Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಈ ನಾಲ್ಕು ದೋಷಗಳು ಮನುಷ್ಯನಲ್ಲಿ ಇರಲೇಬಾರದು : ವಿಧುರ
ಮನುಷ್ಯ ಜೀವನದಲ್ಲಿ ಸಂತೋಷವಾಗಿರಲು ಏನೆಲ್ಲಾ ಮಾಡುತ್ತಾನೆ. ಕೆಲವರಂತೂ ದುಡ್ಡಿದ್ದರೇ ಮಾತ್ರ ಖುಷಿಯಾಗಿರಲು ಸಾಧ್ಯ ಎಂದುಕೊಂಡಿದ್ದಾರೆ. ಆದರೆ ಆ ಕಲ್ಪನೆ ತಪ್ಪು. ದುಡ್ಡಿದ್ದ ಮಾತ್ರಕ್ಕೆ ಒರ್ವ ವ್ಯಕ್ತಿ ಸಂತೋಷವಾಗಿರಲು ಸಾಧ್ಯವಿಲ್ಲ. ಕೆಲವೊಂದು ಸಾರಿ ಮನಃಶಾಂತಿ ಕೂಡ ಮುಖ್ಯವಾಗುತ್ತದೆ.
ಹೀಗಾಗಿ ಮಹಾತ್ಮ ವಿಧುರರು ಜನರಿಗೆ ಒಂದು ಮುಖ್ಯವಾದ ಸಂದೇಶವನ್ನು ನೀಡಿದ್ದಾರೆ. ಅದೇನೆಂದರೆ ಈ 4 ತಪ್ಪುಗಳು ನಿಮ್ಮನ್ನು ಖುಷಿಯಾಗಿರಲು ಬಿಡೋದೇ ಇಲ್ವಂತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅನ್ನೋದನ್ನ ನೋಡೋಣ.

1. ಅತಿಯಾದ ಕೋಪ
ಮಹಾತ್ಮ ವಿಧುರರ ಪ್ರಕಾರ ಯಾವ ವ್ಯಕ್ತಿ ಅತಿಯಾದ ಕೋಪವುಳ್ಳವನಾಗಿರುತ್ತಾನೋ ಆತನ ಆಯುಷ್ಯ ಕಡಿಮೆಯಾಗುತ್ತಂತೆ. ಇಂತಹ ವ್ಯಕ್ತಿಗಳು ತಮ್ಮ ತಪ್ಪುಗಳಿಗಾಗಿ ಭವಿಷ್ಯದಲ್ಲಿ ಒದ್ದಾಡಬೇಕಾಗುತ್ತಂತೆ. ವಿಧುರರ ಪ್ರಕಾರ ಎಷ್ಟು ಕೋಪ ಬಂದರೂ ಕೂಡ ಅದನ್ನು ನಿಯಂತ್ರಿಸೋದು ಹೇಗೆ ಅನ್ನೋದು ಗೊತ್ತಿರಬೇಕು. ತಾಳ್ಮೆ ಅನ್ನೋದು ಮನುಷ್ಯನಿಗೆ ತುಂಬಾ ಮುಖ್ಯ. ಯಾರಿಗೆ ಕೋಪ ಮೂಗಿನ ತುದಿಯಲ್ಲಿರುತ್ತದೆಯೋ ಅವರು ಸಂತೋಷವಾಗಿರಲು ಸಾಧ್ಯವೇ ಇಲ್ಲ. ಅಂತಹ ವ್ಯಕ್ತಿಗಳಿಗೆ ಮನಃಶಾಂತಿ ಇರೋದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಕೋಪ ಮಾಡಿಕೊಂಡು ಮನಃಶಾಂತಿಯನ್ನು ಹಾಳು ಮಾಡಿಕೊಳ್ಳುತ್ತಾರೆ.
2. ಈ ಮೂರು ದೋಷಗಳು ಮನುಷ್ಯನಲ್ಲಿ ಇರಬಾರದು
ಮಹಾತ್ಮ ವಿಧುರರ ಪ್ರಕಾರ ಕಾಮ, ಕೋಪ ಮತ್ತು ದುರಾಸೆ ಈ ಮೂರು ವಿಚಾರಗಳು ಮನುಷ್ಯನ ದೋಷಗಳು. ಈ ಮೂರು ದೋಷಗಳು ಮನುಷ್ಯ ಆತ್ಮವನ್ನೇ ನಾಶ ಪಡಿಸುತ್ತಂತೆ. ಮನುಷ್ಯರು ಈ ವಿಚಾರಗಳಿಂದ ದೂರ ಇರಬೇಕು ಅಂತಾರೆ ಮಹಾತ್ಮ ವಿಧುರರು. ಯಾಕಂದ್ರೆ ಈ ವಿಚಾರಗಳು ನಿಮ್ಮ ತಲೆಯಲ್ಲಿ ಸುತ್ತುತ್ತಿದ್ದರೆ ನೀವು ಸಂತೋಷವಾಗಿರಲು ಸಾಧ್ಯವೇ ಇಲ್ಲ. ಸಂತೋಷವಾಗಿರಬೇಕೆಂದರೆ ಇದನ್ನೆಲ್ಲಾ ಬಿಟ್ಟು ಬಿಡಿ ಎಂದು ಕಿವಿ ಮಾತು ಹೇಳಿದ್ದಾರೆ.
3. ಬೇರೆಯವರ ಆಸ್ತಿಗೆ ಕನ್ನ ಹಾಕಬೇಡಿ
ಮಹಾತ್ಮ ವಿಧುರರ ಪ್ರಕಾರ ನಾವು ಬೇರೆಯವರ ಆಸ್ತಿಯ ಮೇಲೆ ಆಸೆ ಪಡೋದು ತಪ್ಪು. ಕಳ್ಳತನ, ವಂಚನೆ, ಮೋಸ ಮಾಡಿ ನಾವು ಬೇರೆಯವರ ಆಸ್ತಿಯನ್ನು ಕಬಳಿಸಿದ್ದರೆ ಅದು ಕೊನೆವರೆಗೂ ನಮ್ಮ ಜೊತೆ ಉಳಿಯೋದಿಲ್ಲ. ಭವಿಷ್ಯದಲ್ಲಿ ಇದಕ್ಕೆ ನಾವು ಬಹುದೊಡ್ಡ ಮೊತ್ತವನ್ನೇ ತೆರಬೇಕಾಗುತ್ತದೆ. ವಿಧುರರ ಪ್ರಕಾರ ಇನ್ನೊಬ್ಬರ ಆಸ್ತಿಯನ್ನು ಕೊಳ್ಳೆ ಹೊಡೆಯೋದು ಬಿಡಿ, ಅದರ ಬಗ್ಗೆ ಯೋಚಿಸೋದು ಕೂಡ ಮಹಾ ಪಾಪ ಎಂದು ಹೇಳಿದ್ದಾರೆ.
4. ಸುಖಾ ಸುಮ್ಮನೆ ಅನುಮಾನ ಪಡೋದು ತಪ್ಪು
ಮಹಾತ್ಮ ವಿಧುರರ ಪ್ರಕಾರ ಮನುಷ್ಯನಿಗೆ ಅನುಮಾನ ಇರಬೇಕು. ಆದರೆ ಹೆಜ್ಜೆ ಹೆಜ್ಜೆಗೂ ಅನುಮಾನ ಪಡೋದು ಬಹುದೊಡ್ಡ ತಪ್ಪು. ಕೆಲವು ವ್ಯಕ್ತಿಗಳು ಹೇಗಿರುತ್ತಾರೆ ಅಂದರೆ ತಮ್ಮ ಪತ್ನಿಯ ಮೇಲೆಯೇ ಸುಮ್ಮನೇ ಅನುಮಾನ ಪಡುವವರು ತುಂಬಾ ಜನರಿದ್ದಾರೆ. ಅಷ್ಟೇ ಯಾಕೆ ಸ್ನೇಹಿತರು, ಪೋಷಕರು, ಆಪ್ತರ ಮೇಲೆಯೂ ಅನುಮಾನ ಪಟ್ಟುಕೊಳ್ಳುವವರಿದ್ದಾರೆ. ಇಂತಹ ವ್ಯಕ್ತಿಗಳು ನೆಮ್ಮದಿಯ ಜೀವನ ನಡೆಸೋದಕ್ಕೆ ಸಾಧ್ಯವೇ ಇಲ್ಲ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ.
ತಪ್ಪುಗಳು ಮನುಷ್ಯನಿಂದ ಆಗದೇ ಮರದಿಂದ ಆಗೋದಿಲ್ಲ. ಆದರೆ ನಾವು ಮಾಡಿದ ತಪ್ಪುಗಳಿಂದ ಪಾಠ ಕಲಿತುಕೊಂಡು ಅದನ್ನು ತಿದ್ದಿಕೊಳ್ಳಬೇಕೆಂದು ವಿಧುರರು ಹೇಳಿದ್ದಾರೆ.



Click it and Unblock the Notifications

