Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಆ.7ಕ್ಕೆ ಕರ್ಕ ರಾಶಿಗೆ ಬಂದ ಶುಕ್ರ: ಶುಕ್ರನ ಹಿಮ್ಮುಖ ಚಲನೆಯಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು
ಆಗಸ್ಟ್ 7ಕ್ಕೆ ಶುಕ್ರನು ಕರ್ಕ ರಾಶಿಗೆ ಸಂಚರಿಸಿದೆ. ವೈದಿಕ ಶಾಸ್ತ್ರದ ಪ್ರಕಾರ ಶುಕ್ರನ ಸ್ಥಾನದ ಪ್ರಕಾರ ನಮ್ಮ ಸಂಪತ್ತು, ಐಶ್ವರ್ಯ ಭಾಗ್ಯ ಹೇಗಿರಲಿದೆ ಎಂದು ಹೇಳಲಾಗುವುದು. ಅದೇ ಶುಕ್ರನ ಸ್ಥಾನ ಸರಿಯಿಲ್ಲದಿದ್ದರೆ ಈ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದು, ವ್ಯವಹಾರದಲ್ಲಿ ಲಾಭ ಗಳಿಸಲು ಕಷ್ಟವಾಗುವುದು.

ಅದರಲ್ಲೂ ಶುಕ್ರ ಹಿಮ್ಮುಖ ಚಲನೆಯಲ್ಲಿದೆ. ಆದ್ದರಿಂದ ಇದು ಸಿಂಹ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಕ್ರನ ಹಿಮ್ಮುಖ ಚಲನೆ ಕೆಲವು ರಾಶಿಯವರಿಗೆ ಒಳ್ಳೆಯದಲ್ಲ. ಈ ಸಮಯದಲ್ಲಿ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗುವುದು. ಅಲ್ಲದೆ ಈ ಸಮಯದಲ್ಲಿ ಹಣದ ಖರ್ಚು ಅಧಿಕವಿರಲಿದೆ. ಇನ್ನು ಈ ಸಮಯದಲ್ಲಿ ಯಾರಿಗಾದರು ಸಾಲ ನೀಡಿದರೆ ಹಣವನ್ನು ಮರಳಿ ಪಡೆಯಲು ಕಷ್ಟವಾಗುವುದು.
ಈ ಸಮಯದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು:
* ಈ ಅವಧಿಯಲ್ಲಿ ಶ್ರೀ ವಿಷ್ಣುವಿನ ಆರಾಧನೆ ಮಾಡಿ.
* ಹಣೆಗೆ ಪ್ರತಿದಿನ ಚಂದನ ಹಚ್ಚಿಕೊಳ್ಳಿ
* ಶಿವನಿಗೆ ಜೇನು ಮತ್ತು ಮೊಸರಿನಿಂದ ಅಭಿಷೇಕ ಮಾಡಿ.
* ಹೊರಗಡೆ ಹೋಗುವ ಮುನ್ನ ಪರ್ಫ್ಯೂಮ್ ಹಾಕಿ.
ಗಾಯತ್ರಿ ಮಂತ್ರ ಪಠಿಸಿ
1. ಗಾಯತ್ರಿ ಮಂತ್ರ ಪಠಿಸುವುದರಿಂದ ಸೂರ್ಯನ ಸ್ಥಾನ ಬಲವಾಗುವುದು ಅಲ್ಲದೆ ಶುಕ್ರನ ಕೆಟ್ಟ ಪ್ರಭಾವವನ್ನು ತಗ್ಗಿಸುತ್ತದೆ.
2. ಮಹಾ ಮೃತ್ಯುಂಜಯ ಮಂತ್ರ ಪಠಿಸಿ: ಈ ಪವರ್ಫುಲ್ ಮಂತ್ರ ಪಠಣೆ ಮಾಡುವುದರಿಂದ ಅನೇಕ ಕೆಟ್ಟ ಪ್ರಭಾವಗಳನ್ನು ತಡೆಗಟ್ಟಬಹುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ.
3. ಲಕ್ಷ್ಮಿಗೆ ಆರಾಧನೆ ಮಾಡಿ
ಈ ಅವಧಿಯಲ್ಲಿ ಶ್ರೀ ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದರೆ ಒಳ್ಳೆಯದು.
4. ಶಿವ ಆರಾಧನೆ ಮಾಡಿ: ಸೋಮವಾರ ಶಿವನಿಗೆ ವಿಶೇಷ ಪೂಜೆ ಮಾಡಿಸಿ, ಪ್ರತಿದಿನ 'ಓಂ ನಮಃ ಶಿವಾಯ' ಮಂತ್ರವನ್ನು 108 ಬಾರಿ ಪಠಣೆ ಮಾಡಿ.



Click it and Unblock the Notifications