Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳುವ ಈ ನಂಬಿಕೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗಲೂ ಅದು ಸತ್ಯ!
ನಮ್ಮ ದಿನ ನಿತ್ಯದ ಬದುಕಿನಲ್ಲಿ ನಾವು ಹಲವು ನಂಬಿಕೆಗಳನ್ನು ಪಾಲಿಸುತ್ತೇವೆ, ಕೆಲವೊಂದು ನಂಬಿಕೆಗಳನ್ನು ಯಾರೋ ಹೇಳಿದರು ಎಂದು ಪಾಲಿಸುತ್ತೇವೆ, ಉದಾಹರಣೆ ರಾತ್ರಿ ಹೊತ್ತಿನಲ್ಲಿ ಕಸ ಬಿಸಾಡಬಾರದು, ಹೀಗೆ ಹೇಳುವಾಗ ಏಕೆ ಹೀಗೆ ಮಾಡಬಾರದು ಎಂಬ ಪ್ರಶ್ನೆಗೆ ಲಕ್ಷ್ಮಿ ಮನೆಯಲ್ಲಿ ನೆಲೆಸಲ್ಲ ಎಂಬ ಉತ್ತರ ಬರುತ್ತದೆ, ಏಕೆ ಈ ರೀತಿ ಹೇಳುತ್ತಾರೆ, ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು? ಎಂದು ನೋಡೋಣ ಬನ್ನಿ:

ಹಲವರಿಗೆ ಈ ಅಭ್ಯಾಸ ಇದೆ, ಆದರೆ ಹೀಗೆ ತಿನ್ನುವುದನ್ನು ಮನೆಯಲ್ಲಿ ಹಿರಿಯರು ನೋಡಿದರೆ ಎಂಥ ಬುದ್ಧಿಯದು, ಹೀಗೆ ಮಾಡುವುದರಿಂದ ಮನೆಗೆ ದರಿದ್ರ ಬರುತ್ತದೆ ಎಂದು ಹೇಳುತ್ತಾರೆ. ಹಾಸಿಗೆಯಲ್ಲಿ ತಿನ್ನುವ ಅಭ್ಯಾಸ ಮನೆಗೆ ಅಶುಭ ನೆಮ್ಮದಿ ಇರಲ್ಲ ಎಂದು ಹೇಳುತ್ತಾರೆ. ಇದು ಮೂಡ ನಂಬಿಕೆಯಲ್ಲ ಸತ್ಯವೂ ಇದು, ಅಲ್ಲೇ ತಿನ್ನುವುದು, ಅಲ್ಲೇ ಮಲಗುವುದು ಮಾಡಿದರೆ ಎಷ್ಟು ಗಲೀಜು ಅನಿಸುತ್ತೆ ಅಲ್ವಾ? ಅಲ್ಲದೆ ನಾವು ತಿಂದ ಆಹಾರ ಹಾಸಿಗೆ ಮೇಲೆ ಬಿದ್ದರೆ ಹಾಸಿಗೆ ದುರ್ವಾಸನೆ ಬೀರುವುದು, ಇರುವೆ ಬರುವುದು, ಇದರಿಂದ ನೆಮ್ಮದಿಯ ನಿದ್ದೆ ದೂರಾಗುವುದು ಅಲ್ವಾ?
ಸೂರ್ಯಾಸ್ತದ ನಂತರ ಹಣದ ವಹಿವಾಟು ಮಾಡಬಾರದು
ತುಂಬಾ ಜನರು ಸೂರ್ಯಾಸ್ತದ ನಂತರ ಹಣದ ವಹಿವಾಟು ಮಾಡಲ್ಲ, ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂಬ ನಂಬಿಕೆ. ಈ ನಂಬಿಕೆಯನ್ನು ಬದಿಗಿಟ್ಟು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಈ ನಂಬಿಕೆ ಈ ಕಾಲಕ್ಕೆ ಅಷ್ಟು ಸೂಕ್ತವಲ್ಲ ಕಾಣುತ್ತೆ, ಹಿಂದೆಯಲ್ಲ ವಿದ್ಯುತ್ ಬೆಳಕು ಇಲ್ಲ, ಸೀಮೆಣ್ಣೆ ದೀಪ ಹಚ್ಚಿಡುತ್ತಿದ್ದರು, ಕತ್ತಲಾಗುತ್ತಿದ್ದಂತೆ ಏನೂ ಕಾಣುತ್ತಿರಲಿಲ್ಲ, ಈ ಸಮಯದಲ್ಲಿ ಹಣ ನೀಡಿದರೆ ಸರಿಯಾಗಿ ಕಾಣಿಸದೆ ಲೆಕ್ಕಾಚಾರದಲ್ಲಿ ತಪ್ಪಬಹುದು ಎಂದು ಈ ರೀತಿ ಹೇಳಿರಬಹುದು.
ಮರಗಳಿಂದ ಎಲೆಗಳನ್ನು ಕೀಳುವುದು, ಮನೆಯಿಂಲ್ಲಿ ಹಾವು ಅಥವಾ ಇತರ ವಿಷಕಾರಿ ಕೀಟವಿದ್ದರೆ ಕಾಣಿಸಲ್ಲ, ಕಸವನ್ನು ತೆಗೆದು ಹೊರಗಡೆ ಹಾಕಬಾರದು ಎಂದು ಹೇಳಿರುವುದರ ಹಿಂದೆ ಕೂಡ ಕಾರಣವಿದೆ, ಕಸ ಕುಡಿಸಿದಾಗ ಬೆಲೆ ಬಾಳುವ ವಸ್ತು ಬಿದ್ದದ್ದರೆ ಕಾಣಿಸದೆ ಬಿಸಾಡುತ್ತೇವೆ, ಈವಾಗ ಲೈಟ್ಸ್ ಇದೆ, ಬೆಳಕು ಚೆನ್ನಾಗಿ ಇರುತ್ತದೆ, ಆದರೂ ಈ ನಂಬಿಕೆ ಇನ್ನೂ ಬಲವಾಗಿದೆ.
ಅಡುಗೆ ಮನೆ ಸ್ವಚ್ಛವಾಗಿಡದಿರುವುದು
ಮಲಗುವ ಮುನ್ನ ಅಡುಗೆ ಮನೆ ಸ್ವಚ್ಛವಾಗಿಡದಿದ್ದರೆ ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳಲಾಗುವುದು, ಒಂದು ಲೆಕ್ಕದಲ್ಲಿ ಇದು ಸತ್ಯ ಕೂಡ. ಅಡುಗೆ ಮನೆಯನ್ನು ಗಲೀಜು ಬಿಟ್ಟು ಮಲಗಿದರೆ ಕೀಟ, ಜಿರಳೆ ಇವುಗಳ ಕಾಡ ಹೆಚ್ಚುವುದು, ಇದರಿಂದ ಆರೋಗ್ಯ ಕೈ ಕೊಡುತ್ತೆ, ಹಣ ಖರ್ಚಾಗುವುದು. ಇನ್ನು ಅಡುಗೆ ಮನೆಯಲ್ಲಿರವ ಸಾಮಗ್ರಿಗಳಿಗೆ ಹುಳ ಬಂದರೆ ಅದು ಕೂಡ ವ್ಯರ್ಥವಾಗಿ ಹಣ ನಷ್ಟವಾಗುವುದು, ಆದ್ದರಿಂದ ಲಕ್ಷ್ಮಿ ಕೋಪಿಸಿಕೊಳ್ಳುವುದು ನಿಜ ಮಾತ್ರ ಅಲ್ವಾ?
ರಾತ್ರಿ ಬಟ್ಟೆ ಒಗೆಯುವುದು:
ಬಟ್ಟೆ ಒಗೆಯುವುದು ಶನಿ ಎಂದು ಹೇಳಲಾಗುವುದು, 6 ಗಂಟೆಯ ಬಳಿಕ ಬಟ್ಟೆ ಒಗೆಯಬಾರದು ಎಂದು ಹೇಳುತ್ತಾರೆ. ಹಣ ನಷ್ಟವಾಗುವುದು ಎಂದು ಹೇಳುತ್ತಾರೆ. ನಾವು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಕತ್ತಲಲ್ಲಿ ಬಟ್ಟೆ ಒಗೆದರೆ ಕೊಳೆ ಹೋಗಿದೆಯೇ ಗೊತ್ತಾ ಶ್ರಮ, ನೀರು, ಸೋಪು ವ್ಯರ್ಥವಾಗುವುದು. ಇಗಂತೂ ವಾಷಿಂಗ್ ಮೆಷಿನ್ ಕಾಲ, ಅದಕ್ಕೆ ಇಂಥ ನಂಬಿಕೆ ಸೂಟ್ ಆಗಲ್ಲ ಅಲ್ವಾ?
ಈಗ ಹೇಳಿ ಆಗಿನಿಂದ ನಂಬಿಕೊಂಡು ಬಂದಿರುವ ಈ ನಂಬಿಕೆಗಳ ಹಿಂದೆ ಒಳ್ಳೆಯ ಕಾರಣ ಇದೆ ಅಲ್ವಾ?



Click it and Unblock the Notifications