Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದೇವಸ್ಥಾನದ ಜಾತ್ರೆ ವೇಳೆ ಆನೆಗಳ ಕಾಳಗ..! ದಿಕ್ಕಾಪಾಲಾಗಿ ಓಡಿದ ಭಕ್ತರು..!
ದೇಶದ ಹತ್ತು ಹಲವು ದೇವಾಲಯಗಳಲ್ಲಿ ಆನೆಗಳಿರುವುದನ್ನು ನಾವು ನೋಡಿದ್ದೇವೆ. ದೇವಾಲಯದ ಕಾರ್ಯಗಳಲ್ಲಿ ಈ ಆನೆಗಳ ಬಳಸುತ್ತಾರೆ. ಅದರಲ್ಲೂ ಜಾತ್ರೆ, ಉತ್ಸವದಲ್ಲಿ ದೇವರನ್ನು ಆನೆಗಳ ಮೇಲೆ ಮೆರವಣಿಗೆ ಮಾಡುವುದು ಸಂಪ್ರದಾಯದಂತೆ ನಡೆದು ಬಂದಿದೆ. ಈ ಆನೆಗಳು ಸಹ ಮಾವುತರ ಮಾಹಿನಂತೆ ಮೆರವಣಿಗೆಯಲ್ಲಿ ಭಾಗಿಯಾಗುತ್ತವೆ. ಈ ಆನೆಗಳ ನೋಡಲೆಂದೇ ಭಕ್ತರು ಅಂದು ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಹೀಗಿರುವಾಗ ಕೆಲವೊಂದು ಭಾರೀ ಈ ಆನೆಗಳು ವಿಚಿತ್ರವಾಗಿ ವರ್ತಿಸುತ್ತವೆ, ಕೆಲವು ಮಾವುತ ಮಾತು ಕೇಳದೆ ಅಲ್ಲಿಯೇ ನಿಂತುಬಿಡುತ್ತವೆ. ಇನ್ನೂ ಕೆಲವು ಜನರ ಕಂಡು, ಪಟಾಕಿ, ಗಲಾಟೆ ಕಂಡು ಭಯಗೊಂಡು ದಿಕ್ಕಾಪಾಲಾಗಿ ಓಡುತ್ತವೆ. ಆದ್ರೆ ಇನ್ನೂ ಕೆಲವು ಆಕೆಗಳು ಸಿಟ್ಟಿಗೆದ್ದು ಸಿಕ್ಕ ಸಿಕ್ಕ ವಸ್ತುವನೆಲ್ಲಾ ಪುಡಿ ಮಾಡುತ್ತವೆ. ಈ ಅನಾಹುತಗಳಲ್ಲಿ ಪ್ರಾಣ ಕಳೆದುಕೊಳ್ಳುವವರು ಇದ್ದಾರೆ.

ಇದೇ ರೀತಿ ಇಲ್ಲೊಂದು ದೇವಾಲಯದ ಜಾತ್ರೆಯಲ್ಲಿ ಎರಡು ಆನೆಗಳು ಜಗಳಕ್ಕಿಳಿದು ರಂಪ ಎಬ್ಬಿಸಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. ಹೌದು ಕೇರಳದ ಆರತ್ತುಪುಳ ದೇವಾಲಯದ ಆರಾತ್ ಆಚರಣೆ ವೇಳೆ ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಹಲವರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.
ಅಲ್ಲಿ ನಡೆದಿದ್ದೇನು?
ಶುಕ್ರವಾರ ಆರಟ್ಟುಪುಳ ದೇವಸ್ಥಾನದಲ್ಲಿ ಜಾತ್ರಾ ಉತ್ಸವ ನಡೆದಿತ್ತು. ಎರಡು ಆನೆಗಳಿಗೆ ಅಲಂಕಾರ ಮಾಡಿ ಅವುಗಳ ಮೇಲೆ ದೇವರ ಮೂರ್ತಿ ಇಟ್ಟು ಮೆರವಣಿಗೆಯೂ ಹೊರಟ್ಟಿತ್ತು, ಈ ದೇವಾಲಯದ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ನಡೆದಿತ್ತು. ಆದ್ರೆ ಇದಕ್ಕಿದ್ದಂತೆ ಒಂದು ಆನೆ ಕೆರಳಿತು. ಅದರ ಮುಂದೆ ನಡೆದು ಹೋಗುತ್ತಿದ್ದವನ ಮೇಲೆ ಮೊದಲು ದಾಳಿ ಮಾಡಿದೆ. ಆತ ತಪ್ಪಿಸಿಕೊಂಡಾಗ ಅಲ್ಲಿದ್ದವರು ಆನೆ ಬಳಿ ಓಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಆನೆ ಎಲ್ಲರ ಮೇಲೂ ದಾಳಿಗೆ ಮುಂದಾಗಿದೆ.
ಮತ್ತೊಂದು ಆನೆಯ ಮೇಲೆ ಎರಗಿದ ಸಲಗ
ಎಲ್ಲರ ಮೇಲೆ ದಾಳಿಗೆ ಮುಂದಾದ ಆನೆ, ಹಿಂದೆ ಇದ್ದ ಮತ್ತೊಂದು ಆನೆ ಗುರುವಾಯೂರು ರವಿಕೃಷ್ಣನ್ ಕಾಳಗಕ್ಕೆ ಇಳಿದಿದೆ. ಸೊಂಡಿಲಿನಿಂದ ಎರಡೂ ಆನೆಗಳು ಕಾಳಗದಲ್ಲಿ ತೊಡಗಿವೆ. ನಡು ರಸ್ತೆಯಲ್ಲಿ ಆನೆಗಳ ಕಾಳಗ ಕಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಮಾವುತರು ಅವುಗಳನ್ನು ಹತೋಟಿಗೆ ತರಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಎದುರಿನಿಂದ ಮತ್ತೊಂದು ಆನೆ ಗುದ್ದಿದ ರಭಸಕ್ಕೆ ಮತ್ತೊಂದು ಆನೆ ಹಿಂದೆ ಸಾಗಿದೆ. ಎರಡೂ ಆನೆಗಳು ಒಂದಾನೊಂದು ತಳ್ಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ವೇಳೆಗೆ ದೇವಾಲಯದ ಆವರಣದಲ್ಲಿ ದೊಡ್ಡ ಗೊಂದಲ ಉಂಟಾಗಿದೆ. ಜನ ಜೀವ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದ್ದಾರೆ. ಆನೆಗಳು ಸಹ ಜಗಳಕ್ಕಿಳಿದು ಎಲ್ಲೆಂದರಲ್ಲಿ ನುಗ್ಗುತ್ತಿವೆ. ಈ ಎರಡೂ ಆನೆಗಳು ಬೇರೆ ಬೇರೆ ದೇವಾಲಯದ ಆನೆಗಳು ಎನ್ನಲಾಗಿದೆ. ಇದೇ ಕಾರಣಕ್ಕೆ ಜಗಳ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಗುರುವಾಯೂರು ರವಿಕೃಷ್ಣನ್ ಆನೆ ಈ ಹಿಂದೆಯು ಇಂತಹ ಜಗಳದಲ್ಲಿ ಭಾಗಿಯಾಗಿದ್ದ ಉದಾಹರಣೆಯೂ ಇದೆ.
ಒಂದು ಗಂಟೆ ಬಳಿಕ ಎಲ್ಲವೂ ಯಥಾಸ್ಥಿತಿ
ಈ ಆನೆಗಳನ್ನು ಹತೋಟಿಗೆ ತರಲು ಮಾವುತರು ಪರದಾಡಿದ್ದಾರೆ. ದೇವಾಲಯದ ಸುತ್ತಲೂ ಓಡಿದ ಆನೆಗಳ ಹಿಡಿದು ಹತೋಟಿಗೆ ತರುವುದು ಸಾಮಾನ್ಯದ ಮಾತಾಗಿರಲಿಲ್ಲ. ಮಾವುತರು ಎಷ್ಟೇ ಪ್ರಯತ್ನ ಪಟ್ಟರು ರವಿಕೃಷ್ಣನ್ ಆನೆಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಒಂದು ಗಂಟೆಯ ಬಳಿಕ ಆನೆ ಶಾಂತವಾಗಿತ್ತು, ಬಳಿಕ ಆನೆಯ ಕಾಲಿಗೆ ಸರಪಳಿ ಹಾಕಿ ವಾಪಾಸು ಕರೆತಂದು ದೇವಾಲಯದಲ್ಲಿ ಕಟ್ಟಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



Click it and Unblock the Notifications