಡಿ. ಗುರುವಿನ ಆಶೀರ್ವಾದ ತುಂಬಾನೇ ಮುಖ್ಯವಾಗುತ್ತದೆ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ.
4. ಅಗ್ನಿಯ ಆಶೀರ್ವಾದವು ಇರಬೇಕು
ಪಂಚಭೂತಗಳಲ್ಲಿ ಅಗ್ನಿಯು ಕೂಡ ಒಂದು. ಪುರಾಣಗಳಲ್ಲಿ ಅಗ್ನಿಗೆ ಮಹತ್ವದ ಸ್ನಾನವನ್ನು ನೀಡಲಾಗಿದೆ. ಅಗ್ನಿಯ ಹೊರತಾಗಿ ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡೋದಕ್ಕೆ ಸಾಧ್ಯವಿಲ್ಲ. ಪಾಪ ಪರಿಹಾರವಾಗಬೇಕಾದರೆ, ಪುಣ್ಯ ಫಲಗಳು ಪ್ರಾಪ್ತಿಯಾಗಬೇಕಾದರೆ ಹೋಮ-ಹವನಗಳನ್ನು ಕೈಗೊಳ್ಳಲೇಬೇಕು. ಹೀಗಾಗಿ ಪ್ರತಿಯೊಂದು ಕೆಲಸ ಮಾಡಬೇಕಾದರೂ ಅಗ್ನಿಯ ಆಶೀರ್ವಾದ ಮುಖ್ಯವಾಗಿ ಬೇಕಾಗುತ್ತದೆ.
ಜೀವನದಲ್ಲಿ ಮುಂದೆ ಬರಲು ನಿಮ್ಮ ಶ್ರಮ ಒಂದೇ ಸಾಕಾಗುವುದಿಲ್ಲ. ಇದರ ಜೊತೆಗೆ ಈ ನಾಲ್ಕು ವ್ಯಕ್ತಿಗಳ ಆಶೀರ್ವಾದವು ನಮ್ಮ ಅಭಿವೃದ್ಧಿಯಲ್ಲಿ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications

