Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳುವ ಈ ನಂಬಿಕೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗಲೂ ಅದು ಸತ್ಯ!
ನಮ್ಮ ದಿನ ನಿತ್ಯದ ಬದುಕಿನಲ್ಲಿ ನಾವು ಹಲವು ನಂಬಿಕೆಗಳನ್ನು ಪಾಲಿಸುತ್ತೇವೆ, ಕೆಲವೊಂದು ನಂಬಿಕೆಗಳನ್ನು ಯಾರೋ ಹೇಳಿದರು ಎಂದು ಪಾಲಿಸುತ್ತೇವೆ, ಉದಾಹರಣೆ ರಾತ್ರಿ ಹೊತ್ತಿನಲ್ಲಿ ಕಸ ಬಿಸಾಡಬಾರದು, ಹೀಗೆ ಹೇಳುವಾಗ ಏಕೆ ಹೀಗೆ ಮಾಡಬಾರದು ಎಂಬ ಪ್ರಶ್ನೆಗೆ ಲಕ್ಷ್ಮಿ ಮನೆಯಲ್ಲಿ ನೆಲೆಸಲ್ಲ ಎಂಬ ಉತ್ತರ ಬರುತ್ತದೆ, ಏಕೆ ಈ ರೀತಿ ಹೇಳುತ್ತಾರೆ, ಇದರ ಹಿಂದಿನ ವೈಜ್ಞಾನಿಕ ಕಾರಣಗಳೇನು? ಎಂದು ನೋಡೋಣ ಬನ್ನಿ:

ಹಲವರಿಗೆ ಈ ಅಭ್ಯಾಸ ಇದೆ, ಆದರೆ ಹೀಗೆ ತಿನ್ನುವುದನ್ನು ಮನೆಯಲ್ಲಿ ಹಿರಿಯರು ನೋಡಿದರೆ ಎಂಥ ಬುದ್ಧಿಯದು, ಹೀಗೆ ಮಾಡುವುದರಿಂದ ಮನೆಗೆ ದರಿದ್ರ ಬರುತ್ತದೆ ಎಂದು ಹೇಳುತ್ತಾರೆ. ಹಾಸಿಗೆಯಲ್ಲಿ ತಿನ್ನುವ ಅಭ್ಯಾಸ ಮನೆಗೆ ಅಶುಭ ನೆಮ್ಮದಿ ಇರಲ್ಲ ಎಂದು ಹೇಳುತ್ತಾರೆ. ಇದು ಮೂಡ ನಂಬಿಕೆಯಲ್ಲ ಸತ್ಯವೂ ಇದು, ಅಲ್ಲೇ ತಿನ್ನುವುದು, ಅಲ್ಲೇ ಮಲಗುವುದು ಮಾಡಿದರೆ ಎಷ್ಟು ಗಲೀಜು ಅನಿಸುತ್ತೆ ಅಲ್ವಾ? ಅಲ್ಲದೆ ನಾವು ತಿಂದ ಆಹಾರ ಹಾಸಿಗೆ ಮೇಲೆ ಬಿದ್ದರೆ ಹಾಸಿಗೆ ದುರ್ವಾಸನೆ ಬೀರುವುದು, ಇರುವೆ ಬರುವುದು, ಇದರಿಂದ ನೆಮ್ಮದಿಯ ನಿದ್ದೆ ದೂರಾಗುವುದು ಅಲ್ವಾ?
ಸೂರ್ಯಾಸ್ತದ ನಂತರ ಹಣದ ವಹಿವಾಟು ಮಾಡಬಾರದು
ತುಂಬಾ ಜನರು ಸೂರ್ಯಾಸ್ತದ ನಂತರ ಹಣದ ವಹಿವಾಟು ಮಾಡಲ್ಲ, ಲಕ್ಷ್ಮಿ ಮನೆಯಿಂದ ಹೊರಗೆ ಹೋಗುತ್ತಾಳೆ ಎಂಬ ನಂಬಿಕೆ. ಈ ನಂಬಿಕೆಯನ್ನು ಬದಿಗಿಟ್ಟು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಈ ನಂಬಿಕೆ ಈ ಕಾಲಕ್ಕೆ ಅಷ್ಟು ಸೂಕ್ತವಲ್ಲ ಕಾಣುತ್ತೆ, ಹಿಂದೆಯಲ್ಲ ವಿದ್ಯುತ್ ಬೆಳಕು ಇಲ್ಲ, ಸೀಮೆಣ್ಣೆ ದೀಪ ಹಚ್ಚಿಡುತ್ತಿದ್ದರು, ಕತ್ತಲಾಗುತ್ತಿದ್ದಂತೆ ಏನೂ ಕಾಣುತ್ತಿರಲಿಲ್ಲ, ಈ ಸಮಯದಲ್ಲಿ ಹಣ ನೀಡಿದರೆ ಸರಿಯಾಗಿ ಕಾಣಿಸದೆ ಲೆಕ್ಕಾಚಾರದಲ್ಲಿ ತಪ್ಪಬಹುದು ಎಂದು ಈ ರೀತಿ ಹೇಳಿರಬಹುದು.
ಮರಗಳಿಂದ ಎಲೆಗಳನ್ನು ಕೀಳುವುದು, ಮನೆಯಿಂಲ್ಲಿ ಹಾವು ಅಥವಾ ಇತರ ವಿಷಕಾರಿ ಕೀಟವಿದ್ದರೆ ಕಾಣಿಸಲ್ಲ, ಕಸವನ್ನು ತೆಗೆದು ಹೊರಗಡೆ ಹಾಕಬಾರದು ಎಂದು ಹೇಳಿರುವುದರ ಹಿಂದೆ ಕೂಡ ಕಾರಣವಿದೆ, ಕಸ ಕುಡಿಸಿದಾಗ ಬೆಲೆ ಬಾಳುವ ವಸ್ತು ಬಿದ್ದದ್ದರೆ ಕಾಣಿಸದೆ ಬಿಸಾಡುತ್ತೇವೆ, ಈವಾಗ ಲೈಟ್ಸ್ ಇದೆ, ಬೆಳಕು ಚೆನ್ನಾಗಿ ಇರುತ್ತದೆ, ಆದರೂ ಈ ನಂಬಿಕೆ ಇನ್ನೂ ಬಲವಾಗಿದೆ.
ಅಡುಗೆ ಮನೆ ಸ್ವಚ್ಛವಾಗಿಡದಿರುವುದು
ಮಲಗುವ ಮುನ್ನ ಅಡುಗೆ ಮನೆ ಸ್ವಚ್ಛವಾಗಿಡದಿದ್ದರೆ ಲಕ್ಷ್ಮಿ ಕೋಪಿಸಿಕೊಳ್ಳುತ್ತಾಳೆ ಎಂದು ಹೇಳಲಾಗುವುದು, ಒಂದು ಲೆಕ್ಕದಲ್ಲಿ ಇದು ಸತ್ಯ ಕೂಡ. ಅಡುಗೆ ಮನೆಯನ್ನು ಗಲೀಜು ಬಿಟ್ಟು ಮಲಗಿದರೆ ಕೀಟ, ಜಿರಳೆ ಇವುಗಳ ಕಾಡ ಹೆಚ್ಚುವುದು, ಇದರಿಂದ ಆರೋಗ್ಯ ಕೈ ಕೊಡುತ್ತೆ, ಹಣ ಖರ್ಚಾಗುವುದು. ಇನ್ನು ಅಡುಗೆ ಮನೆಯಲ್ಲಿರವ ಸಾಮಗ್ರಿಗಳಿಗೆ ಹುಳ ಬಂದರೆ ಅದು ಕೂಡ ವ್ಯರ್ಥವಾಗಿ ಹಣ ನಷ್ಟವಾಗುವುದು, ಆದ್ದರಿಂದ ಲಕ್ಷ್ಮಿ ಕೋಪಿಸಿಕೊಳ್ಳುವುದು ನಿಜ ಮಾತ್ರ ಅಲ್ವಾ?
ರಾತ್ರಿ ಬಟ್ಟೆ ಒಗೆಯುವುದು:
ಬಟ್ಟೆ ಒಗೆಯುವುದು ಶನಿ ಎಂದು ಹೇಳಲಾಗುವುದು, 6 ಗಂಟೆಯ ಬಳಿಕ ಬಟ್ಟೆ ಒಗೆಯಬಾರದು ಎಂದು ಹೇಳುತ್ತಾರೆ. ಹಣ ನಷ್ಟವಾಗುವುದು ಎಂದು ಹೇಳುತ್ತಾರೆ. ನಾವು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಕತ್ತಲಲ್ಲಿ ಬಟ್ಟೆ ಒಗೆದರೆ ಕೊಳೆ ಹೋಗಿದೆಯೇ ಗೊತ್ತಾ ಶ್ರಮ, ನೀರು, ಸೋಪು ವ್ಯರ್ಥವಾಗುವುದು. ಇಗಂತೂ ವಾಷಿಂಗ್ ಮೆಷಿನ್ ಕಾಲ, ಅದಕ್ಕೆ ಇಂಥ ನಂಬಿಕೆ ಸೂಟ್ ಆಗಲ್ಲ ಅಲ್ವಾ?
ಈಗ ಹೇಳಿ ಆಗಿನಿಂದ ನಂಬಿಕೊಂಡು ಬಂದಿರುವ ಈ ನಂಬಿಕೆಗಳ ಹಿಂದೆ ಒಳ್ಳೆಯ ಕಾರಣ ಇದೆ ಅಲ್ವಾ?



Click it and Unblock the Notifications
