Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ವಾಸ್ತು ಪ್ರಕಾರ ಗಣೇಶ ಮೂರ್ತಿ ಈ ಜಾಗದಲ್ಲಿಟ್ಟರೆ ಮನೆಗೆ ಶ್ರೇಯಸ್ಸು ಉಂಟಾಗುವುದು
ಎಲ್ಲಾ ಹಿಂದೂಗಳ ಮನೆಯಲ್ಲಿ ಶ್ರೀ ಗಣೇಶನ ಮೂರ್ತಿ ಅಥವಾ ಫೋಟೊ ಇದ್ದೇ ಇರುತ್ತದೆ, ಯಾವುದೇ ಪೂಜೆ ಮಾಡುವ ಮುನ್ನ ಶ್ರೀ ಗಣೇಶನ ಪೂಜೆ ಮಾಡಿದ ಬಳಿಕವಷ್ಟೇ ಪೂಜೆ ಕಾರ್ಯಗಳನ್ನು ಪ್ರಾರಂಭಿಸಬೇಕು.
ಅಲ್ಲದೆ ಶ್ರೀ ಗಣೇಶನನ್ನು ಪೂಜಿಸಲು ಕಠಿಣ ನಿಯಮಗಳೇನು ಇಲ್ಲ, ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಪೂಜಿಸಿದರೆ ಸಾಕು ಶ್ರೀ ಗಣೇಶ ನಮ್ಮ ಕಷ್ಟಗಳನ್ನು ನಿವಾರಿಸುತ್ತಾನೆ, ಆದರೆ ಶ್ರೀ ಗಣೇಶನ ಮೂರ್ತಿಯನ್ನು ಕೆಲವೊಂದು ಕೆಲವೊಂದು ದಿಕ್ಕಿನಲ್ಲಿ ಇಡಲೇಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಗಣೇಶನ ಮೂರ್ತಿ ಯಾವ ದಿಕ್ಕಿನಲ್ಲಿಟ್ಟರೆ ಮನೆಗೆ ಶುಭ ಈ ಬಗ್ಗೆ ನೋಡೋಣ ಬನ್ನಿ:

ಮನೆಯ ಮುಖ್ಯ ದ್ವಾರದ ಬಳಿ ಗಣೇಶ ಮೂರ್ತಿ ಇಡುವುದರ ಮಹತ್ವ
ನೀವು ತುಂಬಾ ಕಡೆ ಗಮನಿಸಿರಬಹುದು ಮನೆಯ ಮುಂದುಗಡೆ, ಆಫೀಸ್ ಮುಂದುಗಡೆ ಕೆಲವರು ಗಣೇಶಮೂರ್ತಿ ಇಟ್ಟು ಪೂಜಿಸುತ್ತಾರೆ. ಮನೆಯ ಮುಂದುಗಡೆ ಗಣೇಶನ ಮೂರ್ತಿಯನ್ನು ಸ್ಥಾಪಿಸಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗುವುದು. ಮನೆಯ ಮುಂದೆ ಗಣೇಶನ ಮೂರ್ತಿ ಇದ್ದರೆ ನಕರಾತ್ಮಕ ಶಕ್ತಿ ತಡೆಗಟ್ಟುತ್ತದೆ, ಮನೆಗೆ ಧನಾತ್ಮಕ ಶಕ್ತಿ ತುಂಬುತ್ತದೆ, ಗಣೇಶನ ಮೂರ್ತಿಯನ್ನು ಮನೆ ಮುಂದೆ ಇದ್ದರೆ ವಾಸ್ತು ದೋಷ ನಿವಾರಣೆ ಮಾಡುವುದು, ಗಣೇಶನ ಮೂರ್ತಿ ಮನೆ ಮುಂದೆ ಇದ್ದರೆ ಹಣದ ಕೊರತೆ ಉಂಟಾಗುವುದಿಲ್ಲ, ಮನೆಯಲ್ಲಿ ನೆಮ್ಮದಿ ಇರಲಿದೆ, ಹಾಗಾಗಿ ಮನೆ ಮುಂದುಗಡೆ ಗಣೇಶನ ವವಿಗ್ರಹ ಪ್ರತಿಷ್ಠಾಪನೆ ಮಾಡಲಾಗುವುದು.
ಮನೆಯ ಯಾವ ದಿಕ್ಕಿನಲ್ಲಿ ಗಣೇಶನ ವಿಗ್ರಹವಿಟ್ಟರೆ ಒಳ್ಳೆಯದು?
ವಾಸ್ತು ಶಾಸ್ತ್ರ ಪ್ರಕಾರ ಮನೆಯ ಮುಂಭಾಗ ಉತ್ತರದಲ್ಲಿದ್ದರೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಬಹುದು, ಅದೇ ಪೂರ್ವಕ್ಕೆ ಇದ್ದರೆ ಪ್ರತಿಷ್ಟಾಪಿಸಬಾರದು ಎಂದು ಹೇಳಲಾಗುವುದು.
ಮನೆಯೊಳಗಡೆ ಗಣೇಶ ಮೂರ್ತಿಯನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಒಳ್ಳೆಯದು
ಮನೆಯೊಳಗಡೆ ಗಣೇಶನ ಫೋಟೋ ಅಥವಾ ಮೂರ್ತಿಯನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಸೂರ್ಯನ ಕಿರಣಗಳು ಗಣಪನ ಮೂರ್ತಿ ಮೇಲೆ ಬೀಳುವಂತಿದ್ದರೆ ಶುಭ ಎಂದು ಪರಿಗಣಿಸಲಾಗುವುದು
ಮನೆಯ ಉತ್ತರದಲ್ಲಿ ಇಡುವುದಾದರೆ
ಮನೆಯ ಉತ್ತರ ಭಾಗದಲ್ಲಿ ಗಣೇಶನ ಮೂರ್ತಿ ಇಡುವುದಾದರೆ ಉತ್ತರದ ಭಾಗದಲ್ಲಿ ಕಿಟಕಿಗಳಿರಬೇಕು, ಆ ಕಿಟಕಿಗಳ ಮೂಲಕ ಸೂರ್ಯನ ಬೆಳಕು ಮನೆಯೊಳಗಡೆ ಚೆನ್ನಾಗಿ ಬೀಳುವಂತಿರಬೇಕು, ಅಥವಾ ಉತ್ತರದಲ್ಲಿ ಮನೆಯ ಮುಂಬಾಗಿಲು ಇದ್ದರೆ ಕೂಡ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಈಶಾನ್ಯ ದಿಕ್ಕು: ಮನೆಯಲ್ಲಿ ಈಜುಕೊಳ, ಬೋರ್ವೆಲ್, ಪೂಜಾಸ್ಥಳ ಇದೆಲ್ಲಾ ಈ ಭಾಗದಲ್ಲಿ ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ಈ ದಿಕ್ಕಿನಲ್ಲಿ ಮುಖ್ಯದ್ವಾರವಿಡಬಹುದು, ಅಲ್ಲಿ ಗಣೇಶನ ಮೂರ್ತಿ ಇಟ್ಟರೆ ಒಳ್ಳೆಯದು ಎಂದು ಹೇಳಲಾಗುವುದು,
ಬೆಡ್ರೂಂ ವಾಯುವ್ಯ ದಿಕ್ಕಿನಲ್ಲಿರಬೇಕು
ಮನೆಯ ಬೆಡ್ರೂಂ ವಾಯುವ್ಯ ದಿಕ್ಕಿನಲ್ಲಿರಬೇಕು
ಆಗ್ನೇಯ ದಿಕ್ಕು: ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ, ಗ್ಯಾಸ್, ಬಾಯ್ಲರ್ ಇವೆಲ್ಲಾ ಈ ದಿಕ್ಕಿನಲ್ಲಿದ್ದರೆ ಒಳ್ಳೆಯದು.
ಮನೆಗೆ ಅಂಗಳವಿರಬೇಕು ಎಂದು ಹೇಳಲಾಗುವುದು
ಫ್ಲ್ಯಾಟ್ ಆಗಲಿ ಬಾಲ್ಕನಿಯಲ್ಲಿ ಇರಬೇಕು, ಮನೆಯಾದರೆ ಅಂಗಳವಿರಬೇಕು ಎಂದು ಹೇಳಲಾಗುವುದು. ವಾಸ್ತು ಪ್ರಕಾರ ಮನೆಯ ಮುಂದೆ ಹಾಗೂ ಹಿಂಭಾಗದಲ್ಲಿ ಕೂಡ ಅಂಗಳವಿದ್ದರೆ ಒಳ್ಳೆಯದು ಎಂದು ಹೇಳಲಾಗುವುದು.
ಮನೆಯ ಮುಂದುಗಡೆ ತುಳಸಿ, ನೆಲ್ಲಿಕಾಯಿ, ಹೂವು ಗಿಡಗಳಿದ್ದರೆ ಶುಭ ಎಂದು ಹೇಳಲಾಗುವುದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ



Click it and Unblock the Notifications