Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಆ.7ಕ್ಕೆ ಕರ್ಕ ರಾಶಿಗೆ ಬಂದ ಶುಕ್ರ: ಶುಕ್ರನ ಹಿಮ್ಮುಖ ಚಲನೆಯಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು
ಆಗಸ್ಟ್ 7ಕ್ಕೆ ಶುಕ್ರನು ಕರ್ಕ ರಾಶಿಗೆ ಸಂಚರಿಸಿದೆ. ವೈದಿಕ ಶಾಸ್ತ್ರದ ಪ್ರಕಾರ ಶುಕ್ರನ ಸ್ಥಾನದ ಪ್ರಕಾರ ನಮ್ಮ ಸಂಪತ್ತು, ಐಶ್ವರ್ಯ ಭಾಗ್ಯ ಹೇಗಿರಲಿದೆ ಎಂದು ಹೇಳಲಾಗುವುದು. ಅದೇ ಶುಕ್ರನ ಸ್ಥಾನ ಸರಿಯಿಲ್ಲದಿದ್ದರೆ ಈ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದು, ವ್ಯವಹಾರದಲ್ಲಿ ಲಾಭ ಗಳಿಸಲು ಕಷ್ಟವಾಗುವುದು.

ಅದರಲ್ಲೂ ಶುಕ್ರ ಹಿಮ್ಮುಖ ಚಲನೆಯಲ್ಲಿದೆ. ಆದ್ದರಿಂದ ಇದು ಸಿಂಹ ರಾಶಿಯಿಂದ ಕರ್ಕ ರಾಶಿಗೆ ಸಂಚರಿಸಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಕ್ರನ ಹಿಮ್ಮುಖ ಚಲನೆ ಕೆಲವು ರಾಶಿಯವರಿಗೆ ಒಳ್ಳೆಯದಲ್ಲ. ಈ ಸಮಯದಲ್ಲಿ ಸಂಬಂಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗುವುದು. ಅಲ್ಲದೆ ಈ ಸಮಯದಲ್ಲಿ ಹಣದ ಖರ್ಚು ಅಧಿಕವಿರಲಿದೆ. ಇನ್ನು ಈ ಸಮಯದಲ್ಲಿ ಯಾರಿಗಾದರು ಸಾಲ ನೀಡಿದರೆ ಹಣವನ್ನು ಮರಳಿ ಪಡೆಯಲು ಕಷ್ಟವಾಗುವುದು.
ಈ ಸಮಯದಲ್ಲಿ ಈ ಪರಿಹಾರ ಮಾಡಿದರೆ ಒಳ್ಳೆಯದು:
* ಈ ಅವಧಿಯಲ್ಲಿ ಶ್ರೀ ವಿಷ್ಣುವಿನ ಆರಾಧನೆ ಮಾಡಿ.
* ಹಣೆಗೆ ಪ್ರತಿದಿನ ಚಂದನ ಹಚ್ಚಿಕೊಳ್ಳಿ
* ಶಿವನಿಗೆ ಜೇನು ಮತ್ತು ಮೊಸರಿನಿಂದ ಅಭಿಷೇಕ ಮಾಡಿ.
* ಹೊರಗಡೆ ಹೋಗುವ ಮುನ್ನ ಪರ್ಫ್ಯೂಮ್ ಹಾಕಿ.
ಗಾಯತ್ರಿ ಮಂತ್ರ ಪಠಿಸಿ
1. ಗಾಯತ್ರಿ ಮಂತ್ರ ಪಠಿಸುವುದರಿಂದ ಸೂರ್ಯನ ಸ್ಥಾನ ಬಲವಾಗುವುದು ಅಲ್ಲದೆ ಶುಕ್ರನ ಕೆಟ್ಟ ಪ್ರಭಾವವನ್ನು ತಗ್ಗಿಸುತ್ತದೆ.
2. ಮಹಾ ಮೃತ್ಯುಂಜಯ ಮಂತ್ರ ಪಠಿಸಿ: ಈ ಪವರ್ಫುಲ್ ಮಂತ್ರ ಪಠಣೆ ಮಾಡುವುದರಿಂದ ಅನೇಕ ಕೆಟ್ಟ ಪ್ರಭಾವಗಳನ್ನು ತಡೆಗಟ್ಟಬಹುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ.
3. ಲಕ್ಷ್ಮಿಗೆ ಆರಾಧನೆ ಮಾಡಿ
ಈ ಅವಧಿಯಲ್ಲಿ ಶ್ರೀ ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿದರೆ ಒಳ್ಳೆಯದು.
4. ಶಿವ ಆರಾಧನೆ ಮಾಡಿ: ಸೋಮವಾರ ಶಿವನಿಗೆ ವಿಶೇಷ ಪೂಜೆ ಮಾಡಿಸಿ, ಪ್ರತಿದಿನ 'ಓಂ ನಮಃ ಶಿವಾಯ' ಮಂತ್ರವನ್ನು 108 ಬಾರಿ ಪಠಣೆ ಮಾಡಿ.



Click it and Unblock the Notifications