Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ನಾಲ್ಕು ಗುಣಗಳು ನಿಮ್ಮನ್ನು ಎಂದಿಗೂ ಸಂತೋಷವಾಗಿರಲು ಬಿಡುವುದಿಲ್ಲ : ವಿಧುರ
ಮಹಾತ್ಮ ವಿಧುರರ ಪ್ರಕಾರ ನಮ್ಮ ಆತ್ಮ ಪರಿಶುದ್ಧವಾಗಿದ್ದಾಗ ಮಾತ್ರ ನಮ್ಮ ಮುಖದಲ್ಲಿ ನಗು ಮೂಡೋದಕ್ಕೆ ಸಾಧ್ಯ. ಒಳಗಿನಿಂದ ಕೆಟ್ವರಾಗಿದ್ದು ಹೊರಗಿನಿಂದ ನಗು ಮುಖ ತೋರಿದರೆ ಅದು ವ್ಯರ್ಥವೇ ಸರಿ. ಮನುಷ್ಯನಲ್ಲಿ ಈ ಆರು ಕೆಟ್ಟ ಗುಣಗಳು ಇದ್ದರೆ ಆತ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವೇ ಇಲ್ಲ. ಹಾಗಾದ್ರೆ ಮಹಾತ್ಮ ವಿಧುರರು ಹೇಳಿರುವ ಮನುಷ್ಯನ ಆ ಕೆಟ್ಟ ಗುಣಗಳು ಯಾವುದು ಅನ್ನೋದನ್ನ ನೋಡೋಣ.

1. ಹೊಟ್ಟೆಕಿಚ್ಚು
ನಮ್ಮ ಸ್ನೇಹಿತರು ಅಥವಾ ನಮ್ಮ ಆಪ್ತರೇ ಬೆಳೆಯುತ್ತಿದ್ದಾಗ ಮನುಷ್ಯನಿಗೆ ಹೊಟ್ಟೆ ಕಿಚ್ಚು ಅನ್ನೋದು ಶುರುವಾಗುತ್ತದೆ. ಹೊಟ್ಟೆ ಕಿಚ್ಚು ಒಳ್ಳೆಯದಲ್ಲ ಇದು ಮನುಷ್ಯನನ್ನು ಸುಟ್ಟು ಹಾಕುತ್ತದೆ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ. ಸಾಧ್ಯವಾದರೆ ಬೇರೆಯವರು ಬೆಳೆಯುತ್ತಿರುವುದನ್ನು ಕಂಡು ಖುಷಿ ಪಡಿ ಅದನ್ನು ಬಿಟ್ಟು ಆತನಿಗೆ ಕೆಟ್ಟದಾಗಲಿ ಎಂದು ಬಯಸೋದು ತಪ್ಪು. ಹೀಗಿದ್ದಾಗ ನೀವು ಖುಷಿ ಪಡೋದಕ್ಕೆ ಸಾಧ್ಯವ ಇಲ್ಲ ಎಂದು ವಿಧುರರು ಹೇಳಿದ್ದಾರೆ.
2. ದ್ವೇಷ
ಮಹಾತ್ಮ ವಿಧುರರ ಪ್ರಕಾರ ದ್ವೇಷ ಮನುಷ್ಯನ ಅತೀ ದೊಡ್ಡ ಶತ್ರು. ಪ್ರತಿಯೊಬ್ಬ ವ್ಯಕ್ತಿಗೂ ತಾರಾದರೂ ಒಬ್ಬರ ಮೇಲೆ ದ್ವೇಷ ಇದ್ದೇ ಇರುತ್ತದೆ. ದ್ವೇಷ ಇದ್ದಾಗ ನಾವು ಇಡೀ ದಿನ ಅವರ ಬಗ್ಗೆನೇ ಚಿಂತೆ ಮಾಡುತ್ತೇವೆ. ಅವರನ್ನು ಹೇಗೆ ಸೋಲಿಸಬಹುದು ಅನ್ನೋದೇ ನಮ್ಮ ಆಲೋಚನೆಯಾಗಿ ಬಿಡುತ್ತದೆ. ಇದೇ ಗುಂಗಿನಲ್ಲಿ ನಮ್ಮ ಸಂತೋಷವನ್ನು ನಾವು ಕಾಣೋದನ್ನು ಮರೆತು ಬಿಡ್ತೀವಿ ಎಂದು ಮಹಾತ್ಮರು ಹೇಳಿದ್ದಾರೆ.
3. ಕೋಪ
ಮನುಷ್ಯನಿಗೆ ಕೋಪ ಇರಬೇಕು ಆದರೆ ಅತಿಯಾದ ಕೋಪ ಒಳ್ಳೆಯದಲ್ಲ ಎಂದು ವಿಧುರರು ಹೇಳಿದ್ದಾರೆ. ಅತಿಯಾದ ಕೋಪ ನಿಮ್ಮ ಬದುಕನ್ನೇ ನಾಶ ಮಾಡಿಬಿಡಬಹುದು. ಯಾಕಂದ್ರೆ ಮನುಷ್ಯನಿಗೆ ತಾಳ್ಮೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ತಾಳ್ಮೆ ಕಳೆದುಕೊಂಡಾಗ ಅದು ಕೋಪಕ್ಕೆ ತಿರುಗೋದಕ್ಕೆ ಸಾಧ್ಯ. ಹೀಗಾಗಿ ನಿಮ್ಮೊಳಗಡೆ ಕೋಪದ ಜ್ವಾಲೆ ಕುದಿಯುತ್ತಿದ್ದರೆ ನೀವೆಂದಿಗೂ ಖುಷಿಯಿಂದಿರಲು ಸಾಧ್ಯವೇ ಇಲ್ಲ.
4. ತೃಪ್ತಿ ಇಲ್ಲದ ಜೀವನ
ಯಾವ ವ್ಯಕ್ತಿ ಇರೋದ್ರಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಾನೋ ಆತನ ಜೀವನದಲ್ಲಿ ತುಂಬಾನೇ ಖುಷಿಯಾಗಿರುತ್ತಾನೆ. ಆದರೆ ಅನೇಕರಿಗೆ ದೇವರು ಎಷ್ಟು ಕೊಟ್ಟರು ಸಾಲೋದೇ ಇಲ್ಲ. ಇನ್ನೂ ಬೇಕು ಎಂದು ಅವರ ಮನ ಹಂಬಲಿಸುತ್ತಿರುತ್ತದೆ. ಹೀಗಾಗಿ ಅಂತವರಿಗೆ ಖುಷಿ ಅನ್ನೋದೇ ಇರೋದಿಲ್ಲ. ಜೀವನದಲ್ಲಿ ಮತ್ತಷ್ಟು ಬೇಕು ಎಂದು ಹುಡುಕಾಡೋದ್ರಲ್ಲೇ ಸಮಯ ಕಳೆದು ಹೋಗುತ್ತದೆ ಎಂದು ವಿಧುರರು ಹೇಳಿದ್ದಾರೆ.
ಹುಟ್ಟು ಹಾಗೂ ಸಾವು ನಮ್ಮ ಕೈಯಲ್ಲಿಲ್ಲ. ಬದುಕಿರುವ ನಾಲ್ಕು ದಿನ ಇರೋದ್ರಲ್ಲಿ ತೃಪ್ತಿ ಪಟ್ಟುಕೊಂಡು ಖುಷಿಯಾಗಿರೋಣ.



Click it and Unblock the Notifications

