Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಇದು ಹಿಮವಲ್ಲ ದೆಹಲಿಯ ಯಮುನಾ ನದಿ: ಈ ನೀರು ಹೀಗೆ ಬದಲಾಗಿದ್ದೇಕೆ..?
ದೆಹಲಿ ಸದ್ಯ ವಿಶ್ವದಾದ್ಯಂತ ಮಾಲಿನ್ಯ ಕಾರಣದಿಂದಾಗಿ ಸದ್ದು ಮಾಡುತ್ತಿದೆ. ಅಲ್ಲಿ ಉಸಿರಾಡುವುದು ಎಷ್ಟು ಹಾನಿಕಾರಕ ಅಂದರೆ ನಿರಂತರ ಉಸಿರಾಟದಿಂದಾಗಿ ನಿಮಗೆ ಶ್ವಾಸಕೋಶದ ಸಮಸ್ಯೆ ಎದುರಾಗುವುದ ಖಚಿತ. ಪ್ರಾಣಕ್ಕೆ ಕುತ್ತು ತರುವಷ್ಟು ಅಪಾಯಕಾರಿ ರಾಸಾಯನಿಕ ಅಲ್ಲಿನ ಗಾಳಿಯಲ್ಲಿ ಸೇರಿಬಿಟ್ಟಿದೆ. ಈ ಮಾಲಿನ್ಯದ ಮತ್ತೊಂದು ಭಾಗವಾಗಿ ಈಗ ಯಮುನಾ ನದಿ ಸಂಪೂರ್ಣ ನೊರೆಯಿಂದ ಆವೃತವಾಗಿದೆ.
ಮೇಲ್ನೋಟಕ್ಕೆ ಈ ಕೆಳಗಿನ ಫೋಟೋ ನಿಮಗೆ ಹಿಮಾಲಯದಲ್ಲಿ ತೆಗೆದಿರುವಂತೆ ಕಾಣುತ್ತಿರಬಹುದು ಆದ್ರೆ ಇದು ಯಮುನಾ ನದಿಯ ಚಿತ್ರಣ. ಅದರಲ್ಲೂ ಪತ್ರಕರ್ತರೊಬ್ಬರು ಅಲ್ಲಿನ ಚಿತ್ರಣವನ್ನು ಸೆರೆ ಹಿಡಿಯಲು, ವರದಿ ಮಾಡಲು ತೆರಳಿದಾಗ ಆತ ನೊರೆಯಲ್ಲಿ ಸಂಪೂರ್ಣ ಮುಚ್ಚಿ ಹೋಗಿದ್ದಾನೆ. ನೋಡಿದವರು ಇದೇನು ಹಿಮಾಲಯ ಶ್ರೇಣಿ ಇರಬಹುದು ಎಂದು ಕೊಳ್ಳಬಹುದು ಆದ್ರೆ ಅಪಾಯಕಾರಿ ರಾಸಾಯನಿಕ ತುಂಬಿರುವ ನದಿಯಾಗಿದೆ.

ನಮ್ಮ ಬೆಂಗಳೂರಿನ ಅರ್ಕಾವತಿ ನದಿ ಕೂಡ ಕೆಲವೊಮ್ಮೆ ನೊರೆಯಾಗಿ ಹರಿಯುವುದನ್ನ ನಾವು ನೋಡಿದ್ದೇವೆ. ಹಾಗೆ ಯಮುನೆ ಕೂಡ ನೊರೆಯಾಗಿ ಹರಿಯುತ್ತಿದ್ದಾಳೆ. ಅದೆಷ್ಟು ದಟ್ಟ ನೊರೆ ತುಂಬಿಕೊಂಡಿದೆ ಅಂದ್ರೆ ಈ ನೊರೆ ಇಡೀ ದೆಹಲಿಯನ್ನು ಆವರಿಸಿಕೊಳ್ಳಬಹುದು. ಹಾಗೆ ಗಾಳಿಯಲ್ಲಿ ಈ ನೊರೆ ಹಾರಿ ಕಿ.ಮೀಟರ್ ದೂರ ರಾಸಾಯನಿಕ ಹರಡಲು ಕಾರಣವಾಗುತ್ತಿದೆ.
ನದಿಯಲ್ಲಿ ಈ ರೀತಿ ನೊರೆ ಮೂಡಲು ಕಾರಣವೇನು?
ನದಿ ನೀರಿನಲ್ಲಿ ಅತೀ ಹೆಚ್ಚು ಅಮೋನಿಯಾ ಮತ್ತು ಫಾಸ್ಪೇಟ್ ತುಂಬಿದಾಗ ನೀರಿನ ಜೊತೆಗೆ ಇದು ರಾಸಾಯನಿಕ ಕ್ರಿಯೆಗೆ ಒಳಗಾಗುತ್ತಿದೆ. ಹೀಗಾಗಿ ನೀರಿನ ಮೇಲೆ ನೊರೆ ಮೂಡಲು ಆರಂಭವಾಗುತ್ತದೆ. ಇದು ಎಷ್ಟು ಅಪಾಯಕಾರಿ ಎಂದರೆ ಚರ್ಮದ ಕ್ಯಾಕ್ಸರ್, ಅಲರ್ಜಿ, ಉಸಿರಾಟ ಸಮಸ್ಯೆ ಸೇರಿ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತವೆ.
ಕೊಳೆಯುತ್ತಿರುವ ಸಸ್ಯಗಳು ಮತ್ತು ಮಾಲಿನ್ಯಕಾರಕಗಳು ನೀರಿನೊಂದಿಗೆ ಬೆರೆತಾಗ ಈ ರೀತಿಯ ನೊರೆ ಮೂಡುತ್ತದೆ. ಆದರೆ ಕೆಲ ದಿನದ ಹಿಂದೆ ಮಳೆ ಬಂದಾಗ ನೀರು ರಭಸದಿಂದ ಹರಿಯುವಾಗ ಈ ರೀತಿ ನೊರೆ ಕಾಣಿಸುವುದು ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ನದಿಯಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಈ ಪ್ರಕ್ರಿಯೆಗೆ ತುತ್ತಾಗುವುದು ಸಾಮಾನ್ಯ ಸಂಗತಿ. ಆದರೆ ನೀರು ತುಂಬಿ ಹರಿಯುವಾಗ ಈ ರೀತಿ ರಾಸಾಯನಿಕ ಕ್ರಿಯೆಗೆ ಒಳಗಾಗುವುದು ಅಪರೂಪ ಎಂಬುದು ತಜ್ಞರ ವಾದವಾಗಿದೆ.
ಚಳಿಗಾಲಕ್ಕೂ ಮುನ್ನವೇ ದೆಹಲಿಯ ಮಾಲಿನ್ಯ ಏರಿಕೆಯಾಗಿದೆ. ಸೂಚ್ಯಾಂಕಗಳು ಕಳಪೆ ಎಂದು ತೋರಿಸಿದ್ದು ಗಾಳಿಯ ಗುಣಮಟ್ಟ 300ಕ್ಕಿಂತ ಹೆಚ್ಚು ಎಂದು ತೋರಿಸುತ್ತಿದೆ. ಸದ್ಯದಲ್ಲೇ ಸಾವಿರಾರು ಮಂದಿ ಛತ್ ಪೂಜೆ ಅಂಗವಾಗಿ ಇದೇ ಯಮನಾ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ. ಇದು ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇದರಿಂದ ನೀರಿನ ಮಾಲಿನ್ಯ ಹೆಚ್ಚುವ ಜೊತೆಗೆ ಜನರಿಗೂ ಇದರಿಂದ ಅಪಾಯ ತಪ್ಪಿದ್ದಲ್ಲ.
ದೆಹಲಿಯ ಮಾಲಿನ್ಯ ತಡೆಯಲೆಂದು ಸರ್ಕಾರ ಸಮನ್ವಯ ಸಮಿತಿ ರಚಿಸಿದೆ. ಹಾಗೆ 13 ಸ್ಥಳಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದ್ದು, ಈ ಎಲ್ಲಾ ಪ್ರದೇಶದಲ್ಲಿ ಒಟ್ಟು 80 ಮೊಬೈಲ್ ಆಂಟಿಸ್ಮಾಗ್ಗಳನ್ನು ನಿಯೋಜಿಸಲಾಗಿದೆ. ದೀಪಾವಳಿ ಮುನ್ನವೇ ದೆಹಲಿಯ ಪರಿಸ್ಥಿತಿ ಈ ರೀತಿಯಾಗಿದ್ದು, ಇನ್ನೊಂದು ತಿಂಗಳಿನಲ್ಲಿ ರೆಡ್ಝೋನ್ನಲ್ಲಿ ದೆಹಲಿ ಸಿಲುಕಲಿದೆ. ಮಾಸ್ಕ್ ಇಲ್ಲದೆ ಹೊರಬರುವುದೇ ಕಷ್ಟವಾಗಲಿದೆ.
ಇನ್ನು ದೀಪಾವಳಿಯ ಬಳಿಕ ಗಾಲಿಯ ಗುಣಮಟ್ಟ ಮತ್ತಷ್ಟು ಕೆಳಗಿಳಿಯುವ ಸಾಧ್ಯತೆ ಇದೆ. ಇದರಿಂದ ಇನ್ನಷ್ಟು ಹಾನಿ ಉಂಟಾಗುವ ಲಕ್ಷಣ ಈಗಾಗಲೇ ಕಂಡುಬರುತ್ತಿದೆ. ಈ ಮೊದಲು ದೆಹಲಿಯಲ್ಲಿ ಮಾಲಿನ್ಯ ಸಂಬಂಧಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿರುವ ಕುರಿತು ಅಧ್ಯಯನ ವರದಿಯೂ ಸಹ ತಿಳಿಸಿತ್ತು.



Click it and Unblock the Notifications











